ಹೆಣ್ಣು:

ವರ್ಷಾನು ವರ್ಷದಿಂದ ನಡೆದು ಬಂದಿರುವ ಹಲವಾರು ಮೂಢ ನಂಬಿಕೆಗಳು ಹೆಣ್ಣನ್ನ ಕೀಳು ಮಟ್ಟದಲ್ಲಿ ನೋಡ್ತಾ ಇವೆ.ಏನಪ್ಪಾ ಅಂದ್ರೆ ಹಳೆಯ ಕಾಲದಲ್ಲಿ ಹೆಣ್ಣಿನ ಮದುವೆ ಆಯ್ತು ಅಂದ್ರೆ ಅವಳ ಸ್ವಾತಂತ್ರ ಮುಗಿದಂತೆ.ಮದುವೆಯಾದ ಮೇಲೆ ಗಂಡನ ಮನೆಯಲ್ಲಿ ಸಾಮಾನ್ಯವಾಗಿ ಆಗಿನ ಕಾಲದಲ್ಲಿ ಎಲ್ಲರದ್ದು ಜಮೀನ್ದಾರರ ವಂಶವಾದ್ದರಿಂದ ಜೀತದಾಳಿನಂತೆ ದುಡಿಯುವುದು ಸಾಮಾನ್ಯ.ಮನೆಯಲ್ಲಿ ನೂರಾರು ಆಳುಗಳು,ಅವರಿಗೆ ಊಟ ತಿಂಡಿ.ದೊಡ್ಡ ಕುಟುಂಬವಾದ್ದರಿಂದ ಮನೆ ತುಂಬಾ ಜನರು ಅವರನ್ನ ವಿಚಾರಿಸಿಕೊಳ್ಳೋದು.ಆಗಿನ ಕಾಲದಲ್ಲಿ ಗಂಡಸರು ಮನೆ ಕೆಲಸ ಮಾಡಿದರೆ ಘೋರ ತಪ್ಪು ಮಾಡಿದಂತೆ.ಆದರೆ ಈಗಿನ ಕಾಲದಲ್ಲಿ ಇಷ್ಟೆಲ್ಲಾ ಅಂತೂ ಇಲ್ಲ.ಸಣ್ಣ ಪುಟ್ಟ ಮನೆ,ಮನೇಲಿ ಇರೋರು ನಾಲ್ಕೈದು ಜನ ಅಷ್ಟೇ.ಹಾಗಾಗಿ ಎಷ್ಟೋ ಕೆಲಸಗಳು ಹೆಂಗಸರಿಗೆ ಕಮ್ಮಿಯಾಗಿವೆ.ಅಷ್ಟೇ ಅಲ್ಲದೆ ಗಂಡಸರು ಕೂಡ ಮನೆ ಕೆಲಸದಲ್ಲಿ ನೆರವಾಗ್ತಾ ಇದಾರೆ.ಆಗಿನ ಕಾಲದಲ್ಲಿ ಮದುವೆಯಾದ ಮೇಲೆ ಹೆಣ್ಣಿನ ಶಿಕ್ಷಣ ಮುಗಿದಂತೆ.ಅವಳು ಮನೆ ಬಿಟ್ಟು ಹೊರ ಹೋಗೋ ಹಾಗಿಲ್ಲ,ಪರ ಪುರುಷರ ಜೊತೆ ಮಾತನಾಡೋ ಹಾಗಿಲ್ಲ ಇವೆಲ್ಲ ವಿಚಾರಗೆಲ್ಲ ಇದ್ದವು.ಆದರೆ ಈಗ ಅವೆಲ್ಲ ನಾಶವಾಗಿದೆ.

ಮುಖ್ಯವಾದ ಒಂದು ಮೂಢನಂಬಿಕೆ ಅಂದ್ರೆ "ಮಾಂಗಲಿಕ" ಅನ್ನೋದು. ಆ ಹುಡುಗಿ ಮಾಂಗಲಿಕ ಇದ್ದಾಳೆ ಅನ್ನೋದು.ಮಾಂಗಲಿಕ ಅಂತ ಅಂದ್ರೆ ಯಾರ ಜನ್ಮ ಪತ್ರಿಕೆಯಲ್ಲಿ 1,4,7,8,12  ನೆ ಸ್ಥಾನದಲ್ಲಿ ಮಂಗಳ ಗ್ರಹ ಇರುತ್ತೋ ಅಂಥಹ ಪತ್ರಿಕೆಯನ್ನ ಮಾಂಗಲಿಕ ಅಂತ ಹೇಳ್ತೇವೆ. ಅದರಿಂದ ಏನು ದೋಷ ಅನ್ನೋದು ಜನರಿಗೆ ಗೊತ್ತಿಲ್ಲ. ಮಾಂಗಲಿಕ ಇರುವುದರಿಂದ ಆ ಜನ ತಮ್ಮ ಅಧಿಕಾರವನ್ನ ಚಲಾಯಿಸೋ ಪ್ರಯತ್ನ ಮಾಡ್ತಾರೆ.ಅವ್ರು ತುಂಬಾ ಧೈರ್ಯಶಾಲಿಗಳು. ಈ ವಿಷಯ ಯಾರಿಗೂ ಗೊತ್ತಿಲ್ಲ. ಮಾಂಗಲಿಕ ಅಂದ್ರೆ ಏನೋ ತುಂಬಾ ದೊಡ್ಡ ದೋಷ ಅದರಿಂದ
ತಮ್ಮ ಮಗನಿಗೆ ಬೇಗ ಸಾವು ಬರುತ್ತೆ ಅಂತೆಲ್ಲ ನಂಬಿಕೆ ಇಟ್ಕೊಂಡು ಮನೆಗೆ ಬಂದಂತ ಲಕ್ಷ್ಮಿಯನ್ನ ಯಾವಾಗಲೂ ದೂಶಿಸ್ತಾ ಇರೋದು ಎಷ್ಟರ ಮಟ್ಟಿಗೆ ಸರಿ. ಆದರೆ ಈಗಿನ ಕಾಲದವರು ಪತ್ರಿಕೆ ಕೂಡ ನೋಡದೆ ಮಾಡುವೆ ಆಗ್ತಾರೆ.ಅವರೆಲ್ಲ ಚೆನ್ನಾಗಿ ಇಲ್ವಾ..?ಇವೆಲ್ಲ ಕೆಟ್ಟ ನಂಬಿಕೆಗಳು ಹೆಣ್ಣನ್ನ ಶೋಷಣೆಗೆ ಒಳಪಡಿಸುತ್ತಾ ಇದ್ದವು.ಆದರೆ ಈಗೀಗ ಅವೆಲ್ಲ ಬದಲಾಗ್ತಾ ಇವೆ ಅಂತ ನಾನು ಅನ್ಕೊಂಡಿದಿನಿ.

ಇನ್ನೊಂದು ವಿಷಯ ಗೊತ್ತ ನೀವೆಲ್ಲ ಬರೀ ಗಂಡು ಹೆಣ್ಣನ್ನ ಶೋಷಣೆಗೆ ಒಳಪಡಿಸ್ತಾ ಇದಾನೆ, ಹೆಣ್ಣನ್ನ ಅವನು ಅರ್ಥ ಮಾಡಿಕೊಳ್ಳೋಕೆ ಸಾಧ್ಯವಿಲ್ಲ, ಹೆಣ್ಣನ್ನ ಬರೀ ಹೆಣ್ಣು ಮಾತ್ರ ಅರ್ಥ ಮಾಡಿಕೊಳ್ತಾಳೆ ಅಂತ ಇದ್ದೀರಾ... ಆದ್ರೆ ಇವಿಷ್ಟಕ್ಕೂ  ಹೆಣ್ಣೇ ಕಾರಣ ಅನ್ನೋದು ನಿಮಗೆ ಗೊತ್ತಾ.??ನಾನು ಬರೀ ಹೆಣ್ಣಿನದೇ ತಪ್ಪು ಅಂತ ಹೇಳ್ತಾ ಇಲ್ಲ ಆದರೂ ಕೂಡ ಒಂದು ಹೆಣ್ಣಿನ ಶೋಷಣೆಗೆ ಇನ್ನೊಂದು ಹೆಣ್ಣೇ ಜಾಸ್ತಿ ಕಾರಣ ಅಂತ ನನ್ನ ಅನಿಸಿಕೆ ಯಾಕೆ ಅಂದ್ರೆ ನೋಡಿ ನೀವು ಹಳೆಯ ಕಾಲದಲ್ಲಿ ಇಡೀ ದಿನ ಹೊರಗೆ ಇರುವ ಗಂಡಿಗೆ ಮನೆಯಲ್ಲಿ ಹೆಂಡತಿ ಏನು ಮಾಡ್ತಾಳೆ ಅಂತ ಕೂಡ ಗೊತ್ತಿರೋಲ್ಲ ಆದರೆ ಅವನು ಮನೆಗೆ ಬಂದ ಮೇಲೆ ಹೆಂಡತಿಗೆ ಹೊಡೆಯೋದು ಯಾರ ಮಾತು ಕೇಳಿ ?? ಮನೇಲಿರೋ ಇನ್ನೊಂದು ಹೆಣ್ಣಿನ (ತಾಯಿ ,ಅಕ್ಕ.ದೊಡ್ಡಮ್ಮ...ಇತ್ಯಾದಿ) ಮಾತು ಕೇಳಿ ಅಲ್ವಾ??ಮತ್ಯಾವ ಕಾರಣಕ್ಕೋ ಕೂಡ ಅವನು ತನ್ನ ಹೆಂಡತಿಯನ್ನ ದೂಶಿಸೋಕೆ ಹೋಗಲ್ಲ. ಒಬ್ಬರನ್ನ ಕಂಡ್ರೆ ಒಬ್ಬರಿಗೆ ಆಗದೆ ಇರೋದು,ಅಥವಾ ಮನೆಯ ಅಧಿಕಾರ ಎಲ್ಲಿ ನಮ್ಮ ಕೈ ತಪ್ಪುವುದೋ ಅನ್ನೋ ಅನ್ನೋ ವಿಚಾರ ಮನೆಯ ಮಹಿಳೆಯನ್ನ ಒಬ್ಬರಿಗೊಬ್ಬರು ದೂಶಿಸತೊಡಗಿದ್ದು ತಾನೇ?ಉದಾಹರಣೆ ಬೇಕು ಅಂದ್ರೆ ಎಲ್ಲ ದೂರದರ್ಶನದ ದಾರಾವಾಹಿಗಳನ್ನ ನೋಡಿ ನಿಮಗೆ ಗೊತ್ತಾಗುತ್ತೆ ಹೌದೋ ಅಲ್ಲವೋ ಅಂತ.ಹಾಗಂತ ಬರೀ ಹೆಂಗಸರೇ ಕಾರಣ ಅಲ್ಲ. ಗಂಡಸು ವಿಚಾರ ಮಾಡದೆ ದುಡುಕುವುದು ಕೂಡ ತಪ್ಪು. ಇವಿಷ್ಟು ಹಳೆಯ ಕಾಲದ್ದಾದರೆ ಈಗಿನ ಕಾಲದಲ್ಲಿ ಇವೆಲ್ಲ ಎಷ್ಟೋ ಮಟ್ಟಿಗೆ ಕಡಿಮೆಯಾಗಿವೆ ಯಾಕೆಂದ್ರೆ ಮನೇಲಿ ಇರೋರೆ ಮೂರೋ ನಾಲ್ಕು ಜನ. ಮತ್ತೆ ಹೆಣ್ಣಿಗೆ ಬೇಕಾಗೋ ಎಲ್ಲ ಸೌಕರ್ಯಗಳು ಸಿಗ್ತಿವೆ.ಮದುವೆ ನಂತರ ಕೂಡ ಮುಂದೆ ಕಲಿಯೋ ಅವಕಾಶ ಅಥವಾ ಉದ್ಯೋಗ ಮಾಡುವ ಅವಕಾಶ ಇವೆಲ್ಲ ಇವೆ.ಏನಾದರೂ ಆದಲ್ಲಿ ಕಾನೂನು ಕೂಡ ಜಾಸ್ತಿ ಮಟ್ಟಿಗೆ ಹೆಣ್ಣಿನ ಪರವಾಗಿಯೇ ಇದೆ.ಆದರೆ ಇವೆಲ್ಲದರ ದುರುಪಯೋಗ ಈಗ ಆಗ್ತಾ ಇದೆ. ಎಷ್ಟೋ ಹೆಣ್ಣು ಮಕ್ಕಳು ಆಸ್ತಿ ಹೊಡೆಯೋ ಸಲುವಾಗಿ ಮದುವೆಯಾಗಿ ಒಂದೇ ವರ್ಷದಲ್ಲಿ ಗಂಡನ ಮೇಲೆ ಕಂಪ್ಲೇಂಟ್ ಮಾಡಿ ಅವನ ಹತ್ರ ಹಣ ಪಡ್ಕೊಂಡು ಡಿವೋರ್ಸ್ ತಗೊಂಡು ಬೇರೊಂದು ಮದುವೆ ಆದವರು ಕೂಡ ಇದ್ದಾರೆ.

ತಿಳಿದೋ ತಿಳಿಯದೆಯೋ ಗಂಡು ಇಷ್ಟು ದಿನ ಮಾಡಿದ ಶೋಷಣೆಗೆ ಇನ್ನು ಮುಂದೆ ಶಿಕ್ಷೆ ಅನುಭವಿಸುವದಂತೂ ನಿಜ.






No comments:

Post a Comment