ವಾಸ್ತವ:

ಅಲ್ಲೆಲ್ಲೋ ಕೊಳವೆ ಬಾವಿಯೊಳಗೆ ಬಿದ್ದ ಕೂಸು
ಇನ್ನೆಲ್ಲೋ ಧರೆ ಕುಸಿದು ಊರಿಗೂರೇ ಅಸ್ತ,
ಎಲ್ಲೆಡೆ ಮುಗ್ಧರ ಅಪಹರಣ ಮಾನಭಂಗ
ಮುಗಿಯದ ಲೂಟಿ ದರೋಡೆ ರಕ್ತಪಾತ.

ಯಾರಿಗೆ ನೋವಿಲ್ಲ ಈ ಜಗದಲಿ
ಇಲ್ಲೆಲ್ಲರ ಕನಸುಗಳು ಕೊಚ್ಚಿ ಹೊಗಿವೆ ಮಣ್ಣಲಿ,
ಯಾರಿಗ್ಯಾರಿಲ್ಲ ಈ ಭುವಿಯಲಿ
ಕೊನೆವರೆಗೆ ಕಣ್ಣೀರೊಂದೇ ಜೋತೆಯಲಿ.

ಸ್ನೇಹಿತರ ದಿನಕ್ಕೊಂದಿಷ್ಟು ಸಾಲುಗಳು:

ಕಣ್ಣೀರಿಡುವ
ಮೊದಲೇ
ಕಣ್ಣೊರೆಸುವುದು
ಗೆಳೆತನ.

ಇಟ್ಟ ಹೆಜ್ಜೆಗೆ
ಜೋತೆಯಾಗಿ
ಹೆಜ್ಜೆ ಹೆಜ್ಜೆಗೂ
ಬಲವನೀಯುತ್ತ
ನಡೆವುದೇ
ಗೆಳೆತನ.

ನಗುವಿನಲಿ
ನಗುವಾಗಿ
ನೋವಿನಲೂ
ನಗುವ
ಹೊಮ್ಮಿಸುವುದೇ
ಗೆಳೆತನ.

ಗೆಲುವಿನಲಿ
ಜೋತೆಯಾಗಿ
ಸೋಲಿನಲಿ
ಬಲವಾಗಿ
ಜೋತೆಯಿರುವುದೇ
ಗೆಳೆತನ.

ಲೆಟೆಸ್ಟ್ ಒನ್:
ಪಾಸಾದರೂ
ಫೇಲಾದರೂ
ಎಣ್ಣೆ ಹೊಡೆಯಲು
ಕರೆಯುವುದೇ
ಗೆಳೆತನ...

ಪಾಪಿ ದುನಿಯಾ:

















ನನ್ನವರು ನನ್ನವರೆಂಬ ಭಾವವಿಹುದು ಮನದಲ್ಲಿ
ತನ್ನದೊಂದಾದರೆ ಸಾಕು ಎನ್ನುವ ಮನುಜರಿಲ್ಲಿ,
ಯಾರಿಗೆ ಯಾರಿಲ್ಲ ಈ ಜಗದಲಿ
ನನ್ನವರಾರಿಲ್ಲ ಈ ಪಾಪಿ ಲೋಕದಲಿ.

ದ್ವೇಷ ಅಸೂಯೆಗಳೊಂದೆ ತುಂಬಿಹುದು
ನೋವಿನಾ ಕೂಗು ಯಾರಿಗಿಲ್ಲಿ ಕೇಳದು,
ಅತ್ಯಾಚಾರ ಅನಾಚಾರಗಳು ನಡೆಯುತಿದು
ನೋಡಿಯೂ ಜನರ ಕಣ್ಣು ಕುರುಡಾಗಿಹುದು.

ಮುಗಿಲ ಚುಂಬಿಸಿದೆ ಆಕ್ರಂದನ
ಮನದೊಡಲ ನೋವು ಹೊರಹೊಮ್ಮಿ.
ಕಾಮುಕರ ತಾಂಡವ ನರ್ತನ
ಬಲಿಯಾಗುತಿದೆ ಜೀವ ರಕ್ತ ಚಿಮ್ಮಿ.

ಕಷ್ಟದಲಿ ಹೆಗಲಿಗೆ ಹೆಗಲಾಗಿ
ಕಂಬನಿಯ ಒರೆಸುವ ಶಕ್ತಿ ಯಾರಿಗಿಲ್ಲ,
ನೋವಿನಲಿ ಪಾಲುದಾರರಾಗಿ
ಆಸರೆಯಾಗುವ ಸಂಯಮವಿಲ್ಲ.

ಲೋಕದ ವ್ಯಥೆಯ ಮೂಲೆ ಗುಂಪಾಗಿಸಿ
ಮೌನಕೆ ಶರಣಾಗಿದೆಯಿಲ್ಲಿ ಎಲ್ಲರ ಮನ,
ನೋವ ಕಂಬನಿಯನ್ನೆಲ್ಲ ಉದರದೊಳಿರಿಸಿ
ನಗುವ ಮುಖವಾಡ ಧರಿಸಿ ನಡೆದರೆ ಜೀವನ.

ಯಾರಿಗೆ ಯಾರಿಲ್ಲ ಈ ಜಗದಲಿ
ನನ್ನವರಾರಿಲ್ಲ ಈ ಪಾಪಿ ಲೋಕದಲಿ...