ಬಯಕೆ:


ಮನದ ಭಾವನೆಗಳಿಗೆ ರೆಕ್ಕೆ ಬಂದು
ಗಗನಕೆ ಹಾರುವಾಸೆಯಾಗಿದೆ ಇಂದು.

ದುಗುಡ ದುಮ್ಮಾನಗಳ ಬದಿಗೊತ್ತಿ
ಮನದ ಆತಂಕವ ದೂರ ಚಿಮ್ಮಿ
ದ್ವೇಷ ಅಸೂಯೆಗಳ ನೋವ ಮರೆತು
ಬಾನಂಚಿನೆಡೆಗೆ ಹಾರಬೇಕಾಗಿದೆ.

ರಾಜಕೀಯದ ಕಚ್ಚಾಟವ ತೊರೆದು
ಕಷ್ಟ ಕಾರ್ಪಣ್ಯಗಳ ಬೇಗೆಯ ಬದಿಗೊತ್ತಿ
ದುರ್ಗಂಧದ ಬೀರುವ ಓಣಿಯ ಬಿಟ್ಟು
ಬಾನಲಿ ರೆಕ್ಕೆ ಬಿಚ್ಚಿ ನಲಿಯಬೇಕಾಗಿದೆ.

ದಿನವೂ ಇರುವುದಿದೇ ನಾಯಿ ಬಾಳು
ಅರಿವಿಲ್ಲದೆ ಕಚ್ಚಾಡುವ ಈ ಗೋಳು
ಇವೆಲ್ಲದರ ಕೆಟ್ಟ ಪೊರೆಯ ಕಳಚಿ
ಮನಕೆ ನೆನಪ ರೆಕ್ಕೆ ಪುಕ್ಕವ ಹಚ್ಚಿ

ಗಗನಕೆ ಹಾರುವಾಸೆಯಾಗಿದೆ ಇಂದು.

No comments:

Post a Comment