ಮಳೆರಾಣಿ:



















ವಿರಹ ವೇದನೆಯಲಿ ಜೀವ ಮುದುಡಿತ್ತು
ನಿನ್ನಯ ಸ್ಪರ್ಶವಿಲ್ಲದೆ ಮನ ನೊಂದಿತ್ತು,
ಇಂದು ನನ್ನ ಮನದಾಸೆಗೆ ಮತ್ತೆ ಜೀವ ಬಂದಿತ್ತು
ಕಾರ್ಮೋಡಗಳ ಅಂಚಿನಲ್ಲಿ ನಿನ್ನ ಮೊಗ ಕಂಡಿತ್ತು.

ಬಾನಂಚಿನ ಮೇಘಗಳ ಮಾಲೆಯಿಂದ ಜಿಗಿದು
ನನ್ನಯ ಮನ ತಣಿಸಲು ಬಂದಿರುವೆ ನೀನಿಂದು,
ನೆತ್ತಿಯ ಮೇಲೆ ಬಿದ್ದ ನಿನ್ನ ಹನಿಯ ಸ್ಪರ್ಶಕೆ
ಮನದಲಿ ನವ ಚೈತನ್ಯ ಮೂಡಿದೆಯಿಂದು.

ಹಣೆಯ ಮೇಲಿಂದ ಕೆನ್ನೆಯ ಮೇಲಿಳಿದು
ಹಾಗೆ ಸಿಹಿ ಮುತ್ತನಿಟ್ಟು ತುಟಿಗೊಂದು,
ನಿನ್ನ ಅಪ್ಪುಗೆಯಲಿ ಶರೀರವೆಲ್ಲ ತೋಯ್ದು
ತಂಪಾಗದೆ ಮೈಯ್ಯೆಲ್ಲ ಬಿಸಿಯಾಗಿದೆಯಿಂದು.

No comments:

Post a Comment