ವಾಸ್ತವ:

ಅಲ್ಲೆಲ್ಲೋ ಕೊಳವೆ ಬಾವಿಯೊಳಗೆ ಬಿದ್ದ ಕೂಸು
ಇನ್ನೆಲ್ಲೋ ಧರೆ ಕುಸಿದು ಊರಿಗೂರೇ ಅಸ್ತ,
ಎಲ್ಲೆಡೆ ಮುಗ್ಧರ ಅಪಹರಣ ಮಾನಭಂಗ
ಮುಗಿಯದ ಲೂಟಿ ದರೋಡೆ ರಕ್ತಪಾತ.

ಯಾರಿಗೆ ನೋವಿಲ್ಲ ಈ ಜಗದಲಿ
ಇಲ್ಲೆಲ್ಲರ ಕನಸುಗಳು ಕೊಚ್ಚಿ ಹೊಗಿವೆ ಮಣ್ಣಲಿ,
ಯಾರಿಗ್ಯಾರಿಲ್ಲ ಈ ಭುವಿಯಲಿ
ಕೊನೆವರೆಗೆ ಕಣ್ಣೀರೊಂದೇ ಜೋತೆಯಲಿ.

No comments:

Post a Comment