tag:blogger.com,1999:blog-52479659715809236282024-03-04T21:43:20.072-08:00ವನಸುಮMotivation http://www.blogger.com/profile/08140925864934705325noreply@blogger.comBlogger77125tag:blogger.com,1999:blog-5247965971580923628.post-71993243398581228792015-01-11T20:46:00.002-08:002015-01-11T20:46:58.797-08:00ಸಾವಿರದ ನೋಟು:<div dir="ltr" style="text-align: left;" trbidi="on">
<div style="text-align: left;">
ಬೆಂಗಳೂರಿನ ರಸ್ತೆಯ ಮೂಲೆಯಲ್ಲಿ ಡೊಂಬರಾಟದವರು ತಮ್ಮ ಕಸರತ್ತು ತೋರಿಸುವಲ್ಲಿ ನಿರತರಾಗಿದ್ದರು. ನೋಡಿದರೆ ಯಾವುದೋ ಹಳ್ಳಿಯ ಮೂಲೆಯಿಂದ ಬಂದವರಂತೆ ಅವರ ವೇಶ ಭೂಶಣವಿತ್ತು. ಹಗ್ಗದ ಮೇಲೆ ನಡೆಯುವುದು, ಗೋಲಕದೊಳಗೆ ತಮ್ಮ ಮೈಯ್ಯನ್ನು ತೂರಿಸುವುದು, ತಲೆ ಕೆಳಗಾಗಿ ಕೈಯ್ಯ ಮೇಲೆ ನಡೆಯುವುದು ಹೀಗೆ ಕಸರತ್ತು ಸಾಗಿತ್ತು. ಸಿಗುವ ಬಿಡಿ ಕಾಸಿಗಾಗಿ ಜೀವವನ್ನು ಪಣಕ್ಕಿಟ್ಟು ಮಾಡುವ ಕಸರತ್ತು ಜನರನ್ನು ಅವರತ್ತ ಆಕರ್ಷಿಸುತ್ತಿತ್ತು. ಡೊಂಬರಾಟದ ಗುಂಪಲ್ಲಿ ಇದ್ದದ್ದು ಮೂರು ಜನ, ಎಲ್ಲರೂ ಹೆಂಗಸರೇ. ಒಬ್ಬಳಿಗೆ ಸುಮಾರು ಮೂರರಿಂದ ನಾಲ್ಕು ವಯಸ್ಸಿರರಬಹುದು, ನೋಡೊಕೆ ಮುಗ್ಧ ಮಗು ಆದರೆ ಆಟದಲ್ಲಿ ಬಲು ಜೋರಿತ್ತು, ಇನ್ನೊಬ್ಬಳಿಗೆ ಸುಮಾರು ಹತ್ತು ಹನ್ನೆರೆಡರಿಬಹುದು, ಮಾಸಿದ ಬಟ್ಟೆಯಲ್ಲೂ ಆಕೆ ಸುಂದರಿ. ಮತ್ತೊಬ್ಬಳು ಅವರಿಬ್ಬರ ತಾಯಿ, ನೋಡೊಕೆ ಚಿಕ್ಕ ವಯಸ್ಸು ತುಂಬಿದ ಮೈಕಟ್ಟು. ಜನರ ಗುಂಪು ಸ್ವಲ್ಪ ಹೊತ್ತು ಕಸರತ್ತು ನೋಡಿ ಎದುರಿಗೆ ಹಾಸಿದ್ದ ಬಟ್ಟೆ ತುಂಡಿನ ಮೇಲೆ ನಾಲ್ಕು ಕಾಸು ಚೆಲ್ಲಿ ಮಾಯವಾಗುತ್ತಿದ್ದರು. ಅವರ ಕಸರತ್ತು ನಿರಂತರ ನಡೆದಿತ್ತು, ಮಧ್ಯ ಸ್ವಲ್ಪ ವಿಶ್ರಮಿಸಿ ಮತ್ತೆ ತಮ್ಮ ತಮ್ಮ ಕಸರತ್ತು ತೋರಿಸುವಲ್ಲಿ ನಿರತವಾಗಿದ್ದರು. ಹೀಗೆ ದಿನವಿಡೀ ದುಡಿದಾಗ ಸಿಗುತ್ತಿದ್ದದ್ದು ನೂರೋ ಇನ್ನೂರೋ. ಅದರಲ್ಲೇ ಊಟಕ್ಕಾಗಿ ಖರ್ಚು ಮಾಡಿ ಸ್ವಲ್ಪ ಕೂಡಿಡುತ್ತಿದ್ದಳು ಆ ತಾಯಿ.</div>
<div style="text-align: left;">
<br />ಒಂದು ದಿನ ಮುಂಜಾನೆ ಹೊತ್ತು ಅವರ ಕಸರತ್ತು ನಡೆದಿತ್ತು, ಜನಜಂಗುಳಿ ಕಡಿಮೆಯಿತ್ತು. ಕೆಲಸದ ದಿನವಾದ್ದರಿಂದ ಎಲ್ಲರೂ ತಮ್ಮ ತಮ್ಮ ಕೆಲಸದ ಗಡಿಬಿಡಿಯಲ್ಲಿ ಇವರತ್ತ ಗಮನ ಹರಿಸದೇ ಮುಂದೆ ಸಾಗುತ್ತಿದ್ದರು. ದೂರದಿಂದ ಒಬ್ಬ ಇವರ ಆಟವನ್ನು ಬಹಳ ಹೊತ್ತಿನಿಂದ ನೋಡುತ್ತಿದ್ದ, ಸುಮಾರು ಮೂವತ್ತರ ಆಸುಪಾಸಿನವನಿರಬಹುದು. ಜನರೆಲ್ಲ ಅವರಿಂದ ದೂರವಾದಂತೆ ಅತ್ತಿತ್ತ ಗಮನಿಸಿ ಇವರತ್ತ ಆಗಮಿಸಿದ. ಇಬ್ಬರೂ ಹೆಣ್ಣು ಕೂಸುಗಳು ಎಂದಿನಂತೆ ತಮ್ಮ ಆಟ ಪ್ರದರ್ಶಿಸತೊಡಗಿದರು. "ದಿನವಿಡೀ ಹೀಗೆ ಕಸರತ್ತು ಮಾಡಿದರೆ ಎಷ್ಟು ಸಿಗುತ್ತೆ?" ನೇರ ಪ್ರಶ್ನಿಸಿದ. "ಏನೋ ನೂರಿನ್ನೂರು ಸಿಗತೈತೆ ಸಾಮಿ" ಎನ್ನುವ ಉತ್ತರ. "ನಾನು ಸಾವಿರ ಕೊಡ್ತೇನೆ ಈಕೆಯನ್ನು ಒಂದು ದಿನ ನನ್ನ ಜೋತೆ ಕೆಲಸಕ್ಕೆ ಕಳಿಸ್ತೀಯಾ?" ಮಧ್ಯ ವಯಸ್ಸಿನ ಹುಡುಗಿಯತ್ತ ಬೊಟ್ಟು ಮಾಡಿದ. "ಎಂತ ಕೆಲ್ಸಾ ಸಾಮಿ? ಇಲ್ಲಾ ಒಬ್ಬೊಬ್ಬಳನ್ನ ಹಾಗೆ ಕಳ್ಸಲ್ಲಾ, ಬೇಕಾದ್ರೆ ಎಲ್ಲರೂ ಬತ್ತೀವಿ..." ಪ್ರಶ್ನಾರ್ತಕವಾಗಿ ಅವನತ್ತ ನೋಡಿದಳು ಆ ತಾಯಿ. "ನಮ್ಮದು ಸರ್ಕಸ್ ಕಂಪನಿ ಇದೆ, ಅಲ್ಲಿ ಒಬ್ಬಳು ಹುಡುಗಿ ನಾಪತ್ತೆ ಆಗಿದಾಳೆ, ಅವಳ ಬದಲಿಗೆ ಹುಡುಗಿ ಬೇಕಷ್ಟೆ ಹಾಗೆ ಎಲ್ಲರನ್ನೂ ಕರ್ಕೊಂಡು ಹೋಗೊಕೆ ಆಗಲ್ಲ. ಅಲ್ಲಿ ಇವಳು ಚೆನ್ನಾಗಿ ಕೆಲಸ ಮಾಡಿದ್ರೆ ಖಾಯಂ ಆಗಿ ಕೆಲ್ಸ ಸಿಗುತ್ತೆ ತುಂಬಾ ದುಡ್ಡು ಮಾಡಬಹುದು. ಇವತ್ತಿಗೆ ಇಷ್ಟು ಕೊಡ್ತೆನೆ" ಅಂತ ಸಾವಿರದ ನೋಟನ್ನು ಎದುರಿಗೆ ಹಿಡಿದ. ಮೂವರೂ ಮುಖ ಮುಖ ನೋಡತೊಡಗಿದರು. ಕೊನೆಗೂ ದುಡ್ಡಿನ ಆಸೆಗಾಗಿ ಹಿಂದೆ ಮುಂದೆ ವಿಚಾರಿಸದೇ ಮಗಳನ್ನು ಅವನೊಟ್ಟಿಗೆ ಕಳಿಸಿಕೊಡಲು ಆಕೆ ತಯಾರಾದಳು. ಸಂಜೆ ಹೊತ್ತಿಗೆ ಇಲ್ಲೇ ತಂದು ಬಿಡುತ್ತೇನೆ ಅಂತ ಆಕೆಯನ್ನು ಜೊತೆಗೆ ಕರೆದುಕೊಂಡು ಹೊರಟನಾತ. ಅಮ್ಮನತ್ತ ಒಮ್ಮೆ ದಿಟ್ಟಿಸಿ ನೋಡಿ ಅವನೊಟ್ಟಿಗೆ ಹೆಜ್ಜೆ ಹಾಕಿದಳು ಆ ಮುಗ್ಧೆ.</div>
<div style="text-align: left;">
<br />ಸಂಜೆ ಕಳೆದು ರಾತ್ರಿಯಾದರೂ ಮಗಳ ಪತ್ತೆಯಿಲ್ಲ, ಭಯ ದುಗುಡ ಆಕೆಯಲ್ಲಿ ಆವರಿಸತೊಡಗಿತ್ತು. ದಿನವಿಡಿ ಆಕೆಯಿಲ್ಲದೇ ಕಳೆದಿದ್ದು ಇದೇ ಮೊದಲ ಬಾರಿಯಾಗಿತ್ತು. ಈ ದಿನ ಎಷ್ಟೋ ವರುಶ ಕಳೆದಂತೆ ಆಕೆಗೆ ಭಾಸವಾಗತೊಡಗಿತ್ತು. ಒಂಚೂರು ತಿಂದು ಪುಟ್ಟ ಮಗು ನಿದ್ರಿಸಿತ್ತು. ರಾತ್ರಿಯೆಲ್ಲ ಮಗಳ ನಿರೀಕ್ಷೆಯಲ್ಲಿ ಕಳೆದಿತ್ತು. ನಿದ್ರೆಯೂ ಆಕೆಯನ್ನು ಆವರಿಸಲಿಲ್ಲ. ಬೆಳಗಾಯಿತು, ನಿತ್ಯದಂತೆ ಜನರೆಲ್ಲ ತಮ್ಮ ತಮ್ಮ ಕೆಲಸದಲ್ಲಿ ಮಗ್ನವಾಗತೊಡಗಿದ್ದರು. ಸಂಜೆ ಬರಬೇಕಿದ್ದ ಮಗಳು ರಾತ್ರಿ ಕಳೆದು ಬೆಳಗಾದರು ಬರದಿದ್ದದ್ದು ಆಕೆಯಲ್ಲಿ ಪ್ರಶ್ನೆಯಾಗೇ ಉಳಿದಿತ್ತು. ಎಲ್ಲಿ ಅವಳ ಕಸರತ್ತು ಇಷ್ಟವಾಗಿ ಆಕೆಯನ್ನು ಖಾಯಂ ಕೆಲಸಕ್ಕೆ ಇಟ್ಟುಕೊಂಡರೋ ಹೇಗೇ ಅನ್ನುವ ಅನುಮಾನ ಮನದಲ್ಲಿ ಮೂಡಿತ್ತು. ಕಾಯದೇ ಬೇರೆ ಯಾಬವ ದಾರಿಯೂ ಇರಲಿಲ್ಲ ಅವಳಲ್ಲಿ, ಕರೆದುಕೊಂಡು ಹೋದವನ ತಲೆ ಬುಡವೂ ತಿಳಿದಿರಲಿಲ್ಲ. ಸಂಜೆಯ ವರೆಗೂ ಮಗಳ ದಾರಿ ನೋಡುವುದರಲ್ಲೇ ಕಳೆಯಿತು. ಅಕ್ಕ ಎಲ್ಲಿ ಅನ್ನುವ ಪುಟ್ಟ ಮಗುವಿನ ಪ್ರಶ್ನೆಗೆ ಅವಳಲ್ಲಿ ಯಾವುದೇ ಉತ್ತರವಿರಲಿಲ್ಲ. ಬಡತನದ ತಳಮಳ ಒಂದು ಕಡೆಯಾದರೆ, ಬಟ್ಟೆಯ ಗಂಟಿನಲ್ಲಿ ಸುತ್ತಿಟ್ಟಿದ್ದ ಸಾವಿರ ರೂಪಾಯಿ ನಗೆ ಬೀರಿತ್ತು.</div>
<div style="text-align: left;">
<br />ಸಂಜೆಯವರೆಗೂ ದಾರಿ ನೋಡಿದ ಆಕೆಗೆ ದುಃಖ ಉಮ್ಮಳಿಸಿ ಬರತೊಡಗಿತ್ತು, ಕಣ್ಣುಗಳು ಒದ್ದೆಯಾಗಿತ್ತು. ಗೊತ್ತಿರದ ಈ ಊರಲ್ಲಿ ಎಲ್ಲಿ ಅಂತ ಮಗಳನ್ನು ಹುಡುಕೋದು ಅನ್ನುವುದೇ ತಿಳಿಯದಾಗಿತ್ತು. ಅಲ್ಲಿ ಓಡಾಡುತ್ತಿದ್ದ ಜನರನ್ನು ಕೇಳತೊಡಗಿದಳು. ಎಲ್ಲರಿಂದಲೂ ಒಂದೇ ಉತ್ತರವಾಗಿತ್ತು "ಇಲ್ಲಿ ಯಾವುದೂ ಸರ್ಕಸ್ ಕಂಪನಿ ಇಲ್ಲಮ್ಮ, ಸದ್ಯ ಬೆಂಗಳೂರಲ್ಲಿ ಯಾವುದೇ ಸರ್ಕಸ್ ಕಂಪನಿ ನಡಿತಾ ಇಲ್ಲ". ಇದನ್ನೆಲ್ಲ ಕೇಳಿದ ಅವಳಿಗೆ ಮಗಳನ್ನು ಆತ ಕದ್ದೊಯ್ದ ಅಂತನಿಸತೊಡಗಿತು. ರಾತ್ರಿಯಾಗಿತ್ತು, ಕೊನೆಗೆ ಯಾವುದೇ ದಾರಿ ತೋರದೇ ಹತ್ತಿರವಿದ್ದ ಪೋಲಿಸ್ ಠಾಣೆಯತ್ತ ಹೆಜ್ಜೆ ಹಾಕಿದಳು. ಎಂದೂ ಪೋಲಿಸ್ ಠಾಣೆ ನೋಡದ ಆಕೆ ಹೆದರುತ್ತಲೇ ಹೆಜ್ಜೆ ಇಡತೊಳಗಿದಳು. ಅಲ್ಲೆ ಇದ್ದ ಪೇದೆಯೊಬ್ಬ "ಏನಮ್ಮ ಭಿಕ್ಷೆ ಬೆಡೊಕೆ ಪೊಲೀಸ್ ಠಾಣೆನೂ ಬಿಡಲ್ವಾ, ಹೋಗಾಚೆ" ಅಂತ ಬಯ್ಯತೊಡಗಿದ. ಅವನತ್ತ ಭಾರದ ದೃಷ್ಟಿಯಿಟ್ಟು "ಅಣ್ಣಾ ನನ್ ಮಗಾ ಕಾಣೆಯಾಗದೆ ಸಲ್ಪ ಹುಡುಕ್ಕೊಡ್ತೀರಾ" ಅಂತ ಭಯದಿಂದಲೇ ನುಡಿದಳು. "ನಮ್ಗೇನು ಬೇರೆ ಕೆಲ್ಸಾ ಇಲ್ವಾ, ಮಕ್ಕಳನ್ನ ಎಲ್ಲಾರೂ ಬಿಟ್ಟು ಬರ್ತೀರಾ, ಆಮೇಲೆ ಇಲ್ಲಿ ಬಂದು ಗಲಾಟೆ ಮಾಡ್ತೀರಾ. ಸುಮ್ನೇ ಹೊಗಮ್ಮ" ಪೊಲೀಸ ಪೇದೆಯ ಮಾತಿಗೆ ಅವಕ್ಕಾದಳು. "ಅಣ್ಣ ಹಂಗೆ ಹೇಳ್ ಬ್ಯಾಡ, ಹೆಣ್ ಕೂಸು. ನಿನ್ನೆಯಿಂದ ಕಾಣ್ತಾ ಇಲ್ಲ. ಹುಡುಕ್ಕೊಡಿ ಪುಣ್ಯ ಬತ್ತದೆ. ಇಲ್ಲಾ ಅನ್ ಬ್ಯಾಡಿ" ಹೇಳುವಷ್ಟರಲ್ಲಿ ಕಣ್ಣೀರ ಕಟ್ಟೆ ಒಡೆದಿತ್ತು. ಅವಳ ಕಾಟ ತಾಳಲಾರದೇ ಅವಳನ್ನು ಬಾ ನನ್ ಜೋತೆ ಅನ್ನುತ್ತ ಒಳಗಡೆ ಕರೆದೊಯ್ದು ಸಾಹೆಬರ ಎದುರಿಗೆ ನಿಲ್ಲಿಸಿದ. "ಈ ಯಮ್ಮ ಬಿಡೊ ಹಾಗೆ ಕಾಣ್ತಿಲ್ಲ, ಮಗು ಕಾಣೆಯಾಗಿದೆ ಹುಡುಕಿ ಕೋಡೀ ಅಂತ ಒಂದೇ ಸಮನೇ ಕಾಡ್ತಾ ಇದಾಳೆ" ಸಿಗರೇಟಿನ ಹೊಗೆಯ ಮಧ್ಯದಿಂದ ಸಾಹೆಬರ ಮಖ ಅಸ್ಪಷ್ಟವಾಗಿ ಕಾಣುತ್ತಿತ್ತು. "ಏನಮ್ಮ ನಿಮ್ಮ ಗೋಳು" ಅನ್ನುತ್ತ, ಪುಕ್ಕಟೆ ಕೇಸು ಅನ್ನುವ ತಿರಸ್ಕಾರದ ನೋಟ ಬೀರಿದರು ಸಾಹೆಬರು. ಒಂದೇ ಸಮ ಅಳುತ್ತಿದ್ದ ಆಕೆಯನ್ನು "ಸಾಕು ಅಳೊದು ನಿಲ್ಸಿ ಏನಾಯ್ತು ಅಂತ ಹೇಳಿದ್ರೆ ತಾನೆ ಹುಡುಕೋದು, ಮಕ್ಕಳನ್ನ ಎಲ್ಲಾದ್ರೂ ಭಿಕ್ಷೆ ಬೇಡೊಕೆ ಬಿಡ್ತೀರ ಆಮೇಲೆ ಕಾಣೆ ಆಯ್ತು ಅಂತ ನಮ್ಮ ತಲೆ ತಿಂತೀರಾ... ದಿನಾ ಹೀಗೆ ನಿಮ್ಮಂತ ಪುಕ್ಕಟೆ ಕೇಸು ಬರ್ತಾ ಇದ್ರೆ ನಾವು ಉದ್ಧಾರ ಆದ ಹಾಗೆ. ಕೈಯ್ಯಲ್ಲಿ ಒಂದು ಕಾಸಿರೊಲ್ಲ ಬಂದು ಬಿಡ್ತೀರ ಠಾಣೆಗೆ" ಅನ್ನುತ್ತ ಗದರಿದ ಆ ಪೊಲೀಸಪ್ಪ. ಸಾಹೆಬರ ಉತ್ತರಕ್ಕೆ ಹೆದರಿ ಬಾಯಿ ಮುಚ್ಚಿದಳಾಕೆ. "ಏನಾದ್ರೂ ಕಾಸು ಮಡಗಿದೀಯಾ, ಅದಿದ್ರೆ ನಿನ್ ಮಗಳನ್ನ ಹುಡುಕೊಕೆ ಆಗೋದು" ಪೇದೆ ಉತ್ತರಿಸಿದ. ಸೀರೆಯ ಸೆರಗಿನ ಅಂಚು ಬಿಚ್ಚಿ ಸಾವಿರದ ಒಂದು ನೋಟು, ನೂರರ ಮೂರ್ನಾಲ್ಕು ನೋಟನ್ನು ಟೆಬಲಿನ ಮೇಲಿಟ್ಟು "ಇಷ್ಟೇ ಐತೆ ಬುದ್ದಿ, ನನ್ ಮಗಳನ್ನು ಹುಡುಕ್ಕೊಡಿ ನಿಮ್ ಕಾಲಿಗೆ ಬೀಳ್ತೀನಿ" ಅಂದಳಾಕೆ. ಸಾವಿರದ ನೋಟು ಕಾಣುತ್ತಿದ್ದಂತೆ ಪೊಲೀಸ್ ಸಾಹೆಬರ ಕಣ್ಣು ದೊಡ್ಡದಾಯಿತು. ಎಲ್ಲ ನೋಟನ್ನು ಬಾಚಿ ಕಿಸೆ ಸೇರಿಸಿಕೊಂಡು ಏನಾಯಿತು ಹೇಳಮ್ಮ ಅಂತ ವಿನಯದಿಂದ ನುಡಿದ ಆ ಸಾಹೆಬ.</div>
<div style="text-align: left;">
<br />ಆಕೆಯ ಎಲ್ಲ ವಿವರಣೆ ಕೇಳಿದ ಸಾಹೆಬ "ಅಲ್ಲಮ್ಮ ಹಿಂದೆ ಮುಂದೆ ನೋಡ್ದೆ ಅವನ ಜೋತೆ ಮಗಳನ್ನ ಕಳ್ಸಿದಿಯಲ್ಲ, ಇನ್ನೂ ಹನ್ನೆರಡೋ ಹದಿಮೂರೋ ವಯಸ್ಸು ಅಂತೀಯಾ ಅವಳನ್ನ ಯಾರಿಗಾದ್ರೂ ಮಾರಿರ್ತಾನೆ ಬಿಡು" ಅಂತ ಬಡಬಡನೆ ನುಡಿದ. ಸಾಹೆಬರ ಮಾತು ಕೇಳುತ್ತಿದ್ದಂತೆ ಗೊಳೋ ಅಂತ ಅಳತೊಡಗಿದಳಾಕೆ. "ಈಗ ಅತ್ತು ಏನು ಪ್ರಯೋಜನ? ಸುಮ್ನಿರು ಏನಾದರೂ ಮಾಡಿ ಹುಡುಕೋಣ ನಿನ್ನ ಮಗಳನ್ನ, ಆದರೆ ಅದಕ್ಕೆ ಇನ್ನೂ ಸ್ವಲ್ಪ ಖರ್ಚಾಗುತ್ತೆ".ನುಡಿದನಾತ. ಆಕೆ ಕಣ್ಣೊರೆಸುತ್ತ "ಬುದ್ದಿ ಏನಾರ ಮಾಡಿ ಮಗಳನ್ನ ಹುಡುಕ್ಕೋಡಿ, ಈಗ ನನ್ ಹತ್ರಾ ಎನಿಲ್ಲಾ ಬುದ್ದಿ, ಇರೋದೆಲ್ಲ ನಿಮಗೆ ಕೊಟ್ಟೀವ್ನಿ. ಮಗ ಸಿಕ್ ಮ್ಯಾಗೆ ಆಟ ಆಡಿ ನಿಮ್ಗೆ ತಂದ್ ಕೋಡ್ತೀನಿ ಬುದ್ದಿ, ಇಲ್ಲಾ ಅನ್ ಬ್ಯಾಡಿ ಬುದ್ದಿ". ತಿರಸ್ಕಾರದ ನೋಟ ಬೀರಿದ ಸಾಹೆಬ. "ಅಯ್ಯಾ ಏನಾರ ಮಾಡಿ... ನನ್ ಮಗಾ ನಂಗೆ ಬೇಕು, ನೀವ್ ಎನ್ ಹೇಳಿದ್ರೂ ನಾ ಮಾಡತೀವ್ನಿ, ಇಲ್ಲಾ ಅನಬ್ಯಾಡಿ." ಗೊಗರೆಯತೊಡಗಿದಳಾಕೆ. ಒಮ್ಮೆ ಆಕೆಯನ್ನ ಮೇಲಿಂದ ಕೆಳವರೆಗೂ ನೋಡಿ "ಏನು ಬೇಕಾದ್ರೂ ಮಾಡ್ತೀಯಾ" ಮರು ಪ್ರಶ್ನಿಸಿದ. "ಹೂಂ ಬುದ್ದಿ" ಅಂದಳಾಕೆ. ಅತ್ತಿತ್ತ ನೋಡಿ "ಸರಿ ನಡೀ ಆ ಕಡೆ, ಮಗೂನ ಪೇದೆ ಹತ್ರ ಕೋಡು" ಅನ್ನುತ್ತ ಕಿಸೆಯಿಂದ ನೂರರ ಎರಡು ನೋಟು ಪೇದೆಯ ಕೈಗಿಡುತ್ತ ಪಾಪ ಮಗೂಗೆ ಹಸಿವೆಯಾಗಿರಬೇಕು ಏನಾದ್ರೂ ತಿನ್ನೊಕೆ ಕೊಡ್ಸು, ನೀನೂ ಚಾ ಕುಡ್ಕೊಂಡು ಬಾ" ಅಂದು ಕಣ್ಣ ಸನ್ನೆ ಮಾಡಿದ. ಪೇದೆ ಅರ್ಥವಾದವನಂತೆ ಮಗುವನ್ನು ಎತ್ತಿಕೊಂಡು ಠಾಣೆಯ ಬಾಗಿಲು ಎಳೆದುಕೊಂಡು ಹೊರ ನಡೆದ. ಅರ್ಧ ಘಂಟೆಯಲ್ಲಿ ಲಾಕಪ್ ಒಳಗಿಂದ ಮೈ ಕೊಡವುತ್ತ ಸಾಹೆಬ ಹೊರಬಂದ, ಹಿಂದಿನಿಂದ ಆಕೆಯೂ ಸೆರಗು ಸರಿ ಮಾಡುತ್ತ ಕಣ್ಣೀರೊಂದಿಗೆ ಹೊರಬಂದಳು. ಠಾಣೆಯ ಬಾಗಿಲು ತೆರೆದು ಸನ್ನೆ ಮಾಡಿದ. ಕ್ಷಣದಲ್ಲಿ ಪೇದೆ ಮಗುವಿನೊಂದಿದೆ ಒಳಬಂದ. ಕೈಯ್ಯಲ್ಲಿ ಮಿಠಾಯಿ ಹಿಡಿದು ಪೇದೆಯೊಂದಿಗೆ ನಗುತ್ತಿದ್ದ ಮಗುವನ್ನು ಎತ್ತಿಕೊಂಡು ತಬ್ಬಿದಳಾಕೆ. "ಬುದ್ದಿ ನೀವ್ ಹೇಳ್ದಾಗೆ ಕೇಳಿವ್ನಿ, ಇನ್ನಾರ ನನ್ ಮಗೀನ....??" ಪ್ರಶ್ನಾರ್ಥಕ ನೋಟ ಬೀರಿದಳಾಕೆ. ಸರಿ ಸರಿ ಅನ್ನುತ್ತ ಮಗಳ ಗುರುತಿನ ಬಗ್ಗೆ ವಿಚಾರಿಸತೊಡಗಿದ.</div>
<div style="text-align: left;">
<br />ಕಾಣೆಯಾದ ಹುಡುಗಿಯ ವಿವರಣೆ ಕೇಳಿದ ಪೊಲೀಸನ ಮುಖದಲ್ಲಿ ಏನೋ ಸಂದೆಹ ಮೂಡಿತ್ತು. "ಇದೇ ತರಹದ ಹುಡುಗಿ ಒಬ್ಬಳು ಇವತ್ತು ಬೆಳಿಗ್ಗೆ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾಳೆ ಅಂತ ಸುದ್ದಿ ಬಂದಿದೆ, ರಸ್ತೆಯಲ್ಲಿ ಎಲ್ಲೋ ಅನಾಥವಾಗಿ ಬಿದ್ದಿದ್ಲು ಅಂತ ಹೇಳಿದ್ರು, ಅವಳೇ ಇರಬಹುದು ನಡಿ ಹೊಗೋಣ" ಅಂತ ಹೆಜ್ಜೆಹಾಕಿದ. ಆಕೆಯೂ ಅತನೊಂದಿಗೆ ಹೆಜ್ಜೆಗೂಡಿಸಿದಳು. ಅಲ್ಲಿಂದ ಹೊರಟ ಪೊಲೀಸ್ ವಾಹನ ಸೀದಾ ಆಸ್ಪತ್ರೆಯ ಎದುರಲ್ಲಿ ನಿಂತಿತ್ತು. ಹೆದರುತ್ತಲೆ ಸಾಹೆಬರೊಂದಿಗೆ ಹೆಜ್ಜೆ ಇಟ್ಟಳು. ಇಲ್ಲೇ ಇರು ವಿಚಾರಿಸಿಕೊಂಡು ಬರ್ತೇನೆ ಅಂತ ಅತ್ತ ನಡೆದು ಕೆಲ ಕ್ಷಣದಲ್ಲಿ ಮತ್ತೆ ಪ್ರತ್ಯಕ್ಷನಾದ. "ಬಾ ನನ್ ಜೋತೆ, ಬೆಳಿಗ್ಗೆ ಸಿಕ್ಕ ಹುಡುಗಿ ಸತ್ತೋಗಿದಾಳೆ, ನೋಡು ಅವಳೇನಾ ನಿನ್ನ ಮಗಳು" ಅಂತ ಅವಳನ್ನ ಜೋತೆಗೆ ಬರುವಂತೆ ಸೂಚಿಸಿದ. ಭಾರವಾದ ಮನದೊಂದಿಗೆ ಅವಳು ಹೆಜ್ಜೆ ಹಾಕತೊಡಗಿದಳು, ಮನದಲ್ಲಿ ನೂರಾರು ವಿಚಾರಗಳು ಸುಳಿಯತೊಡಗಿದವು. ಆಕೆ ನನ್ನ ಮಗಳು ಇರಲು ಸಾಧ್ಯವೇ ಇಲ್ಲ ಅನ್ನುವಂತೆ ಶವಾಗಾರದೊಳಗೆ ಹೆಜ್ಜೆ ಇರಿಸಿದಳು. ಮಲಗಿಸಿದ್ದ ಶವದ ಮೇಲಿನ ಬಟ್ಟೆ ತೆಗೆಯುತ್ತಿದ್ದಂತೆ ಚಿಟ್ಟನೇ ಚೀರಿದಳು. "ಅಯ್ಯೋ ಸಿವನೆ, ಏನಾತು ನಿಂಗೆ? ಯಾಕ್ ನನ್ ಬಿಟ್ ಹೋದೊ? ನನ್ ಕಂದಾ" ಅಂದು ಗೋಳಿಡತೊಡಗಿದಳು. ಏನೂ ಅರಿಯದ ಆ ಪುಟ್ಟ ಮಗು ಅಕ್ಕಾ ಅಂತ ಅಳತೊಡಗಿತು. ಏನಾಗಿತ್ತು ನನ್ ಮಗೀಗೇ ಅಂತ ಗೊಗರೆಯತೊಡಗಿದಳಾಕೆ. ವೈದ್ಯರತ್ತ ಕಣ್ಣುಹರಿಸಿದ ಸಾಹೆಬ. "ಯಾರೋ ಇವಳ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿ, ಅಲ್ಲೇ ಬಿಟ್ಟು ಹೋಗಿದ್ದಾರೆ. ಪಾಪ ಚಿಕ್ಕ ಹುಡುಗಿ ತಡೆದುಕೊಳ್ಳಲಾರದೇ ಸಾವನ್ನಪ್ಪಿದೆ."ವೈದ್ಯರ ಮಾತು ಕೇಳುತ್ತಿದ್ದಂತೆ ಆಕೆ ಅಲ್ಲೇ ಕುಸಿದಳು. ಪೊಲೀಸ್ ಸಾಹೇಬ ವೈದ್ಯರ ಬಳಿ ಮಾತನಾಡಿ ಶವವನ್ನು ಆಕೆಯ ಕೈಗಿಟ್ಟು ತನ್ನ ದಾರಿ ಹಿಡಿದ. ಮುದ್ದು ಮಗಳ ಶವ ಹಿಡಿದು ಕಣ್ಣೆರೊಂದಿಗೆ ಆ ಪುಟ್ಟ ಮಗುವಿನ ಜೋತೆ ಕತ್ತಲಲ್ಲಿ ಮಾಯವಾದಳಾಕೆ.<br />ಒಂದೆಡೆ ಕಿತ್ತು ತಿನ್ನುವ ಬಡತನ, ತನ್ನವರನ್ನು ಕಳೆದುಕೊಂಡ ನೋವು. ಇನ್ನೊಂದೆಡೆ ಅಮಾಯಕರ ಮೇಲೆ ಅತ್ಯಾಚಾರ, ಕಾನೂನನ್ನು ರಕ್ಷಿಸುವರಿಂದಲೇ ಅದರ ದುರುಪಯೋಗ. ಇದೆಲ್ಲದರ ನಡುವೆ ಸಾವಿರದ ನೋಟು ಕೆಕೆ ಹಾಕುತ್ತಿತ್ತು.</div>
<div style="text-align: center;">
<br /></div>
<div style="text-align: center;">
*****</div>
<div style="text-align: center;">
<br /></div>
<span style="font-family: 'tunga';"><b>ಜನೆವರಿ ೧೨ರ ಪಂಜು ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾದ ಬರಹ.</b></span><br />
<div style="text-align: center;">
</div>
<div style="margin-bottom: 10px;">
<span style="background-color: #fff2cc; font-family: tunga;"><b>http://www.panjumagazine.com/?p=9887</b></span></div>
</div>
Motivation http://www.blogger.com/profile/08140925864934705325noreply@blogger.com0tag:blogger.com,1999:blog-5247965971580923628.post-24623665668996733822015-01-08T08:29:00.002-08:002015-01-08T08:29:49.919-08:00ಬದುಕಿನ ಪುಟಗಳಿಂದ ಭಾಗ-೧: <div dir="ltr" style="text-align: left;" trbidi="on">
<div class="MsoNormal">
<span style="font-family: Tunga, sans-serif; font-size: 12pt; line-height: 115%;"><b>ಮಳೆಗಾಲದ ಆ ದಿನಗಳು:</b></span></div>
<div class="MsoNormal">
<span style="font-family: Tunga, sans-serif; font-size: 12pt; line-height: 115%;"><br /></span></div>
<div class="MsoNormal">
<span lang="EN" style="font-family: "Tunga","sans-serif"; font-size: 12.0pt; line-height: 115%; mso-ansi-language: EN;">ಈಗ ಸುಮಾರು ಹತ್ತು ಹದಿನೈದು ವರ್ಷಗಳ
ಹಿಂದಿನ ಮಾತು. ಆಗ ನಾವಿದ್ದದ್ದು ಬನವಾಸಿಯ ಹತ್ತಿರದ ಒಂದು ತೋಟದ ಮನೆಯಲ್ಲಿ. ಊರಿನಿಂದ ಸುಮಾರು ನಾಲ್ಕೈದು
ಕಿಲೋ ಮೀಟರ್ ದೂರದ ತೋಟಕ್ಕೆ ಇದ್ದದ್ದು ಮಣ್ಣಿನ ದಾರಿ. ಅಲ್ಲಿಗೆ ಹೋಗುವಾಗ ಮಧ್ಯದಲ್ಲಿ ಒಂದು ದೊಡ್ಡ
ಬಯಲು, ಆಮೇಲೆ ಮುಂದೆ ಕಿರಿದಾದ ದಾರಿ. ಮಳೆಗಾಲದಲ್ಲಿ ಅಲ್ಲಿ ಪೂರ್ಣ ನೀರು ತುಂಬಿಕೊಳ್ಳುತ್ತಿತ್ತು,
ದನಗಳೆಲ್ಲ ಓಡಾಡಿ ಕೆಸರು ರಾಡಿ. ಅದರಲ್ಲಿ ಸೈಕಲ್ ಹೊಡೆಯೋದು ಒಂದು ಕಸರತ್ತೇ ಆಗಿತ್ತು. ಆ ದಾರಿಯಲ್ಲಿ
ಗಾಡಿಗಳು ಓಡಾಡುವುದು ಬಲು ಅಪರೂಪ. ದನ ಮೇಯಿಸುವರು, ನಾವು ಹೀಗೆ ಜನರ ಓಡಾಟವೂ ಕಡಿಮೆ. ನಾವಿದ್ದ ತೋಟದ
ಪಕ್ಕದಲ್ಲಿ ಮತ್ತೊಂದು ತೋಟವಿತ್ತು, ಹಗಲು ಹೊತ್ತು ಕೆಲಸದವರು ಇರುತ್ತಿದ್ದರು ಬಿಟ್ಟರೆ ರಾತ್ರಿ ಯಾರ
ಸುಳಿವೂ ಇರುತ್ತಿರಲಿಲ್ಲ. ನಮ್ಮದು ಒಂಟಿ ಮನೆ. ಸುಮಾರು ನಾಲ್ಕೈದು ಎಕರೆಯ ತೆಂಗು, ಅಡಿಕೆ, ಬಾಳೆ
ತೋಟ, ನಮ್ಮ ತಂದೆ ಅದನ್ನ ನೋಡಿಕೊಳ್ಳುತ್ತ ಇದ್ದರು. ತೋಟಕ್ಕೆ ನೀರು ಹಾಯಿಸೋದು, ಗದ್ದೆ ನೋಡಿಕೊಳ್ಳೊದು,
ತೋಟದಲ್ಲಿನ ಕೆಲಸ ಮಾಡೋದು ಇದು ನಮ್ಮ ತಂದೆಯ ಜವಾಬ್ದಾರಿ. ಆಗ ಇದಕ್ಕೆಲ್ಲ ಸಿಗುತ್ತಿದ್ದದ್ದು ತಿಂಗಳಿಗೆ
ಎಂಟುನೂರೋ, ಸಾವಿರವೋ. ಅದರಲ್ಲೇ ಸಂಸಾರ, ಸ್ವಲ್ಪ ಉಳಿತಾಯ. ನೀರಿಗಾಗಿ ಇದ್ದದ್ದು ಬೋರ್ವೆಲ್ ಮತ್ತು
ತೆರೆದ ಒಂದು ಕೊಳ. ಒಂದು ಪುಟ್ಟ ಹಂಚಿನ ಮನೆ, ಬದಿಯಲ್ಲಿ ಮಣ್ಣಿನ ಬಚ್ಚಲು ಮನೆ. ಇದ್ದದ್ದು ನಾನು,
ಅಪ್ಪ, ಅಮ್ಮ, ನಾಯಿ, ಬೆಕ್ಕು, ಒಂದೆರಡು ದನ. ಮನೆಯಲ್ಲಿ ಒಂದು ಫೋನಿತ್ತಾದರೂ ವರ್ಷದಲ್ಲಿ ಏಳೆಂಟು
ತಿಂಗಳು ಹಾಳಾಗಿರುತ್ತಿತ್ತು. ಏನಾದರೂ ಬೇಕೆಂದರೆ ನಾಲ್ಕು ಮೈಲು ನಡೆದು ಪೇಟೆಗೆ ಹೋಗಬೇಕಾಗಿತ್ತು.
ವಾರದ ಸಂತೆಯಲ್ಲಿ ಮನೆಗೆ ಬೇಕಾದ ಸಾಮಾನುಗಳನ್ನೆಲ್ಲ ತಂದಿಡಬೇಕಾಗಿತ್ತು. ಸೊಪ್ಪು ತರಕಾರಿ ಸುಮಾರು
ಮನೆಯಲ್ಲೇ ಬೆಳೆಯುತ್ತಾ ಇದ್ದೆವು. ಹೀಗೆಲ್ಲ ಇದ್ದರೂ ನಮ್ಮದು ಸುಖಿ ಸಂಸಾರ. ನಾವು ಬಡವರು ಅಥವಾ ಏನಪ್ಪ
ಇದು ನಮ್ಮ ಜೀವನ ಅಂತ ಎಂದೂ ಅನಿಸಲಿಲ್ಲ. ಅದರಲ್ಲೂ ನನಗೆ, ಅಷ್ಟು ಮುದ್ದಾಗಿ ಏನೂ ಕಡಿಮೆಯಾಗದಂತೆ
ನನ್ನನ್ನು ಬೆಳೆಸಿದ್ದರು. ಬಾಕಿ ಯಾವ ತೊಂದರೆ ಇಲ್ಲದಿದ್ದರೂ
ಕಷ್ಟವಾಗುತ್ತಿದ್ದದ್ದು ಮಳೆಗಾಲದಲ್ಲಿ.<o:p></o:p></span></div>
<div class="MsoNormal">
<br /></div>
<div class="MsoNormal">
<span lang="EN" style="font-family: "Tunga","sans-serif"; font-size: 12.0pt; line-height: 115%; mso-ansi-language: EN;">ಒಮ್ಮೆ ಮಳೆಗಾಲ ಶುರುವಾಯಿತು ಎಂದರೆ
ಮುಗಿಯಿತು, ಲೈಟ್ ಕೈ ಕೊಟ್ಟಂತೆ. ರಸ್ತೆ ಸರಿ ಇಲ್ಲ, ಸಿಕ್ಕಾಪಟ್ಟೆ ಮಳೆ ಅಂತ ಯಾರೂ ರಿಪೇರಿಗೂ ಬರುತ್ತಿರಲಿಲ್ಲ,
ಮಧ್ಯ ಸ್ವಲ್ಪ ಮಳೆ ಹೊಳವಾಗಿ, ರಸ್ತೆ ಒಣಗಿದರೆ ರಿಪೇರಿಗೆ ಜನ ಬಂದು ಲೈಟ್ ಬಂದಂತೆ. ಇಲ್ಲವಾದರೆ ಗೋವಿಂದ.
ಕೆಲವೊಮ್ಮೆ ಎರಡೆರಡು ತಿಂಗಳುಗಟ್ಟಲೇ ಲೈಟ್ ಇಲ್ಲದೆ ಕಳೆದಿದ್ದೂ ಇದೆ. ಫೋನ್ ಡೆಡ್. ಲೈಟ್ ಇಲ್ಲವೆಂದ
ಮೇಲೆ ಬೋರ್ವೆಲ್ ಕೂಡ್ ಬಂದ್. ಆಗ ತೆರೆದೆ ಬಾವಿಯ ನೀರೇ ಗತಿ ನಮಗೆ. ಆ ಬಾವಿಯಿಂದ ನೀರು ತೆಗೆಯುವುದೆಂದರೆ
ಹರ ಸಾಹಸವೇ ಸರಿ. ಮೆಟ್ಟಿಗಳಿರಲಿಲ್ಲ, ಮೊದಲೇ ಜಾರಿಕೆ ಬೇರೆ. ಆ ಬಾವಿಯ ಕೆಂಪಾದ ನೀರನ್ನೇ ಕುದಿಸಿ
ಕುಡಿಯುತ್ತಿದ್ದೆವು. ಮಳೆಯ ನೀರು ಹಿಡಿದು ಸ್ನಾನಕ್ಕೆ, ಕೈ ಕಾಲು ತೊಳೆಯುವುದಕ್ಕೆ ಉಳಿದ ದಿನಚರಿಗೆ
ಉಪಯೋಗಿಸುತ್ತಿದ್ದೆವು. ಅಲ್ಲಲ್ಲಿ ಸೋರುವ ಮಾಡಿನ ಕೆಳಗೆ ಪಾತ್ರೆ ಇಡುವುದಂತೂ ಸಹಜವಾಗಿತ್ತು. ಸಂಜೆಯಾಯಿತು
ಎಂದರೆ ಮುಗಿಯಿತು, ಸಿಕ್ಕಾಪಟ್ಟೆ ಬೇಜಾರು ಬಂದುಬಿಡುತ್ತಿತ್ತು. ಲೈಟ್ ಇರುತ್ತಿರಲಿಲ್ಲ, ಸಮಯ ಕಳೆಯುವುದೇ
ಕಷ್ಟವಾಗುತ್ತಿತ್ತು. ಆಗೆಲ್ಲ ಟಿವಿಯಂತೂ ಇರಲೇ ಇಲ್ಲ. ರೇಡಿಯೋ ಕೇಳುವುದೇ ದೊಡ್ಡ ವಿಷಯ. ವಾರ್ತೆ,
ಹಾಡುಗಳು ಹೀಗೆ. ಆಗೆಲ್ಲ ರೇಡಿಯೋ ಪ್ರೋಗ್ರಾಮ್ ಗಳೆಲ್ಲ ಬಾಯಿಪಾಠವಾಗಿತ್ತು. ಚಿಮಣಿ ಬುಡ್ಡೆಯಲ್ಲೇ
ರಾತ್ರಿ ಕಳೆಯುವುದಾಗಿತ್ತು, ಚಿಮಣಿಯ ಬೆಳಕಲ್ಲೇ ಓದುವುದು, ಅಡಿಗೆ ಮಾಡುವುದು, ಸ್ವಲ್ಪ ಹೊತ್ತು ಇಸ್ಪೀಟ್
ಆಟ. ಕಟ್ಟಿಗೆ ಒಲೆಯಲ್ಲಿ ಅಡಿಗೆ. ರಾತ್ರಿ ಎಂಟಾಯಿತು ಎಂದರೆ ಊಟ ಮುಗಿದಿರುತ್ತಿತ್ತು. ಎಂಟೂವರೆ ಎಂದರೆ
ಹಾಸಿಗೆ ಕಾಣುತ್ತಿದ್ದೆವು. ಬೆಳಗ್ಗೆ ಎದ್ದು ಸ್ವಲ್ಪ ಹೊತ್ತು ಬೆಂಕಿ ಕಾಯಿಸಿ, ಸ್ನಾನ ತಿಂಡಿಯನ್ನೆಲ್ಲ
ಮುಗಿಸಿ ನಾನು ಸೈಕಲ್ ಏರುತ್ತಿದ್ದೆ. ಅಪ್ಪ ತೋಟ, ಕೆಲಸ ಅಂತ ಹೋಗುತ್ತಿದ್ದರು. ಮನೆಗೆಲಸ, ಹೋಲಿಗೆ
ಮಾಡುವುದು, ದನದ ಚಾಕರಿ, ತೋಟದಲ್ಲಿ ತರಕಾರಿ ಗಿಡಗಳನ್ನು ನೋಡಿಕೊಳ್ಳುವುದು ಅಮ್ಮನ ದಿನಚರಿಯಾಗಿತ್ತು.
ನನ್ನ ಮಧ್ಯಾಹ್ನದ ಊಟ ಬನವಾಸಿಯಲ್ಲೇ ಇದ್ದ ದೊಡ್ಡಪ್ಪನ
ಮನೆಯಲ್ಲಿ, ಮಳೆ ಜೋರಿದ್ದರೆ ಸಂಜೆ ಶಾಲೆ ಮುಗಿಸಿದವ ಅಲ್ಲೇ ಉಳಿದುಬಿಡುತ್ತಿದ್ದೆ. ಆಗೆಲ್ಲ ಅಪ್ಪ
ಅಮ್ಮ ಇಬ್ಬರೇ ಮನೆಯಲ್ಲಿ, ನಾನಿದ್ದರೆ ಸ್ವಲ್ಪ ಹೊತ್ತು ಹೋಗುತ್ತೆ ಬಂದು ಬಿಡು ಸಂಜೆ ಅಂತ ಒಮ್ಮೊಮ್ಮೆ
ಹೇಳುತ್ತಿದ್ದದ್ದುಂಟು. ನಾನೋ ಆ ಮಳೆ, ಆ ರಾಡಿಯ ರಸ್ತೆ, ಅದರಲ್ಲಿ ಸೈಕಲ್ ಹೋಡೆಯೋದು, ಹೇಗೋ ಮನೆ
ಸೇರಿದರೆ ಅಲ್ಲಿ ಲೈಟೇ ಇರುತ್ತಿರಲಿಲ್ಲ. ಹಾಗಾಗಿ ಸುಮಾರು ಸಲ ದೊಡ್ಡಪ್ಪನ ಮನೆಯಲ್ಲೇ ಉಳಿದುಬಿಡುತ್ತಿದ್ದೆ,
ಒಮ್ಮೆ ಮಳೆಗಾಲ ಮುಗಿಯಿತೆಂದರೆ ನಿಟ್ಟುಸಿರು ಬಿಟ್ಟಂತೆ. ಮುಂದಿನ ಮಳೆಗಾಲದವರೆಗೆ ನಿಶ್ಚಿಂತೆ.<o:p></o:p></span></div>
<div class="MsoNormal">
<br /></div>
<div class="MsoNormal">
<span lang="EN" style="font-family: "Tunga","sans-serif"; font-size: 12.0pt; line-height: 115%; mso-ansi-language: EN;">ಹೀಗೆ ಸುಮಾರು ಹತ್ತು ವರ್ಷ ಕಳೆದಿದ್ದೇವೆ.
ನಾನು ಸುಮಾರು ಆರು ವರ್ಷ, ನಾಲ್ಕನೇ ಇಯತ್ತೆಯಿಂದ ಹತ್ತರವರೆಗೆ. ಆಮೇಲೆ ನಾನು ಪುಣೆಗೆ ಬಂದೆ. ಅಪ್ಪ
ಅಮ್ಮ ಮುಂದೆ ನಾಲ್ಕೈದು ವರ್ಷ ಅಲ್ಲೇ ಕಳೆದರು. ಈ ನಡುವೆ ಒಂದು ಬ್ಲಾಕ್ ಅಂಡ್ ವೈಟ್ ಟಿವಿ, ಅಂಟೆನಾ
ಬಂದಿತ್ತು. ಚಂದನ ವಾಹಿನಿಯ ಎಲ್ಲ ಕಾರ್ಯಕ್ರಮಗಳು, ಭಾನುವಾರದ ಸಿನೆಮಾ ಇವೆಲ್ಲ ಮರೆಯುವಂತಿಲ್ಲ. ಈಗೆಲ್ಲ
ಇದನ್ನ ನೆನಪಿಸಿಕೊಂಡರೆ ನಾವು ಹೀಗೆ ಬದುಕಿದ್ದೆವಾ ಅಂತ ಅನಿಸುವುದೇ ಇಲ್ಲ. ನಾನೀಗ ಪುಣೆಯಲ್ಲೇ ಮನೆ
ಮಾಡಿದ್ದೇನೆ, ಅಪ್ಪ ಅಮ್ಮ ಈಗ ಜೊತೆಗಿದ್ದಾರೆ. ಮನೆಯಲ್ಲಿ ಟಿವಿ, ಫ್ರಿಡ್ಜ್, ವಾಶಿಂಗ್ ಮಶಿನ್ ಎಲ್ಲ
ಇದೆ. ಈಗೀನ ಯುಗಕ್ಕೆ ನಾವು ಒಗ್ಗಿ ಹೋಗಿದ್ದೇವೆ. ಇಪ್ಪತ್ನಾಲ್ಕು ಗಂಟೆ ಲೈಟ್, ಟಿವಿ, ಮೊಬೈಲ್, ಕಂಪ್ಯೂಟರ್,
ಇಂಟರ್ ನೆಟ್ ಹೀಗೆ. ಯಾವುದೇ ಒಂದು ಇಲ್ಲದಿದ್ದರೂ ಏನೋ ಕಳೆದುಕೊಂಡಂತೆ ಅನಿಸುತ್ತದೆ. ಇಷ್ಟಿದ್ದರೂ
ಆಗಿನ ಸುಖ ಈಗಿಲ್ಲ ಬಿಡಿ. ಹೇಗೇ ಇದ್ದರೂ ಆಗಿನದೆಲ್ಲ ಸಿಹಿ ನೆನಪುಗಳೇ ಸರಿ.<o:p></o:p></span></div>
<br />
<div class="MsoNormal">
<br /></div>
</div>
Motivation http://www.blogger.com/profile/08140925864934705325noreply@blogger.com0tag:blogger.com,1999:blog-5247965971580923628.post-80780536690972960362014-11-23T21:08:00.000-08:002014-11-23T21:08:30.635-08:00ಪ್ರೀತಿ ಪ್ರೇಮ ಪ್ರಣಯ:<div dir="ltr" style="text-align: left;" trbidi="on">
<b>೧.</b><br />
ನನಗಾಗ ಹದಿನೆಂಟು, ಅವಳಿಗೋ ಹದಿನೈದಿರಬಹುದು. ನೋಡಲು ಸುರಸುಂದರಿ. ಇನ್ನೇನು ಬೇಕು ಪ್ರೇಮಾಂಕುರವಾಗಲು? ನಮ್ಮ ಪ್ರೇಮಕ್ಕೆ ಕೆಲ ವರುಷಗಳೇ ಕಳೆದವು, ಅವಳಿಗೂ ನನ್ನ ಮೇಲೆ ಪ್ರೀತಿಯಿತ್ತು, ನನ್ನ ನೋಡಿದಾಗೆಲ್ಲ ಅವಳು ಬೀರುವ ಮುಗುಳ್ನಗೆಯೇ ಅದಕ್ಕೆ ಸಾಕ್ಷಿ. ಒಬ್ಬರಿಗೊಬ್ಬರು ಎಂದೂ ಪ್ರೇಮದ ಪ್ರಸ್ತಾಪವನ್ನು ಮಾಡಲಿಲ್ಲ. ಕೊನೆಗೆ ನಾನೇ ಮಡಿದೆ, ಅವಳಿಗೆ ಗುಲಾಬಿ ಕೊಟ್ಟಾಗ ನನಗೆ ವಯಸ್ಸು ಇಪ್ಪತ್ತೈದು. ಗುಲಾಬಿ ಪಡೆದು ನಾಚಿ ನಡೆದಿದ್ದಳು, ಅವಳ ಸಮ್ಮತಿ ಕಣ್ಣಲ್ಲೇ ವ್ಯಕ್ತಪಡಿಸಿದ್ದಳು. ಅಂದಿನಿಂದ ಇಂದಿನವರೆಗೂ ಪ್ರತಿ ವರ್ಷ ಅವಳಿಗೆ ಗುಲಾಬಿ ಅರ್ಪಿಸುತ್ತಿದ್ದೇನೆ. ಪ್ರೀತಿಯಿಂದ ಅವಳ ಕೈಗಲ್ಲ, ದುಃಖದಿಂದ ಅವಳ ಗೋರಿಯ ಮೇಲೆ. ನಾ ಗುಲಾಬಿ ಕೊಟ್ಟ ಮರುದಿನವೇ ಅಪಘಾತದಲ್ಲಿ ಅವಳ ಮೃತ್ಯುವಾಗಿತ್ತು. ನನ್ನ ಅವಳ ಗುಲಾಬಿಯ ನಂಟು ಇನ್ನೂ ಮುಗಿದಿಲ್ಲ, ನನಗೀಗ ಎಪ್ಪತ್ತೈದು.<br />
<br />
<b>೨.</b><br />
ಅವಳೊಂದು ತೀರ, ಇವನೊಂದು ತೀರ. ಅವಳೊ ಅವನ ಪ್ರೀತಿಯಲ್ಲಿ ತೇಲಿಹೋದವಳು, ಅವನ ನಡೆ ನುಡಿಗೆಲ್ಲ ಮರುಳಾದವಳು. ಇವನಿಗೋ ಅವಳಂತವಳು ನೂರಾರು, ಎಲ್ಲರೊಂದಿಗೂ ಒಂದೇ ತರಹ ಬೆರೆಯುತ್ತಿದ್ದನವ. ಪರಸ್ಪರ ಇಬ್ಬರೂ ಭೇಟಿಯಾಗಿ ಮಾತನಾಡಿದರು, ಕೊನೆಗೂ ಒಂದಾಗಲಿಲ್ಲ, ಅವಳು ಇನ್ನೊಬ್ಬನನ್ನು ಮದುವೆಯಾದಳು, ಅವನೂ ಬೇರೆಯವಳನ್ನು ಮದುವೆಯಾದ. ವರ್ಷದೊಳಗೇ ಅವಳ ಗಂಡ ತೀರಿಹೋದ, ಅವನೂ ಹೆಂಡತಿಯನ್ನು ಬಿಟ್ಟ. ಒಂದು ದಿನ ಅವಳು ಮತ್ತು ಅವನು ಆಕಸ್ಮಿಕವಾಗಿ ಭೆಟಿಯಾದರು. ಹಳೆಯ ಪ್ರೇಮದ ಬೇರು ಮತ್ತೆ ಚಿಗುರೊಡೆಯಿತು. ಇವತ್ತು ಅವಳ ಮತ್ತು ಅವನ ಮದುವೆ. ನನಗೂ ಮದುವೆಯ ಕರೆ ಬಂದಿದೆ.<br />
<br />
<b>೩.</b><br />
ಅವರಿಬ್ಬರದು ಆಳವಾದ ಪ್ರೇಮ, ಒಬ್ಬರಿಗೊಬ್ಬರು ಬಿಟ್ಟಿರದಷ್ಟು. ಮದುವೆಯ ಪ್ರಸ್ತಾಪವನ್ನು ಮನೆಯಲ್ಲಿಟ್ಟರು, ಹುಡುಗನ ಮನೆಯವರ ತಿರಸ್ಕಾರ. ಕಾರಣವಿಷ್ಟೇ ಹುಡುಗಿ ಕೆಟ್ಟ ನಕ್ಷತ್ರದಲ್ಲಿ ಹುಟ್ಟಿರುವುದು, ಇದರಿಂದ ಹುಡುಗನ ವೈವಾಹಿಕ ಜೀವನ ಸುಖವಾಗಿರದು ಎನ್ನುವುದು. ಇಬ್ಬರ ನೋವು ಹೇಳತೀರದು. ಕೊನೆಗೆ ಇಬ್ಬರೂ ತಮ್ಮ ಮನಸ್ಸನ್ನು ಗಟ್ಟಿ ಮಾಡಿ ಬೇರೆಬೇರೆಯಾದರು. ಇಬ್ಬರ ಮದುವೆಯೂ ಅನ್ಯರೊಂದಿಗೆ ನಡೆಯಿತು. ಎರಡು ವರ್ಷಗಳ ತರುವಾಯ ಅವಳು ಗಂಡ ಮಗುವಿನೊಂದಿಗೆ ಸುಖಿ ಸಂಸಾರ ನಡೆಸುತ್ತಿದ್ದಾಳೆ. ಅವನೋ ವರ್ಷದೊಳಗೇ ಹೆಂಡತಿಯೊಡನೆ ವಿಚ್ಚೇದನ ಪಡೆದು ಹೆಂಡದ ದಾಸನಾಗಿದ್ದಾನೆ. ಹುಡುಗನ ಮನೆಯವರು ಹಣೆಬರಹವನ್ನು ಹಳಿಯುತ್ತಿದ್ದಾರೆ.<br />
<br />
<b>೪.</b><br />
ನಾನು ಅವಳನ್ನು ಪ್ರೀತಿಸುತ್ತಾ ಇದ್ದೆ, ಅವಳೋ ಅವನನ್ನು, ಅವನೋ ಇವಳನ್ನು, ಇವಳೋ ನನ್ನನ್ನು ಪ್ರೀತಿಸುತ್ತಾ ಇದ್ದಳು. ಇದು ಗೊತ್ತಾಗಿದ್ದು ಹೇಗೆನ್ನುವುದೇ ಒಂದು ವಿಶೇಷ. ನಾನು ಬರೆದ ಪ್ರೇಮ ಪತ್ರವನ್ನು ಅವಳಿಗೆ ನೀಡಿದ್ದೆ, ಅವಳು ಹೆಸರು ಬದಲಾಯಿಸಿ ಅವನಿಗೆ ಕೊಟ್ಟಳು, ಅವನೋ ಇವಳಿಗೆ ಕೊಟ್ಟಿದ್ದ, ಇವಳದನ್ನೇ ನನಗೆ ಕೊಟ್ಟಿದ್ದಳು. ನಾನು ಇವಳಿಗೆ ಇಲ್ಲವೆಂದೆ, ಇವಳು ಅವನಿಗೆಂದಳು, ಅವನು ಅವಳಿಗೆಂದ, ಅವಳು ನನಗಿಲ್ಲವೆಂದಳು. ಇದರ ಜಾಲು ಹಿಡಿದಾಗೆ ಇದು ತಿಳಿದಿದ್ದು. ಇದಕ್ಕೆ ಪರಿಹಾರ ಕಂಡುಕೊಳ್ಳಲು ನಾವೆಲ್ಲ ಒಟ್ಟಾದೆವು, ಕೊನೆಗೊಂದು ನಿರ್ಣಯವಾಯಿತು ಪ್ರತಿಯೊಬ್ಬರೂ ನಮ್ಮ ಗುಂಪಿನಲ್ಲಿರುವರನ್ನು ಬಿಟ್ಟು ಬೇರೆಯವರನ್ನು ಮದುವೆಯಾಗಬೇಕೆಂದು.<br />
<br />
<b>೫.</b><br />
ಅವರಿಬ್ಬರ ಪರಿಚಯ ಫೇಸ್ ಬುಕ್ಕಿನಲ್ಲಾದದ್ದು, ಇಬ್ಬರೂ ಬೇರೆ ಬೇರೆ ಊರಿನವರು. ಸ್ನೇಹ ದಿನ ಕಳೆದಂತೆ ಗಾಢವಾಯಿತು, ಕೆಲ ದಿನದಲ್ಲೇ ಪ್ರೇಮವಾಗಿ ಪರಿವರ್ತನೆಯಾಯಿತು. ಚಾಟಿಂಗ್ ನಲ್ಲಿ ಶುರುವಾದ ಗೆಳೆತನ ಕ್ರಮೇಣ ಮೊಬೈಲ್ ಮೆಸೇಜ್ ಗಳಲ್ಲಿ ತರುವಾಯ ತಾಸುಗಟ್ಟಲೇ ಹರಟುವಲ್ಲಿ ಬದಲಾವಣೆಯಾಯಿತು. ವರ್ಷಗಟ್ಟಲೇ ಹರಟಿದರು, ನಗು ಅಳುವಿನಲ್ಲಿ ಭಾಗಿಯಾದರು, ಪರಸ್ಪರ ವಿಚಾರಗಳನ್ನು ವಿನಿಮಯ ಮಾಡಿಕೊಂಡರು, ಸ್ಪಂದನೆಗಳನ್ನು ಹಂಚಿಕೊಂಡರು. ಕೊನೆಗೊಮ್ಮೆ ಪರಸ್ಪರ ಭೇಟಿಯಾಗುವ ನಿರ್ಣಯಕ್ಕೆ ಬಂದರು. ದಿನ, ಸ್ಥಳವನ್ನು ನಿರ್ಧರಿಸಿದರು. ಕೊನೆಗೂ ಅವರಿಬ್ಬರೂ ಮುಖಾಮುಖಿಯಾಗುವ ದಿನ ಬಂದೇಬಿಟ್ಟಿತು. ಪರಸ್ಪರ ಭೇಟಿಯಾದಾಗಲೇ ಗೊತ್ತಾಗಿದ್ದು ಅವರಿಬ್ಬರು ಅಕ್ಕ ತಮ್ಮನೆಂದು. ಇಬ್ಬರೂ ದೊಡ್ಡಪ್ಪ ಚಿಕ್ಕಪ್ಪನ ಮಕ್ಕಳಾಗಿದ್ದರು. ತಮ್ಮ ಅಪ್ಪ ಅಮ್ಮ, ಊರು ಕೇರಿ, ಮನೆ ಮಠ ಇವುಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೇ ಮುಂದುವರೆದಿದ್ದು ಇದಕ್ಕೆ ಕಾರಣವಾಗಿದ್ದು.<br />
<br />
<div style="text-align: center;">
*****</div>
<div style="text-align: center;">
<br /></div>
<div style="text-align: center;">
ನವೆಂಬರ ೨೪ ರ "ಪಂಜು" ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾದ ಬರಹ.</div>
</div>
Motivation http://www.blogger.com/profile/08140925864934705325noreply@blogger.com0tag:blogger.com,1999:blog-5247965971580923628.post-42156057183280130092014-11-19T22:31:00.000-08:002014-11-19T22:31:13.212-08:00ಮಾತೆಯ ಮಡಿಲಲ್ಲಿ:<div dir="ltr" style="text-align: left;" trbidi="on">
ಆಕೆ ಕರುಣಾಮಯಿ, ವಾತ್ಸಲ್ಯರೂಪ. ದೈವತ್ವಕ್ಕೆ ಮತ್ತೋಂದು ಹೆಸರೇ ಆಕೆ ಅಂದರೆ ತಪ್ಪಾಗಲಾರದು. ಆಕೆಗೆ ಬದುಕುವ ಆಸೆಯಿದ್ದದ್ದು ಅವಳ ಪುಟ್ಟ ಮಗನ ನಗುವಲ್ಲಿ. ಹುಟ್ಟಿಸಿದ ದೇವರು ಹುಲ್ಲು ಮೇಯಿಸದೇ ಇರಲಾರ ಅಂದುಕೊಂಡು ಮಗನ ನಗುವಲ್ಲೇ ನನ್ನ ಜೀವನವೆನ್ನುತ್ತ ಬಾಳತೊಡಗಿದಳು. ಮನೆ ಮನೆಯಲ್ಲಿ ಪಾತ್ರೆ ಬಟ್ಟೆ ತೊಳೆದಾದರೂ ನನ್ನ ಮಗನನ್ನು ಸಾಕುತ್ತೇನೆ ಅನ್ನುವ ಛಲ ಅವಳಲ್ಲಿ. ಒಬ್ಬಳಾದರೇನು ಅವಳಿಗಾರ ಭಯವಿರಲಿಲ್ಲ, ಅದೆಷ್ಟೋ ಜನರೊಂದಿಗೆ ದೇಹ ಹಂಚಿಕೊಂಡವಳು ಅವಳು. ಎಲ್ಲವನ್ನೂ ಕಳೆದುಕೊಂಡವಳು, ಕಳೆದುಕೊಳ್ಳಲು ಇನ್ನೇನೂ ಉಳಿದಿರಲಿಲ್ಲ ಅವಳಲ್ಲಿ. ಇದೇ ಊರಲ್ಲಿದ್ದರೆ ಮಗನಿಗೆ ಎಲ್ಲಿ ತೋಂದರೆಯಾಗುತ್ತದೋ, ಮಗ ನನ್ನ ಬಗ್ಗೆ ಏನು ಕೇಳುತ್ತಾನೋ ಅನ್ನುವ ಭಯದಿಂದ ಬೆಂಗಳೂರು ಬಿಟ್ಟು ಮೈಸೂರಿಗೆ ಬಂದಳು. ಕಷ್ಟಪಟ್ಟು ಮಗನನ್ನು ಬೆಳೆಸಿದಳು. ತನ್ನೆಲ್ಲ ಇತಿಹಾಸವನ್ನು ಮರೆತು ಮಗನ ಭವಿಷ್ಯ ರೂಪಿಸಿದಳು. ಇಂದು ಮಗ ಬೆಳೆದು ದೊದ್ದವನಾಗಿದ್ದಾನೆ, ಕಲಿತು ನೌಕರಿ ಮಾಡತೊಡಗಿದ್ದಾನೆ. ಇನ್ನೆನು ಹೊಸ ಮನೆಯ ಖರೀದಿ ವಿಚಾರ ನಡೆಸಿದ್ದಾನೆ. ಇದೆಲ್ಲ ಕೇವಲ ಅವಳಿಂದ, ಅವಳ ತ್ಯಾಗದಿಂದ. ಎಲ್ಲಿ ಮಗ ನನ್ನ ಅಪ್ಪ ಯಾರು? ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಅಂತ ಕೇಳುತ್ತಾನೋ ಅನ್ನುವ ಭಯ ದಿನವೂ ಅವಳಲ್ಲಿ ಕಾಡಿದ್ದುಂಟು. ತನ್ನೆಲ್ಲ ನೋವ ಮರೆತದ್ದು ಮಗನ ಖುಶಿಯಲ್ಲಿ. ಎಲ್ಲ ಸುಖಮಯವಾಗಿದೆ ಈಗ. ಇನ್ನೆನು ಮಗನ ಮದುವೆಯಾದರೆ ನನ್ನ ಕರ್ತವ್ಯ ಮುಗಿಯಿತು ಅನ್ನುವುದಷ್ಟೆ ಆಕೆಯ ಮನದಲ್ಲಿದ್ದದ್ದು.<br />
<br />
ಅಂತೂ ಮಗನ ಮದುವೆಯೂ ನಿಶ್ಚಯವಾದಂತೆ, ಹುಡುಗಿಯನ್ನು ಅವನೇ ನೋಡಿಕೊಂಡಿದ್ದ. ಅದೊಂದು ಚಿಂತೆಯ ವಿಷಯವೇ ಆಗಿತ್ತು, ತಾನು ಎಲ್ಲಿ ಅಂತ ಹುಡುಗಿಯನ್ನು ಹುಡುಕಬೇಕಾಗಿತ್ತು, ಆಗಿದ್ದೆಲ್ಲ ಒಳ್ಳೆಯದಕ್ಕೇ ಅನ್ನುವ ಭಾವ ಅವಳ ಮನದಲ್ಲಿ. ನಿಶ್ಚಿತಾರ್ಥದ ದಿನವೂ ನಿಗದಿಯಾಯಿತು. ಮಗ ಕೊಡಿಸಿದ್ದ ಜರಿ ಸೀರೆಯಲ್ಲಿ ಆಕೆ ಮಹಾಲಕ್ಷ್ಮಿಯ ಸ್ವರೂಪ. ಮನೆಯೆಲ್ಲ ತೋರಣ, ಮಾಲೆಗಳಿಂದ ಕಂಗೊಳಿಸುತ್ತಿತ್ತು. ಆಕೆಯ ಆನಂದಕ್ಕೆ ಮಿತಿಯೇ ಇರಲಿಲ್ಲ. ಹುಡುಗಿಯ ಮನೆಯವರೆಲ್ಲ ಆಗಮಿಸಿದ್ದರು. ಅತಿಥಿ ಸತ್ಕಾರಗಳನ್ನೆಲ್ಲ ತನಗೆ ತಿಳಿದಂತೆ ಮಾಡಿದಳಾಕೆ. ಹುಡುಗಿಯ ತಂದೆ ಇವಳನ್ನ ಅನುಮಾನದಿಂದಲೇ ನೋಡತೊಡಗಿದ್ದರು. ಕೇಲವೇ ಕ್ಷಣದಲ್ಲಿ ಎಲ್ಲವೂ ಮುಗಿದೇ ಹೋಯಿತು. ಈ ಮದುವೆ ಸಾಧ್ಯವೇ ಇಲ್ಲವೆಂಬಂತೆ ಹುಡುಗಿಯ ಕಡೆಯವರು ನಡೆದಿದ್ದರು. ಏನಾಯಿತು? ಯಾಕೆ ಮದುವೆ ಬೇಡವೆಂದರು ಆಕೆಗೆ ಏನೂ ತಿಳಿಯದು. ಮಗನ ಯಾತನೆ ಆಕೆಯ ಹೃದಯ ಹಿಂಡಿತ್ತು. ಏನಾಯಿತೆಂದು ವಿಚಾರಿಸುವಂತೆ ಮಗನಲ್ಲಿ ಕೇಳಿದಳು. ಸರಿ ಎಂದು ಹೋದವನು ಸ್ವಲ್ಪ ಸಮಯದಲ್ಲಿ ಬಂದಿದ್ದ. ಮಗನ ನಿರೀಕ್ಷೆಯಲ್ಲಿದ್ದ ಆಕೆ ಆತ ಬರುತ್ತಿದ್ದಂತೆ ಪ್ರಶ್ನೆಗಳ ಸುರಿಮಳೆಗೈದಳು. ಅದಕ್ಕೆಲ್ಲ ಆತನ ಉತ್ತರ ನೀನು ಸೂಳೆಯಾ? ಆಕೆ ದಿಗ್ಭ್ರಾಂತಳಾದಳು. ಇಷ್ಟು ವರ್ಷ ತನ್ನ ಒಡಲಲ್ಲಿ ಉಳಿದಿದ್ದ ಕಟು ಸತ್ಯ ಈತನಿಗೆ ಹೇಗೆ ಗೊತ್ತಾಯಿತು ಏನೋಂದೂ ಆಕೆಗೆ ತಿಳಿಯದಾಯಿತು. ಇಷ್ಟು ವರ್ಷದ ಪಟ್ಟ ಕಷ್ಟವೆಲ್ಲ ನೀರಿನಲ್ಲಿ ಮಾಡಿದ ಹೋಮದಂತೆ ಅನಿಸತೊಡಗಿತು ಆಕೆಗೆ. ನೀನೊಬ್ಬಳು ವ್ಯಭಿಚಾರಿ, ಇಷ್ಟು ದಿನ ಇದನ್ನೆಲ್ಲ ನೀನು ನನ್ನಿಂದ ಮುಚ್ಚಿಟ್ಟೆ... ಯಾರಿಗೋ ಹುಟ್ಟಿದವ ನಾನು, ನನಗೇಕೆ ಅವರು ಹೆಣ್ಣು ಕೋಡುತ್ತಾರೆ. ಯಾಕೆ ನನ್ನನ್ನು ಹೆತ್ತೆ ನೀನು, ಹುಟ್ಟುವ ಮೊದಲೇ ಹಿಸುಕಿಬಿಡಬೇಕಾಗಿತ್ತು. ಆಗ ಇದನ್ನೆಲ್ಲ ನೋಡುವ ಪರಿಸ್ಥಿತಿ ನನಗೆ ಬರುತ್ತಿರಲಿಲ್ಲ, ನಿನ್ನ ಮಗನೆಂದು ಹೇಳಿಕೊಳ್ಳುವುದಕ್ಕೆ ನಾಚಿಕೆಯಾಗುತ್ತಿದೆ ನನಗೆ. ಸೂಳೆಯ ಮಗ ಅಂತ ಸಮಾಜಕ್ಕೆ ತಿಳಿದರೆ ಸಮಾಜದಲ್ಲಿ ನನ್ನ ಮಾನ ಹರಾಜಾಗುವದಿಲ್ಲವೇ? ನಿನ್ನ ಮುಖ ನೋಡುವುದಕ್ಕೂ ಅಸಹ್ಯವಾಗುತ್ತಿದೆ ನನಗೆ. ಮಗನ ಈ ಮಾತುಗಳು ಹರಿತವಾದ ಚೂರಿಯಿಂದ ಎದೆಗೆ ಚುಚ್ಚಿದಂತೆ ಅನಿಸತೊಡಗಿತ್ತು ಆಕೆಗೆ. ವರ್ಷಾನುವರ್ಷಗಳ ಕಷ್ಟ ಕ್ಷಣದಲ್ಲೇ ನುಚ್ಚುನೂರಾಗಿತ್ತು. ಕಣ್ಣು ಒದ್ದೆಯಾಗದಂತೆ ಇಷ್ಟು ದಿನ ಪ್ರೀತಿಯಿಂದ ನೋಡಿಕೊಂಡ ಮಗ ಇಂದು ನನ್ನಿಂದ ಕಣ್ಣೀರಿಡುತ್ತಿದ್ದಾನೆ ಅಂದರೆ ನಾನು ಬದುಕಿದ್ದು ಏನು ಪ್ರಯೋಜನವೆನಿಸತೊಡಗಿತು ಆಕೆಗೆ.<br />
<br />
ರಾತ್ರಿ ಕಳೆದಿತ್ತು ಮಗ ಕೋಣೆಯಿಂದ ಹೊರಬಂದ. ರಾತ್ರಿಯೆಲ್ಲ ನಿದ್ದೆಯಿಲ್ಲವೆಂದು ಆತನ ಕಣ್ಣು ಹೇಳುತ್ತಿತ್ತು. ಅಮ್ಮನ ಬಗ್ಗೆ ಹೀಗೆಲ್ಲ ಮಾತನಾಡಬಾರದಿತ್ತು, ಅವಳು ಯಾಕೆ ಹೀಗೆ ಮಾಡಿದಳು ಅಂತ ತಿಳಿದುಕೊಳ್ಳಬೇಕಿತ್ತು. ಇದೇ ಚಿಂತೆಯಲ್ಲಿ ಆತ ರಾತ್ರಿಯೆಲ್ಲ ನಿದ್ರಿಸಿರಲಿಲ್ಲ, ಆಕೆಯ ಕ್ಷಮೆ ಕೇಳಬೇಕೆಂದು ಅಮ್ಮನನ್ನು ಕೂಗತೊಡಗಿದ್ದ. ಆಕೆ ಎಲ್ಲೂ ಕಾಣಿಸಲಿಲ್ಲ, ಮನೆಯ ಒಳ ಹೊರಗೆಲ್ಲ ಹುಡುಕಾಡಿದ. ಆಕೆ ಎಲ್ಲೂ ಸಿಗಲಿಲ್ಲ, ಸಿಕ್ಕಿದ್ದು ಆಕೆ ಬರೆದಿಟ್ಟ ಪತ್ರ ಮಾತ್ರ.<br />
ಮಗು ನಾನು ಸೂಳೆಯೇ.. ಆದರೆ ಯಾರೂ ನಾನೋಬ್ಬ ಸೂಳೆ ಅಂತ ಹೆಮ್ಮೆಯಿಂದ ಹೇಳಿಕೊಳ್ಳುವುದಿಲ್ಲ, ಅದೇ ನಾನು ಮಾಡಿದ ತಪ್ಪು. ನನ್ನನ್ನು ಕ್ಷಮಿಸಿಬಿಡು ಮಗನೇ. ನಾನು ಪಡೆದುಕೊಂಡು ಬಂದದ್ದು ಅದು, ಏನು ಮಾಡೊದು? ಮನೆಯಲ್ಲಿ ಕಡು ಬಡತನ, ಕೆಲಸ ಕೊಡಿಸುತ್ತೇನೆ ಅಂತ ನನ್ನನ್ನು ಕರೆದುಕೊಂಡು ಬಂದವ ನನ್ನನ್ನು ಈ ಪಾಪಕೂಪಕ್ಕೆ ತೂರಿದ್ದ. ಅಲ್ಲಿಂದ ಹೊರಬರಲು ಆಗಲೇ ಇಲ್ಲ. ನಾನು ಅಲ್ಲಿಂದ ಹೊರಬಂದು ಬದುಕಲು ನೀನೇ ಕಾರಣ, ನಿನ್ನ ಬದುಕಿನಲ್ಲಿ ನನ್ನ ವೃತ್ತಿ ಕಪ್ಪು ಚುಕ್ಕೆಯಾಗಬಾರದು ಅನ್ನುವುದೇ ನನ್ನ ಉದ್ದೇಶವಾಗಿತ್ತು. ಆದರೆ ಅದೇ ಇಂದು ನಿನ್ನ ದುಃಖಕ್ಕೆ ಕಾರಣವಾಗಿದೆ. ನಾನು ನಿನ್ನಿಂದ ಇನ್ನೂ ಒಂದು ವಿಷಯವನ್ನು ಮುಚ್ಚಿಟ್ಟೆ, ಹೋಗುವ ಮೊದಲು ಅದನ್ನೂ ಹೇಳಿಬಿಡುತ್ತೇನೆ ಕೇಳು. ನೀನು ನನಗೆ ಹುಟ್ಟಿದವನಲ್ಲ... ಹೌದು ಮಗನೇ. ಒಂದು ದಿನ ಈ ಪಾಪಕೂಪದಿಂದ ಮುಕ್ತಿ ಪಡೆದು ಆತ್ಮಹತ್ಯೆ ಮಾಡಿಕೊಳ್ಳಬೇಕು ಅಂತ ರಸ್ತೆಯಲ್ಲಿ ಬರುತ್ತಿದ್ದಾಗ ನೀನು ಕಸದ ತೊಟ್ಟಿಯಲ್ಲಿ ಅನಾಥವಾಗಿ ಬಿದ್ದಿದ್ದೆ. ಆಗಲೇ ನಾನು ನಿರ್ಧರಿಸಿದ್ದು, ನಿನ್ನನ್ನು ಸಾಕಲಾದರೂ ನಾನು ಬದುಕಬೇಕು ಎಂದು. ನಿನ್ನನ್ನು ಅನಾಥವಾಗಿ ಬಿಡಲೋ ಅಥವಾ ಅನಾಥಾಶ್ರಮ ಸೇರಿಸಲು ನನಗೆ ಮನಸ್ಸು ಬರಲೇ ಇಲ್ಲ, ನಿನ್ನ ನಗುವಲ್ಲೇ ನನ್ನ ನೋವನ್ನೆಲ್ಲ ಮರೆತೆ. ನನಗೆ ಇನ್ನೆನೂ ಬೇಡವಾಗಿತ್ತು, ನೀನು ಯಾವಾಗಲೂ ಸದಾ ನಗುತ್ತಿರಬೇಕು ಅನ್ನುವುದೇ ನನ್ನ ಆಸೆ. ಅದಕ್ಕೆ ನಾನು ನಿನ್ನಿಂದ ದೂರವಾಗುತ್ತಿದ್ದೇನೆ. ಈಗ ನೀನು ನಿನ್ನ ಕಾಲ ಮೇಲೆ ನಿಂತಿದ್ದೀಯಾ. ಇನ್ನಾದರೂ ಆರಾಮವಾಗಿರು. ಹೋಗುವ ಮೊದಲು ಇನ್ನೊಂದು ವಿಷಯವನ್ನು ಹೇಳುತ್ತೇನೆ ಕೇಳು. ನಾನು ವ್ಯಭಿಚಾರಿ ಅನ್ನುವುದು ಸತ್ಯ ಆದರೆ ಅದು ಹೆಣ್ಣಿನ ತಂದೆಗೆ ಹೇಗೆ ತಿಳಿಯಿತು. ಎಂದಾದರೂ ಆತ ಅಲ್ಲಿಗೆ ಬಂದಿರುವುದಕ್ಕೆ ತಾನೆ. ಹೆಣ್ಣು ಹಲವರ ಜೋತೆ ದೇಹ ಹಂಚಿಕೊಳ್ಳುವುದು ತಪ್ಪು ಆದರೆ ಗಂಡು ಈ ಕೆಲಸ ಮಾಡಿದರೆ ತಪ್ಪಿಲ್ಲ ಅಲ್ಲವಾ? ಯಾರೋ ಹೇಳಿದ ಮಾತಿಗೆ ನೀನು ನನ್ನನ್ನು ದೂಷಿಸಿದ್ದು ನಿಜಕ್ಕೊ ನನಗೆ ಬೇಸರವಾಯಿತು ಮಗನೇ. ಇರಲಿ ಬಿಡು, ಇನ್ನು ನಾನು ನಿನ್ನ ಜೋತೆಗಿಲ್ಲ.ನಿನಗಾರ ಕಾಟವೂ ಇಲ್ಲ, ನೂರು ಕಾಲ ಸುಖವಾಗಿ ಬಾಳು ಮಗನೇ, ಇದಕ್ಕಾಗೇ ನಾನು ಇಷ್ಟು ವರ್ಷ ಬದುಕಿದ್ದು. ಈ ಅಮ್ಮನ ಆಶೀರ್ವಾದ ಸದಾ ನಿನ್ನ ಮೇಲಿದೆ. ಬರುತ್ತೇನೆ,<br />
<br />
ಆತ ನಡುಗುತ್ತ ಅಲ್ಲೇ ಕುಸಿದ. ಇವನಿಗೆ ತಿಳಿದಯದೇ ಇದ್ದ ಅದೆಷ್ಟೋ ಗುಟ್ಟನ್ನು ಬಿಚ್ಚಿಟ್ಟಿದ್ದಳು ಆಕೆ. ಆದರೆ ಮಾತು ಆಡಾಗಿತ್ತು ಮುತ್ತು ಒಡೆದು ಹೋಗಿತ್ತು, ಕ್ಷಮೆ ಕೋರಲು ಆಕೆ ಅಲ್ಲಿರಲಿಲ್ಲ. ಈಗ ಅವನ ಹತ್ತಿರ ಇದ್ದದ್ದು ಅಮ್ಮನ ನೆನಪು ಮತ್ತು ಆಕೆಯ ಪತ್ರ ಮಾತ್ರ.<br />
<div>
<br /></div>
</div>
Motivation http://www.blogger.com/profile/08140925864934705325noreply@blogger.com0tag:blogger.com,1999:blog-5247965971580923628.post-21273547292592882122014-11-02T19:50:00.000-08:002014-11-02T19:50:22.956-08:00ಪತ್ರ:<div dir="ltr" style="text-align: left;" trbidi="on">
ಕಳೆದ ಕೆಲ ವರ್ಷಗಳಿಂದ ನಾನಾಯಿತು ನನ್ನ ಕೆಲಸವಾಯಿತು. ಇನ್ನೇನು ಕೆಲಸ ಕೆಲ ವರ್ಷದ್ದಷ್ಟೇ.. ಈಗಂತೂ ಟಿವಿ, ಕಂಪ್ಯೂಟರ್ ಅಂತ ಸಮಯ ಕಳೆದದ್ದೂ ತಿಳಿಯುವುದಿಲ್ಲ. ಇಂದಿನ ಆಧುನಿಕ ಯುಗದಲ್ಲಿ ಪತ್ರ ವ್ಯವಹಾರ ಮುಗಿದೇ ಹೋಗಿದೆ. ಆದರೆ ತುಂಬಾ ದಿನದ ಮೇಲೆ ಮನೆಗೊಂದು ಪತ್ರ ಬಂದಿತ್ತು...<br />
<br />
ಹಲ್ಲೋ ಸರ್...<br />
ನಾನು ಶರತ್ ಅಂತ. ಜರ್ನಲಿಸಮ್ ಮಾಡ್ತಾ ಇದ್ದೇನೆ. ಕೆಲ ಹಳೆಯ ಬರಹಗಾರರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇನೆ. ಅದರಲ್ಲಿ ನಿಮ್ಮದೂ ಹೆಸರಿದೆ. ಸ್ವಲ್ಪ ಮಾಹಿತಿ ಸಂಗ್ರಹಿಸಿದಾಗ ನಿಮ್ಮ ಬಗ್ಗೆ ಕೆಲ ವಿಷಯ ತಿಳಿಯಿತು. ನಿಮ್ಮ ಕೆಲ ಬರಹಗಳನ್ನೂ ಓದಿದೆ. ಆದರೆ ಕಳೆದ ತುಂಬಾ ವರ್ಷಗಳಿಂದ ನೀವು ಏನನ್ನೂ ಬರೆಯುತ್ತಿಲ್ಲ ಯಾಕೇ? ದಯವಿಟ್ಟು ಉತ್ತರಿಸಿ, ನನಗೆ ತುಂಬಾ ಸಹಕಾರಿಯಾಗುತ್ತೆ ನನ್ನ ಅಭ್ಯಾಸಕ್ಕೆ...<br />
-ಶರತ್ <br />
<br />
ಕೆಳಗೆ ಆತನ ವಿಳಾಸವಿತ್ತು. ನನಗೆ ಇದು ಹೊಸತಲ್ಲ.. ಕಳೆದ ಕೆಲ ವರ್ಷಗಳಲ್ಲಿ ಹೀಗೆ ತುಂಬಾ ಪತ್ರಗಳು ಬಂದಿದ್ದವು. ಯಾವುದಕ್ಕೂ ನಾನು ಉತ್ತರಿಸಲೂ ಇಲ್ಲ. ಆದರೇ ಈ ಹುಡುಗ ಮಾತ್ರ ಬಿಡುವಂತೆ ಕಾಣಲಿಲ್ಲ, ತಿಂಗಳೊಳಗೆ ಮೂರು ಪತ್ರಗಳು ಬಂದಿದ್ದವು. ಮೊನ್ನೆ ಬಂದ ಪತ್ರ ನನ್ನ ಹಳೆಯ ದಿನವನ್ನು ನೆನಪಿಸಿತ್ತು. ದಯವಿಟ್ಟು ಒಂದು ಪತ್ರವಾದರೂ ಬರೆಯಿರಿ, ನಿಮ್ಮಿಂದ ಒಂದೇ ಒಂದು ಪತ್ರದ ನಿರೀಕ್ಷೆಯಲ್ಲಿದ್ದೇನೆ ಅನ್ನುವ ಸಾಲುಗಳು ಮನಕ್ಕೆ ಚುಚ್ಚಿದ್ದವು. ಮತ್ತೆ ಪೆನ್ನು ಹಿಡಿದು ಆತನಿಗೊಂದು ಪತ್ರ ಬರೆದೆ, ಈ ಬಾರಿ ಕೈ ನಡುಗಲಿಲ್ಲ. ಯಾಕೋ ಗೊತ್ತಿಲ್ಲ.<br />
<br />
ಆಗ ಇಸವಿ೧೯೯೦. ಇಂಟರ್ ನೆಟ್, ಮೊಬೈಲ್ ಅವ್ಯಾವುದೂ ಅಸ್ತಿತ್ವದಲ್ಲಿರಲಿಲ್ಲ. ದೂರಧ್ವನಿ ಅಷ್ಟರ ಮಟ್ಟಿಗೆ ಪ್ರಸಿದ್ಧಿಯಲ್ಲಿರಲಿಲ್ಲ.ಆಗ ನಾನಿನ್ನೂ ಅವಿವಾಹಿತ ಸಂಪದ ಪತ್ರಿಕೆಯಲ್ಲಿ ಅಂಕಣಕಾರನಾಗಿ ಪ್ರಸಿದ್ಧಿ ದೊರೆತಿತ್ತು. ಎರಡು ಪುಸ್ತಕಗಳು ಪ್ರಕಟಣೆಯಾಗಿ ಉತ್ತಮ ಮಾರಾಟ ಕಂಡಿದ್ದವು. ಮೊದಮೊದಲು ಬರವಣಿಗೆ ನನ್ನ ಹವ್ಯಾಸವಾಗಿದ್ದರೂ ಕೆಲ ಬರಹಗಳು ಅನೇಕ ಪತ್ರಿಕೆಗಳಲ್ಲಿ ಪ್ರಕಟಣೆಗೊಂಡು ಕ್ರಮೇಣ ಅಂಕಣಗಳ ರೂಪದಲ್ಲಿ ಮಾರ್ಪಾಡಾಯಿತು.ಅತೀ ಚಿಕ್ಕ ವಯಸ್ಸಿನ ಅಂಕಣಕಾರ ಅನ್ನುವ ಬಿರುದೂ ಬೆನ್ನೆರಿತು. ಉಪಾಸನಾ ಮತ್ತು ಮಾತೆಯ ಮಡಿಲಲ್ಲಿ ಹೀಗೆ ಎರಡು ಪುಸ್ತಕಗಳು ಪ್ರಕಟಣೆಯಾಗಿ, ಮಾತೆಯ ಮಡಿಲಲ್ಲಿ ಕೃತಿಗೆ ಕನ್ನಡ ಸಾಹಿತ್ಯ ಪ್ರಕಾಶನದ ಪ್ರಶಸ್ತಿಯೂ ದೊರೆಯಿತು. ಇನ್ನೇನು ಬೇಕು ಒಬ್ಬ ವ್ಯಕ್ತಿಗೆ. ವೃತ್ತಿಯಲ್ಲಿ ಇಂಜಿನೀಯರ್, ಬೆಂಗಳೂರಿನಲ್ಲಿ ಮನೆ ಗಾಡಿ, ಸಮಾಜದಲ್ಲಿ ಗೌರವ, ಹೆಚ್ಚಿದ ಬೇಡಿಕೆ, ಉತ್ತಮ ಸಂಪಾದನೆ ಜೋತೆಜೋತೆಗೆ ನನ್ನ ಅಹಂ ಕೂಡ ಬೆಳೆದಿತ್ತು.<br />
ಆಗೆಲ್ಲ ಓದುಗರ ಅಭಿಪ್ರಾಯಗಳು ಪತ್ರಗಳ ಮೂಲಕ ಬರಹಗಾರರನ್ನ ತಲುಪುತ್ತಿತ್ತು. ಹೀಗೆ ಬಂದ ಪತ್ರಗಳನ್ನು ಓದುವುದು, ಕೆಲವಕ್ಕೆ ಉತ್ತರಿಸುವುದು ನನ್ನ ವಾಡಿಕೆಯಾಗಿತ್ತು. ಓಂದು ದಿನ ಹೀಗೆ ಬರೆಯುತ್ತ ಕುಳಿತಾಗ ಕೆಲಸದವ ಒಂದಿಷ್ಟು ಪತ್ರಗಳನ್ನು ನನ್ನ ಮುಂದಿಟ್ಟು ನಡೆದ. ನೋಡಿದರೆ ಸುಮಾರು ಇಪ್ಪತ್ತು ಮೂವತ್ತು ಪತ್ರಗಳಿದ್ದವು. ಇದು ನನಗೆ ಸರ್ವೇಸಾಮಾನ್ಯ.ಪೊಸ್ಟ್ ಕಾರ್ಡ್, ಅಂತರ್ದೇಶೀಯ ಪತ್ರಗಳು ನಿಯತಕಾಲಿಕಗಳು ಹೀಗೆ ನೋಡುತ್ತಿದ್ದಾಗ ನನ್ನ ದೃಷ್ಟಿ ಒಂದು ಪತ್ರದ ಮೇಲೆ ಬಿತ್ತು, ಸ್ಟಾಂಪ್ ನೋಡಿದಾಗ ಅದು ಮೈಸೂರಿನಿಂದ ಬಂದದ್ದು.ಬರೆದದ್ದು ಯಾವುದೋ ಹುಡುಗಿ. ಉಳಿದೆಲ್ಲ ಪತ್ರಗಳನ್ನು ಬದಿಗಿಟ್ಟು ಆ ಪತ್ರ ಓದತೊಡಗಿದೆ.<br />
<br />
ಪ್ರಿಯ ವಿನೀತ್ ಕುಮಾರ್,<br />
ನಿಯಮಿತವಾಗಿ ನಿಮ್ಮ ಅಂಕಣಗಳನ್ನ ಓದುತ್ತಿರುತ್ತೇನೆ, ಮೊನ್ನೆಯಷ್ಟೇ ನಿಮ್ಮ ಉಪಾಸನಾ ಓದಿದೆ, ಓಂದು ಹೋಸ ಪ್ರಯೋಗ, ಮಾಹಿತಿಯ ವಿಸ್ತರಣೆ, ವಿಷಯಗಳ ಮಂಡನೆ ಹೀಗೆ ಪುಸ್ತಕ ತುಂಬಾ ಇಷ್ಟವಾಯಿತು. ನಿಮ್ಮ ಇನ್ನೋಂದು ಪುಸ್ತಕ ಎಲ್ಲೂ ಸಿಗುತ್ತಿಲ್ಲ, ಓಂದು ಪ್ರತಿ ಕಳುಹಿಸಿ ಕೊಡುತ್ತೀರಾ? ಮೊತ್ತವನ್ನು ನಿಮಗೆ ಮನಿ ಆರ್ಡರ್ ಮಾಡಿದ್ದೇನೆ.<br />
ನನಗೆ ನಿಮ್ಮ ಜೋತೆ ಇನ್ನೂ ಕೆಲ ವಿಶಯಗಳ ಬಗ್ಗೆ ಚರ್ಚೆ ಮಾಡುವುದಿದೆ. ಸಾಹಿತ್ಯ, ವಿಜ್ನಾನ, ಆಧ್ಯಾತ್ಮ ಇವುಗಳ ಬಗ್ಗೆ ತಿಳಿದುಕೊಳ್ಳುವ ಆಸೆಯಿದೆ. ಅನೇಕ ಪ್ರಶ್ನೆಗಳು ನನ್ನ ಮನದಲ್ಲಿವೆ, ನನ್ನ ಪ್ರಶ್ನೆಗಳಿಗೆಲ್ಲ ನಿಮ್ಮಿಂದ ಉತ್ತರ ಸಿಗಬಹುದು ಅನ್ನುವ ಭರವಸೆಯಿದೆ. ಅಂಕಣಕಾರರಲ್ಲದೇ ಮತ್ತೇನು ಮಾಡುತ್ತೀರಿ? ನಿಮ್ಮ ಹವ್ಯಾಸಗಳೇನು? ನೀವು ಮೈಸೂರಿಗೆ ಬರ್ತಾ ಇರ್ತೀರಾ?<br />
ಈ ಪತ್ರಕ್ಕೆ ಆದಷ್ಟು ಬೇಗ ಉತ್ತರಿಸುತ್ತೀರಿ ಅನ್ನುವ ನಂಬಿಕೆ ಇದೆ. ಜೋತೆಗೆ ನಿಮ್ಮ ಫೋನ್ ನಂಬರ್ ಕೂಡ ಕಳುಹಿಸಿ.<br />
-ಕಲ್ಪನಾ.<br />
ಮರುದಿನ ಆಕೆ ಕಳುಹಿಸಿದ್ದ ಮನಿ ಆರ್ಡರ್ ದೊರೆಯಿತು, ಆಕೆಯ ವಿಳಾಸಕ್ಕೆ ನನ್ನ ಪುಸ್ತಕವನ್ನು ಜೋತೆಗೆ ಕೆಲ ಅಂಕಣಗಳ ಪ್ರತಿಯನ್ನೂ ಕಳುಹಿಸಿದೆ, ಆದರೆ ಯಾಕೋ ಆಕೆಯ ಪತ್ರಕ್ಕೆ ಉತ್ತರಿಸಬೇಕೆಂದು ನನಗೆ ಅನಿಸಲೇ ಇಲ್ಲ.ಎಲ್ಲ ಓದುಗರಂತೆ ಆಕೆಯೂ ಒಬ್ಬಳು ಅನ್ನುವ ಭಾವನೆ ನನ್ನಲ್ಲಿ ಮೂಡಿತ್ತು.<br />
ವಾರದಲ್ಲೇ ಆಕೆಯಿಂದ ಮತ್ತೆ ಪತ್ರ ಬಂದಿತ್ತು<br />
ನಿಮ್ಮ ಪುಸ್ತಕ ದೊರೆಯಿತು, ಓದಿ ಮುಗಿಸಿದೆ. ಕೆಲ ಕ್ಷಣ ನನ್ನನ್ನ ಮೂಕವಾಗಿಸಿತ್ತು ನಿಮ್ಮ ಪುಸ್ತಕ. ಧನ್ಯವಾದಗಳು. ಆದರೆ ನನ್ನ ಮೊದಲ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ, ದಯವಿಟ್ಟು ಉತ್ತರಿಸಿ.<br />
<br />
ಅವಳ ಈ ಪತ್ರಕ್ಕೂ ನನ್ನಿಂದ ನಿರುತ್ತರ.<br />
ನಾವು ಯಾವುದಾದರೂ ವ್ಯಕ್ತಿಯ ಬಗ್ಗೆ ಆಸಕ್ತಿ ವಹಿಸದಿದ್ದಲ್ಲಿ ಏನಾಗುತ್ತೋ ಅದೇ ಆಯಿತು. ಕೆಲ ದಿನದಲ್ಲೇ ಆಕೆಯಿಂದ ಕೋಪತಾಪಯುಕ್ತ ಪತ್ರ ನನ್ನ ಕೈ ಸೇರಿತ್ತು.<br />
ಮಿ.ವಿನೀತ್,<br />
ಇದು ನನ್ನ ಮೂರನೇ ಪತ್ರ, ಈ ಮೊದಲು ಎರಡು ಪತ್ರ ಬರೆದಿದ್ದೆ, ಯಾವುದಕ್ಕೊ ನಿಮ್ಮಿಂದ ಸರಿಯಾದ ಉತ್ತರವಿಲ್ಲ. ನಿಮಗೆ ನಿಮ್ಮ ಓದುಗರ ಬಗ್ಗೆ ಗೌರವವಿಲ್ಲ, ಇದು ಓಳ್ಳೆಯ ಬೆಳವಣಿಗೆಯಲ್ಲ. ನನ್ನ ಪ್ರಶ್ನೆಗಳಿಗೆ ಓಂದು ನಾಲ್ಕು ಸಾಲಲ್ಲಾದರೂ ಉತ್ತರಿಸಬೇಕು ಅಂತ ನಿಮಗೇ ಅನಿಸುವುದೇ ಇಲ್ಲವೇ? ನಿಮಗೆ ನಿಮ್ಮ ಓದುಗರ ಬಗ್ಗೆ ಬೆಲೆಯಿಲ್ಲದಿದ್ದರೆ ನನಗೂ ನಿಮ್ಮ ಓದುಗರಾಗಿ ಇರುವುದರಲ್ಲಿ ಯಾವುದೇ ಆಸಕ್ತಿ ಇಲ್ಲ, ನಿಮ್ಮ ಪುಸ್ತಕವನ್ನು ನಿಮಗೇ ಕಳುಹಿಸುತ್ತಿದ್ದೇನೆ.<br />
<br />
ಈ ಪತ್ರವನ್ನು ಓದಿ ಒಮ್ಮೆ ಎದೆಯಲ್ಲಿ ಧಸ್ಸೆಂದಿತ್ತು. ಅವಳ ಪ್ರಶ್ನೆಗಳಿಗೆ ಉತ್ತರಿಸದೇ ಇರದಿದ್ದಕ್ಕೆ ನನಗೂ ಸ್ವಲ್ಪ ಬೇಸರವೆನಿಸಿತು. ಎಲ್ಲರಂತೇ ಅವಳನ್ನೂ ಸಾಮಾನ್ಯ ಓದುಗರಂತೆ ವ್ಯವಹರಿಸಿದ್ದಕ್ಕೆ ದುಃಖವಾಯಿತು. ಆದರೆ ನನ್ನ ಈ ವರ್ತನೆಗೆ ಕಾರಣವಿತ್ತು, ಹೀಗೆ ಬರುತ್ತಿದ್ದ ಅದೆಷ್ಟೊ ಪತ್ರಗಳಿಗೆ ನಾನು ಉತ್ತರಿಸುತ್ತಲೇ ಇರಲಿಲ್ಲ, ಅದು ಸಾಧ್ಯವೂ ಇರಲಿಲ್ಲ ನನ್ನಿಂದ. ಪುಸ್ತಕ ಓದಿಯಾದ ಮೇಲೆ ವಾಪಸ್ ಕಳುಹಿಸಿದ್ದಾಳೆ, ಎಷ್ಟು ಸೊಕ್ಕಿರಬೇಡ ಅವಳಿಗೆ... ಹೋಗಲಿ ಎಂದು ನಾನು ಸುಮ್ಮನಾದೆ. ನನ್ನ ಬರಹಗಳಿಗೆ ಅದೆಷ್ಟೋ ಓದುಗರಿದ್ದಾರೆ ಅದರಲ್ಲಿ ಇವಳು ಏನು ಮಹಾ ಅನ್ನುವ ಹಿರಿಮೆ ಮನದಲ್ಲಿ ಮೂಡಿತ್ತು. ಈ ವಿಶಯವನ್ನು ಅಲ್ಲಿಗೇ ಮರೆತು ನನ್ನ ದಿನನಿತ್ಯದ ಕೆಲಸದಲ್ಲಿ ನಾನು ಮಗ್ನನಾಗಿದ್ದೆ.<br />
<br />
ನಾನು ಸುಮ್ಮನಾದರೂ ಅವಳು ಸುಮ್ಮನಾಗಲಿಲ್ಲ. ಕೆಲ ದಿನದಲ್ಲಿ ಮತ್ತೆ ಅವಳಿಂದ ಪತ್ರ ಬಂದಿತ್ತು. ಓದಲೋ ಬೇಡವೋ ಅಂತ ಅನುಮಾನಿಸುತ್ತಲೇ ಕೊನೆಗೆ ಓದಿದೆ. ಅವಳು ನನ್ನ ಕ್ಷಮೆ ಕೋರಿದ್ದಳು. ಬೆದರಿಕೆಯ ಪತ್ರಕ್ಕಾದರೂ ಉತ್ತರಿಸುತ್ತೇನೆ ಅನ್ನುವ ಅವಳ ನಿರೀಕ್ಷೆಯೂ ಸುಳ್ಳಾಗಿತ್ತು. ಪತ್ರದ ಕೊನೆಯಲ್ಲಿ ಅವಳ ಕಳಕಳಿಯ ವಿನಂತಿಯಿತ್ತು ದಯವಿಟ್ಟು ಓಂದಾದರೂ ಪತ್ರ ಬರೆಯಿರಿ... ನಿಮ್ಮಿಂದ ಬರುವ ಓಂದಾದರೂ ಪತ್ರ ಓದುವ ಆಸೆಯಿದೆ ನನಗೆ.<br />
<br />
ಅವಳು ತುಂಬಾ ಭಾವುಕಳಾಗಿ, ದುಃಖದಿಂದ ಇರುವುದು ನನ್ನ ಅರಿವಿಗೆ ಬಂತು, ಅವಳನ್ನು ಅರಿತು ಸಮಾಧಾನಿಸುವ ಗೆಳೆಯ ಬೇಕಾಗಿತ್ತು ಅವಳಿಗೆ. ಅವಳೊಟ್ಟಿಗೆ ತುಂಬಾ ಕಠೋರವಾಗಿ ವರ್ತಿಸಿದೆ ಅನ್ನುವ ಕೀಳರಿಮೆ ನನ್ನನ್ನು ಕಾಡಿತು. ಅವಳಲ್ಲಿ ಕ್ಷಮೆ ಕೋರುವುದು ಮಹತ್ವವಾಗಿತ್ತು. ಇದರಿಂದ ನಮ್ಮಿಬ್ಬರ ತಲೆಯ ಮೇಲಿನ ಭಾರ ಇಳಿಯುವುದೆಂದು ಅನಿಸತೊಡಗಿತು. ಅವಳ ಮೊದಲ ಪತ್ರವನ್ನೆಲ್ಲ ಮತ್ತೋಮ್ಮೆ ಓದಿದೆ. ಕೊನೆಗೆ ಅವಳಿಗಾಗಿ ಪತ್ರ ಬರೆಯತೊಡಗಿದೆ ಮೇಲ್ಗಡೆ ನನ್ನ ವಿಳಾಸ ಬರೆದೆ. ಈಗ ಶುರು ಮಾಡುವುದು ಎಲ್ಲಿಂದ..? ಗೆಳೆತನ ಮಾಡುವುದು ಅಂತ ನಿರ್ಧರಿಸಿದ ಮೇಲೆ ಆಯಿತು.. ಪ್ರಿಯ ಕಲ್ಪನಾ ಅಂತಲೇ ಶುರು ಮಾಡಿದೆ.<br />
<br />
ಪ್ರಿಯ ಕಲ್ಪನಾ<br />
ನಾನು ನಿನ್ನ ಪತ್ರಕ್ಕೆ ಉತ್ತರಿಸಲಿಲ್ಲ, ಅದಕ್ಕಾಗಿ ನಿನ್ನಲ್ಲಿ ಕ್ಷಮೆ ಕೋರುತ್ತೇನೆ. ನಾನು ಉತ್ತರಿಸದೇ ಇರುವುದಕ್ಕೆ ಕೆಲ ಕಾರಣಗಳಿವೆ. ನನಗೆ ಬರುವ ಎಲ್ಲ ಪತ್ರಗಳಿಗೂ ಉತ್ತರಿಸುವಷ್ಟು ಸಮಯ ನನ್ನಲ್ಲಿ ಇಲ್ಲ, ಅಲ್ಲದೇ ಈ ರೀತಿಯ ಪತ್ರವ್ಯವಹಾರದಿಂದ ಗೆಳೆತನ ಶುರುವಾಗಿ ಮುಂದೇ ಅದೆಲ್ಲೋ ಹೋಗುವುದು ನನಗೆ ಇಷ್ಟವಿಲ್ಲ. ಈ ರೀತಿಯ ಯಾವುದೇ ಬಂದನದಲ್ಲಿ ಸಿಲುಕಿಕೊಳ್ಳುವುದು ನನಗೆ ಇಷ್ಟವಿಲ್ಲ. ಹಾಗಾಗಿ ನಾನು ಯಾವುದೇ ಹುಡುಗಿಯ ಪತ್ರಕ್ಕೆ ಉತ್ತರಿಸುವುದೇ ಇಲ್ಲ. ಆದರೆ ನಿನ್ನ ವಿಷಯದಲ್ಲಿ ನಾನು ತಪ್ಪಿದ್ದೇನೆ ಅಂತ ಅನಿಸತೊಡಗಿತು ಅದಕ್ಕೆ ನಿನಗೆ ಪತ್ರ ಬರೆದಿದ್ದೇನೆ.<br />
ಅದೆಕೋ ನಿನ್ನ ಜೋತೆ ಗೆಳೆತನ ಮಾಡಬೇಕೆಂದು ಅನಿಸಿತು, ಬರೀ ಗೆಳೆತನ. ಅದೂ ಪತ್ರದ ಮೂಲಕ ಮಾತ್ರ. ನಾವು ಈ ಜನ್ಮದಲ್ಲಿ ಒಬ್ಬರಿಗೊಬ್ಬರು ಭೇಟಿ ಮಾಡುವ ಹಾಗಿಲ್ಲ.. ಅದೆಷ್ಟೇ ಅನಿಸಿದರೂ. ಅದು ಕೇವಲ ಸಮಯ ವ್ಯರ್ಥವೇ ವಿನಃ ಬೇರೆನಿಲ್ಲ. ಆದಷ್ಟು ನಾವು ವಿಶಯಕ್ಕನುಗುಣವಾಗೇ ಪತ್ರದಲ್ಲಿ ವ್ಯವಹರಿಸೋಣ, ಸುಮ್ಮನೇ ತಮಾಷೆ, ಚೇಷ್ಟೆ ಇವೆಲ್ಲ ಬೇಡ. ನಿನ್ನ ಸುಖ ದುಃಖಗಳನ್ನ ನನ್ನಲ್ಲಿ ಹೇಳಿಕೊಳ್ಳಬಹುದು.<br />
ಇನ್ನು ನೀನು ಕೇಳಿದಂತೆ ನೀವೇನು ಮಾಡುತ್ತೀರಿ, ಹವ್ಯಾಸಗಳೇನು, ಮೈಸೂರಿಗೆ ಬರುತ್ತೀರಾ?? ಹೀಗೆ<br />
ನಾನು ವೃತ್ತಿಯಲ್ಲಿ ಇಂಜಿನಿಯರ್.ಬರವಣಿಗೆ, ಪ್ರವಾಸ, ಹೊಸ ವಿಶಯಗಳನ್ನು ತಿಳಿದುಕೊಳ್ಳುವುದು ನನ್ನ ಹವ್ಯಾಸ. ನಾನು ಆಗಾಗ ಮೈಸೂರಿಗೆ ಬರುತ್ತಾ ಇರುತ್ತೇನೆ, ಆದರೆ ನಿನ್ನನ್ನು ಸಿಗಲು ಬರುತ್ತೇನೆ ಅಂತ ನಿರೀಕ್ಷಿಸಬೇಡ ಕ್ಷಮಿಸು. ಸಧ್ಯದ ಮಟ್ಟಿಗೆ ನಾವಿಬ್ಬರೂ ಫೋನ್ ನಲ್ಲಿ ಮಾತನಾಡಬೇಕೆಂದು ನನಗೆ ಅನಿಸುವದಿಲ್ಲ. ಪತ್ರ ವ್ಯವಹಾರ ಇದ್ದೇ ಇದೆಯಲ್ಲ. ಪತ್ರ ಬರೆಯುವುದರಲ್ಲಿ, ಬರುವ ಪತ್ರಕ್ಕಾಗಿ ಕಾಯುವುದರಲ್ಲಿ ಇರುವ ಆನಂದ ಫೋನ್ ನಲ್ಲಿ ಇದೆಯೆ? ಇರಲಿ. ನೀನೆನು ಮಾಡುತ್ತೀಯಾ ಎಂದು ತಿಳಿದುಕೊಳ್ಳುವ ಆಸಕ್ತಿಯಿದೆ. ಇದುವರೆಗೆ ನಿನ್ನ ಪತ್ರ ಬರುತ್ತದೋ ಅನ್ನುವ ಸಣ್ಣ ಭಯ ನನ್ನಲ್ಲಿತ್ತು, ಆದರೆ ಈ ಬಾರಿ ನಿನ್ನ ಪತ್ರಕ್ಕಾಗಿ ಕಾಯಿತ್ತಿರುತ್ತೇನೆ. ಎಂಟತ್ತು ದಿನದಲ್ಲಿ ನಿನ್ನ ಪತ್ರ ಬರಬಹುದೆಂದು ನಿರೀಕ್ಷಿಸುತ್ತೇನೆ, ಬೇಗ ಬಂದರೂ ಆಶ್ಚರ್ಯವಿಲ್ಲ.<br />
-ವಿನೀತ್.<br />
<br />
ಪತ್ರ ಬರೆದು ಪೊಸ್ಟ್ ಮಾಡಿ ನನ್ನ ಕಾರ್ಯದಲ್ಲಿ ನಾನು ನಿರತನಾದೆ. ಕೆಲಸದ ಗಡಿಬಿಡಿಯಲ್ಲಿ ತಿಂಗಳು ಕಳೆದಿದ್ದು ಅರಿವಿಗೇ ಬರಲಿಲ್ಲ, ಅವಳ ಪತ್ರ ಬಂದಿದೆಯೋ ಎಂದು ಪತ್ರಗಳ ರಾಶಿಯಲ್ಲಿ ತಡಕಾಡಿದೆ.ಎಲ್ಲೂ ಅವಳ ಪತ್ರ ಕಾಣಲಿಲ್ಲ, ಆದರೆ ಇನ್ನೊಂದು ಪತ್ರ ನನ್ನ ಕಣ್ಣಿಗೆ ಬಿತ್ತು. ಅದು ಓಂದು ಅನಾಥಾಲಯದಿಂದ ತುಂಬಾ ಹಿಂದೆಯೇ ಬಂದ ಪತ್ರವಾಗಿತ್ತು, ಕುತೂಹಲದಿಂದಲೇ ಓದತೊಡಗಿದೆ.<br />
ಮಿ.ವಿನೀತ್ ಕುಮಾರ್,<br />
ನಮಸ್ತೇ. ನೀವು ಕಲ್ಪನಾಳಿಗೆ ಬರೆದ ಪತ್ರ ನಮ್ಮ ಕೈ ಸೇರಿತು, ಅವಳು ಸಧ್ಯ ಈ ಪತ್ರವನ್ನು ಓದುವ ಪರೀಸ್ಥಿತಿಯಲ್ಲಿಲ್ಲ. ನಿಮ್ಮ ಪತ್ರ ಬಂದದ್ದು ಕೇಳಿ ತುಂಬಾ ಖುಶಿಯಾಯಿತು ಅವಳಿಗೆ. ನೀವು ಒಮ್ಮೆ ಬಂದು ಅವಳನ್ನು ನೋಡಬೇಕೆಂಬುದು ಅವಳ ಆಸೆ. ನೀವು ಇಲ್ಲಿ ಬಂದರೆ ಎಲ್ಲವನ್ನು ವಿಸ್ತಾರವಾಗಿ ಮಾತನಾಡೋಣ. ನೀವು ಬಂದೇ ಬರುತ್ತೀರಿ ಅಂತ ನಿರೀಕ್ಷಿಸುತ್ತೇವೆ.<br />
-ರಾಮನಾಥ್ (ಅಧ್ಯಕ್ಷ - ಆಶ್ರಯ ಅನಾಥಾಲಯ)<br />
<br />
ಎಲ್ಲ ಗೊಂದಲವಾಗಿ ಕಂಡಿತು ನನಗೆ... ಏನು ಮಾಡುವುದೆಂದು ತೋಚದೇ, ಕೋನೆಗೆ ಮೈಸೂರಿನ ಕಡೆಗೆ ಪ್ರಯಾಣ ಬೆಳೆಸಿದೆ.<br />
ಅದೋಂದು ಸುಂದರ ಅನಾಥಾಲಯ, ಸುತ್ತೆಲ್ಲ ಗುಡ್ಡ ಬೆಟ್ಟ, ಎಲ್ಲ ಕಡೆ ಹಸಿರೇ ಹಸಿರು. ಕಾವ್ಯ ರಚನೆಗೆ ಕವಿಗಳಿಗೆ ಹೇಳಿ ಮಾಡಿಸಿದ ಜಾಗದಂತಿತ್ತು. ಅಲ್ಲಿಲ್ಲಿ ಆಡುತ್ತಿದ್ದ ಕೆಲ ಮಕ್ಕಳು ನನ್ನನ್ನ ನೋಡಿ ಅಪರಿಚಿತ ಭಾವ ವ್ಯಕ್ತಪಡಿಸಿ ದೂರಾದವು. ಅತ್ತಿತ್ತ ಗಮನಿಸುತ್ತಿದ್ದಂತೆ ಅತ್ತ ಕಡೆಯಿಂದ ನನ್ನತ್ತ ಒಬ್ಬ ಹುಡುಗಿ ಕೈ ಮಾಡಿದಳು. ಇವಳೆ ಕಲ್ಪನಾ ಇರಬಹುದೇ ಅಂತ ಅತ್ತ ನಡೆದೆ. ನಾನು ವಿನೀತ್ ಇಲ್ಲಿಂದ ನನಗೆ ಪತ್ರ ಬಂದಿತ್ತು. ನೀನು ಕಲ್ಪನಾ ತಾನೇ?? ನಾನು ನುಡಿದೆ... ಅಲ್ಲವೆಂಬಂತೆ ತಲೆಯಾಡಿಸಿ ನನ್ನನ್ನು ಕಾರ್ಯಾಲಯದತ್ತ ಕರೆದೊಯ್ದಳು.<br />
ಒಳಗೆ ಕಾಲಿಡುತ್ತಿದ್ದಂತೆ ಬನ್ನಿ ನಾನು ರಾಮನಾಥ್, ಏನಾಗಬೇಕಿತ್ತು?? ಅನ್ನುತ್ತ ತಮ್ಮ ಪರಿಚಯ ಮಾಡಿಕೊಟ್ಟರು ರಾಮನಾಥ್. ನನ್ನ ಪರಿಚಯ ಮಾಡಿಕೊಟ್ಟು ಪತ್ರ ಬರೆಯಲು ಕಾರಣ ಏನೆಂದು ಪ್ರಶ್ನಿಸಿದೆ. ಬನ್ನಿ ನನ್ನ ಜೋತೆ ಅನ್ನುತ್ತ ಓಂದು ರೂಮಿನತ್ತ ನನ್ನನ್ನು ಕರೆದೊಯ್ದರು.<br />
ಒಳಬರುತ್ತಿದ್ದಂತೆ ಇವಳೇ ಕಲ್ಪನಾ ಅಂತ ಕೈ ತೋರಿದರು...<br />
ಅತ್ತ ಕಣ್ಣಾಯಿಸಿದಾಗ ಕಂಡದ್ದು ಕಲ್ಪನಾ... ಇವಳೇನಾ ಕಲ್ಪನಾ?? ೨೦-೨೨ ಹರೆಯ ಬಹುತೇಕ, ಅದೆಷ್ಟೋ ಆಸೆ ಹೊತ್ತು ಮಿನುಗುವ ಕಣ್ಗಳು, ದುಂಡು ಮುಖ, ಸಂಪಿಗೆಯನ್ನೂ ನಾಚಿಸುವ ಮೂಗು, ಮಾತನಾಡಲು ಹಾತೊರೆಯುತ್ತಿದ್ದ ಅಧರಗಳು...<br />
ಕಲ್ಪನಾಳ ಕಪ್ಪು ಬಿಳುಪು ಫೋಟೊ ಅದಕ್ಕೊಂದು ಹಾರ. . . ಕಾಲ್ಕೆಳಗಿನ ಭೂಮಿ ಕುಸಿದ ಅನುಭವ... ಇದು ಹೇಗೆ ಸಾಧ್ಯ? ಏನಾಗಿತ್ತು ಇವಳಿಗೆ? ಅವಳು ಯಾಕೆ ಏನೂ ಹೇಳಲಿಲ್ಲ? ಸಾವಿರಾರು ಪ್ರಶ್ನೆಗಳು ತಲೆಯಲ್ಲಿ ಬಿಗುಗಾಳಿಯಂತೆ ಹೊಕ್ಕವು. ಆ ರಭಸಕ್ಕೆ ಕೆಲ ಕ್ಷಣ ಎನೂ ತೋಚದಂತೆ ಮೂಕನಾಗಿದ್ದೆ. ಯಾರೋ ಅಲುಗಾಡಿಸುತ್ತಿದ್ದ ಅನುಭವ, ಕೆಲ ಕ್ಷಣ ನಾನು ಕಳೆದುಹೋಗಿದ್ದೆ... ಮಿ.ವಿನೀತ್.... ಮಿ.ವಿನೀತ್... ರಾಮನಾಥ್ ರ ಧ್ವನಿ ಸಣ್ಣದಾಗಿ ಮನದಲ್ಲಿ ಪ್ರತಿಧ್ವನಿಸುತ್ತಿತ್ತು. ಹ್ಮಾಂ.. ಹ್ಮಾಂ.. ಎನ್ನುತ್ತ ಮತ್ತೆ ಈ ಜಗದಲ್ಲಿ ಪ್ರಸ್ಥಾನಿಸುತ್ತಿದ್ದೆ. ಬನ್ನಿ ವಿನೀತ್ ಕುಳಿತುಕೊಳ್ಳಿ, ಸ್ವಲ್ಪ ನೀರು ಕುಡಿಯಿರಿ ರಾಮನಾಥ್ ಸಮಾಧಾನಿಸುತ್ತ ನನ್ನನ್ನು ಕುರ್ಚಿಯ ಮೇಲೆ ಕುಳ್ಳಿರಿಸಿದರು, ನೀರು ಕುಡಿದು ಸ್ವಲ್ಪ ಸಮಾಧಾನಿಸಿಕೊಂಡೆ, ಪ್ರಶ್ನಿಸಬೇಕು ಅಂತ ಅವರತ್ತ ನೋಡುತ್ತಲೇ ಅವರೇ ಮಾತನಾಡಲು ಮುಂದಾದರು.<br />
ಕಲ್ಪನಾ ಅನಾಥೆ. ಇಪ್ಪತ್ತು ವರ್ಷದಿಂದ ಇಲ್ಲೇ ಇದ್ದಳು. ತುಂಬಾ ಮುಗ್ಧೆ, ಸುಖ ಅನ್ನೋದು ಅವಳ ಬಾಳಲ್ಲಿ ಸಿಗಲಿಲ್ಲ. ತುಂಬಾ ಕಷ್ಟಪಟ್ಟು ಓದಿ ಕಳೆದ ವರ್ಷವಷ್ಟೇ ಒಂದು ಕೆಲಸಕ್ಕೆ ಸೇರಿದ್ದಳು. ಆಗಿಂದ ಅವಳು ನಿಮ್ಮ ಅಭಿಮಾನಿ. ಇನ್ನೇನು ಎಲ್ಲ ಸರಿಹೊಯಿತು ಅನ್ನುವಷ್ಟರಲ್ಲಿ ಮತ್ತೋಂದು ದೊಡ್ಡ ಆಘಾತ ಕಾದಿತ್ತು. ಕೆಲ ದಿನಗಳ ಹಿಂದಷ್ಟೇ ಅವಳಿಗೆ ಕ್ಯಾನ್ಸರ್ ಇರುವುದು ತಿಳಿಯಿತು, ಗುಣಪಡಿಸಲಾಗದ ಮಟ್ಟಕ್ಕೆ ಬೆಳೆದಿತ್ತು. ಪರೀಕ್ಷಿಸಿದ ವೈದ್ಯರು ಕೆಲ ತಿಂಗಳಷ್ಟೇ ಆಯಸ್ಸು ಉಳಿದಿರುವುದೆಂದು ತಿಳಿಸಿ ಇದ್ದಷ್ಟು ದಿನ ಹಾಯಾಗಿರಿ ಎಂದು ಸುಮ್ಮನಾದರು. ಆದರೆ ಇಷ್ಟು ಬೇಗ ಸಾಯುತ್ತಾಳೆ ಅಂತ ಊಹಿಸಿರಲಿಲ್ಲ, ಮನಸ್ಸಿಂದ ಕುಗ್ಗಿ ಹೋದದ್ದೇ ಅವಳ ಆಯಸ್ಸು ಕಡಿಮೆಯಾಯಿತು. ಎಲ್ಲ ದೇವರ ಆಟ ನಾವೇನು ಮಾಡುವುದಕ್ಕೆ ಬರುತ್ತೇ ಅಲ್ಲವೇ. ನಿಮ್ಮ ಪತ್ರ ಬಂದಿದ್ದು ಅವಳಿಗೆ ತುಂಬಾ ಖುಶಿಯಾಯಿತು, ಆದರಾಗ ಅವಳು ಅದನ್ನು ಓದುವ ಪರಿಸ್ಥಿತಿಯಲ್ಲಿರಲಿಲ್ಲ, ನಾವು ಓದಿ ಹೇಳುತ್ತೇವೆ ಅಂದರೂ ಕೇಳಲಿಲ್ಲ. ಅದಕ್ಕೆ ನಿಮಗೆ ನಾವೇ ಪತ್ರ ಬರೆದೆವು, ತಕ್ಷಣ ನೀವು ಬಂದಿದ್ದರೆ ಅವಳನ್ನು ನೋಡಬಹುದಿತ್ತೆನೋ. ಮೊನ್ನೆಯಷ್ಟೆ ಕಲ್ಪನಾ ನಮ್ಮನ್ನೆಲ್ಲ ಬಿಟ್ಟು ಹೊರಟುಹೋದಳು.ಅನ್ನುತ್ತು ಒಂದು ಪತ್ರವನ್ನು ನನ್ನ ಕೈಗಿಟ್ಟು ಇದು ಅವಳ ಕೊನೆಯ ಪತ್ರ, ನೀವು ಬರುತ್ತೀರಿ ಆಗ ನಿಮಗೆ ಕೊಡಲು ಹೇಳಿದ್ದಳು, ನೀವು ಇನ್ನೆರಡು ದಿನ ಬರದೇ ಇದ್ದರೆ ಪೊಸ್ಟ್ ಮಾಡಬೇಕು ಅಂದುಕೊಂಡಿದ್ದೆ.<br />
ಅದನ್ನು ತೆಗೆದುಕೊಳ್ಳುವಾಗ ಕೈ ನಡುಗುತ್ತಿತ್ತು... ಅಲ್ಲಿ ತುಂಬಾ ಹೊತ್ತು ನಿಲ್ಲಲಾಗದೇ ಸೀದಾ ಬೆಂಗಳೂರಿಗೆ ಬಂದಿದ್ದೆ. ಪತ್ರ ಜೇಬಿನಲ್ಲಿತ್ತು, ಓದುವ ಧೈರ್ಯ ಇರಲಿಲ್ಲ. ಆದರೇ ಓದದೇ ಇರಲಾಗಲಿಲ್ಲ. ನಡುಗುವ ಕೈಗಳಿಂದ ಪತ್ರ ಹಿಡಿದು ಓದಲಾರಂಬಿಸಿದೆ.<br />
<br />
ಪ್ರಿಯ ವಿನೀತ್.<br />
ಈ ಪತ್ರ ಓದುವಾಗ ನಾನು ಬದುಕಿರುವುದಿಲ್ಲ. ಯಾರಿಗೂ ನಾವೆಷ್ಟು ದಿನ ಬದಿಕಿರುತ್ತೇನೆ ಅಂತ ಗೊತ್ತಿರುವುದಿಲ್ಲ, ಆದರೆ ನನಗೆ ಮೊದಲೇ ಗೊತ್ತಾಯಿತು. ಇದೋಂದೆ ನಾನು ಪಡೆದುಕೊಂಡು ಬಂದ ಭಾಗ್ಯ. ನಿಮ್ಮ ಪತ್ರ ಬರುವುದಿಲ್ಲ ಅಂತ ಗೊತ್ತಿತ್ತು, ಅದಕ್ಕೆ ನಿಮ್ಮಲ್ಲಿ ತುಂಬಾ ಕಾರಣಗಳಿರಬಹುದು. ನನ್ನಂತೆ ಅದೆಷ್ಟೋ ಅಭಿಮಾನಿಗಳ ಪತ್ರ ನಿಮಗೆ ಬರುತ್ತಿರಬಹುದು, ಎಲ್ಲವಕ್ಕೂ ಉತ್ತರಿಸುವಷ್ಟು ಸಮಯ ನಿಮ್ಮಲ್ಲಿ ಇಲ್ಲದಿರಬಹುದು ಅಥವಾ ಸ್ವಲ್ಪ ಜಂಭವೂ ಇರಬಹುದು. ನನ್ನ ಹೇಳಿಕೆ ಇಷ್ಟೇ ಓದುಗರಿಂದ ನೀವು, ನಿಮ್ಮಿಂದ ಓದುಗರಲ್ಲ ಇದನ್ನ ನೆನಪಿಟ್ಟುಕೊಳ್ಳಿ. ಕೆಲವರು ನಿಮ್ಮನ್ನ ಉತ್ತಮ ಬರಹಗಾರ ಅಂದುಕೊಂಡರೆ, ಮತ್ತೆ ಕೆಲವರು ನೀವು ಹೇಳಿದ್ದೆಲ್ಲ ನಿಜ ಅಂದುಕೊಳ್ಳುತ್ತಾರೆ ಇನ್ನು ಕೆಲವರು ನಿಮ್ಮನ್ನ ದೇವರಂತೆ ಪೂಜಿಸುತ್ತಾರೆ. ಅದಕ್ಕಾಗಿಯಾದರೂ ಒಮ್ಮೆ ನಿಮ್ಮ ಅಭಿಮಾನಿಗಳನ್ನು ಸಂಪರ್ಕಿಸಿ. ಒಂದೆರಡು ಸಾಲಿನಲ್ಲಾದರೂ ನಿಮ್ಮ ಪ್ರತಿಕ್ರಿಯೆಯನ್ನು ತಿಳಿಸಿ. ನನ್ನ ಪತ್ರವನ್ನು ನೀವು ಓದಿದ್ದೀರಾ ಅಂತ ನನಗೆ ಗೊತ್ತು. ಪುಸ್ತಕ ಕಳಿಸುವುದರ ಜೋತೆಗೆ ಒಂದೆರಡು ಸಾಲು ಬರೆದಿದ್ದರೂ ನನಗೆ ಖುಶಿಯಾಗುತ್ತಿತ್ತು. ಇರಲಿ ಬಿಡಿ. ನೀವು ನಿಮ್ಮ ಜೀವನದಲ್ಲಿ ತುಂಬಾ ಅಭಿಮಾನಿಗಳನ್ನು ಹೊಂದಿರಬಹುದು, ತುಂಬಾ ಆಸ್ತಿ ಪಾಸ್ತಿ ಗಳಿಸಿರಬಹುದು ಆದರೆ ಅದಕ್ಕಿಂತ ಹೆಚ್ಚಾದದ್ದು ಅಂದರೆ ನೀವು ಕಷ್ಟದಲ್ಲಿ ಇದ್ದಾಗ ಯಾರು ನಿಮ್ಮ ಜೋತೆ ಇರುತ್ತಾರೋ ಅದೇ ನಿಮ್ಮ ನಿಜವಾದ ಆಸ್ತಿ. ನಿಮ್ಮನ್ನು ಕೀಳಾಗಿ ಭಾವಿಸುತ್ತಿಲ್ಲ ನಾನು, ಅಥವಾ ನಿಮ್ಮನ್ನು ಅವಮಾನಿಸುತ್ತಿಲ್ಲ. ಒಂದಂತೂ ನಿಜ ನಿಮಗೆ ಸ್ವಲ್ಪ ಅಹಂ ಇರುವುದು. ಹೌದಲ್ಲವೇ...? ಹೊಗಲಿ ಬಿಡಿ. ನಾನು ಪಡೆದುಕೊಂಡದ್ದು ನನಗೆ. ನಿಮ್ಮ ಮನ ನೋಯಿಸಿದ್ದರೆ ಕ್ಷಮೆಯಿರಲಿ. ನಾನು ಹೇಳಿದ್ದರ ಬಗ್ಗೆ ನೀವು ಖಂಡಿತವಾಗಿಯೂ ಆತ್ಮಾವಲೋಕನ ಮಾಡಿಕೊಳ್ಳುತ್ತೀರಿ ಅಂತ ಭಾವಿಸುತ್ತೇನೆ.<br />
-ನಿಮ್ಮ ಅಭಿಮಾನಿ ಕಲ್ಪನಾ.<br />
<br />
ಇದನ್ನೆಲ್ಲ ಓದಿದ ನನಗೆ ನನ್ನ ಬಗ್ಗೆ ಅಸಹ್ಯವೆನಿಸತೊಡಗಿತು. ನಾನು ಪತ್ರ ಬರೆಯುವುದಕ್ಕಿಂತ ಮುಂಚೆಯೇ ಅವಳು ಈ ಪತ್ರ ಬರೆದಿದ್ದಳು. ಅವಳ ಬಗೆಗಿನ ಅದೆಷ್ಟೋ ಪ್ರಶ್ನೆಗಳು ನನ್ನ ಮನದಲ್ಲಿ ಕೊರೆಯತೊಡಗಿತು, ಇಂದಿಗೂ ಕೊರೆಯುತ್ತಲೇ ಇದೆ. ಅವಳಿಗೆ ನನ್ನ ಬಗ್ಗೆ ಎಲ್ಲ ಗೊತ್ತಿತ್ತೇ? ನನ್ನನ್ನು ತಿದ್ದಬೇಕು ಅಂತ ಹೀಗೆ ಮಾಡಿದಳೇ? ತಾನು ಜಾಸ್ತಿ ದಿನ ಬದುಕಿರುವುದಿಲ್ಲ ಅಂತ ಗೊತ್ತಿದ್ದರೂ ನನಗೆ ಯಾಕೆ ಯಾವುದೇ ಸುಳಿವು ಕೊಡಲಿಲ್ಲ? ಬೇರಾವುದೋ ವಿಳಾಸದಿಂದ ಪತ್ರ ಬರೆದಿದ್ದು ಯಾಕೇ? ನನ್ನ ಪತ್ರ ಬಂದಿದೆ ಅಂತ ಗೊತ್ತಿದ್ದರೂ ಅದರಲ್ಲಿ ಏನು ಬರೆದಿದ್ದೇನೆ ಅಂತ ಯಾಕೆ ತಿಳಿದುಕೊಳ್ಳಲಿಲ್ಲ? ಯಾಕೆ ನನ್ನ ಜೀವನದಲ್ಲಿ ಬಿರುಗಾಳಿಯಂತೆ ಬಂದಳು? ಜೀವನದಲ್ಲಿ ಕೇವಲ ಸುಖವಷ್ಟೇ ಅಲ್ಲ, ದುಃಖವೂ ಇರುತ್ತದೆ ಅಂತ ತೋರಿಸಲು ಹೀಗೆ ಮಾಡಿದಳೇ? ಎಲ್ಲವೂ ಪ್ರಶ್ನೆಗಳೇ...<br />
<br />
ಈ ಜನ್ಮದಲ್ಲಿ ನಾವು ಭೇಟಿಯಾಗುವುದು ಬೇಡ ಅಂತ ಬರಿದಿದ್ದೆ, ಅದು ಹಾಗೇ ಆಯಿತು. ಇದೇ ಚಿಂತೆಯಿಂದ ಸುಮಾರು ಇಪ್ಪತ್ತೈದು ವರ್ಷ ಕಳೆದಿದ್ದೇನೆ. ಪಡಬಾರದ ಯಾತನೆ ಪಟ್ಟಿದ್ದೇನೆ. ಮದುವೆಯಾಗಬೇಕು ಅಂತ ಅನಿಸಲೂ ಇಲ್ಲ. ಯಾವಾಗ ನಾನು ಹೋಗಿ ಅವಳನ್ನ ಸೇರುತ್ತೇನೆ, ನನ್ನ ಪ್ರಶ್ನೆಗಳಿಗೆ ಯಾವಾಗ ಉತ್ತರ ಪಡೆದುಕೊಳ್ಳುತ್ತೇನೆ ಅಂತ ಕಾದಿದ್ದೇನೆ. ಅಂದಿನಿಂದ ಇಂದಿನವರೆಗೂ ಪೆನ್ನು ಹಿಡೀದಾಗಲೆಲ್ಲ ಅವಳದೇ ಚಿತ್ರ ನನ್ನ ಕಣ್ಮುಂದೆ ಬರುತ್ತದೆ, ಎನೂ ಬರೆಯಲಾಗುತ್ತಿಲ್ಲ. ಆದರೆ ಇಂದು ನನ್ನ ಮನದ ಭಾವನೆಗಳನ್ನೆಲ್ಲ ಗೀಚಿದ್ದೇನೆ. ಆದಷ್ಟು ಬೇಗ ಅವಳನ್ನು ಸೇರುತ್ತೇನೆ ಅನಿಸುತ್ತಿದೆ ಈಗೀಗ, ಆಕಾಶದ ಕಡೆ ಮುಖ ಮಾಡಿದಾಗೆಲ್ಲ ಅಲ್ಲೆಲ್ಲೋ ಮಿನುಗುವ ನಕ್ಷತ್ರ ನನ್ನನ್ನೇ ಕೈಬೀಸಿ ಕರೆಯುವಂತೆ ಕಾಣುತ್ತದೆ. ಬಹುತೇಕ ಅವಳೇ ಇರಬೇಕು.<br />
ಇದೇ ನಾನು ಇಷ್ಟು ವರ್ಷ ಏನನ್ನೂ ಬರೆಯದಿರುವುದಕ್ಕೆ ಕಾರಣ. ಅಂದಿನ ಪಾಪಪ್ರಜ್ನೆ ಇಂದಿನವರೆಗೂ ನನ್ನನ್ನು ಕಾಡುತ್ತಿದೆ.<br />
<br />
****************************************************************<br />
<br />
ಇಂದಿನ ಪತ್ರಿಕೆಯ ಮೂಲೆಯಲ್ಲಿನ ಸುದ್ದಿ: ಅಂಕಣಕಾರ ವಿನೀತ್ ಕುಮಾರ್ ನಿಧನ<br />
ಅತೀ ಚಿಕ್ಕ ವಯಸ್ಸಿನ ಅಂಕಣಕಾರ ಪ್ರಸಿದ್ಧಿ ಪಡೆದಿದ್ದ ಅಲ್ಲದೇ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದ ಸಾಹಿತಿ ವಿನೀತ್ ಕುಮಾರ್ ನಿನ್ನೆ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರಿಗೆ ೫೩ ವಯಸ್ಸಾಗಿತ್ತು. ೧೯೯೦ ರ ಅವಧಿಯಲ್ಲಿ ಪ್ರಕಟವಾದ ಮಾತೆಯ ಮಡಿಲಲ್ಲಿ ಕೃತಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿತ್ತು.<br />
<br />
<span style="font-family: 'tunga';">ನವೆಂಬರ್ ೩ ರ "ಪಂಜು" ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾದ ಬರಹ.</span><br />
<a href="http://www.panjumagazine.com/?p=9186" rel="nofollow" style="background-color: white; color: #3b5998; cursor: pointer; font-family: Helvetica, Arial, 'lucida grande', tahoma, verdana, arial, sans-serif; font-size: 14px; line-height: 19.3199996948242px; text-decoration: none;" target="_blank">http://www.panjumagazine.com/?p=9186</a></div>
Motivation http://www.blogger.com/profile/08140925864934705325noreply@blogger.com1tag:blogger.com,1999:blog-5247965971580923628.post-88280513121583166762014-09-09T09:18:00.000-07:002014-09-09T09:18:09.105-07:00ಮಸಣದ ಹೂವು ೨:<div dir="ltr" style="text-align: left;" trbidi="on">
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">೧: </span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ಮಸಣದಲಿ </span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ಸತ್ತ ದೇಹಗಳಿಗೆ </span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ಗೋರಿ, </span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ನನ್ನ ಹೃದಯದಲಿ</span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ಸತ್ತ ನಿನ್ನ ನೆನಪುಗಳಿಗೆ</span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ಗೋರಿ.</span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;"><br /></span></span>
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">೨: </span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ನೀ ಕೊಂದದ್ದು</span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ಬರೀ ನನ್ನನ್ನಲ್ಲ</span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ಜನ್ಮ ತಳೆದು</span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ಬದುಕಬೇಕಿದ್ದ</span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ಅದೆಷ್ಟೋ</span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ಕವಿತೆಗಳನ್ನ.</span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;"><br /></span></span>
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">೩: </span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ನನ್ನ ಕವಿತೆಗಳಿಗೆ </span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ಮರುಹುಟ್ಟು</span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ಮಸಣದ</span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ಗೋರಿಗಳಲ್ಲಿ.</span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;"><br /></span></span>
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">೪: </span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ಮಸಣದಲ್ಲೂ</span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ಕವಿತೆ ಹುಟ್ಟಬಹುದು</span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ಅತೃಪ್ತ ಆತ್ಮಗಳು</span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ಜೋತೆ ಬೆರೆತಾಗ.</span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;"><br /></span></span>
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">೫: </span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ಮಸಣದಲಿ</span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ಆತ್ಮಗಳ</span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ಮಿಲನವಾದೊಡೆ</span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ಮುಕ್ತಿ, ಮುಂದೆ…</span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ಸ್ವರ್ಗವೋ.?</span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ನರಕವೋ.?</span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;"><br /></span></span>
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">೬: </span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ಬೀದಿಗುಂಟ</span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ಹೂ ಗಿಡವನ್ನೆಲ್ಲ</span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ಕೀಳುತ್ತಾ ಹೊರಟಿದ್ದ</span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ಪೂಜಾರಿಯ</span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ಕಂಡು ನಕ್ಕಿದ್ದು</span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ಮಸಣದ ಹೂವು.</span></span></div>
Motivation http://www.blogger.com/profile/08140925864934705325noreply@blogger.com0tag:blogger.com,1999:blog-5247965971580923628.post-51502835484312044172014-09-09T09:14:00.003-07:002014-09-09T09:14:49.379-07:00ಫೇಸ್ ಬುಕ್ ಮಾಯೆ:<div dir="ltr" style="text-align: left;" trbidi="on">
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ಏನ್ ಮಾಡ್ಲಿ:</span></span><br />
<span style="background-color: white; color: #37404e; font-family: Helvetica, Arial, 'lucida grande', tahoma, verdana, arial, sans-serif; font-size: 14px; line-height: 20px;"><br /></span>
<span style="background-color: white; color: #37404e; font-family: Helvetica, Arial, 'lucida grande', tahoma, verdana, arial, sans-serif; font-size: 14px; line-height: 20px;">ಮರೆಯಬೇಕು </span><br style="background-color: white; color: #37404e; font-family: Helvetica, Arial, 'lucida grande', tahoma, verdana, arial, sans-serif; font-size: 14px; line-height: 20px;" /><span style="background-color: white; color: #37404e; font-family: Helvetica, Arial, 'lucida grande', tahoma, verdana, arial, sans-serif; font-size: 14px; line-height: 20px;">ಎಂದುಕೊಂಡಾಗೆಲ್ಲ</span><br style="background-color: white; color: #37404e; font-family: Helvetica, Arial, 'lucida grande', tahoma, verdana, arial, sans-serif; font-size: 14px; line-height: 20px;" /><span style="background-color: white; color: #37404e; font-family: Helvetica, Arial, 'lucida grande', tahoma, verdana, arial, sans-serif; font-size: 14px; line-height: 20px;">ಮತ್ತೆ ಮತ್ತೆ </span><br style="background-color: white; color: #37404e; font-family: Helvetica, Arial, 'lucida grande', tahoma, verdana, arial, sans-serif; font-size: 14px; line-height: 20px;" /><span style="background-color: white; color: #37404e; font-family: Helvetica, Arial, 'lucida grande', tahoma, verdana, arial, sans-serif; font-size: 14px; line-height: 20px;">ಕಾಡುತ್ತಾಳೆ</span><br style="background-color: white; color: #37404e; font-family: Helvetica, Arial, 'lucida grande', tahoma, verdana, arial, sans-serif; font-size: 14px; line-height: 20px;" /><span style="background-color: white; color: #37404e; font-family: Helvetica, Arial, 'lucida grande', tahoma, verdana, arial, sans-serif; font-size: 14px; line-height: 20px;">ಪ್ರೋಫೈಲ್ ಪಿಕ್</span><br style="background-color: white; color: #37404e; font-family: Helvetica, Arial, 'lucida grande', tahoma, verdana, arial, sans-serif; font-size: 14px; line-height: 20px;" /><span style="background-color: white; color: #37404e; font-family: Helvetica, Arial, 'lucida grande', tahoma, verdana, arial, sans-serif; font-size: 14px; line-height: 20px;">ಚೇಂಜ್ ಮಾಡಿ.</span></div>
Motivation http://www.blogger.com/profile/08140925864934705325noreply@blogger.com0tag:blogger.com,1999:blog-5247965971580923628.post-52099813657390550302014-09-09T09:07:00.001-07:002014-09-09T09:07:55.689-07:00ನ್ಯಾಯ ಎಲ್ಲಿದೆ: <div dir="ltr" style="text-align: left;" trbidi="on">
ನ್ಯಾಯಾಲಯದ ಸಭಾಗೃಹ.ಎಲ್ಲ ವಕೀಲರು, ಮಾಧ್ಯಮದವರು, ಪೋಲಿಸರು, ಅಪರಾಧಿಗಳು ಎಲ್ಲರೂ ಹಾಜರಾಗಿದ್ದಾರೆ. ನ್ಯಾಯಾಧೀಶರು ಬರುತ್ತಿದ್ದಂತೆ ಎಲ್ಲರೂ ವಂದನೆಯನ್ನು ಸಲ್ಲಿಸುತ್ತಾರೆ. ಕಲಾಪವನ್ನು ಶುರು ಮಾಡುವಂತೆ ನ್ಯಾಯಾಧೀಶರು ಸೂಚನೆಯನ್ನು ನೀಡುತ್ತಾರೆ. ಆರೋಪಿ ಸ್ಥಾನದಲ್ಲಿ ಇದ್ದವರು ನಗರದ ನಾಮವಂತ, ನಿಷ್ಠಾವಂತ, ಕರ್ತವ್ಯ ದಕ್ಷ ಪೋಲಿಸ್ ಅಧಿಕಾರಿ. ಮೂರು ಜನರನ್ನು ಹತ್ಯೆಗೈದ ಅರೋಪವಿತ್ತು ಅವರ ಮೇಲೆ. ತಮ್ಮ ಅಪರಾಧವನ್ನು ತಾವೇ ಒಪ್ಪಿಕೊಂಡು ನ್ಯಾಯಾಲಯದಲ್ಲಿ ಹಾಜರಾಗಿದ್ದು ಅಲ್ಲದೇ, ತಮ್ಮ ಪರವಾಗಿ ಯಾವ ವಕೀಲರನ್ನೂ ನೇಮಿಸಿಕೊಳ್ಳದೇ ತಾವೇ ವಾದ ಮಾಡುವುದಾಗಿ ಹೇಳಿದ್ದು ಎಲ್ಲರಿಗೂ ಅಚ್ಚರಿಯನ್ನುಂಟು ಮಾಡಿತ್ತು. ಎದುರಿಗೆ ಇದ್ದದ್ದು ನಗರದ ಹೆಸರಾಂತ ವಕೀಲರು. ಈಗ ನಡೆಯುತ್ತಿದ್ದದ್ದು ನ್ಯಾಯಮಂದಿರದ ಇತಿಹಾಸದಲ್ಲೇ ಒಂದು ಮಹತ್ವಪೂರ್ಣ ಖಟಲೆಯಾಗಿತ್ತು. ಎಲ್ಲರ ಕಣ್ಣು ಕಿವಿಗಳು ಎದುರಿಗೆ ನಡೆಯುವ ವಾದ ವಿವಾದಗಳತ್ತ ನೆಟ್ಟಿತ್ತು.<br />
<br />
ಕೆಲ ದಿನಗಳ ಹಿಂದಷ್ಟೇ ನಗರದ ನಿರ್ಜನ ಪ್ರದೇಶದಲ್ಲಿ ಯುವತಿಯೊಬ್ಬಳನ್ನು ಬಲಾತ್ಕಾರ ಮಾಡಿ ಕೊಲೆಗೈಯ್ಯಲಾಗಿತ್ತು... ಒಂದೇ ದಿನದಲ್ಲಿ ಚುರುಕಾದ ತನಿಖೆ ನಡೆಸಿ ಎಲ್ಲ ಸಾಕ್ಷಾಧಾರದಿಂದ ಇವರೇ ಕೊಲೆಗೈಯಿದ್ದು ಎಂದು ತಿಳಿದ ಪೋಲಿಸ್ ಅಧಿಕಾರಿ ಮೂರು ಅಪರಾಧಿಗಳನ್ನ ನಡು ಬೀದಿಯಲ್ಲಿ ನೇಣು ಬಿಗಿದು ಹತ್ಯೆ ಮಾಡಿದ್ದರು. ಅವರೇ ಇಂದು ನ್ಯಾಯಾಲಯದಲ್ಲಿ ಅಪರಾಧಿ ಸ್ಥಾನದಲ್ಲಿ ನಿಂತಿರುವ ಅಧಿಕಾರಿ. ಮಾನಭಂಗ ಮಾಡಿ ಕೊಲೆ ಮಾಡಿದವರಲ್ಲಿ ಒಬ್ಬ, ನಗರದ ಪ್ರತಿಷ್ಠಿತ ಮಂತ್ರಿಯ ಪರಮ ಸ್ನೇಹಿತರ ಮಗ. ಅವನು ತನ್ನೆರಡು ಸ್ನೇಹಿತರ ಜೋತೆಗೂಡಿ ತನ್ನದೇ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದ ಯುವತಿಯೊಬ್ಬಳನ್ನ ಅಪಹರಿಸಿ ಹೇಯವಾಗಿ ಭೋಗಿಸಿ ಕೊಲೆಗೈಯ್ದಿದ್ದ. ಮಂತ್ರಿಗಳ ಗುರುತಿನ ವ್ಯಕ್ತಿಯೆಂದಮೇಲೆ ಆದಷ್ಟು ಬೇಗ ಪೋಲೀಸ್ ಅಧಿಕಾರಿಗೆ ಶಿಕ್ಷೆಯಾಗಬೇಕೆಂದು ವಕೀಲರಿಗೆ ಆದೇಶವಿತ್ತು. ಅದೇ ಗತ್ತಿನಲ್ಲಿ ಅವರು ವಾದ ಮಾಡಲು ಪ್ರಾರಂಭಿಸಿದ್ದರು.<br />
<br />
"ನ್ಯಾಯಮೂರ್ತಿಗಳಲ್ಲಿ ಮನವಿ... ಕಟಕಟೆಯಲ್ಲಿ ಆರೋಪಿ ಸ್ಥಾನದಲ್ಲಿ ನಿಂತಿರುವ ಪೋಲೀಸ್ ಅಧಿಕಾರಿ ತನ್ನ ಅಧಿಕಾರದ ಗತ್ತಿನಲ್ಲಿ ಅಮಾಯಕರಾದ ನನ್ನ ಮೂವರು ಕಕ್ಷೀದಾರರನ್ನ ಕೊಲೆಗೈಯ್ದಿದ್ದಾನೆ. ಅಧಿಕಾರದ ಮದದಿಂದ ಮನ ಬಂದಂತೆ ಕರ್ತವ್ಯ ನಿರ್ವಹಿಸುವ ಈತ ಅನೇಕ ಬಾರಿ ವರ್ಗಾವಣೆ ಮತ್ತು ಕೆಲಸ ಕಳೆದುಕೊಂಡಿದ್ದಾನೆ ಸಹ. ಸುಳ್ಳು ಸಾಕ್ಷಾಧಾರಗಳನ್ನು ನಿರ್ಮಿಸಿ ನನ್ನ ಕಕ್ಷೀದಾರರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ, ಅವರನ್ನು ನ್ಯಾಯಾಲಯಕ್ಕೆ ಒಪ್ಪಿಸದೇ ತಾನೇ ಅಮಾನುಷವಾಗಿ ನಡುಬೀದಿಯಲ್ಲಿ ನೇಣು ಬಿಗಿದು ಸಾಯಿಸಿದ್ದಾನೆ. ನಿಜವಾಗಿಯೂ ಆ ಮೂವರೇ ಕೊಲೆ ಮಾಡಿದ್ದಾರೆಯೇ, ಅಥವಾ ಒಬ್ಬನೇ ಕೊಲೆ ಮಾಡಿದ್ದಾನೆಯೇ ಇದ್ಯಾವುದನ್ನೂ ತಿಳಿಯದೇ ಅವರಿಗೆ ತಾನೇ ಶಿಕ್ಷೆ ವಿಧಿಸಿದ್ದಾನೆ. ಒಂದು ವೇಳೆ ಅವರೇ ಅಪರಾಧ ಮಾಡಿದ್ದಲ್ಲಿ ಅವರನ್ನು ನ್ಯಾಯಾಲಯಕ್ಕೆ ಒಪ್ಪಿಸಬಹುದಿತ್ತಲ್ಲವೇ, ಅದನ್ನು ಬಿಟ್ಟು ನನ್ನೊಬ್ಬ ಕಕ್ಷೀದಾರನ ಯಾವುದೋ ಹಳೇ ದ್ವೇಷದಿಂದ ಅವರನ್ನು ನಿರ್ಮಾನುಷವಾಗಿ ಕೊಂದಿದ್ದಾನೆ. ಹೀಗೆ ನಡುಬೀದಿಯಲ್ಲಿ ಅಪರಾಧಿಗಳನ್ನು ನೇಣಿಗೇರಿಸಿದ್ದು ನೋಡಿದರೇ ಈತ ತನ್ನ ಮಾನಸಿಕ ಸಂತುಲನವನ್ನು ಕಳೆದುಕೊಂಡಿದ್ದಾನೆ. ಈ ತರಹದ ಅಧಿಕಾರಿಗಳನ್ನ ಹೀಗೆ ಬಿಟ್ಟರೇ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತ ಸಿಕ್ಕ ಸಿಕ್ಕವರನ್ನೆಲ್ಲ ಕೊಲೆಗೈಯ್ಯುತ್ತಾನೆ ಅನ್ನುವುದರಲ್ಲಿ ಸಂದೇಹವಿಲ್ಲ. ಹಾಗಾಗಿ ನ್ಯಾಯಮೂರ್ತಿಗಳಲ್ಲಿ ನನ್ನ ಮನವಿ ಇಷ್ಟೇ... ಮೂವರನ್ನು ಹತ್ಯೆಗೈದ ಆರೋಪದ ಮೇಲೆ ಈ ಕರ್ತವ್ಯ ಭ್ರಷ್ಟ ಅಧಿಕಾರಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಕೇಳಿಕೊಳ್ಳುತ್ತೇನೆ."<br />
<br />
ಪೋಲೀಸ್ ಅಧಿಕಾರಿ ತನ್ನ ಹೇಳಿಕೆಯಲ್ಲಿ ಹೇಳಿದ್ದಿಷ್ಟೆ "ನಾನು ಆ ಅಮೂವರನ್ನೂ ಕೊಂದಿದ್ದು ನಿಜ, ಇದು ನನ್ನ ಅಧಿಕಾರದ ದುರುಪಯೋಗ ಅನ್ನುವುದೂ ನಿಜ. ನಾನು ಆ ಮೂವರನ್ನೂ ನೇಣಿಗೇರಿಸುವಾಗ ನನಗೆ ಹೀಗೆ ಅನಿಸಿದ್ದುಂಟು, ಆದರೆ ಆ ಮುಗ್ಧ ಬಾಲಿಕೆಯನ್ನ ಅಮಾನುಷವಾಗಿ ಭೋಗಿಸಿ ಹತ್ಯೆಗೈದ ಚಿತ್ರಣ ನನ್ನ ಕಣ್ಮುಂದಿತ್ತು. ಅಷ್ಟು ಹೇಯವಾಗಿ ಈ ಕೃತ್ಯವನ್ನು ಮಾಡಿದವರಿಗೆ ನಾನು ನೀಡಿದ ಶಿಕ್ಷೆ ಸರಿಯಾಗೇ ಇದೆ. ಆ ಬಾಲಕಿಯನ್ನು ಕೊಂಡು ಬೀಸಾಡಿದ್ದನ್ನ ನೋಡಿದವರಲ್ಲಿ ಈ ರೀತಿಯ ಜ್ವಾಲೆ ಕುದಿಯಲಿಲ್ಲ ಅಂದರೆ ಆತ ಗಂಡಸೇ ಅಲ್ಲ. ಅವರೆಲ್ಲ ಈ ಕೃತ್ಯವನ್ನು ಮಾಡಿದ್ದಾರೆ ಅನ್ನುವುದಕ್ಕೆ ಎಲ್ಲ ಸಾಕ್ಷಾಧಾರವೂ ಇದೆ ಅದನ್ನೆಲ್ಲ ನ್ಯಾಯಾಲಯಕ್ಕೆ ಒಪ್ಪಿಸಿದ್ದೇನೆ ಪರೀಕ್ಷಿಸಬೇಕು. ಇನ್ನು ವಕೀಲರು ಹೇಳಿದಂತೆ ಅವರು ಕೊಲೆ ಮಾಡಿಲ್ಲದಿರಬಹುದು ಅಥವಾ ಅವರನ್ನು ನ್ಯಾಯಾಲಯಕ್ಕೆ ಒಪ್ಪಿಸಬೇಕು ಅನ್ನುವುದಕ್ಕೆ ನಾನು ಹೇಳುವುದಿಷ್ಟೆ, ಅವರನ್ನು ನ್ಯಾಯಾಲಯಕ್ಕೆ ಒಪ್ಪಿಸಿ ಏನು ಮಾಡಬೇಕಿತ್ತು? ನಮ್ಮ ನ್ಯಾಯಾಲಯದ ಅವಸ್ಥೆ ನಮಗೆ ತಿಳಿದಿಲ್ಲವೇ? ಅವರಿಗೆ ಶಿಕ್ಷೆ ಆಗುತ್ತಿತ್ತೇ? ಆದರೂ ಎಷ್ಟು ವರ್ಶದ ನಂತರ? ಅಲ್ಲಿಯವರೆಗೂ ಅವರು ಜೈಲಿನಲ್ಲಿಯೇ ಇರುತ್ತಿದ್ದರೇ? ಅಥವಾ ಹೊರಗಡೆ ಹೋಗಿ ಮತ್ತಿಷ್ಟು ಅತ್ಯಾಚಾರಗಳನ್ನು ಮಾಡುತ್ತಿರಲಿಲ್ಲವೇ? ನಿಮಗೆ ಮಂತ್ರಿಗಳು ಜವಾಬ್ದಾರಿ ವಹಿಸಿದ್ದಾರೆ ಎಂದರೆ ಅಪರಾಧಿಗಳಿಗೆ ಶಿಕ್ಷೆ ಆಗದಂತೆ ಸುಳ್ಳು ಸಾಕ್ಷಿ ಸೃಷ್ಟಿಸಿ ಅವರನ್ನ ನಿರಪರಾಧಿ ಅಂತ ನೀವು ಸಾಬೀತುಪಡೀಸುತ್ತಿರಲಿಲ್ಲವೇ? ಅಪ್ಪಿ ತಪ್ಪಿ ಎಷ್ಟೊ ವರ್ಷಗಳ ನಂತರ ಶಿಕ್ಷೆಯಾದರೂ ಅಲ್ಲಿಯವರೆಗೆ ಆತ ಇನ್ನೆಷ್ಟು ಇಂಥಹ ಕೃತ್ಯವೆಸಗಬಹುದು.? ನಾನು ಅನೇಕ ಬಾರಿ ಕೆಲಸ ಕಳೆದುಕೊಂಡಿದ್ದು, ವರ್ಗಾವಣೆಯಾಗಿದ್ದು ನಿಜ, ಅದು ಕೇವಲ ನನ್ನ ಕರ್ತವ್ಯ ನಿಷ್ಠೆಯಿಂದಲೇ ಹೊರತು ಲೋಪದಿಂದಲ್ಲ. ಇಂದು ಒಬ್ಬ ಅಧಿಕಾರಿ ಪ್ರಾಮಾಣಿಕವಾಗಿ ಕರ್ತವ್ಯ ನಡೆಸಲು ಬಿಡುತ್ತಾರೆಯೇ?? ಒಬ್ಬ ಅಪರಾಧಿಯನ್ನು ಬಂಧಿಸುವ ಮೊದಲೇ ಆತನನ್ನು ಬಂಧಿಸದಂತೆ ಆದೇಶ ಬರುತ್ತದೆ. ಇನ್ನು ಬಂದಿಸಿ ಆತ ಅಪರಾಧಿ ಅಂತ ಸಾಬೀತುಪಡಿಸಲು ಪುರಾವೆಗಳನ್ನೆಲ್ಲ ಒದಗಿಸಿದರೂ, ನಿಮ್ಮಂಥ ವಕೀಲರು ಅದನ್ನೆಲ್ಲ ಸುಳ್ಳು ಸಾಬೀತುಪಡಿಸುತ್ತೆರಲ್ಲ. ಅಧಿಕಾರದಲ್ಲಿದ್ದವರಿಗೆ ಇದೆನು ಹೊಸದಲ್ಲ ಮತ್ತು ಕಷ್ಟವೂ ಅಲ್ಲ. ಇದು ನಮ್ಮಲ್ಲಿನ ನ್ಯಾಯ ವ್ಯವಸ್ಥೆ. ಹೀಗಿರುವಾಗ ಅಪರಾಧಿಗಳನ್ನ ನ್ಯಾಯಾಲಯಕ್ಕೆ ಒಪ್ಪಿಸಿ ನ್ಯಾಯಕ್ಕಾಗಿ ವರ್ಷಗಟ್ಟಲೇ ಹೆಣೆದಾಡಿ ಕೊನೆಗೆ ನ್ಯಾಯ ದೊರಕದೆ ಇದ್ದರೇ ಅಥವಾ ನ್ಯಾಯ ಸಿಗುವುದರೊಳಗೆ ಪೀಡಿತ ಕುಟುಂಬದವರು ಜೀವಂತವಾಗಿರುತ್ತಾರೆ ಅನ್ನುವ ಭರವಸೆಯೂ ಇಲ್ಲ. ಇಂಥಹ ಪರಿಸ್ಥಿತಿ ಇರುವಾಗ ನಾನು ಮಾಡಿರುವು ಸರಿಯಾಗೇ ಇದೆ, ನ್ಯಾಯ ಎಲ್ಲಿದೆ ಸ್ವಾಮಿ ಇಂದಿನ ಕಾಲದಲ್ಲಿ??? ಯಾರು ನ್ಯಾಯ ಒದಗಿಸುತ್ತಾರೋ ಇಲ್ಲವೋ ಗೊತ್ತಿಲ್ಲ ಆದರೆ ನಾನು ಆ ಹೆಣ್ಣಿಗೆ ಅವರ ಕುಟುಂಬದವರಿಗೆ ನ್ಯಾಯ ಒದಗಿಸಿದ್ದೇನೆ ಅನ್ನುವ ಸಮಾಧಾನ ನನಗಿದೆ.ನನ್ನಂತೆ ಎಲ್ಲರೂ ಕರ್ತವ್ಯ ನಿಷ್ಠರಾಗಿ ಕೆಲಸ ಮಾಡಿದರೆ ಅಪರಾಧಿಗಳಿಗೆ ಅಲ್ಲಲ್ಲೇ ಶಿಕ್ಷೆ ವಿಧಿಸಿದರೆ ಏನೂ ತಪ್ಪಿಲ್ಲ ಅನ್ನುವುದು ನನ್ನ ಅಭಿಪ್ರಾಯ. ಇನ್ನು ಅತ್ಯಾಚಾರಕ್ಕೊಳಗಾದವರ ಪರಿಸ್ಥಿತಿ ಏನೆನ್ನುವುದು ನಿಮಗೆ ತಿಳಿದಿದೆಯೇ?? ಮಾಧ್ಯಮದವರೋ ಅವರೇ ತಪ್ಪೆಸಗಿದ್ದಾರೆ ಅನ್ನುವಂತೆ ಮಾಧ್ಯಮದಲ್ಲಿ ಚಿತ್ರಿಸಿ ಅವರ ಮನೋ ಧೈರ್ಯವನ್ನು ಇನ್ನಷ್ಟು ಕುಗ್ಗಿಸುತ್ತಿದ್ದಾರೆ ಅಂತ ಅನ್ನಿಸುವುದಿಲ್ಲವೇ? ಅವರಿಗೆ ಮನೋಧೈರ್ಯವನ್ನು ತುಂಬುವುದನ್ನು ಬಿಟ್ಟು ಇನ್ನಷ್ಟು ಕುಗ್ಗುವಂತೆ ಮಾಡುವುದು ಎಷ್ಟರ ಮಟ್ಟಿಗೆ ಸರಿ? ನಿಜ ಹೇಳಬೇಕೆಂದರೆ ಅವರು ಪೀಡಿತರಲ್ಲ. ಈಗಿನ ಕಾಲದಲ್ಲಿ ದಿನಕ್ಕೊಬ್ಬರಂತೆ ಪ್ರಿಯಕರನನ್ನು ಬದಲಿಸುತ್ತ, ಅದೆಷ್ಟು ಜನರ ಜೋತೆ ದೇಹ ಹಂಚಿಕೂಳ್ಳುತ್ತಿರುವ ಅದೆಷ್ಟು ಹುಡುಗಿಯರಿಲ್ಲ, ಅವರಿಗಿಂತ ಇವರೇನು ಕೀಳಲ್ಲ. ನಾನು ಸಮಾಜಕ್ಕೆ ಹೇಳುವುದಿಷ್ಟೆ ಅತ್ಯಾಚಾರವೆಸಗಿದರೆಂದು ಯಾರೂ ಸಹನೆ ಕಳೆದುಕೊಳ್ಳಬೇಡಿ, ನಿಮಗೆ ನಿಮ್ಮ ಜೀವನದ ಅಧಿಕಾರವಿದೆ, ಅದನ್ನು ನೀವು ಸುಖದಿಂದ ಜೀವಿಸಿ. ಇವತ್ತು ನಡೆದಿದ್ದು ನಾಳೆ ಮರೆತುಬಿಡುತ್ತಾರೆ ಜನ. ಹೀಗಿರುವಾಗ ನಮ್ಮ ಮೇಲೆ ದೌರ್ಜನ್ಯ ನಡೆದಿದೆ ಎಂದು ಕೊರಗುತ್ತ ಜೀವಿಸುವುದೋ ಅಥವಾ ಆತ್ಮಹತ್ಯೆಗೆ ಪ್ರಯತ್ನಿಸುವುದು ಹೇಡಿಗಳ ಲಕ್ಷಣ. ನೀವು ಹೇಡಿಗಳಲ್ಲ, ಅತ್ಯಾಚಾರವೆಸಗಿದವರು ಹೇಡಿಗಳು ಅವರು ಆತ್ಮಹತ್ಯೆ ಮಾಡಿಕೊಳ್ಳಬೇಕು ನಿಜವಾಗಿ. ಕೈಲಾಗದ ನಾಮರ್ದರಂತೆ ಇಂಥಹ ಕೃತ್ಯವೆಸಗುವವರು ನಿಜವಾದ ಹೇಡಿಗಳು. ಇಲ್ಲಿ ಮಾನಭಂಗವಾಗುವುದು ಬಾಲಕಿಯರದ್ದಲ್ಲ, ತೃಷೆ ತೀರಿಸಿಕೊಳ್ಳಲು ಈ ಥರಹದ ಕೃತ್ಯವೆಸಗುವರದ್ದು. ಹೀಗಂತ ಸುಮ್ಮನೇ ಕುಳಿತುಕೊಳ್ಳಬೇಡಿ, ಹೋರಾಡಿ. ಇಂದಲ್ಲ ನಾಳೆ ನಿಮಗೆ ನ್ಯಾಯ ಸಿಗಬಹುದು. ಇಲ್ಲಿ ಸಿಗದಿದ್ದರೂ ಆ ಭಗವಂತನ ನ್ಯಾಯಮಂದಿರದಲ್ಲಿ ಖಂಡಿತ ನ್ಯಾಯ ಸಿಗುತ್ತದೆ. ಸಮಾಜ ಕೂಡ ಅವರನ್ನು ತಿರಸ್ಕರಿಸದೇ ಜೋತೆ ನೀಡಬೇಕು, ಆಗ ಅವರಿಗೂ ಮಾನಸಿಕ ಸಮಾಧಾನವಿರುತ್ತದೆ.<br />
<br />
ಅದೇ ಆ ಹೆಣ್ಣಿನ ಸ್ಥಾನದಲ್ಲಿ ಇದೇ ವಕೀಲರ ಮಗಳೋ, ತಂಗಿಯೋ ಅಥವಾ ಅವರ ಸಂಬಂಧದವರು ಯಾರಾದರೂ ಇದ್ದರೇ ಇವರು ಹೀಗೆ ವಾದಿಸುತ್ತಾ ಇದ್ದರಾ?? ಹೀಗೆ ಅಪರಾಧಿಗಳಿಗೆ ಕಠಿಣವಾದ ಶಿಕ್ಷೆ ವಿಧಿಸದೇ ನ್ಯಾಯಾಲಯದಲ್ಲಿ ವರುಷಗಳ ತನಕ ಏಳೆಯುತ್ತ ನಡೆದರೆ ಅಪರಾಧಿಗಳು ಹೊರಗಡೆ ಆರಾಮವಾಗಿ ಇರುತ್ತಾರೆ. ಇಂಥಹ ಕೃತ್ಯವೆಸಗುವವರಿಗೆ ನ್ಯಾಯಾಲಯದ ಯಾವುದೇ ಹೆದರಿಕೆಯೂ ಇರುವುದಿಲ್ಲ. ಅಪರಾಧಿಗಳು ಮತ್ತೆಂದೂ ಇಂಥಹ ಕೃತ್ಯವೆಸಗಿರಬಾರದು ಅಂಥಹ ಶಿಕ್ಷೆ ಅವರಿಗೆ ವಿಧಿಸಬೇಕು, ಅದೇ ಕೆಲಸವನ್ನು ನಾನು ಮಾಡಿದ್ದೇನೆ. ನಾನು ಮಾಡುತ್ತಿರುವುದು, ಮಾತನಾಡುತ್ತಿರುವುದು ಹುಚ್ಚನಂತೆ ಎಂದು ನಿಮಗನಿಸಿದರೆ ನಾನೋಬ್ಬ ಮನೋವೈಕಲ್ಯನೇ. ಪೀಡಿತರಿಗೆ ನ್ಯಾಯ ಒದಗಿಸುವುದು, ಅಪರಾಧಿಗಳಿಗೆ ಶಿಕ್ಷೆ ನೀಡುವುದು ತಪ್ಪು ಅಂದಾದರೆ ನಾನು ಮಾಡಿರುವುದು ತಪ್ಪೇ. ಜನರಿಗೆ ಪೋಲೀಸ್ ಅಧಿಕಾರಿಗಳ ಮೇಲೆ, ನ್ಯಾಯ ವ್ಯವಸ್ಥೆಯ ಮೇಲೆ ವಿಶ್ವಾಸವಿದೆ ಗೌರವವಿದೆ, ಅದನ್ನು ಕಾಪಾಡಿಕೊಳ್ಳುವುದು ತಪ್ಪು ಎಂದಾದರೆ ಹೌದು ನಾನು ತಪ್ಪು ಮಾಡಿದ್ದೇನೆ. ದುಡ್ಡಿನಾಸೆಯಿಂದ ಅನ್ಯಾಯದ ಪರವಾಗಿ ವಾದ ಮಾಡುವ ವಕೀಲರೇ ಸರಿ, ಅನ್ಯಾಯದ ವಿರುದ್ಧ ಹೋರಾಡುವುದು ತಪ್ಪು, ಕರ್ತವ್ಯ ನಿಷ್ಠೆ ತಪ್ಪು ಎಂದಾದರೆ ನಾನು ತಪ್ಪು ಮಾಡಿದ್ದೇನೆ. ಆ ತಪ್ಪಿಗೆ ನಾನು ಶಿಕ್ಷೆ ಅನುಭವಿಸಲು ತಯಾರಿದ್ದೇನೆ. ನ್ಯಾಯಮೂರ್ತಿಗಳೇ ನೀವು ನೀಡುವ ತೀರ್ಪು ಮಹತ್ವಪೂರ್ಣವಾಗಿದೆ.. ನೀವು ನೀಡುವ ತೀರ್ಪು ಕೇವಲ ನನಗಷ್ಟೇ ಅಲ್ಲ, ಅನ್ಯಾಯದ ವಿರುದ್ಧ ಹೋರಾಡುವ ಅನೇಕರ ಮೇಲೆ ಅವಲಂಬಿಸಿದೆ. ನಾನೋ ನೇಣಿಗೇರಲು ಸಿದ್ಧನಾಗಿದ್ದೇನೆ. ನೀವು ನೀಡುವ ತೀರ್ಪು ಅನೇಕರಿಗೆ ಅನ್ಯಾಯದ ವಿರುದ್ಧ ಕಿಡಿಕಾರಲು ಮೊದಲಾಗಬೇಕು ಅನ್ನುವುದಷ್ಟೆ ನನ್ನ ಮನವಿ. ನೀವು ಏನೇ ತೀರ್ಪು ನೀಡಿದರೂ ನಾನದನ್ನು ಆನಂದದಿಂದಲೇ ಸ್ವೀಕರಿಸುತ್ತೇನೆ. ಶಂಢರಂತೆ ಸಮಾಜದಲ್ಲಿ ನಡೆಯುವ ತಪ್ಪುಗಳಿಗೆ ತಲೆಯಾಡಿಸದೇ, ಕರ್ತವ್ಯ ನಿಷ್ಠನಾಗಿ ಪ್ರಾಣ ಕಳೆದುಕೊಂಡರೆ ಅದಕ್ಕಿಂಥ ಹೆಮ್ಮೆಯ ವಿಷಯ ಬೇರೊಂದಿಲ್ಲ ನನಗೆ."<br />
<br />
ಇಂಥಹ ಸನ್ನಿವೇಶಗಳು ಸಮಾಜದಲ್ಲಿ ನಡೆದರೆ, ನೀವು ಯಾವ ತೀರ್ಪನ್ನು ಅಪೇಕ್ಷಿಸುತ್ತಿದ್ದೀರಿ ಅಥವಾ ನೀವು ನ್ಯಾಯಮೂರ್ತಿ ಸ್ಥಾನದಲ್ಲಿ ಕುಳಿತಿದ್ದರೆ ಯಾವ ರೀತಿ ನ್ಯಾಯ ಒದಗಿಸುತ್ತಿದ್ದೀರಿ ಅನ್ನುವುದನ್ನ ಯೋಚಿಸಿ ಓದುಗರೆ...<br />
<div>
<br /></div>
</div>
Motivation http://www.blogger.com/profile/08140925864934705325noreply@blogger.com0tag:blogger.com,1999:blog-5247965971580923628.post-31086987446568454932014-08-07T00:36:00.000-07:002014-08-07T00:36:07.776-07:00ವಾಸ್ತವ:<div dir="ltr" style="text-align: left;" trbidi="on">
<span style="font-family: 'tunga';">ಅಲ್ಲೆಲ್ಲೋ ಕೊಳವೆ ಬಾವಿಯೊಳಗೆ ಬಿದ್ದ ಕೂಸು</span><br />
<span style="font-family: 'tunga';">ಇನ್ನೆಲ್ಲೋ ಧರೆ ಕುಸಿದು ಊರಿಗೂರೇ ಅಸ್ತ,</span><br />
<span style="font-family: 'tunga';">ಎಲ್ಲೆಡೆ ಮುಗ್ಧರ ಅಪಹರಣ ಮಾನಭಂಗ </span><br />
<span style="font-family: 'tunga';">ಮುಗಿಯದ ಲೂಟಿ ದರೋಡೆ ರಕ್ತಪಾತ.</span><br />
<div style="font-family: tunga;">
<br /></div>
<span style="font-family: 'tunga';">ಯಾರಿಗೆ ನೋವಿಲ್ಲ ಈ ಜಗದಲಿ</span><br />
<span style="font-family: 'tunga';">ಇಲ್ಲೆಲ್ಲರ ಕನಸುಗಳು ಕೊಚ್ಚಿ ಹೊಗಿವೆ ಮಣ್ಣಲಿ,</span><br />
<span style="font-family: 'tunga';">ಯಾರಿಗ್ಯಾರಿಲ್ಲ ಈ ಭುವಿಯಲಿ</span><br />
<span style="font-family: 'tunga';">ಕೊನೆವರೆಗೆ ಕಣ್ಣೀರೊಂದೇ ಜೋತೆಯಲಿ.</span></div>
Motivation http://www.blogger.com/profile/08140925864934705325noreply@blogger.com0tag:blogger.com,1999:blog-5247965971580923628.post-76506598694599597802014-08-03T08:39:00.000-07:002014-08-03T08:39:12.036-07:00ಸ್ನೇಹಿತರ ದಿನಕ್ಕೊಂದಿಷ್ಟು ಸಾಲುಗಳು:<div dir="ltr" style="text-align: left;" trbidi="on">
<span style="font-family: 'tunga';">ಕಣ್ಣೀರಿಡುವ</span><br />
<span style="font-family: 'tunga';">ಮೊದಲೇ</span><br />
<span style="font-family: 'tunga';">ಕಣ್ಣೊರೆಸುವುದು</span><br />
<span style="font-family: 'tunga';">ಗೆಳೆತನ.</span><br />
<div style="font-family: tunga;">
<br /></div>
<span style="font-family: 'tunga';">ಇಟ್ಟ ಹೆಜ್ಜೆಗೆ</span><br />
<span style="font-family: 'tunga';">ಜೋತೆಯಾಗಿ</span><br />
<span style="font-family: 'tunga';">ಹೆಜ್ಜೆ ಹೆಜ್ಜೆಗೂ</span><br />
<span style="font-family: 'tunga';">ಬಲವನೀಯುತ್ತ</span><br />
<span style="font-family: 'tunga';">ನಡೆವುದೇ</span><br />
<span style="font-family: 'tunga';">ಗೆಳೆತನ.</span><br />
<div style="font-family: tunga;">
<br /></div>
<span style="font-family: 'tunga';">ನಗುವಿನಲಿ</span><br />
<span style="font-family: 'tunga';">ನಗುವಾಗಿ</span><br />
<span style="font-family: 'tunga';">ನೋವಿನಲೂ</span><br />
<span style="font-family: 'tunga';">ನಗುವ </span><br />
<span style="font-family: 'tunga';">ಹೊಮ್ಮಿಸುವುದೇ</span><br />
<span style="font-family: 'tunga';">ಗೆಳೆತನ.</span><br />
<div style="font-family: tunga;">
<br /></div>
<span style="font-family: 'tunga';">ಗೆಲುವಿನಲಿ</span><br />
<span style="font-family: 'tunga';">ಜೋತೆಯಾಗಿ</span><br />
<span style="font-family: 'tunga';">ಸೋಲಿನಲಿ</span><br />
<span style="font-family: 'tunga';">ಬಲವಾಗಿ</span><br />
<span style="font-family: 'tunga';">ಜೋತೆಯಿರುವುದೇ</span><br />
<span style="font-family: 'tunga';">ಗೆಳೆತನ.</span><br />
<div style="font-family: tunga;">
<br /></div>
<span style="font-family: 'tunga';">ಲೆಟೆಸ್ಟ್ ಒನ್:</span><br />
<span style="font-family: 'tunga';">ಪಾಸಾದರೂ</span><br />
<span style="font-family: 'tunga';">ಫೇಲಾದರೂ</span><br />
<span style="font-family: 'tunga';">ಎಣ್ಣೆ ಹೊಡೆಯಲು</span><br />
<span style="font-family: 'tunga';">ಕರೆಯುವುದೇ</span><br />
<span style="font-family: tunga;">ಗೆಳೆತನ...</span></div>
Motivation http://www.blogger.com/profile/08140925864934705325noreply@blogger.com0tag:blogger.com,1999:blog-5247965971580923628.post-71852451024595981712014-08-03T08:24:00.000-07:002014-08-06T07:17:02.158-07:00ಪಾಪಿ ದುನಿಯಾ: <div dir="ltr" style="text-align: left;" trbidi="on">
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEhGT6XTHvxXeUvC4CE3kr24KM7An8OdxU7J2V-um0tSnz54reX2aq1foocEWlQuE5TLx5yMGgNMtabp2uMQVMz9cW1XCwRRDoFa9I9QsgCJcwXS6MW1KOXeDyhBPi-vclDGg-jMG0wKUoo/s1600/paapi.jpg" imageanchor="1" style="clear: left; float: left; margin-bottom: 1em; margin-right: 1em;"><img border="0" src="https://blogger.googleusercontent.com/img/b/R29vZ2xl/AVvXsEhGT6XTHvxXeUvC4CE3kr24KM7An8OdxU7J2V-um0tSnz54reX2aq1foocEWlQuE5TLx5yMGgNMtabp2uMQVMz9cW1XCwRRDoFa9I9QsgCJcwXS6MW1KOXeDyhBPi-vclDGg-jMG0wKUoo/s1600/paapi.jpg" height="320" width="270" /></a></div>
<span style="font-family: 'tunga';"><br /></span>
<span style="font-family: 'tunga';"><br /></span>
<span style="font-family: 'tunga';"><br /></span>
<span style="font-family: 'tunga';"><br /></span>
<span style="font-family: 'tunga';"><br /></span>
<span style="font-family: 'tunga';"><br /></span>
<span style="font-family: 'tunga';"><br /></span>
<span style="font-family: 'tunga';"><br /></span>
<span style="font-family: 'tunga';"><br /></span>
<span style="font-family: 'tunga';"><br /></span>
<span style="font-family: 'tunga';"><br /></span>
<span style="font-family: 'tunga';"><br /></span>
<span style="font-family: 'tunga';"><br /></span>
<span style="font-family: 'tunga';"><br /></span>
<span style="font-family: 'tunga';"><br /></span>
<span style="font-family: 'tunga';"><br /></span>
<span style="font-family: 'tunga';">ನನ್ನವರು ನನ್ನವರೆಂಬ ಭಾವವಿಹುದು ಮನದಲ್ಲಿ</span><br />
<span style="font-family: 'tunga';">ತನ್ನದೊಂದಾದರೆ ಸಾಕು ಎನ್ನುವ ಮನುಜರಿಲ್ಲಿ,</span><br />
<span style="font-family: 'tunga';">ಯಾರಿಗೆ ಯಾರಿಲ್ಲ ಈ ಜಗದಲಿ</span><br />
<span style="font-family: 'tunga';">ನನ್ನವರಾರಿಲ್ಲ ಈ ಪಾಪಿ ಲೋಕದಲಿ.</span><br />
<div style="font-family: tunga;">
<br /></div>
<span style="font-family: tunga;">ದ್ವೇಷ</span><span style="font-family: 'tunga';"> ಅಸೂಯೆಗಳೊಂದೆ ತುಂಬಿಹುದು</span><br />
<span style="font-family: 'tunga';">ನೋವಿನಾ ಕೂಗು ಯಾರಿಗಿಲ್ಲಿ ಕೇಳದು,</span><br />
<span style="font-family: 'tunga';">ಅತ್ಯಾಚಾರ ಅನಾಚಾರಗಳು ನಡೆಯುತಿದು</span><br />
<span style="font-family: 'tunga';">ನೋಡಿಯೂ ಜನರ ಕಣ್ಣು ಕುರುಡಾಗಿಹುದು.</span><br />
<div style="font-family: tunga;">
<br /></div>
<span style="font-family: 'tunga';">ಮುಗಿಲ ಚುಂಬಿಸಿದೆ ಆಕ್ರಂದನ</span><br />
<span style="font-family: 'tunga';">ಮನದೊಡಲ ನೋವು ಹೊರಹೊಮ್ಮಿ.</span><br />
<span style="font-family: 'tunga';">ಕಾಮುಕರ ತಾಂಡವ ನರ್ತನ</span><br />
<span style="font-family: 'tunga';">ಬಲಿಯಾಗುತಿದೆ ಜೀವ ರಕ್ತ ಚಿಮ್ಮಿ.</span><br />
<div style="font-family: tunga;">
<br /></div>
<span style="font-family: 'tunga';">ಕಷ್ಟದಲಿ ಹೆಗಲಿಗೆ ಹೆಗಲಾಗಿ</span><br />
<span style="font-family: 'tunga';">ಕಂಬನಿಯ ಒರೆಸುವ ಶಕ್ತಿ ಯಾರಿಗಿಲ್ಲ,</span><br />
<span style="font-family: 'tunga';">ನೋವಿನಲಿ ಪಾಲುದಾರರಾಗಿ</span><br />
<span style="font-family: 'tunga';">ಆಸರೆಯಾಗುವ ಸಂಯಮವಿಲ್ಲ.</span><br />
<div style="font-family: tunga;">
<br /></div>
<span style="font-family: 'tunga';">ಲೋಕದ ವ್ಯಥೆಯ ಮೂಲೆ ಗುಂಪಾಗಿಸಿ</span><br />
<span style="font-family: 'tunga';">ಮೌನಕೆ ಶರಣಾಗಿದೆಯಿಲ್ಲಿ ಎಲ್ಲರ ಮನ,</span><br />
<span style="font-family: 'tunga';">ನೋವ ಕಂಬನಿಯನ್ನೆಲ್ಲ ಉದರದೊಳಿರಿಸಿ</span><br />
<span style="font-family: 'tunga';">ನಗುವ ಮುಖವಾಡ ಧರಿಸಿ ನಡೆದರೆ ಜೀವನ.</span><br />
<div style="font-family: tunga;">
<br /></div>
<span style="font-family: 'tunga';">ಯಾರಿಗೆ ಯಾರಿಲ್ಲ ಈ ಜಗದಲಿ</span><br />
<span style="font-family: tunga;">ನನ್ನವರಾರಿಲ್ಲ ಈ ಪಾಪಿ ಲೋಕದಲಿ...</span></div>
Motivation http://www.blogger.com/profile/08140925864934705325noreply@blogger.com0tag:blogger.com,1999:blog-5247965971580923628.post-82600557861711018702014-07-25T23:31:00.000-07:002014-07-25T23:31:16.678-07:00ಮಸಣದ ಹೂವು:<div dir="ltr" style="text-align: left;" trbidi="on">
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">೧: </span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ಮಸಣದಲಿ</span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ಸತ್ತ ದೇಹಗಳಿಗೆ</span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ಗೋರಿ,</span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ನನ್ನ ಹೃದಯದಲಿ</span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ಸತ್ತ ನಿನ್ನ ನೆನಪುಗಳಿಗೆ</span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ಗೋರಿ.</span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;"><br /></span></span>
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">೨: </span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ನೀ ಕೊಂದದ್ದು</span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ಬರೀ ನನ್ನನ್ನಲ್ಲ</span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ಜನ್ಮ ತಳೆದು</span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ಬದುಕಬೇಕಿದ್ದ</span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ಅದೆಷ್ಟೋ</span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ಕವಿತೆಗಳನ್ನ.</span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;"><br /></span></span>
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">೩: </span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ನನ್ನ ಕವಿತೆಗಳಿಗೆ </span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ಮರುಹುಟ್ಟು</span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ಮಸಣದ</span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ಗೋರಿಗಳಲ್ಲಿ.</span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;"><br /></span></span>
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">೪: </span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ಮಸಣದಲ್ಲೂ</span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ಕವಿತೆ ಹುಟ್ಟಬಹುದು</span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ಅತೃಪ್ತ ಆತ್ಮಗಳು</span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ಜೋತೆ ಬೆರೆತಾಗ.</span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;"><br /></span></span>
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">೫: </span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ಮಸಣದಲಿ</span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ಆತ್ಮಗಳ</span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ಮಿಲನವಾದೊಡೆ</span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ಮುಕ್ತಿ, ಮುಂದೆ…</span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ಸ್ವರ್ಗವೋ.?</span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ನರಕವೋ.?</span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;"><br /></span></span>
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">೬: </span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ಬೀದಿಗುಂಟ</span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ಹೂ ಗಿಡವನ್ನೆಲ್ಲ</span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ಕೀಳುತ್ತಾ ಹೊರಟಿದ್ದ</span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ಪೂಜಾರಿಯ</span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ಕಂಡು ನಕ್ಕಿದ್ದು</span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ಮಸಣದ ಹೂವು.</span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;"><br /></span></span>
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;"><br /></span></span>
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">ಜುಲೈ ೧೪ ರ "ಪಂಜು" ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.</span></span><br />
<span style="color: #37404e; font-family: Helvetica, Arial, lucida grande, tahoma, verdana, arial, sans-serif;"><span style="font-size: 14px; line-height: 20px;">http://www.panjumagazine.com/?p=7975</span></span></div>
Motivation http://www.blogger.com/profile/08140925864934705325noreply@blogger.com0tag:blogger.com,1999:blog-5247965971580923628.post-33428239553864839062014-07-25T22:48:00.000-07:002014-07-25T22:48:51.763-07:00ಹೀಗೆ ಸುಮ್ಮನೆ: ಭಾಗ ೧:<div dir="ltr" style="text-align: left;" trbidi="on">
<b>ಹೀಗೆ ಸುಮ್ಮನೆ 1:</b><br />
ಶಾಮಲಕ್ಕೋ ಸುದ್ದಿ ಗೊತ್ತಾತನೇ....<br />
ಎಂತದೆ ಗಿರಿಜೇ... ಎಂತಾತೆ??<br />
<br />
ಶಂಭು ಹೆಗಡ್ರ ಮನೆ ಸೀಮಾ ಒಡೋತಡಲೆ...<br />
ಹೌದನೇ....! ಯಂಗೆ ಮುಂಚೆನೆ ಗೊತ್ತಿತು... ಇದು ಓಡೋಪುದೆ ಹೇಳಿ... ನೋಡಕಾಗಿತ್ತು ಪಾರ್ವತಕ್ಕನ ವಯ್ಯಾರವ, ಯಮ್ಮನೆ ಕೂಸು ಅಂದ್ರೆ ಬಂಗಾರ ಹೇಳಿ ತಲೆ ಮೇಲೆ ಹೊತ್ಕಂಡು ತಿರಗ್ತಿತ್ತು.<br />
<br />
ಹುಶಾರೆ ಮಾರಾಯ್ತಿ ನಿಂಗೂ ಮಗಳೆಯಾ...!<br />
ಇಲ್ಯೆ ಗಿರಿಜೆ... ಯಮ್ಮನೆ ಕೂಸು ಹಂಗೆಲ್ಲಾ ಮಾಡ್ತೇ ಇಲ್ಲೆ. ಅದ್ಕೆ ಹುಡುಗ್ರ ಕಂಡ್ರೇ ಆಗ್ತಿಲ್ಲೆ. ತಾನಾತು ತನ್ನ ಓದಾತು. ಅಷ್ಟೆಯಾ....!<br />
.<br />
.<br />
.<br />
.<br />
.<br />
.<br />
.<br />
.<br />
<br />
ಓ ಗಿರಿಜಕ್ಕೋ....... ಆಸ್ರಿ ಆತನೇ...??<br />
ಆತೇ.. ನಿಂಗಳದ್ದಾತಾ???<br />
<br />
ಹೋ.. ಅವಾಗೇ ಮುಗತ್ತು.. ಇವ್ರಿಗೆ ಬಗೆಲಿ ಕುಮ್ಟೆಗೆ ಹೋಗಕಾಗಿತ್ತು, ಬೇಗ್ನೆ ಮುಗಸ್ಕಂಡು ನಡೆದ್ರು..... ಸುದ್ದಿ ಗೊತ್ತಾತನೇ???<br />
ಎಂತದೇ...!!!<br />
ಶಾಮಲನ ಮಗಳು ಮನೆಗೇ ಬಂದಿಲ್ಯಡ, ಎರಡು ದಿನಾ ಆತಡ.... ಯಾರ್ದೋ ಜೋತೆ ಓಡೋತು ಹೇಳ್ತಾ ಇದ್ವಪ...!!!<br />
*******<br />
<br />
<b>ಹೀಗೆ ಸುಮ್ಮನೆ 2:</b><br />
<br />
ಜಪಾನಿ ಮದುಮಕ್ಳ ಫಸ್ಟ್ ನೈಟ್ ನಡೀತಾ ಇತ್ತಡ....!!!<br />
<br />
ಗಂಡ: ಸುತಾಆಆಕಿ<br />
ಹೆಂಡ್ತಿ: ಕೊವಾನಿನಿ<br />
ಗಂಡ: ತೊಕಾ ಅಂಜಿ ರೊಡಿ ರೋಮೊ ಹೊಯಾ ಯಾಕೊ<br />
<br />
ಹೆಂಡ್ತಿ ಕಾಲೂರಿ ಹೇಳ್ತಡಾ<br />
.<br />
.<br />
ಮಿಮಿ ಯಾವೊ ನಾ ಮಿಮಿ ಕಿನ ತಿಮ್ ತಿನುಕೂಜಿ<br />
ಗಂಡ: ನಾ ಮಾಯಿಒ ಕಿನಾ ತಿಮ್<br />
ಹೆಂಡ್ತಿ: ಸು ಕಿ ಕಿನಾ ಮಾತೊ<br />
ಗಂಡ: ಸಾಕೋ ತೀತೀ ಯಾನಿ<br />
.<br />
.<br />
.<br />
.<br />
.<br />
ಹೆಂಡ್ತಿ:<br />
.<br />
.<br />
.<br />
.ಮ್ ಮ್ ಮ್ ಮ್ ಮ್ ಮ್ ಮ್<br />
.<br />
.<br />
.<br />
.<br />
.<br />
ಗಂಡ: ಯೇ ಯೇ ಯೇ...<br />
.<br />
.<br />
.<br />
.<br />
.<br />
<br />
ಎಂತದ್ರಾ ಮಾಯಾಯ್ರೇ... ಹುಡುಗ್ರ ಶೋಕಿ ನೋಡ್ರಾ...<br />
ಎಂತಾ ತಿಳಿತಿಲ್ಲೆ ಬಿಡ್ತಿಲ್ಲೇ....<br />
ಬರೀ ಫಸ್ಟ್ ನೈಟ್ ಹೇಳಿದ್ದೇ ತಡಾ<br />
ಪೂರಾ ಮೇಸೆಜ್ ಓದಿ ಮುಗಸಿದ್ದಾ... :) :) :)<br />
******<br />
<br />
<b>ಹೀಗೆ ಸುಮ್ಮನೆ 3:</b><br />
ಯಾರ್ಗಾದ್ರೂ ಬೆಂಗಳೂರು ಪುಣೆ, ಪುಣೆ ಬೆಂಗಳೂರು ಮಲ್ಟಿ ಎಕ್ಸೆಲ್ ಬಸ್ ಅನುಭವಾ ಇದ್ದನ್ರಾ??<br />
.<br />
.<br />
.<br />
ಇಲ್ಯಾ<br />
.<br />
.<br />
.<br />
ಹೇಳ್ತೆ.. ಕೇಳ್ಕಳಿ<br />
.<br />
.<br />
ಬಸ್ ಹೊರಡದು ಸಂಜೆ ಐದಕ್ಕೆ, ಬಂದ್ ಮುಟ್ಟದು ಬೆಳಿಗ್ಗೆ ಹತ್ತಕ್ಕೆ.<br />
ದರಿದ್ರ ಮುಂಡೇವು ರಾತ್ರಿ ಉಂಬುಲೆ ನಿಲ್ಸ್ ದಾಗ ಎಂತೆಂತಾ ತಿಂತ್ವೇನಾ... ಬೆಳಿಗ್ಗೆ ಡ್ರೈವರ್ ಬಡ್ಡೀಮಗಾ ಬೇಗಾ ಗಾಡಿನೂ ನಿಲ್ಲಸ್ತ್ನಿಲ್ಲೆ. ಏಳ್ ಗಂಟೆ ಆಪುದೇ ತಡಾ.ಆ..ಆ..<br />
.<br />
.<br />
.<br />
ಬಿಸಿ ಬಿಸಿ ಗಾಳಿ ಬಪ್ಪುಲೆ ಸುರು ಆಗ್ತು, ಬಗೆಲಿ ಕಿವಿ ನೆಟ್ಟಗ್ ಮಾಡಿದ್ರೆ ಟುರ್ ಟುರ್ ಶಬ್ಧಾನೂ ಕೇಳಲಕ್ಕು.<br />
ಕಿಟಕಿನೂ ತೆರುಲೆ ಬತ್ತಿಲ್ಲೆ. ತಡಕಂಬುಲೆ ಆಗ್ತಿಲ್ಯೋ ಮಾರಾಯ್ರೇ... ಅನುಭವಿಸ್ದ್ದಕ್ಕೆ ಗೊತ್ತು.<br />
"ಸ್ಲೀಪ್ ಲೈಕ್ ಅ ಬೇಬಿ" ಬೋರ್ಡ್ ಬೇರೆ.<br />
******<br />
ಹೀಗೆ ಸುಮ್ಮನೆ 4:<br />
ಬ್ರೇಕಿಂಗ್ ನ್ಯೂಸ್:<br />
ಮಳೆಗಾಗಿ ಕಪ್ಪೆಗಳ ಮದುವೆ;ಕೋರ್ಟಿಗೆ ಹೋದ ಹೆಣ್ಣು ಕಪ್ಪೆ.<br />
.<br />
.<br />
.<br />
.<br />
ಎಂತಕ್ಕೆ ಕೇಳ್ತ್ರಾ??<br />
.<br />
.<br />
.<br />
"ಯನ್ ಗಂಡಂಗೆ ಮುಂಚೆನೆಯಾ ಮದ್ವೆ ಆಗಿತ್ತು, ಜನಾ ಎಲ್ಲಾ ಹಿಡ್ಕಂಡೋಗಿ ಎರಡನೇ ಮದುವೆ ಮಾಡಿದ್ದ. ಯಂಗೆ ಡೈವರ್ಸೂ ಕೊಡದೆ ಅದೆಂಗೆ ಎರ್ಡನೇ ಮದುವೆ ಆದ" ಹೇಳಿ ಕೋರ್ಟಿಗೆ ಹೋಯ್ದಡಾ ಹೆಣ್ ಕಪ್ಪೆ.<br />
******<br />
<br />
<b>ಹೀಗೆ ಸುಮ್ಮನೆ 5:</b><br />
<br />
ಕೂಸು: ಅವಂಗೆ ಒಳ್ಳೇ ಜಾಬ್ ಇದ್ದು, ಬೈಕ್ ಇದ್ದು, ಮನೆ ಇದ್ದು...<br />
ನಿನ್ನತ್ರ ಎಂತಾ ಇದ್ದಾ...???<br />
ಮಾಣಿ: ನನ್ನತ್ರ...<br />
.<br />
.<br />
.<br />
.<br />
.<br />
.<br />
.<br />
.<br />
ಯಂಗಳದ್ದು ಐದು ಎಕ್ರೇ ಅಡ್ಕೆ ತೋಟಾ ಇದ್ದು...<br />
ಕೂಸು: ನೀ ಹೆಂಗೇ ಇದ್ರೂವಾ ನಾ ನಿನ್ನೇ ಕಟ್ಕತ್ನಾ... ಅಪ್ಪಯ್ಯಂಗೆ ಹೇಳ್ತಿ, ಕಟ್ಕಂಬುದಾದ್ರೆ ಇವನ್ನೆಯಾ ಹೇಳಿ... ಅಕ್ಕಾ.<br />
******<br />
<br />
<b>ಹೀಗೆ ಸುಮ್ಮನೆ 6:</b><br />
ಯಶೋದಕ್ಕೋ... ಎಂತಾ ಮಾಡ್ತಾ ಇದ್ಯೇ.....??<br />
ಈಗಷ್ಟೇ ಆಸ್ರೀ ಮುಗಸ್ಕಂಡು ಮುಸುರೆ ತಿಕ್ಕುಲೆ ಹೊಂಟಿದ್ನೇ..<br />
ಹೌದ..... ಕಡಿಗೆ ಶಾಮಲನ ಮಗಳ್ ಸುದ್ದಿ ಏನಾರು ತಿಳತ್ತನೇ??<br />
.<br />
.<br />
.<br />
.<br />
ಕೊನೆಗೌಡನ ಮಗನ್ನ ಕಟ್ಕಂಡು ಹೋಯ್ದು ಹೇಳ್ತಿದ್ವಪ... ಅವನ ಮನೆಲಿ ೯೦ ಕ್ವಿಂಟಾಲ್ ಅಡ್ಕೆ ಇದ್ದಿತ್ತು ಹೇಳಿ ಸುದ್ದಿಯಾಗಿತ್ತು.<br />
.<br />
.<br />
೯೦ ಕ್ವಿಂಟಲ್ಲಾ....??? ನಿಂಗ್ ಯಾರ್ ಹೇಳಿದ್ವೆ??<br />
.<br />
ಕೆಳಗಿನ ಮನೆ ಮಾಣಿ ಇದ್ನಲೇ ವಿಘ್ನೇಶಾ ಅಂವ ಹೇಳ್ತಾ ಇದ್ನಪ.<br />
ಹಂಗಿದ್ರೆ ಸರಿನೆಯಾ.... ಎಲ್ಲಾರು ಹಾಳಾಗಿ ಹೊಯ್ಕಳ್ಲಿ....ಸರಿ ಯಂಗೂ ಬಗೆಲಿ ಕೆಲ್ಸ ಇದ್ದು. ಸಿಗುವಾ.<br />
******<br />
<br />
<b>ಹೀಗೆ ಸುಮ್ಮನೆ 7:</b><br />
ಹೋಯ್ ಆಸ್ರಿಗೆ ಆತನ್ರಾ...<br />
ಸುಬ್ಬಾ ಭಟ್ರು... ಬನ್ರಾ... ಕಾಣ್ತೇ ಇಲ್ಯಲ್ರೋ.. ಕೂತ್ಕಳಿ ಆಸ್ರಿಗೆ??<br />
ಆಸ್ರಿ ಎಲ್ಲಾ ಬ್ಯಾಡ್ದಾ... ಮುಗಸ್ಕಂಡೇ ಬಂದೀ.. ಬಗೆಲಿ ಕವಳದ್ ಚಂಚಿ ಕೊಡು ನೋಡ್ವಾ..<br />
.<br />
.<br />
.<br />
.<br />
ಅಲ್ಲಾ ಸುಬ್ಬಾ ಭಟ್ರು ಕಾಣುದೆ ಅಪರೂಪ ಆಗೋತು...<br />
ಹೌದ್ರಾ ... ಬಜೆಟ್ ಅದೂ ಇದೂ ಹೇಳಿ ಬಪ್ಪುಲೇ ಆಯ್ದಿಲ್ಲೆ.. ಮತ್ತೆ ರಾತ್ರಿಗೆ ಫೂಟ್ ಬಾಲ್ ಮ್ಯಾಚ್ ಬೇರೆ ಇರ್ತಲಾ... ಯಮ್ಮನೆ ಮಾಣಿ ಹಾಯ್ಕಂಡು ಕುತ್ಕತ್ತಾ.. ಯಾನೂ ನೋಡ್ತಿ.. ಯಂಗಕ್ಕೆ ಎಂತ ತಿಳಿತಿಲ್ಯಾ ಮಾರಯಾ.. ಒಂದ್ ಬಾಲ್ ಇಟ್ಕಂಡು ಬಯಲ್ ತುಂಬಾ ಒಡ್ತ್ವಪಾ.. ಕೆಂಪ್ ಕಾರ್ಡು ಹಳದಿ ಕಾರ್ಡು ಹೇಳಿ ಯಂಗಳ್ ಕಡೆ ರೇಶನ್ ಕಾರ್ಡ ಇದ್ದಂಗೆ ಅದೆಂತೋ ತೋರ್ಸ್ತಾ.... ಯಾ ಎಂತಾ ಹೇಳ್ತಿ ಅಂದ್ರೆ ಹಗಲಿಗೆ ಆಡುದ್ ಬಿಟ್ಕಂಡು ರಾತ್ರಿ ಹನ್ನೆರಡಕ್ಕೆಲ್ಲಾ ಆಡ್ತಾ ಕುತ್ಕತ್ವಪಾ.. ಎಂತಾ ಹೇಳದು ಬಡ್ಡಿಮಕ್ಕಕ್ಕೆ..<br />
<br />
ಮತ್ತೆ ಬಜೆಟ್ ಎಂತಾ ಆತಾ?? ನಿಂಗಳದ್ದು ಅಡ್ಕೆ ಕೊಯ್ಲು ಚಲೋ ಆಯ್ದು ಹೇಳ್ತಿದ್ನಪಾ ಮಾಣಿ, ಮೊನ್ನೆ ಮೇಲ್ನ್ ಕೇರಿ ಶಾಂಭಟ್ರ್ ಮಗಳ ಮದ್ವೆಲಿ ಸಿಕ್ಕಿದ್ನಾಗಿತ್ತು...<br />
ಎಂತಾ ಬಜೆಟ್ಟೂ ಇಲ್ಲೆ, ಮಣ್ಣೂ ಇಲ್ಲೆ... ಮೊನ್ನೆನೆಯಾ ಗೌಡಾ ರೈಲ್ ಬಿಟ್ಟಿನಪ್ಪಾ, ಅದು ಹಳಿ ಮೇಲ್ ಓಡ್ತಾ ಇಲ್ಲಾ ಹಳಿ ಇಲ್ದೆಗಿದ್ದೆ ಓಡ್ತಾ ಗೊತ್ತಿಲ್ಲೆ.. ನಿನ್ನೆ ಅವಾ ಜೆಟ್ಲಿ ಒಂದಿಷ್ಟು ಎನೆನೋ ಹೇಳಿನಪಾ ನೋಡ... ಅವಂಗೆ ಒಂದ್ ತಾಸ್ ನಿತ್ಕಂಬಲೂ ಆಗ್ತಿಲ್ಲೆ, ಒದುಲೆ ಶುರು ಮಾಡಿದ್ ಕೂಡ್ಲೆಯಾ ಬೆನ್ನು ನೋಯುಲೆ ಶುರು ಆತಡಾ... ಯಂಗಳ್ ಕಡೆ ಶಾಲೆಗ್ ಹೋಪಾ ಮಕ್ಳಿಗೆ ಓದುಲೆ ಶುರು ಮಾಡ್ದ ಕೂಡ್ಲೆಯಾ ನಿದ್ದ್ ಬಪ್ಪುಲ್ ಶುರು ಆಗ್ತು ಹಂಗೆಯಪಾ... ಅಡ್ಕೆ ರೇಟು ಜಾಸ್ತಿ ಆಯ್ದು ಹೇಳಿ ಅವಾ ತಂಬಾಕು ಪಾನ್ ಮಸಾಲಾ ಹೇಳಿ ಎಲ್ಲದ್ರ ರೇಟೂ ಜಾಸ್ತಿ ಮಾಡಿಗಿದ್ದ... ಯಮ್ಮನೆ ಅಡ್ಕೆಯಾ ಮುಂಚೆನೆ ಕೊಟ್ಟಾಕಿದ್ನ ಮಾಣಿ.. ಯಾ ಎಷ್ಟ್ ಹೇಳಿಗಿದ್ದಿ ಕೊಡಡ್ದಾ ಮಾರಾಯ, ಆಮೇಲೆ ಕೋಟ್ರಾತು, ರೇಟ್ ಬತ್ತು ಹೇಳಿ... ಯಂಗಳ್ ಮಾತು ಯಾರ್ ಕೇಳ್ತಾ ಹೇಳು?? ನಿಂಗ್ ಎಂತಾ ಗೊತ್ತಾಗ್ತು ಸುಮ್ನ್ ಕುತ್ಕಾ ಹೇಳ್ತಾ.. ಯಾ ಹಂಗಾಗಿ ಮಾತಾಡುದೇ ಬಿಟ್ಟಾಕಿದ್ದಿ.<br />
<br />
ಮತ್ತೆಂತೋ ಮಧ್ಯಸ್ತಿ ವ್ಯವಹಾರ ಮಾಡ್ತಿ ಹೇಳಿ ಕೇಳ್ದಿ ಹೌದಾ??<br />
ಹೌದಾ.. ಮಕ್ಕ ಅಂತೂ ಯಂಗಳ್ ಮಾತ್ ಕೇಳ್ತ್ವಿಲ್ಲೆ.. ಎಂತಾರೂ ಮಾಡಕಾತಲಾ.. ಅದೇಯಾ ಇಲ್ಲಿಂದ ಅವ್ರ್ ಇವ್ರದ್ದು ಅಡ್ಕೆ ತಗತ್ತಿ, ಅದನ್ನಾ ಅಲ್ಲ್ ಒಯ್ದು ಮಾರ್ತಿ.. ಬಗೆಲಿ ಕಮೀಶನ್ ಸಿಗ್ತಾ..<br />
<br />
ಅದ್ರಲ್ಲಿ ಎಷ್ಟ್ ಕಮೀಶನ್ ಸಿಗ್ತಾ??<br />
ಎಲ್ಲೊ ಕ್ವಿಂಟಲ್ ಗೆ ಹತ್ತಿಪ್ಪತ್ತು ಸಾವ್ರಾ ಸಿಗ್ತಾ.. ಹೆಚ್ಚೇನಿಲ್ಯಾ.. ಇಲ್ಲಿವಕ್ಕೆ ರೇಟ್ ಜಾಸ್ತಿ ಆಗದ್ದು ತಿಳಿತಿಲ್ಲೆ ಕೊಟ್ಟಾಕ್ತಾ, ಮತ್ತೆ ಬಗೆಲಿ ಮಾತಾಡಕಾಗ್ತು ಗೊತ್ತಿದ್ದಲಾ ನಿಂಗೆ.. ಹಾಹಾ..<br />
<br />
ನಿಂಗ ಬಿಡಿ ಮಾತಾಡುದ್ರಲ್ಲಿ ಕೇಳವಾ...ತಗಳಿ, ಚಾ ತಗಳಿ..<br />
ತಡೆ ಹಂ.. ಕವಳಾ ತುಪ್ಪಾಕಿ ಬತ್ತೆ...<br />
*****<br />
<br />
<b>ಹೀಗೆ ಸುಮ್ಮನೆ 8:</b><br />
"ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ"<br />
ಗುರುಗಳಿಗೆಲ್ಲ ನಮಸ್ಕಾರ...<br />
ಶಿಷ್ಯಂದರಿಗೆಲ್ಲ ಆಶೀರ್ವಾದ...<br />
.<br />
.<br />
.<br />
.<br />
.<br />
.<br />
ಗುರು ದಕ್ಷಿಣೆ ಕೋಡವು ಯಾರ್ಯಾರು ಇದ್ರೋ..??<br />
ಯನ್ ನಂಬರ್ ಕೊಡ್ತಿ, ಒಂದ್ ನೂರು ರಿಚಾರ್ಜ್ ಮಾಡ್ಸಬುಡ್ರಾ..!!!<br />
ಇನ್ನೂರು, ಮುನೂರು ಇದ್ರೂ ನಡೆತು ಹೇಳಿ.<br />
*****<br />
<br />
<b>ಹೀಗೆ ಸುಮ್ಮನೆ 9:</b><br />
ಹಾಯ್ ಎಂತದಾ ಮಾಣಿ... ಮುಖಾ ಸಪ್ಪಗೆ ಮಾಡ್ಕಂಡ್ ಕೂತ್ಕಂಡಿದ್ದೆ??<br />
ಮೊನ್ನೆ ಮೊನ್ನೆ ಇನ್ನೂವಾ ಮದ್ವೆ ಆಯ್ದಪಾ..<br />
.<br />
.<br />
.<br />
.<br />
.<br />
.<br />
.<br />
ಥೋ ಯನ್ ಕಷ್ಟಾ ಯಂಗೆ... ನಿಂಗೆಂತಾಗವಾ??<br />
ಎಂತಾತ ಮಾರಾಯ??<br />
.<br />
.<br />
.<br />
.<br />
ಆಷಾಢ ಅಲ್ದನಾ ಮಾರಾಯ.. ಹೆಂಡ್ತಿ ತವರಿಗೆ ಹೋಗಿ ಹದಿನೈದ್ ದಿನಾ ಆತು... ಒಬ್ಬಂಗೇ ಇಲ್ಲಿ ಕೈ ಕಾಲೇ ಆಡ್ತಿಲ್ಲೆ...!<br />
*****<br />
<br />
<b>ಹೀಗೆ ಸುಮ್ಮನೆ 10:</b><br />
ಹವ್ಯಕ ಹರಟೆ ಬಿಸಿ ಬಿಸಿ ಸುದ್ದಿ...<br />
ಅಡ್ಕೆ ರೇಟ್ ಸಿಕ್ಕಾಪಟ್ಟೆ ಬೆಳದದ್ದು ಅಡ್ಕೆ ಬೆಳೆಗಾರರಲ್ಲಿ ಖುಷಿ ತಂದಿದ್ದು.. ಜೋತೆಗೆಯಾ ಸಿಕ್ಕಾಪಟ್ಟೆ ತ್ರಾಸೂ ಕೊಟ್ಟಿದ್ದು...<br />
ಎಂತದು ಕೇಳ್ತ್ರಾ???<br />
.<br />
.<br />
.<br />
.<br />
.<br />
*ಮೊನ್ನೆ ಮೊನ್ನೆಯಾ ಗಿದ್ದಾಪುರ ಬದಿಗೆ, ಮಂಡಿಗೆ ಅಡ್ಕೆ ಒಯ್ತಿದ್ದ ಮಿನಿ ಟೆಂಪೋ ಅಪಹರಿಸಿ ೧೦ ಕ್ವಿಂಟಾಲ್ ಅಡ್ಕೆ ಕದ್ಕಂಡು ಹೋಯ್ದಾ, ಡ್ರೈವರ್ ಗೆ ನಾಕು ಅಡ್ಕೆ ಬೆಟ್ಟ ಕೊಟ್ಟು ಮಜಾ ಮಾಡು ಹೇಳಿಕಿ ಹೋಯ್ದ ಹೇಳಿ ಸುದ್ದಿ ಆಯ್ದು....<br />
*ಅಡ್ಕೆ ರೇಟ್ ಹೆಚ್ಚಾದ್ದೇಯಾ ಅಡ್ಕೆ ಬೆರೆಗಾರರ ಮಾಣಿಗಳ್ನ ನೋಡುಲೆ ಕೂಸಗಳ ಹಿಂಡೆಯಾ ಬತ್ತಿದ್ದಡ... ಹಂಗಾಗಿ ಹವ್ಯಕ ಮಾಣಿಗಳು ಯಾರನ್ನ ಕಟ್ಟಕಂಬುದು ಹೇಳಿ ಕನ್ ಫ್ಯೂಸ್ ಆಗಿದ್ದ ಹೇಳಿ ಸುದ್ದಿ ಬಂದು.<br />
*ಒಂದು ವಾರದ ಹಿಂದೆಯಾ ಹೆಮ್ಟಾ ಬದಿಗೆ ಮಾಣಿ ನಾಪತ್ತೆ ಆಗಿದ್ದ ಹೇಳಿ ಸುದ್ದಿ ಆಗಿತ್ತು, ಕಡಿಗೆ ನೋಡಿದ್ರೆ ಕೂಸು ಮಾಣಿನ ಅಪಹರಣ ಮಾಡಿ ಮದ್ವೆ ಮಾಡ್ಕಂಡಿದ್ದು ಹೇಳಿ ತಿಳತ್ತು. ಕಾರಣ ಇಷ್ಟೆಯಾ ಆ ಮಾಣಿ ಮನೆದು ೧೦ ಎಕ್ರೆ ಅಡ್ಕೆ ತೋಟಾ ಇದ್ದು ಹೇಳಿ.<br />
*ಮದ್ವೆ ಆದ ಗಂಡಸರನ್ನೂ ಒತ್ತಾಯವಾಗಿ ಮದ್ವೆ ಮಾಡ್ಕಂಡು, ಅಡ್ಕೆಲಿ ಯಂಗೂ ಪಾಲು ಬೇಕು ಹೇಳಿ ಕೂಸು ಕೊರ್ಟಿಗೆ ಹೋಯ್ದು ಹೇಳಿ ಸುದ್ದಿ ಆಯ್ದು.<br />
*ಅಡ್ಕೆ ಕಾಯುಲೇ ಹೆಚ್ಚುವರಿ ಮಿಲಿಟರಿ ಸವಲತ್ತು ಒದಗಿಸಿ ಕೊಡ ಹೇಳಿ ಬೆಳೆಗಾರರು ಮಂತ್ರಿಗಳಿಗೆ ಬೇಡಿಕೆ ಇಟ್ಟಿದ್ದ.<br />
*ಅಡ್ಕೆ ರೇಟ್ ಹೆಚ್ಚಾಗಿದ್ದು ಯಂಗೆಕ್ಕೆ ಸಿಕ್ಕಾಪಟ್ಟೆ ತ್ರಾಸ್ ಆಗ್ತಾ ಇದ್ದು ಹೇಳಿ, ಆದಷ್ಟು ಬೇಗಾ ಅಡ್ಕೆ ರೇಟ್ ಇಳ್ಸ ಹೇಳಿ ಅಡ್ಕೆ ಬೆಳೆಗಾರರ ಒಕ್ಕೂಟದವರು ಮುಖ್ಯಮಂತ್ರಿ ಪೆದ್ದರಾಮಯ್ಯಂಗೆ ಪತ್ರ ಕಳ್ಸಿದ್ದ.<br />
<br />
ಇದಕ್ಕೆ ಪ್ರತಿಕ್ರಿಯಿಸಿದ ಮಂತ್ರಿಗಳು ಸ್ವಲ್ಪ ಮಟ್ಟಿಗೆ ಅಡ್ಕೆ ರೇಟ್ ಕಮ್ಮಿ ಮಾಡಿದ್ದು... ಬೆಳೆಗಾರರಿಗೆ ಸಾವಧಾನ ಆಗಿ ಇರುಲೆ ಹೇಳಿದ್ದ. ಮಾಣಿಗಳಿಗೆ ಆದ ತೋಂದರೆಗೆ ಪರಿಹಾರ ಸೂಚಸುಲೆ, ಆದಷ್ಟು ಬೇಗ ಅಧಿಕಾರಿಗಳ್ನ ನೇಮಕಾ ಮಾಡಿ ತನಿಖೆ ಮಾಡುಲೆ ಆದೇಶ ನೀಡಿದ್ದ. ಹವ್ಯಕ ಮಾಣಿಗಳು ಸುಮ್ ಸುಮ್ನೆಯಾ ಮನೆಯಿಂದ ಹೊರ ಬಪ್ಪುಲಿಲ್ಲೆ, ಹೊರಗೆ ಹೊಗಕಾದ್ರೂ ಜೊತೆಗೆ ನಾಲ್ಕ್ ಜನ ಕರ್ಕಂಡು ಹೋಗ ಹೇಳಿ ವಿಶೇಷ ಸೂಚನೆ ನೀಡಿದ್ದ.<br />
<br />
ಥೋ... ಎಂತದ್ರಾ ಮಾರಾಯ್ರ?? ಅಡ್ಕೆಗೆ ರೇಟ್ ಬರದೆಗಿದ್ರೂ ಕಷ್ಟ. ಬಂದ್ರೂ ಕಷ್ಟ.<br />
<br />
<br />
<br />
<span style="font-family: 'tunga';"><b>ಮುಂದುವರೆಯುವುದು....</b></span><br />
<div>
<br /></div>
</div>
Motivation http://www.blogger.com/profile/08140925864934705325noreply@blogger.com2tag:blogger.com,1999:blog-5247965971580923628.post-24965221405102391482014-07-06T23:19:00.001-07:002014-07-06T23:19:41.028-07:00ಕರ್ಮ: ನಾ ಕಂಡಂತೆ.<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEhcg8rCJ7ZfWF4lr6DH4gi4LuAKFhoiJkc4MglrURePPQInmgAs0HN4r68rD4QvGZnT3RF8FiDUS_6cZIaNZrsYYr2cvdF9l3EroJ24d1h4Z4L4_SHtaug7HWDrUurdTbEe4Q20IK12RZg/s1600/karma1.jpg" imageanchor="1" style="margin-left: 1em; margin-right: 1em;"><img border="0" src="https://blogger.googleusercontent.com/img/b/R29vZ2xl/AVvXsEhcg8rCJ7ZfWF4lr6DH4gi4LuAKFhoiJkc4MglrURePPQInmgAs0HN4r68rD4QvGZnT3RF8FiDUS_6cZIaNZrsYYr2cvdF9l3EroJ24d1h4Z4L4_SHtaug7HWDrUurdTbEe4Q20IK12RZg/s1600/karma1.jpg" height="276" width="400" /></a></div>
<span style="font-family: 'tunga';"><br /></span>
<span style="font-family: 'tunga';">ಮೊದಲಿನಿಂದಲೂ ನಾನು ಓದಿದ್ದು ಕಡಿಮೆಯೇ... ಅದರಲ್ಲೂ ಪುಣೆಗೆ ಬಂದಮೇಲೆ ಮುಗಿಯಿತು, ಇಲ್ಲಿ ಕನ್ನಡ ಪುಸ್ತಕವೂ ದೊರೆಯುವುದಿಲ್ಲ. ಆದರೆ ಇತ್ತೀಚೆಗೆ ಓದುವ ಹವ್ಯಾಸ ಬೆಳೆದಿದೆ. ಹಾಗಾಗಿ ಊರಿಗೆ ಹೋದಾಗೆಲ್ಲ ಬರುವಾಗ ಒಂದಿಷ್ಟು ಕಾದಂಬರಿಗಳನ್ನ ತಂದಿರುತ್ತೇನೆ. ಅವರಿವರಲ್ಲಿ ಕೇಳಿ ಯಾವ ಕಾದಂಬರಿಗಳು ಚೆನ್ನಾಗಿವೆ ಅಂತ ಖರೀದಿಸುವುದು ನನ್ನ ವಾಡಿಕೆ. ಮೊನ್ನೆ ಹೀಗೆ ಫೇಸ್ ಬುಕ್ ಲ್ಲಿ ಗೆಳತಿಯೊಬ್ಬಳು "ಕರಣಂ ಪವನ್ ಪ್ರಸಾದ್" ಬರೆದಿರುವ "ಕರ್ಮ" ಕಾದಂಬರಿ ತುಂಬಾ ಚೆನ್ನಾಗಿದೆ, ಓದಲೇಬೇಕಾದ ಪುಸ್ತಕ ಅಂದಾಗ ಇವರು ಯಾವ ಲೇಖಕರು ಇವರ ಹೆಸರನ್ನು ಕೇಳಿದ ನೆನಪೇ ಇಲ್ಲ. ಇನ್ನು ಇವರ ಬರಹ ಹೇಗಿರುತ್ತೋ ಅಂತ ಗೊಂದಲದಿಂದಲೇ ಸಪ್ನ ಆನ್ ಲೈನ್ ಅಲ್ಲಿ ಬುಕ್ ಆರ್ಡರ್ ಮಾದಿದೆ. ಮೊದಲೇ ಸ್ವಲ್ಪ ಗೊಂದಲದಲ್ಲಿದ್ದ ನನಗೆ ಬುಕ್ ೧೫ ದಿನ ಆದರೂ ಬರದೇ ಇದ್ದಿದ್ದಕ್ಕೆ ಬೇಸರವಾಗಿತ್ತು. ಸಪ್ನ ಬುಕ್ ಹೌಸ್ ಗೆ ಫೋನಾಯಿಸಿ ವಿವರ ತಗೋಂಡು ನಾನೇ ಖುದ್ದಾಗಿ ಹೋಗಿ ಪುಸ್ತಕ ತರಬೇಕಾಯಿತು. ಆದರೆ ಪುಸ್ತಕ ಸಿಕ್ಕ ಮೇಲೆ ಇದ್ಯಾವುದರ ಪರಿವೆ ಇಲ್ಲದೇ ಯಾವಾಗ ಓದುತ್ತೀನೋ ಅನ್ನುವಂತೆ ಆಗಿತ್ತು. ಇನ್ನೆನು ಒಮ್ಮೆ ನಿರ್ಧಾರ ಮಾಡಿದ ಮೇಲೆ ಮಾಡಿಯೇ ತೀರುವುದು ನನ್ನ ಸ್ವಭಾವ.</span><br />
<span style="font-family: 'tunga';"><br /></span>
<span style="font-family: 'tunga';">ನೋಡು ನೋಡುತ್ತಿದ್ದಂತೆಯೆ ಪುಟಗಳು ಸರಿಯತೊಡಗಿದ್ದವು ನಾನು ಪುಸ್ತಕದೊಳಗೆ ಮುಳುಗಿಹೋಗಿದ್ದು ನನಗೇ ತಿಳಿಯಲಿಲ್ಲ. ವಾಸ್ತವಿಕತೆಗೆ ತೀರ ಹತ್ತಿರವೆನಿಸುವ ಅಥವಾ ವಾಸ್ತವಿಕತೆಯೇ ಅನ್ನುವಂತೆ ಕಥೆ ಮುಂದುವರೆಯಿತ್ತಿತ್ತು. ಸಾವು ಉಂಟಾದಾಗ ಮುಂದೆ ಹದಿನೈದು ದಿನ ನಡೆಯುವ ಶ್ರಾದ್ದ ಕರ್ಮಗಳು, ಅದರಲ್ಲೂ ನಗರದ ನಿವಾಸಿಯಾಗಿದ್ದವನು ಹಳ್ಳಿಯಲ್ಲಿ ಬಂದು ಈ ಕರ್ಮಗಳನ್ನು ಮಾಡುವಾಗ ಆತನಲ್ಲಾಗುವ ತೊಳಲಾಟಗಳು ಈ ಕೃತಿಯಲ್ಲಿ ಉತ್ತಮವಾಗಿ ಮೂಡಿಬಂದಿದೆ. ನಂಬಿಕೆ ಮತ್ತು ಶ್ರದ್ದೆ ಇವುಗಳ ನಡುವಿನ ಸಂಬಂಧ ಅಥವಾ ವ್ಯತ್ಯಾಸ ಇದೇ ಕಥೆಗೆ ಜೀವ ಅಂದರೆ ತಪ್ಪಾಗಲಾರದು. ತೀರ ಸಾಧಾ ಕಥೆ ಅನಿಸಿದರೂ ತಿರುಳು ಅಪ್ಪಟ ಹೊನ್ನಂತೆ ಹೊಳೆಯುತ್ತದೆ. ಕಥೆಗೆ ವಸ್ತು ವಿಷಯ ಯಾವುದೇ ಆದರೂ ಆ ವಿಷಯದ ಬಗ್ಗೆ ಸತ್ಯಾಸತ್ಯತೆಯನ್ನು ಬರೆದಾಗ ಮಾತ್ರ ಅದಕ್ಕೊಂದು ಬೆಲೆ ಅನ್ನುವುದನ್ನ ಲೆಖಕರು ಉತ್ತಮವಾಗಿ ನಿರೂಪಿಸಿದ್ದಾರೆ.</span><br />
<div style="font-family: tunga;">
<br /></div>
<span style="font-family: 'tunga';">ಬೆಂಗಳೂರು ನಿವಾಸಿ ಸುರೇಂದ್ರ ತನ್ನ ತಂದೆ ತೀರಿಕೊಂಡಾಗ ತನ್ನ ಹಳ್ಳಿಗೆ ಬಂದು ಹದಿನೈದು ದಿನಗಳ ಕಾಲ ಮಾಡುವ ಶ್ರಾದ್ದ ಕರ್ಮವೇ ಈ ಕಥೆಗೆ ಜೀವಾಳ. ಹದಿನೈದು ದಿನದಲ್ಲಾಗುವ ಘಟನೆಗಳು, ಆತನಲ್ಲಾಗುವ ಬದಲಾವಣೆಗಳು, ದೇವರು, ಭಕ್ತಿ, ಶ್ರದ್ಧೆ, ನಂಬಿಕೆ, ಕಾಮ ಹೀಗೆ ಅನೇಕಾನೇಕ ವಿಷಗಳನ್ನ ಉತ್ತಮವಾಗಿ ಬಿಂಬಿಸಿದ್ದಾರೆ. ಒಂದೂವರೆ ವರ್ಶದ ಲೇಖಕರ ಪ್ರಯತ್ನ ಫಲ ಕೊಟ್ಟಿದೆ ಅಂತಲೇ ಹೇಳಬಹುದು. ಯಾವುದೇ ಕೃತಿ ರಚಿಸುವಾಗ ಅದಕ್ಕೆ ಬೇಕಾದ ವಿಷಯ, ವಿಷಯಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಗಳು ಕೃತಿಕಾರನಿಗೆ ಇರಲೇ ಬೇಕು. ಅದರಂತೆ ಕರಣಂ ಪವನ್ ಪ್ರಸಾದ್ ಕೂಡ ಕೃತಿಗೆ ಬೇಕಾದ ಎಲ್ಲ ಮಾಹಿತಿಗಳನ್ನು ಒಟ್ಟುಗೂಡಿಸಿ, ಜ್ನಾನಿಗಳಿಂದ ಎಲ್ಲ ವಿವರಗಳನ್ನೂ ಕೂಲಂಕುಶವಾಗಿ ತೆಗೆದುಕೊಂಡು ತಮ್ಮ ಜೀವವನ್ನೇ ಈ ಕೃತಿಯಲ್ಲಿ ಎರೆದಿದ್ದಾರೆ ಎನ್ನಬಹುದು. ಈ ಕಷ್ಟಕ್ಕಾಗಿ ಭೇಷ್ ಎನ್ನಲೇಬೇಕು.ಅನೇಕ ಘಟಾನುಘಟಿಗಳು ಈ ಕೃತಿಗೆ ಮೆಚ್ಚುಗೆ ವ್ಯಕ್ತಪಡಿಸಿರುವುದು ಕೃತಿಯ ಪರಿಪಕ್ವತೆಯನ್ನು ಬಿಂಬಿಸುತ್ತದೆ.</span><br />
<div style="font-family: tunga;">
<br /></div>
<span style="font-family: 'tunga';">ನಂಬಿಕೆ ಮತ್ತು ಶ್ರದ್ಧೆಯ ನಡುವಿನ ವ್ಯತ್ಯಾಸ ತಿಳಿಸುತ್ತಾ "ನಮ್ಮ ಸಮಾಜ ಸಿದ್ಧಾಂತಗಳನ್ನು ನಂಬಲಿಲ್ಲ, ತರ್ಕ ಮಾಡಿತು, ವಿಶ್ಲೇಷಿಸಿತು. ನಮ್ಮದು ನಂಬಿಕೆಯ ಸಮಾಜವಲ್ಲ, ಶ್ರದ್ಧೆಯ ಸಮಾಜ.ದೇವರು, ಕ್ರಿಯೆ ಆಚರಣೆ ಎಲ್ಲವೂ ನಿಂತಿರುವುದು ನಂಬಿಕೆಯ ಮೇಲಲ್ಲ ಶ್ರದ್ಧೆಯ ಮೇಲೆ.ಶ್ರದ್ಧೆಗೂ ನಂಬಿಕೆಗೂ ಬಹಳ ವ್ಯತ್ಯಾಸವಿದೆ, ನಮ್ಮವರಿಗೂ ಇದು ತಿಳಿದಿಲ್ಲ." ಎನ್ನುತ್ತಾರೆ ಲೇಖಕರು. ಮುಂದೆ "ಸಾಮೂಹಿಕ ನಂಬಿಕೆ, ಸಾಮೂಹಿಕ ದರ್ಶನ ಎಲ್ಲವೂ ಸುಳ್ಳು. ದೈವ, ಪುರಾಣ, ಧರ್ಮ ಎಲ್ಲವೂ ವ್ಯಕ್ತಿಗತವಾದದ್ದು. ಕೆಲವರಿಗೆ ಮೂರ್ತಿಯ ಮೇಲೆ ಶ್ರದ್ದೆ, ಕೆಲವರಿಗೆ ಪುರಾಣಗಳ ಬಗ್ಗೆ ಶ್ರದ್ಧೆ ಇನ್ನೂ ಕೆಲವರಿಗೆ ಕಾಣದ ಅಗೋಚರದ ಬಗ್ಗೆ ಶ್ರದ್ಧೆ. ಆ ಶ್ರದ್ಧೆಯನ್ನೇ ಧರ್ಮ ಕಲಿಸಿದ್ದು.ಅವರವರ ಭಾವಕ್ಕೆ ಅವರವರ ಶ್ರದ್ಧೆ" ಅನ್ನುತ್ತಾರೆ. ನಂಬಿಕೆ ಮತ್ತು ಶ್ರದ್ಧೆಯ ನಡುವಿನ ಗೊಂದಲವನ್ನು ದೂರ ಮಾಡುತ್ತಾ " ಶ್ರದ್ಧೆ ಎಂದರೆ ಅಚಲವಾದದ್ದು, ನಂಬಿಕೆ ಚಂಚಲವಾದದ್ದು. ಧರ್ಮದ ಅಸ್ತಿತ್ವ ಮತ್ತು ಆದರ್ಶಕ್ಕೆ ಶ್ರದ್ಧೆ ಮುಖ್ಯವೇ ಹೊರತು ನಂಬಿಕೆಯಲ್ಲ. ನಂಬಿಕೆಗಳು ಬದಲಾಗುತ್ತವೇ ಶ್ರದ್ಧೆ ಬದಲಾಗಲಾರದು. ಹಿಂದೂ ಧರ್ಮ ಶ್ರದ್ಧೆಯ ಮೇಲೆ ನಿಂತಿದೆ ಅದು ಕೇವಲ ನಂಬಿಕೆಯ ಮೇಲೆ ನಿಂತಿದ್ದರೆ ಎಂದೋ ಅಳಿಸಿಹೋಗುತ್ತಿತ್ತು, ಬೇರೆ ನಾಗರಿಕ ಜೀವನ ಶೈಲಿಯ ರೀತಿ" ಅನ್ನುತ್ತಾ ಸ್ಪಷ್ಟೀಕರಣ ನೀಡುತ್ತಾರೆ. ಬಹಳ ದಿನಗಳಿಂದ ಹಿಂದೂ ಧರ್ಮದ ಬಗ್ಗೆ ಅಧ್ಯಯನ ಮಾಡುತ್ತಿದ್ದ ನನಗೆ ಅನೇಕ ಮಾಹಿತಿಗಳು ದೊರೆತಂತಾಯಿತು. ಶಹರದ ಬದುಕಿಗೆ ಒಗ್ಗಿಕೊಂಡು ತಮ್ಮ ಮನೆಯ ರೀತಿ ರಿವಾಜುಗಳನ್ನೆಲ್ಲ ಮರೆತ ಕಥಾನಾಯಕ ತಂದೆಯ ಶ್ರಾದ್ದಕ್ಕೆ ಮನೆಗೆ ಬಂದು ಎಲ್ಲ ಕಾರ್ಯವನ್ನು ಮಾಡುತ್ತಿರುವುದನ್ನು ಕಂಡ ತಾಯಿ ಪ್ರೀತಿಯಿಂದ ಮಗನನ್ನು ತಬ್ಬಿಕೊಂಡಾಗ, ತಾನು ಮಾಡುವ ಕ್ರಿಯೆಗಿಂತ ಒಂದು ಜೀವಕ್ಕೆ ಸಮಾಧಾನ ಸಿಗುವುದಾದರೆ ಆ ಕ್ರಿಯೆಗಿಂತ ಈ ಸಮಾಧಾನ ಮುಖ್ಯ ಅಂದುಕೊಳ್ಳುವ ದೃಶ್ಯ ಮೈ ನವಿರೇಳಿಸುತ್ತದೆ. ವೈಜ್ನಾನಿಕವಾಗಿ ನಮ್ಮ ಧರ್ಮದ ಕೃತಿಗೆ ಇರುವ ಸಂಬಂಧವನ್ನು ಸಾಕ್ಷಾಧಾರವಾಗಿ ನಿರೂಪಿಸಿದ್ದಾರೆ. ಪೂರ್ಣ ಕಾದಂಬರಿ ಒಂದು ಸಿನೆಮಾದ ತರಹ ನಮ್ಮ ಕಣ್ಮುಂದೆ ಹಾದು ಹೋಗುತ್ತದೆ. ಪ್ರತಿ ಪಾತ್ರಗಳು ನಮ್ಮ ಕಣ್ಮುಂದೆ ನಟಿಸುತ್ತಿರುವಂತೆ ಭಾಸವಾಗುತ್ತದೆ. ಈ ಕೃತಿ ಮುಂದೆ ಸಿನೆಮಾ ರೂಪ ಕಂಡರೆ ಅಚ್ಚರಿಯೇನಿಲ್ಲ. ಅನೇಕ ತಿರುವುಗಳು, ಗೊಂದಲಗಳು, ತಿಳಿ ಹಾಸ್ಯ, ತೊಳಲಾಟ, ನಗು, ಅಳು ಎಲ್ಲವನ್ನೂ ಒಳಗೊಂಡ ಕೃತಿಯೇ "ಕರ್ಮ". ಅನೇಕ ಗೊಂದಲಗಳಿಗೆ ಉತ್ತರವೇ "ಕರ್ಮ". ಒಟ್ಟಿನಲ್ಲಿ ಹೇಳಬೇಕೆಂದರೆ ಒಂದು ಪರಿಪೂರ್ಣ ಕೃತಿ "ಕರ್ಮ".</span><br />
<div style="font-family: tunga;">
<br /></div>
<span style="font-family: 'tunga';">ಅಂತೂ ಪುಸ್ತಕವನ್ನು ಒಂದೇ ಉಸಿರಿಗೆ ಓದಿ ಮುಗಿಸಿದ ಸಮಾಧಾನ ನನಗೆ. ಓದುಗಾರನಿಗೆ ಎಲ್ಲೂ, ಯಾವ ರೀತಿಯಲ್ಲೂ ಅಸಮಾಧಾನವಾಗದಂತೆ ಕಾಳಜಿವಹಿಸಿದ್ದಾರೆ ಲೇಖಕರು. ಹೇಗೆ ಅಮೀರ್ ಖಾನ್ ತನ್ನ ಚಿತ್ರಕ್ಕಾಗಿ ಕಷ್ಟಪಟ್ಟು ಮಿ.ಪರಫೆಕ್ಟ್ ಅನಿಸಿಕೊಂಡಿದ್ದಾರೋ ಅದೇ ರೀತಿ ಕರಣಂ ಕೂಡ ನನಗನಿಸಿದಂತೆ "ಕರ್ಮ"ಕ್ಕಾಗಿ ಮಿ.ಪರಫೆಕ್ಟ್ ಆಗಿದ್ದಾರೆ. ಮುಂಗಾರು ಮಳೆಯಂತ ಚಲನಚಿತ್ರಗಳು ಹೇಗೆ ಅದರ ಕಥೆ,ಹಾಡುಗಳಿಂದ ಪ್ರಸಿದ್ದವಾಗಿದೆಯೋ ಅದೇ ರೀತಿ ಕರ್ಮ ತನ್ನ ಒಳ ತಿರುಳು ಮತ್ತು ಪರಿಪಕ್ವತೆಯಿಂದ ಎಲ್ಲ ಓದುಗರ ಮನಸೂರೆಗೊಂಡರೆ ತಪ್ಪೇನಿಲ್ಲ. ನನ್ನ ಅನೇಕ ಪ್ರಶ್ನೆಗಳಿಗೆ ಈ ಕೃತಿಯ ಮೂಲಕ ಉತ್ತರವನ್ನ ಕಂಡುಕೊಂಡಿದ್ದೇನೆ, ಅದೇ ರೀತಿ ಅನೇಕ ಓದುಗರಿಗೆ ಈ ಕೃತಿ </span><span style="font-family: 'tunga';">ಮಾದರಿಯಾಗಬಹುದು</span><span style="font-family: 'tunga';"> ಅನ್ನುವುದು ನನ್ನ ಅನಿಸಿಕೆ. ಶಹರದ ಕಟ್ಟುಪಾಡು ಜೀವನಕ್ಕೆ ಒಗ್ಗಿದವರೆಲ್ಲ ಈ ಕೃತಿಯನ್ನು ಓದಿ ತಾವೆಲ್ಲಿದ್ದೇವೆ ಅನ್ನುವುದನ್ನು ಒಮ್ಮೆ ಮುಟ್ಟಿನೋಡಿಕೊಳ್ಳುವಂತೆ ಮಾಡುತ್ತದೆ "ಕರ್ಮ". ಬ್ರಾಹ್ಮಣರಾದವರು ಅವಶ್ಯವಾಗಿಯೇ ಓದಬೇಕಾದ ಕೃತಿ. ಪುಸ್ತಕದ ಬೆಲೆ ಕೇವಲ ನೂರಿಪ್ಪೈದು(೧೨೫/-), ನಿಮ್ಮ ಸಮೀಪದ ಪುಸ್ತಕ ಮಳಿಗೆಯನ್ನ ಇಂದೇ ಸಂಪರ್ಕಿಸಿ.ಆನ್ ಲೈನ್ ಮುಖಾಂತರ ಕೂಡ ಬುಕ್ ಮಾಡಬಹುದು.</span><br />
<div style="font-family: tunga;">
<br /></div>
<span style="font-family: 'tunga';">"ಕರ್ಮ"ದ ಮೂಲಕ ಅನೇಕ ಪ್ರಶ್ನೆಗಳಿಗೆ, ಗೊಂದಲಗಳಿಗೆ ಉತ್ತರವನ್ನು ನೀಡಿದ ಲೇಖಕ "ಕರಣಂ ಪವನ್ ಪ್ರಸಾದ್" ಅವರಿಗೆ ಎಲ್ಲ ಓದುಗರ ಪರವಾಗಿ ಶುಭ ಹಾರೈಕೆಗಳು. ಇದೇ ರೀತಿಯಾಗಿ ನಿಮ್ಮಿಂದ ಇನ್ನೂ ಅನೇಕ ಕೃತಿಗಳು ಮೂಡಿ ಬರಲಿ ಎಂದು ಹಾರೈಸುತ್ತೇನೆ.</span><br />
<span style="font-family: 'tunga';">ಶುಭವಾಗಲಿ.</span></div>
Motivation http://www.blogger.com/profile/08140925864934705325noreply@blogger.com0tag:blogger.com,1999:blog-5247965971580923628.post-6699788968158479312014-07-02T21:05:00.000-07:002014-07-02T21:05:06.610-07:00ನಮ್ಮ ಹಿಂದೂ ಧರ್ಮ: ಭಾಗ ೨<div dir="ltr" style="text-align: left;" trbidi="on">
<div style="text-align: left;">
<span style="font-family: 'tunga';"><b>ಪಂಚಾಂಗ: </b>ಹಿಂದೂಗಳ ಸೌರಮಾನ,ಚಾಂದ್ರಮಾನ ರೀತಿಯ ಕಾಲಗಣನೆಗೆ ಪಂಚಾಂಗವೆಂದು ಕರೆಯುತ್ತಾರೆ.ಪಂಚಾಂಗವೆಂದರೆ, ಪಂಚ + ಅಂಗ = ಐದು ಅಂಗಗಳನ್ನು ಒಳಗೊಂಡದ್ದು. ತಿಥಿ , ವಾರ , ನಕ್ಷತ್ರ , ಯೋಗ, ಮತ್ತು ಕರಣಗಳು - ಇವೇ ಆ ಐದು ಅಂಗಗಳು.ಇವುಗಳಿಗೆ ಸಂಬಂಧಪಟ್ಟ ಮಾಹಿತಿಯನ್ನು ತಿಳಿಸುವಂಥದ್ದು ಪಂಚಾಂಗ.</span></div>
<div style="font-family: tunga;">
<br /></div>
<span style="font-family: 'tunga';"><b>ತಿಥಿಗಳು</b> ಮೂವತ್ತು(೩೦). ೩೦ ತಿಥಿಗಳನ್ನು ಎರಡು ಪಕ್ಷಗಳಲ್ಲಿ ೧೫ರಂತೆ ಎಣಿಕೆ ಮಾಡಲಾಗುತ್ತದೆ. ಪಾಡ್ಯ(ಪ್ರತಿಪದೆ)ದಿಂದ ಮೊದಲುಗೊಂಡು ಹುಣ್ಣಿಮೆಯವರೆಗೆ ಬರುವ ಮೊದಲ ೧೫ ತಿಥಿ(ದಿನ)ಗಳಿಗೆ ಶುಕ್ಲಪಕ್ಷವೆಂತಲೂ, ಪಾಡ್ಯದಿಂದ ಅಮಾವಾಸ್ಯೆಯವರೆಗೆ ಬರುವ ಮುಂದಿನ ೧೫ ತಿಥಿ(ದಿನ)ಗಳಿಗೆ ಕೃಷ್ಣಪಕ್ಷವೆಂತಲೂ ಕರೆಯುತ್ತಾರೆ. </span><br />
<div style="font-family: tunga;">
<br /></div>
<span style="font-family: 'tunga';"><b>ವಾರಗಳು</b> ಏಳು (೭). ಅವು ಸೋಮವಾರ, ಮಂಗಳವಾರ, ಬುಧವಾರ, ಗುರುವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರ. ನವಗ್ರಹಗಳಲ್ಲಿ ರಾಹು,ಕೇತುಗಳನ್ನು ಬಿಟ್ಟು ಮಿಕ್ಕ ಏಳು ಅಂದರೆ ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ ಹಾಗೂ ರವಿ -ಈ ಗ್ರಹಗಳ ಹೆಸರಿನಿಂದ ವಾರಗಳಿಗೆ ಹೆಸರಿಸಿದೆ.</span><br />
<div style="font-family: tunga;">
<br /></div>
<span style="font-family: 'tunga';"><b>ನಕ್ಷತ್ರಗಳು</b>(೨೭)</span><br />
<span style="font-family: 'tunga';">01ಅಶ್ವಿನಿ 02ಭರಣಿ 03ಕೃತ್ತಿಕ 04ರೋಹಿಣಿ 05ಮೃಗಶಿರ 06ಆರ್ದ್ರ 07ಪುನರ್ವಸು 08ಪುಷ್ಯ 09ಆಶ್ಲೇಷ 10ಮಘ 11ಹುಬ್ಬ 12ಉತ್ತರಾ 13ಹಸ್ತ 14ಚಿತ್ತಾ 15ಸ್ವಾತಿ 16ವಿಶಾಖ 17ಅನೂರಾಧ 18ಜ್ಯೇಷ್ಠ 19ಮೂಲ 20ಪೂರ್ವಾಷಾಢ 21ಉತ್ತರಾಷಾಢ 22ಶ್ರವಣ 23ಧನಿಷ್ಠ 24ಶತಭಿಷ 25ಪೂರ್ವಾಭಾದ್ರಪದ </span><br />
<span style="font-family: 'tunga';">26ಉತ್ತರಾಭಾದ್ರಪದ 27ರೇವತಿ</span><br />
<div style="font-family: tunga;">
<br /></div>
<span style="font-family: 'tunga';"><b>ಮಾಸಗಳು </b>(೧೨)</span><br />
<span style="font-family: 'tunga';">01 ಚೈತ್ರ 02 ವೈಶಾಖ 03 ಜ್ಯೇಷ್ಠ 04 ಆಷಾಢ 05 ಶ್ರಾವಣ 06 ಭಾದ್ರಪದ 07 ಆಶ್ವೀಜ 08 ಕಾರ್ತೀಕ 09 ಮಾರ್ಗಶಿರ 10 ಪುಷ್ಯ 11 ಮಾಘ 12 ಪಾಲ್ಗುಣ</span><br />
<div style="font-family: tunga;">
<br /></div>
<span style="font-family: 'tunga';"><b>ಅಧಿಕ ಮಾಸಗಳು</b></span><br />
<span style="font-family: 'tunga';">ಸೂರ್ಯನು ಯಾವುದೇ ರಾಶಿಯಲ್ಲೂ ಪ್ರಯಾಣಿಸದೇ ಒಂದು ಚಾಂದ್ರಮಾನ ಮಾಸದಲ್ಲಿ ಸಂಪೂರ್ಣವಾಗಿ ಒಂದು ರಾಶಿಯ ಒಳಗೇ ಚಲಿಸುತ್ತದ್ದರೇ (ಅಂದರೆ ಅಮಾವಾಸ್ಯೆಗೆ ಮೊದಲು), ಆ ಚಾಂದ್ರಮಾನ ಮಾಸವನ್ನು ಮುಂಬರುವ ಮೊದಲ ಸಂಕ್ರಮಣದ ಪ್ರಕಾರ ಹೆಸರಿಸಲಾಗುತ್ತದೆ. ಅದು ಅಧಿಕ ಎಂಬ ಉಪಾಧಿಯನ್ನು ತೆಗೆದುಕೊಳ್ಳುತ್ತದೆ. ಉದಾಹರಣೆಗೆ, ಒಂದು ಚಾಂದ್ರಮಾನ ಮಾಸವು ಸಂಕ್ರಮಣವಿಲ್ಲದೆಯೇ ಸರಿದುಹೋದರೆ ಮತ್ತು ಮುಂದಿನ ಸಂಕ್ರಮಣವು ಮೇಷದಲ್ಲಿದ್ದರೆ, ಸಂಕ್ರಮಣವಿಲ್ಲದ ಆ ಮಾಸವನ್ನು ಅಧಿಕ ಚೈತ್ರವೆಂದು ಹೆಸರಿಸಲಾಗುತ್ತದೆ.</span><br />
<span style="font-family: 'tunga';">ಋತುಗಳು ೬ (೨ ಮಾಸಗಳಿಗೆ ಒಂದು ಋತು)</span><br />
<span style="font-family: 'tunga';">01 ವಸಂತ ಋತು ( ಚೈತ್ರ - ವೈಶಾಖ)</span><br />
<span style="font-family: 'tunga';">02 ಗ್ರೀಶ್ಮ ಋತು (ಜ್ಯೇಷ್ಠ - ಆಷಾಢ)</span><br />
<span style="font-family: 'tunga';">03 ವರ್ಷ ಋತು (ಶ್ರಾವಣ - ಭಾದ್ರಪದ)</span><br />
<span style="font-family: 'tunga';">04 ಶರದೃತು (ಆಶ್ವೀಜ - ಕಾರ್ತೀಕ)</span><br />
<span style="font-family: 'tunga';">05 ಹೇಮಂತ ಋತು ( ಮಾರ್ಗಶಿರ - ಪುಷ್ಯ)</span><br />
<span style="font-family: 'tunga';">06 ಶಿಶಿರ ಋತು (ಮಾಘ - ಪಾಲ್ಗುಣ)</span><br />
<div style="font-family: tunga;">
<br /></div>
<span style="font-family: 'tunga';"><b>ಅಯನಗಳು</b> (೨)</span><br />
<span style="font-family: 'tunga';">ಉತ್ತರಾಯಣ ಮತ್ತು ದಕ್ಷಿಣಾಯನ ಪ್ರತಿ ವರ್ಷದ ಜನವರಿ ೧೪ ರಿಂದ ಜುಲೈ ೧೬ ರವರೆಗೆ ಸೂರ್ಯನು ಉತ್ತರಕ್ಕೆ ಸಂಚರಿಸುವುದರಿಂದ ಉತ್ತರಾಯಣವೆಂದೂ, ಜುಲೈ ೧೬ರಿಂದ ಜನವರಿ ೧೪ ರವರೆಗೆ ಸೂರ್ಯನು ದಕ್ಷಿಣ ದಿಕ್ಕಿಗೆ ಬಾಗಿ ಸಂಚರಿಸುವುದರಿಂದ ದಕ್ಷಿಣಾಯಣವೆಂದೂ ಗುರುತಿಸಲಾಗಿದೆ.</span><br />
<div style="font-family: tunga;">
<br /></div>
<span style="font-family: 'tunga';"><b>ಯೋಗಗಳು </b>(೨೭)</span><br />
<span style="font-family: 'tunga';">ಯೋಗ: ಇಪ್ಪತ್ತೇಳು ನಕ್ಷತ್ರದಂತೆಯೇ ಇಪ್ಪತ್ತೇಳು ಯೋಗಗಳಿರುತ್ತದೆ. ಹದಿಮೂರು ಅಂಶ ಮತ್ತು ಇಪ್ಪತ್ತು ಕಲೆಗಳನ್ನು ಕಾಂತಿವೃತ್ತದಲ್ಲಿರುವ ಮುನ್ನೂರ ಅರವತ್ತು ಅಂಶಗಳನ್ನು ವಿಭಜಿಸಿದ್ದಲ್ಲಿ ೨೭ ಯೋಗಗಳಾಗುತ್ತವೆ. ಯೋಗ ವೆಂದರೆ ಒಗ್ಗೂಡುವಿಕೆ ಎಂದರ್ಥ. ಸೂರ್ಯ ಚಂದ್ರರ ಗತಿಯನ್ನು ಒಟ್ಟೂ ಸೇರಿಸಿದರೆ ಆಗುವುದು ಯೋಗ. ಈ ಒಟ್ಟುಗೂಡುವಿಕೆಯು ೧೩ ಅಂಶ ಮತ್ತು ೨೦ ಕಲೆಗಳಾಗುತ್ತದೆ.</span><br />
<span style="font-family: 'tunga';">01ವಿಷ್ಕಂಭ 02ಪ್ರೀತಿ 03ಆಯುಷ್ಮಾನ್ 04ಸೌಭಾಗ್ಯ 05ಶೋಭನ 06ಅತಿಗಂಡ 07ಸುಕರ್ಮ 08ಧೃತಿ 09ಶೂಲ 10ಗಂಡ 11ವೃದ್ಢಿ 12ಧ್ರುವ 13ವ್ಯಾಘಾತ 14ಹರ್ಷಣ 15ವಜ್ರ 16ಸಿದ್ಧಿ 17ವ್ಯತೀಪಾತ 18ವರಿಯಾನ್ 19ಪರಿಘ 20ಶಿವ 21ಸಿದ್ಧ 22ಸಾಧ್ಯ 23ಶುಭ 24ಶುಕ್ಲ 25ಬ್ರಹ್ಮ 26ಐಂದ್ರ 27ವೈಧೃತಿ</span><br />
<div style="font-family: tunga;">
<br /></div>
<span style="font-family: 'tunga';"><b>ಕರಣಗಳು</b> (೧೧)</span><br />
<span style="font-family: 'tunga';">ಕರಣ: ಇದು ಪಂಚಾಂಗದ ೫ನೇ ಅಂಗ. ತಿಥಿಯ ಅರ್ಧಭಾಗ ಕರಣವಾಗಿರುತ್ತದೆ. ಶುಕ್ಲಪಕ್ಷದ ಪಾಡ್ಯದಿಂದ ಕೃಷ್ಣಪಕ್ಷದ ಅಮಾವಾಸ್ಯೆಯವರೆಗೆ ೩೦ ತಿಥಿಗಳಿರುತ್ತದೆ. ತಿಥಿಯ ಅರ್ಧ ಭಾಗ ಕರಣವೆನಿಸಿದಾಗ ಅರವತ್ತು ಕರಣಗಳಿರುತ್ತದೆ. ಆದರೆ ೬೦ ಕರಣಗಳಿಗೆ ಪ್ರತ್ಯೇಕ ಹೆಸರು ಇರುವುದಿಲ್ಲ. ಕರಣಗಳಿರಿವುದು ೧೧ ಮಾತ್ರ. ಶುಕ್ಲಪಕ್ಷದ ಪಾಡ್ಯದ ಉತ್ತರಾರ್ಧದಿಂದ ಆರಂಭಿಸಿ ಕೃಷ್ಣಪಕ್ಷದ ಚತುರ್ದಶಿಯ.ಪೂರ್ವಾರ್ಧದ ಅಂತ್ಯದ ತನಕ ಬವ, ಬಾಲವ ಕೌಲವ, ತೈತಿಲ, ಗರಜ, ವಣಿಜ ಮತ್ತು ಭದ್ರಾಗಳೆಂಬ ಏಳು ಕರಣಗಳು ಅನುಕ್ರಮವಾಗಿ ಎಂಟು ಸಲಪರಿವರ್ತಿಸಿ ಬರುತ್ತದೆ. ಈ ಕಾರಣದಿಂದ ಇವುಗಳಿಗೆ ಚರಕರಣಗಳೆಂದು ಹೆಸರು. ಶುಕ್ಲ ಪ್ರಥಮ ತಿಥಿಯ ಮೊದಲ ಭಾಗ (ಮೊದಲ ಅರ್ಧಭಾಗ) ಕಿಂಸ್ತುಘ್ನವೆಂಬ ಕರಣ. ಕೃಷ್ಣ ಚತುರ್ದಶಿಯ ಉತ್ತರಾರ್ಧದ ಆರಂಭದಿಂದ (ಎರಡನೆಯ ಅರ್ಧ) ಶಕುನಿ ಎಂಬ ಕರಣ. ಅಮಾವಾಸ್ಯೆಯ ಪೂರ್ವಾರ್ಧ ಮತ್ತು ಉತ್ತರಾರ್ಧಗಳಲ್ಲಿ ಚತುಷ್ಪಾತ್ ಮತ್ತು ನಾಗವಾನ್ ಎಂಬ ಕರಣಗಳಿವೆ. ಇವು ತಿಂಗಳೊಂದರ ಒಳಗೆ ಪುನರಾವರ್ತಿಸದಿರುವುದರಿಂದ ಸ್ಥಿರಕರಣಗಳು. ಏಳು ಚರಣಗಳ ಎಂಟು ಆವರ್ತನೆಗೆ ಐವತ್ತಾರು ಕರಣಗಳು ಆಗುತ್ತದೆ. ಇದಕ್ಕೆ ನಾಲ್ಕು ಸ್ಥಿರ ಕರಣಗಳನ್ನು ಸೇರಿಸಿದಾಗ ಮೂವತ್ತು ತಿಥಿಗಳಲ್ಲಿ ಒಂದು ತಿಂಗಳಲ್ಲಿ ಅರವತ್ತು ಕರಣಗಳಾಗುವುವು. </span><br />
<div style="font-family: tunga;">
<br /></div>
<span style="font-family: 'tunga';">01ಬವ 02ಬಾಲವ 03ಕೌಲವ 04ತೈತಿಲ 05ಗರಜ 06ವಣಿಜ 07ಭದ್ರಾ 08ಶಕುನಿ 09ಚತುಷ್ಪಾತ್ 10ನಾಗವಾನ್ 11ಕಿಂಸ್ತುಘ್ನ</span><br />
<div style="font-family: tunga;">
<br /></div>
<span style="font-family: 'tunga';"><b>ವಿಷ ಮತ್ತು ಅಮೃತ</b>: ಪಂಚಾಂಗದಲ್ಲಿ ತಿಥಿ, ವಾರ, ನಕ್ಷತ್ರ, ಯೋಗ ಮತ್ತು ಕರಣಗಳೆಂಬ ಐದು ಅಂಗಗಳನ್ನು ನಮೂದಿಸಿದ ನಂತರ ವಿಷ ಅಮೃತಗಳ ತಿಳುವಳಿಕೆಯು ಮುಖ್ಯವಾಗಿದೆ. ಪ್ರತಿ ನಕ್ಷತ್ರದಲ್ಲಿಯೂ ನಿರ್ದಿಷ್ಟ ಘಟಿಗಳು ಕಳೆದ ಆನಂತರದ ನಾಲ್ಕು ಘಟಿಗಳಿಗೆ ವಿಷಕಾಲವೆಂಬ ಸಂಜ್ಞೆಯಿದೆ. ಇದನ್ನು ವಿಷ ಎನ್ನುತ್ತಾರೆ. ಅಂತಯೇ ನಿರ್ದಿಷ್ಟ ಘಟಿಗಳು ಕಳೆದ ಆನಂತರದ ನಾಲ್ಕು ಘಟಿಗಳ ಕಾಲವನ್ನು ಅಮೃತ ಅಥವಾ ಅಮೃತಕಾಲವೆನ್ನುತ್ತಾರೆ. ಇದು ಆಯಾ ನಕ್ಷತ್ರದ ಪರಮ ಘಟಿಯು ಅರವತ್ತು ಇದ್ದಾಗಿನ ಲೆಕ್ಕಾಚಾರ. ಪರಮಘಟಿಯಲ್ಲಿ ಹೆಚ್ಚು ಕಡಿಮೆಯಾದಾಗ ತ್ರೈರಾಶಿಕ ವಿಧಾನದಿಂದ ವಿಷ ಮತ್ತು ಅಮೃತ ಕಾಲವನ್ನು ನಿರ್ಧರಿಸಲಾಗುವುದು. ಕೆಲವು ಪಂಚಾಂಗದಲ್ಲಿ ವಿಶೇ, ಅಶೇ ಎಂದು ಬರೆದಿರುತ್ತದೆ. ಇವುಗಳಿಗೆ ವಿಷ ಶೇಷ, ಅಮೃತ ಶೇಷವೆಂದು ಅರ್ಥ. ವಿಷಕಾಲವು ದೋಷಗಳಲ್ಲಿ ಸೇರಿರುವುದರಿಂದ ಶುಭ ಕಾರ್ಯಗಳಿಗೆ ವರ್ಜ್ಯವಾದುದು ಮತ್ತು ಅಮೃತಕಾಲವು ಯೋಗ್ಯವಾಗಿರುತ್ತದೆ.</span></div>
Motivation http://www.blogger.com/profile/08140925864934705325noreply@blogger.com0tag:blogger.com,1999:blog-5247965971580923628.post-28241511716086781222014-07-02T21:01:00.001-07:002014-07-02T21:01:40.887-07:00ನಮ್ಮ ಹಿಂದೂ ಧರ್ಮ:<div dir="ltr" style="text-align: left;" trbidi="on">
<div>
<b>ಧರ್ಮ</b>: ಮುಖ್ಯವಾಗಿ ಧರ್ಮ ಅಂದರೆ ಏನು ಅನ್ನುವುದನ್ನ ತಿಳಿದುಕೊಳ್ಳಬೇಕಾಗಿದೆ. "ಯಾವುದು ಎಲ್ಲರನ್ನೂ ಉಳಿಸಿ ಬೆಳೆಸುತ್ತದೆಯೋ ಅದೇ ಧರ್ಮ. 'ಯದ್ ಧಾರ್ಯತೆ ತದ್ ಧರ್ಮಂ' ಅಂದರೆ ನಾವು ಉಳಿದು ಬೆಳೆಯುವುದಕ್ಕಾಗಿ ಯಾವ ವಿಚಾರಗಳು,ಯಾವ ಆಚರಣೆಗಳು,ಯಾವ ಸಂಪ್ರದಾಯಗಳು ಉಪಯೋಗಕ್ಕೆ ಬರುತ್ತೋ ಅವೆಲ್ಲವೂ ಧರ್ಮ ಅನ್ನಿಸಿಕೊಳ್ಳುತ್ತೆ.ಎಲ್ಲರಿಗೂ ಉಳಿದು ಬೆಳೆಯುವುದಕ್ಕೆ ಸಹಾಯ ಮಾಡುವ ವಿಚಾರಗಳೇ ಧರ್ಮ." ಧರ್ಮ ಅನ್ನುವುದು ವ್ಯಕ್ತಿಗತವಲ್ಲ ಅಂದರೆ ಯಾವುದೆ ವ್ಯಕ್ತಿಯಿಂದ ರಚಿಸಲ್ಪಟ್ಟದ್ದಲ್ಲ. ಅದು ತಲೆತಲಾಂತರಗಳಿಂದ ಬಂದಿರುವಂತದ್ದು. ಉದಾಹರಣೆ ಅಂದರೆ ಹಿಂದೂ ಧರ್ಮ. ಈ ಧರ್ಮವನ್ನು ಯಾವುದೇ ವ್ಯಕ್ತಿ ಸ್ಥಾಪಿಸಿದ್ದು ಅಂತ ಹೇಳಲು ಸಾಧ್ಯವಿಲ್ಲ.</div>
<div>
<br /></div>
<div>
ಇನ್ನು ಪಂಥಗಳ ಬಗ್ಗೆ ಸ್ವಲ್ಪ ತೀಳಿದುಕೊಳ್ಳೋಣ. ಪಂಥಗಳು ಅಥವಾ ಮತಗಳು ಎನ್ನಬಹುದು, ಇದು ವ್ಯಕತಿಗತವಾದದ್ದು ಅಂದರೆ ಒಬ್ಬ ವ್ಯಕ್ತಿಯಿಂದ ಸ್ಥಾಪಿತವಾದದ್ದು ಅಥವಾ ವ್ಯಕ್ಯಿಯನ್ನು ಅನುಸರಿಸುವಂತದ್ದು ಅನ್ನಬಹುದು. ಉದಾಹರಣೆಗೆ ಮುಸ್ಲೀಮ್ ಪಂಥ (ಪೈಗಂಬರರಿಂದ ಸ್ಥಾಪಿತವಾದದ್ದು) ಕ್ರಿಸ್ಚಿಯನ್ ಪಂಥ (ಏಸುವಿನಿಂದ ಸ್ಥಾಪಿತವಾದದ್ದು) ಅಂತ ಹೇಳಬಹುದು. ಹಿಂದೂ ಧರ್ಮದಲ್ಲಿ ಮುಖ್ಯ ಪಂಥಗಳೆಂದರೆ ಶೈವ(ಶಿವನ ಆರಾಧಕರು) ವೈಷ್ಣವ(ವಿಷ್ಣುವಿನ ಆರಾಧಕರು) ಹೀಗೆ.</div>
<div>
<br /></div>
<div>
ಈಗ ತಮಗೆಲ್ಲ ಧರ್ಮಕ್ಕೂ ಪಂಥಕ್ಕೂ ಇರುವ ವ್ಯತ್ಯಾಸ ಚೆನ್ನಾಗಿ ತಿಳಿದಿದೆ ಅಂದುಕೊಳ್ಳುತ್ತೇನೆ. ಸೂಕ್ಷ್ಮವಾಗಿ ಗಮನಿಸಿದಾಗ ತಿಳಿದುಬರುವುದೆನೆಂದರೆ ವಿಶ್ವಕ್ಕೆಲ್ಲ ಇದ್ದದ್ದು ಒಂದೇ ಧರ್ಮ ಅದುವೇ ಹಿಂದೂ ಧರ್ಮ. ಉಳಿದವೆಲ್ಲ ಪಂಥಗಳು ಅಥವಾ ಮತಗಳು. ಯಾಕೆಂದರೆ ಹಿಂದೂ ಧರ್ಮವು ಇಂಥವರಿಂದಲೇ ಅಥವಾ ಇದೇ ಕಾಲದಲ್ಲಿ ಸ್ಥಾಪಿತವಾಗಿದೆ ಅಂತ ಹೇಳಲಸಾಧ್ಯ. </div>
<div>
<br /></div>
<div>
<b>ಹಿಂದೂ ಧರ್ಮ</b>:</div>
<div>
ಹಿಂದೂ ಧರ್ಮಕ್ಕೆ ಇದ್ದ ಮೂಲ ಹೆಸರೆಂದರೆ "ಸನಾತನ ಧರ್ಮ". ಸಿಂಧೂ ನದಿಯ ತೀರದಲ್ಲಿ ಅಭಿವೃದ್ದಿ ಹೊಂದಿದ ಈ ಸಂಸ್ಕ್ರತಿಯನ್ನು ಶತಮಾನಗಳ ಹಿಂದೆಯೇ ಪರ್ಶಿಯನ್ನರು "ಹಿಂದೂ" ಎಂದು ಕರೆದರು.(ಅವರಲ್ಲಿ 'ಸ'ಕಾರ 'ಹ'ಕಾರವಾಗಿ ಉಚ್ಚರಿಸಲ್ಪಡುತ್ತದೆ) ಕ್ರಮೇಣ ಹಿಂದೂ ಸಂಸ್ಕ್ರತಿಯವರು ಆಚರಿಸುವ ಸನಾತನ ಧರ್ಮ, ಹಿಂದೂ ಧರ್ಮವಾಗಿಯೂ ಅದರ ಸದಸ್ಯರು ಹಿಂದುಗಳಾಗಿಯೂ ಸ್ಥಾಪಿತರಾದರು. ಸನಾತನ ಧರ್ಮವನ್ನು "ಆಧ್ಯಾತ್ಮದ ತೊಟ್ಟಿಲು" ಎಂತಲೂ "ಎಲ್ಲ ಧರ್ಮಗಳ ತಾಯಿ" ಎಂತಲೂ ಕರೆಯುತ್ತಾರೆ.ಹೀಗೊಂದು ಹೆಸರಿನಿಂದ ಬಂಧಿಸಲ್ಪಟ್ಟ ಸನಾತನ ಧರ್ಮದ ಬೆಳವಣಿಗೆ ನಿಂತುಹೋಯಿತು. ಮುಂದೆ, ಇದೇ ಚೌಕಟ್ಟಿನೊಳಗೆ ಹಲವು ಪ್ರಯೋಗಗಳು ನಡೆದು ವಿಭಿನ್ನ- ವಿಶಿಷ್ಟ ‘ಭಾರತೀಯ ಸಂಸ್ಕೃತಿಯ’ ಉಗಮವಾಯ್ತು.ಜಗತ್ತಿನ ಪ್ರಪ್ರಾಚೀನ ಸಂಸ್ಕೃತಿಗಳಲ್ಲಿ ಹಿಂದೂ ಸಂಸ್ಕೃತಿಗೆ ಮಹತ್ತ್ವದ ಸ್ಥಾನವಿದೆ. ಇತ್ತೀಚಿನ ದಿನಗಳಲ್ಲಿ ‘ಹಿಂದೂ’ ಎನ್ನುವುದು ‘ಜಾತಿ’ವಾಚಕ ಪದವಾಗಿ ಅರ್ಥಾಂತರಗೊಂಡಿರುವುದರಿಂದ, ಈ ಸಂಸ್ಕೃತಿಯು ಉಗಮಗೊಂಡು ಬೆಳೆದುಬಂದಿರುವ ಭಾರತ ದೇಶವನ್ನು ಆಧಾರವಾಗಿಟ್ಟುಕೊಂಡು ‘ಭಾರತೀಯ ಸಂಸ್ಕೃತಿ’ ಎಂದು ಕರೆಯುವುದು ಸೂಕ್ತವೆನಿಸುತ್ತದೆ. ಇಷ್ಟಕ್ಕೂ ‘ಹಿಂದೂ’ ಎನ್ನುವುದು ಒಂದು ಧರ್ಮ. ‘ಧರ್ಮ’ ಅಂದರೆ ‘ಜಾತಿ’ಯಲ್ಲ. ಅದು ಜೀವನ ವಿಧಾನ. ಈ ಜೀವನ ವಿಧಾನದಿಂದ ಮಾನವನ ಆಂತರಿಕ ಪ್ರಗತಿಯುಂಟಾಗಿ ‘ಸಂಸ್ಕೃತಿ’ಯೂ, ಲೌಕಿಕ ಪ್ರಗತಿಯುಂಟಾಗಿ ‘ನಾಗರಿಕತೆ’ಯೂ ಬೆಳೆದುಬಂದವು. </div>
<div>
<br /></div>
<div>
ಭಾರತದ ಇತಿಹಾಸ ಇಸವಿಗಳ ಲೆಕ್ಕಾಚಾರಕ್ಕೆ ಸಿಕ್ಕುವಂಥದ್ದಲ್ಲ. ನಮ್ಮ ವೈದಿಕ ಪರಂಪರೆಯ ಕಾಲಮಾನ ಸುಮಾರು ಕ್ರಿ.ಪೂ. ೧೦,೦೦೦ದಿಂದ ೭,೦೦೦ ವರ್ಷಗಳು ಎಂದು ಹೇಳಲಾಗುತ್ತದೆ. ಉತ್ಖನನ, ಅಧ್ಯಯನಗಳ ಪುರಾವೆಯಂತೆ, ಇದು ಕನಿಷ್ಠ ಪಕ್ಷ ಕ್ರಿ.ಪೂ. ೫,೦೦೦ವರ್ಷಗಳಿಗಿಂತ ಹಿಂದಿನದು.ಹಿಂದೂ ಧರ್ಮದ ಮೌಲ್ಯಗಳನ್ನೊಳಗೊಂಡ ‘ಹಿಂದೂ ಜಾತಿ’- ಜಾತಿಯಾಗಿ ಗುರುತಿಸಲ್ಪಟ್ಟಿದ್ದು, ಇಸ್ಲಾಮ್, ಇಸಾಯಿ ಮತಗಳ ಉಗಮದ ನಂತರವಷ್ಟೇ. ಅವಕ್ಕೆ ಮುಂಚಿನ ಬೌದ್ಧ , ಜೈನ ಪಂಥಗಳು ಮೋಕ್ಷ ಸಾಧನೆಗಾಗಿ ಕವಲೊಡೆದ ಮಾರ್ಗಗಳಾಗಿ ಗುರುತಿಸಲ್ಪಟ್ಟಿದ್ದವು. ಹಾಗೆಂದೇ ನಾವು ಬೌದ್ಧ- ಜೈನ ಪಂಥಗಳ ದೇವತೆಗಳು, ಪುರಾಣಗಳು, ದೇವಾಲಯಗಳಲ್ಲಿ ಹಿಂದೂ ಧರ್ಮದ ಸಾಮ್ಯತೆ- ಪ್ರಭಾವಗಳನ್ನು ಧಾರಾಳವಾಗಿ ಕಾಣಬಹುದು. ದುರಂತವೆಂದರೆ, ಇಂದು ಹಿಂದೂ ಜಾತಿ, ಹಿಂದೂ ಧರ್ಮದ ಉದಾತ್ತ ಮೌಲ್ಯಗಳನ್ನು ಮರೆಯುತ್ತ, ಅವನ್ನು ಅಪಮೌಲ್ಯಗೊಳಿಸುತ್ತ, ಮಾತೃಧರ್ಮಕ್ಕೆ ಧಕ್ಕೆಯುಂಟು ಮಾಡುತ್ತ ಸಾಗಿರುವುದು. ಇಂದು ನೈಜ ಹಿಂದೂ ಧರ್ಮದ ಪ್ರತಿಪಾದಕರು, ಅನುಚರರು ಕಾಣುವುದು ಅತಿ ವಿರಳ. </div>
<div>
<br /></div>
<div>
ಹಿಂದೂ ಧರ್ಮದ ಪ್ರಮುಖ ಸಂಕೇತವೆಂದ<span style="font-family: 'Tunga';">ರೆ </span>'ಪ್ರಣವ' ಅಥವಾ 'ಓಂ'. ಪ್ರಣವ ಅಂದರೆ ಸದಾ ನೂತನ ಅಥವಾ ಫಲಕಾರಿಯಾದ ದೈವವನ್ನು ಸ್ತುತಿಸುವುದು ಎಂದರ್ಥ.ಹಿಂದೂ ದರ್ಮವನ್ನ 'ವೈದಿಕ ಧರ್ಮ'ವೆಂತಲೂ 'ಆರ್ಯ ಧರ್ಮ'ವೆಂತಲೂ ಕರೆಯುವುದುಂಟು. ಹಿಂದೂ ಧರ್ಮದ ಮೂಲ ಗ್ರಂಥಗಳನ್ನು 'ಶೃತಿ' ಮತ್ತು 'ಸ್ಮೃತಿ' ಗಳೆಂದು ವಿಭಾಗಿಸಲಾಗಿದೆ. ಶೃತಿ ಎಂದರೆ ಕೇಳಿಸಿಕೊಂಡದ್ದು ಎಂದರ್ಥ. ವೇದಗಳನ್ನು ಶೃತಿ ಎನ್ನುತ್ತಾರೆ, ವೇದಗಳು ಯಾರಿಂದ ರಚಿಸಲ್ಪಟ್ಟದ್ದಲ್ಲ. ಸ್ಮೃತಿ ಎಂದರೆ ನೆನಪಿನಲ್ಲಿ ಉಳಿದದ್ದು ಎಂದರ್ಥ.ಉದಾಹರಣೆಗೆ ಮನುಸ್ಮೃತಿ.ಸ್ಮೃತಿಯನ್ನು ರೂಪಿಸುವ ಸಾಹಿತ್ಯವನ್ನು ವೇದಗಳ ನಂತರ ಸುಮಾರು ಕ್ರಿ.ಪೂ. ೫೦೦ರ ಹೊತ್ತಿಗೆ ರಚಿಸಲಾಯಿತು.</div>
<div>
<br /></div>
<div>
ಇನ್ನು ಹಿಂದೂ ಧರ್ಮದ ಕೆಲವು ತತ್ವಗಳ ಬಗ್ಗೆ ತಿಳಿಯೋಣ.</div>
<div>
ವೇದಗಳು: ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ.</div>
<div>
ವರ್ಣಗಳು: ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ.</div>
<div>
ಆಶ್ರಮಗಳು: ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ, ಸನ್ಯಾಸ.</div>
<div>
ಪುರುಷಾರ್ಥ: ಧರ್ಮ, ಅರ್ಥ, ಕಾಮ, ಮೋಕ್ಷ.</div>
<div>
ಮೋಕ್ಷಮಾರ್ಗಗಳು: ಜ್ನಾನ, ಕರ್ಮ, ಭಕ್ತಿ.</div>
<div>
(ಇವುಗಳ ಬಗ್ಗೆ ವಿವರವಾಗಿ ಮುಂದೆ ತಿಳಿಯೋಣ).</div>
<div>
<br /></div>
<div>
ಸ್ವಲ್ಪ ಹಿಂದೂ ಧರ್ಮದ ಬಗ್ಗೆ ತಿರಸ್ಕಾರ ಮತ್ತು ಹೊಸ ಮತಗಳ ಉದಯಕ್ಕೆ ಕಾರಣ ಏನು ಅನ್ನುವುದನ್ನ ತಿಳಿಯೋಣ.</div>
<div>
ಹಿಂದೂ ಧರ್ಮದ ಹಲವು ದೋಷಗಳು ಮತ್ತು ದಬ್ಬಾಳಿಕೆಗಳು.</div>
<div>
ಬ್ರಾಹ್ಮಣರ ಪ್ರಾಬಲ್ಯ.</div>
<div>
ಕಠೋರ ಆಚರಣೆಗಳು ಮತ್ತು ಪ್ರಾಣಿಬಲಿ.</div>
<div>
ಜನ ಸಾಮಾನ್ಯರಿಗೆ ಅರ್ಥವಾಗದ ಹಿಂದೂ ಗ್ರಂಥಗಳು.</div>
<div>
ಜಾತಿ ಪದ್ಧತಿ ಮತ್ತು ಅಸ್ಪೃಶ್ಯತೆ.</div>
<div>
<br /></div>
<div>
ಇಂದಿನ ಕಾಲದಲ್ಲಿ ಹಿಂದೂ ಧರ್ಮದ ಬಗ್ಗೆ ತಾತ್ಸಾರ ಉಂಟಾಗಲು ಮುಖ್ಯ ಕಾರಣವೆಂದರೆ ಹಿಂದೂ ಧರ್ಮದಲ್ಲಿನ ಆಚಾರ ವಿಚಾರಗಳು. ಸಿದ್ಧಾಂತಗಳು, ಹಲವಾರು ಧರ್ಮ ಗ್ರಂಥಗಳು, ಪಂಥಗಳು (ಶೈವ, ವೈಷ್ಣವ, ಚಿತ್ಪಾವನ, ದೇಶಸ್ಥ, ಹವ್ಯಕ) ಪುರಾಣಗಳು ಹೀಗೆ ಬ್ರಾಹ್ಮಣ ಸಮಾಜದಲ್ಲಿ ಒಡಕು ಉಂಟಾಗಿದೆ. ಒಬ್ಬರ ಆಚರಣೆಗಳು ಇನ್ನೊಬ್ಬರಿಗೆ ಮಾನ್ಯವಿಲ್ಲದಿರುವುದು. ಪ್ರತಿಯೊಬ್ಬರೂ ತಮ್ಮದೇ ಆದ ಆಚರಣೆಗಳನ್ನು ಅನುಸರಿಸುತ್ತ ಇನ್ನೊಬ್ಬರ ಆಚರಣೆಗಳನ್ನು ದೂಷಿಸುತ್ತಿರುವುದು ನಮ್ಮ ಧರ್ಮದಲ್ಲಿ ಒಡಕು ಉಂಟಾಗಲು ಮುಖ್ಯ ಕಾರಣವಾಗಿದೆ.</div>
</div>
Motivation http://www.blogger.com/profile/08140925864934705325noreply@blogger.com0tag:blogger.com,1999:blog-5247965971580923628.post-75515626299331787352014-05-13T19:40:00.000-07:002014-05-13T19:43:25.913-07:00ಸನ್ಯಾಸಿಯ ಮಗು:<div dir="ltr" style="text-align: left;" trbidi="on">
<div style="border: 0px; font-family: Georgia, Times, 'Times New Roman'; font-size: 14px; line-height: 20px; margin-bottom: 10px; padding: 0px; text-align: justify; vertical-align: baseline;">
<span style="background-color: #fce5cd;"><b>"ಅವ್ವಾ.. ಅವ್ವಾರ<br />ತಿನ್ನಾಕ ಒಸಿ ನೀಡ್ರೀ.. ಹೂಟ್ಟಿ ಹಸಿದೈತಿ<br />ಎನಾರ ಕೊಡ್ರಿ ಮನಿಗೆ ಒಳ್ಳೆದಾಕೈತಿ…" ಬೆಳಿಗ್ಗೆ ಮುಂಚಾ ಅಂಗಳದಾಗ ಅನಾಮಧೇಯ ಧ್ವನಿ ಕೇಳಾಕತ್ತಿತ್ತು.<br />"ಬೆಳಿಗ್ಗೆ ಆಗೋ ಪುರುಸೊತ್ತಿಲ್ಲ ಮನಿ ಬಾಗಿಲನಾಗ ಬಂದು ಬೇಡಾಕ್ ಸುರು ಆತು" ಅಂತ ಬಯ್ಕೋತ ಸೀತವ್ವ ಸಿಟ್ನಾಗ ಹೊರಗಡೆ ಮುಖಾನೂ ಹಾಕ್ದೆ ಹಿತ್ತಲಮನಿ ಕಡಿಗೆ ಹೋದ್ಲು.. </b></span></div>
<div style="border: 0px; font-family: Georgia, Times, 'Times New Roman'; font-size: 14px; line-height: 20px; margin-bottom: 10px; padding: 0px; text-align: justify; vertical-align: baseline;">
<span style="background-color: #fce5cd;"><b>"ಉಳದಿದ್ದು ಬಳದಿದ್ದು ಎನಾರ ನಡಿತೈತಿ, ಒಸಿ ನೀಡ್ರಿ ಹೊಟ್ಟಿ ಹಸದೈತಿ<br />ಕೊಡೋರಿಗೆಲ್ಲಾ ಸಿಕ್ಕಪಟ್ಟೆ ಕೊಟ್ಟೀರಿ, ದೇವ ಧರ್ಮಾ ಎಲ್ಲಾ ಮಾಡೀರಿ<br />ನನಗೂ ತುಸಾ ನೀಡ್ರಿ, ಕೂಸಿಲ್ಲದ ಮನೀಲಿ ವರ್ಶದಾಗ ತೊಟ್ಲಾ ತೂಗತೈತಿ.."<br />ತೊಟ್ಲಾ ತೂಗತೈತಿ ಅಂದಿದ್ದೆ ತಡಾ ಜಾನಕಿ ಕಿವಿ ನೆಟ್ಟಗಾತು, ಇದ್ಬಿದ್ದ ಎಲ್ಲಾ ಕೆಲಸಾ ಬದಿಗಿಟ್ಟು ಉಳದಿದ್ದ ರೊಟ್ಟಿ ಪಲ್ಯಾ ಪತ್ರಾವಳ್ಯಾಗ ಹಾಕ್ಕಂಡು ಭರಾ ಭರಾ ಅಂಗಳದ ಕಡಿಗೆ ಹೆಜ್ಜಿ ಹಾಕಿದ್ಲು. ಅಂಗಳದಾಗ ಸುಮಾರು ೫೦ ರ ಆಸು ಪಾಸಿನ ಮನಶ್ಯಾ ಜೋಳಗಿ ಹಿಡಕಂಡು ನಿಂತಿದ್ದ. ನೋಡಿದ್ರ ಬಿಕ್ಷುಕನ ಥರಾನೂ ಇಲ್ಲ, ಉದ್ದಾನಿ ಗಡ್ಡ ಬಿಟ್ಕಂಡು ಒಳ್ಳೆ ಹಿಮಾಲಯದ ಬದಿಯಿಂದ ಬಂದ ಸಂನ್ಯಾಸಿ ಥರ ಇದ್ದ. ಹೊಟ್ಟಿ ಹಸಿದಾಂಗ ಕಾಣೋ ಯಾವ ಲಕ್ಷಣಾನೂ ಮುಖದಾಗ ಇರಲಿಲ್ಲ. ದಿವ್ಯ ತೇಜ ಅವ್ನ ಮುಖದಾಗಿತ್ತು. ಹಂಗ ಅವ್ನ ಮುಖಾ ನೊಡ್ಕೋತ ಗರ ಬಡಿದೋರ ಥರಾ ನಿಂತಿದ್ದ ಜಾನಕಿ "ಏನವ್ವ ನೀಡಾಕಿಲ್ವಾ" ಅಂದಾಗೇ ಭೂಮಿ ಮ್ಯಾಕೆ ಬಂದಿದ್ದು. ಕೈಲಿದ್ದ ರೊಟ್ಟಿ ಪಲ್ಯಾ ಸಾಧು ಕೈಯ್ಯಾಗಿಟ್ಟು "ಯಾರಾ ತಾವು, ನಿಮ್ನಾ ಈ ಊರಾಗ ಎಲ್ಲೂ ಕಂಡಾಗಿಲ್ಲಾ. ತೊಟ್ಲಾ ತೂಗತೈತಿ ಅಂದ್ರಲ್ಲಾ ನಿಜಾನ" ಅಂದಿದ್ದಕ್ಕೆ ಸುಮ್ಮನೆ ನಕ್ಕು ಕ್ಷಣಮಾತ್ರದಾಗ ಕಣ್ಮರೆಯಾದ. ಹಂಗೆ ನಿಟ್ಟುಸಿರಾ ಬಿಟ್ಟು ಅವಾ ಹ್ವಾದ ದಾರಿನೇ ನೊಡ್ತಾ ಜಾನಕಿ ಯಾವ್ದೊ ಮಾಯದಾಗ ಕಳದುಹೊಗಿದ್ಲು. </b></span></div>
<div style="border: 0px; font-family: Georgia, Times, 'Times New Roman'; font-size: 14px; line-height: 20px; margin-bottom: 10px; padding: 0px; text-align: justify; vertical-align: baseline;">
<span style="background-color: #fce5cd;"><b>"ಮನ್ಯಾಗ ಇರೋ ಸಾಮಾನೆಲ್ಲಾ ಹಿಂಗಾ ಊರ ಮಂದಿಗೆ ದಾನ ಮಾಡಿ, ಗುಡ್ಸಿ ಗುಂಡಾಂತರಾ ಮಾಡೋವರ್ಗೂ ಸಮಾಧಾನಿಲ್ಲ ಇಕೀಗೆ, ಇವರಪ್ಪ ಎನ್ ಸಿಕ್ಕಾಪಟ್ಟೆ ಹೇರಿ ಕಳ್ಸಿರೊ ಥರಾ ದೇವ್ರು ದಿಂಡ್ರು ಅಂತಾ ದಾನಾ ಧರ್ಮಾ ಮಾಡಿದ್ರೂ ಇದರ ಬಸರು ಎನ್ ನಿಲ್ಲಾಂಗಿಲ್ಲಾ. ಅದ್ಯಾವ ಕೆಟ್ ಗಳಿಗ್ಯಾಗೆ ಹುಟ್ಟಿ ಈ ಮನ್ಯಾಗ ಕಾಲಿಟ್ಯವ್ವಾ ಮಹಾತಾಯಿ… ಇನ್ನಾ ಏಟೋತ್ತು ಅಂಗಳದಾಗ ಹಿಂಗಾ ನಿತ್ಕೊಂಡಿರ್ತಿ ಮನೀ ಕೆಲ್ಸಾ ರಗಡ್ ಅದಾವ್, ನಿಮ್ಮವ್ವ ಎನ್ ಬಂದ್ ಮಾಡ್ಯಾಳಾ..??" ಸೀತವ್ವ ಅತ್ಲಾಗಿಂದ ಕೂಗಾಕ ಹತ್ತಿದ್ಲು. ಈ ಅತ್ತೀ ಬಯ್ಗುಳಾ ದಿನಾ ಇದ್ದಿದ್ದೇ ಅಂತಾ ಹಂಗ ಬಿಟ್ಟ್ ಉಸರಾ ಬಿಟ್ಟು ಜಾನಕಿ ಕೊಟ್ಟಗಿ ಕಡಿಗೆ ಮುಖಾ ಮಾಡಿದ್ಲು.</b></span></div>
<div style="border: 0px; font-family: Georgia, Times, 'Times New Roman'; font-size: 14px; line-height: 20px; margin-bottom: 10px; padding: 0px; text-align: center; vertical-align: baseline;">
<span style="background-color: #fce5cd;"><b>*****</b></span></div>
<div style="border: 0px; font-family: Georgia, Times, 'Times New Roman'; font-size: 14px; line-height: 20px; margin-bottom: 10px; padding: 0px; text-align: justify; vertical-align: baseline;">
<span style="background-color: #fce5cd;"><b>ಹಾವನೂರಿನ ಸುಮಾರು ನೂರು ಎಕರಿ ಜಮೀನಿನ ಜಮೀನ್ದಾರ ಕಿಟ್ಟಪ್ಪ ಜೋಗಿ. ಬಯಲು ಸೀಮಿ ಆದ್ರೂ ತುಂಗಭದ್ರಾ ನದೀ ತೀರದ್ ಜಮೀನು ಅಂದ್ರ ಬೀಜಾ ಹಾಕಿದ್ರ ಬಂಗಾರ ಬೆಳ್ಯೊ ಜಮೀನು. ಕಿಟ್ಟಪ್ಪ ಜೋಗಿ ಹೆಂಡ್ತಿ ಸೀತವ್ವ. ಈ ಜೋಡಿ ಒಂದೇ ಸಂತಾನ ಅಂದ್ರ ರಾಮನಾಥ. ಒಳ್ಳೆ ಫಲವತ್ತಾದ ಜಮೀನು, ಬಂಗಾರದಂತಾ ಬೆಳಿ, ಹೊಟ್ಟಿ ಬಟ್ಟಿಗೆನೂ ಕಮ್ಮಿ ಇಲ್ಲಾಗಿತ್ತು. ಓದಿ ಉದ್ಧಾರಾಗ್ಲಿ ಹೇಳಿ ರಾಮನಾಥಂಗೆ ಕಾಲೆಜ್ ಮಟಾ ಓದಿಸಿದ್ದ ಕಿಟ್ಟಪ್ಪ. ಇಷ್ಟಾದ್ರೂ ರಾಮನಾಥ ಕಡೀಗೆ ಮತ್ತ್ ಬಂದು ಊರ್ನಾಗೆ ಜಮೀನು ನೋಡ್ಕಂಡು ಇರಾಕಹತ್ತಿದ್ದ. ಮದ್ವಿ ವಸ್ಸಿಗೆ ಮದ್ವಿನೂ ಆತು. ಸೀತವ್ವ ಎಷ್ಟು ಹೇಳಿದ್ರೂ ನಾ ಪತ್ರಿಕಾ ಎಲ್ಲಾ ನೋಡಾಂಗಿಲ್ಲಾ ಅಂತ, ಹಂಗ ಬಡ ಮನೀ ಜಾನಕಿನ ಮದ್ವಿನೂ ಆದ. ಹಂಗಾಗಿ ಸೀತವ್ವಂಗೆ ಜಾನಕಿ ಕಂಡ್ರ ಅಷ್ಟಕಷ್ಟೆ ಆಗಿತ್ತ. ಆದ್ರ ಜಾನಕಿ ಅತ್ತೀನ ಅವ್ವನ ಥರ ನೊಡ್ಕತ್ತಿದ್ಲು. ಮಾವಂಗೆ ಒಳ್ಳೀ ಸೊಸಿಯಾಗಿ, ಗಂಡಗೆ ತಕ್ಕ ಹೆಂಡ್ತಿ ಆಗಿ ಅತ್ತಿ ಮಾತ್ನ ಹೊಟ್ಟ್ಯಾಗ ಹಾಕ್ಕಂಡು ಚಲೊತ್ನಾಗ ಮನೀ ನಡಸ್ಕಂಡು ಹೋಗತಿದ್ಲು. ಮದ್ವಿ ಆಗಿ ಎಂಟು ವರ್ಷ ಆದ್ರೂ ಜಾನಕಿ ಮಡಿಲು ತುಂಬಿರಲಿಲ್ಲ. ಅದೂ ಇದೂ, ಓಶಧಿ ಉಪಚಾರ ಎಲ್ಲಾ ಮಾಡಿದ್ರೂ ಎನೂ ಉಪಯೋಗ ಇಲ್ಲಾತು. ಇದ್ದ ಬದ್ದ ಎಲ್ಲಾ ಹರಕಿನೂ ಆತು. ಮಗಾ ಇಲ್ಲಾ ಅನ್ನೊ ಚಿಂತಿ, ಜೊತ್ಯಾಗ ಅತ್ತೀ ಬಯ್ಗುಳದಾಗ ಜಾನಕಿ ಥಂಡಾಗಿದ್ಲು. </b></span></div>
<div style="border: 0px; font-family: Georgia, Times, 'Times New Roman'; font-size: 14px; line-height: 20px; margin-bottom: 10px; padding: 0px; text-align: justify; vertical-align: baseline;">
<span style="background-color: #fce5cd;"><b>"ಆಗೋ ಕಾಲಕ್ಕೆ ಎಲ್ಲಾ ಆಗತೈತಿ ನೀ ಯಾಕ್ ಆ ಮಗೀಗೆ ಸುಮ್ ಸುಮ್ನಾ ತ್ರಾಸ್ ಕೊಡ್ತಿ" ಅಂತಾ ಕಿಟ್ಟಪ್ಪ ಸೀತವ್ವಂಗೆ ಬಯ್ತಾ "ನೀ ಇಕಿ ಮಾತ್ನ ಮನ್ಸಿಗೆ ಹಚ್ಕಾಳಕೆ ಹೊಗಬ್ಯಾಡಾ, ದೇವ್ರು ಅವ್ನೆ ಅವಾ ಎಲ್ಲಾ ನೋಡ್ಕಾತಾನೆ" ಅಂತಾ ಸೊಸಿಗೆ ಸಮಾಧಾನ ಮಾಡಿದ್ದ. "ನಾ ಇನ್ಮುಂದಾ ಮಾತಾಡಂಗೆ ಇಲ್ಲಾ, ನಾ ಮಾತಾಡಿದ್ರೆ ಎಲ್ಲಾರಗೂ ಚುಚ್ತೈತಿ. ಇದ್ದದ್ದು ಇದ್ದಾಂಗ್ ಹೇಳಿದ್ರ ಎಲ್ಲಾ ನನ್ ಮ್ಯಾಕೆ ಬಯ್ರಿ. ನಾ ಹೇಳಿದ್ದ ಮಾತಾ ಯಾರ್ ಕೇಳ್ತಾರ?? ಮದ್ವಿ ಮಾಡಬೇಕಾರ ಹೇಳಿದ್ನಿ, ಹುಡ್ಗಿ ರಾಶಿ ನಕ್ಷತ್ರ ನೊಡಿ ಮದ್ವಿ ಮಾಡ್ರಿ ಅಂತ… ಯಾರಾರಾ ಕೇಳಿರನೂ ಈಗಾ ಅನುಭವಿಸ್ರಿ" ಅನ್ನೊ ಮಾತು ದಿನಕ್ಕೊಮ್ಮಿಯಾದ್ರೂ ಸೀತವ್ವನ ಬಾಯಿಂದ ಬರ್ದೆ ಹೊಗಾಂಗಿಲ್ಲಾಗಿತ್ತು. ರಾಮನಾಥ ಇದ್ಯಾವ್ದು ನಂಗ ಸಂಬಂಧಾನೂ ಇಲ್ದೆ ಇರೊ ಹಂಗ ಇರ್ತಿದ್ದ. ಇದು ಎಲ್ಲಾದರ ನಡುವೆ ಜಾನಕಿ ಮನಸ್ಸು ಒಳಗೊಳಗ ಸಾಯಾಕತ್ತಿತ್ತು. ಇವತ್ತಲ್ಲಾ ನಾಳಿಯದ್ರೂ ನನ್ ಮಡ್ಲು ತುಂಬ್ತೈತಿ ಅನ್ನೊ ಆಸೆ ಮಾತ್ರ ಇನ್ನಾ ಹಂಗೇ ಇತ್ತು.</b></span></div>
<div style="border: 0px; font-family: Georgia, Times, 'Times New Roman'; font-size: 14px; line-height: 20px; margin-bottom: 10px; padding: 0px; text-align: center; vertical-align: baseline;">
<span style="background-color: #fce5cd;"><b>*****</b></span></div>
<div style="border: 0px; font-family: Georgia, Times, 'Times New Roman'; font-size: 14px; line-height: 20px; margin-bottom: 10px; padding: 0px; text-align: justify; vertical-align: baseline;">
<span style="background-color: #fce5cd;"><b>ಸಂಜಿ ಹೊತ್ತು ಗಂಟೆ ಆರಾಗಿತ್ತು, ಸೀತವ್ವ ಗದ್ದಿ ಕಡಿಗಿಂದ ಹುಲ್ ಹೊರಿ ಹೊತ್ಕಂಡು ಮನಿ ಬಾಗಲಿಗೆ ಬರೋ ಪುರುಸೊತ್ತಿಲ್ಲ ಪಕ್ಕದ್ ಮನಿ ದ್ಯಾಮವ್ವ "ಅವ್ವಾರ ಅವ್ವಾರ ಸಿಹಿ ಸುದ್ದಿ ಐತಿ,ಸಣ್ಣ್ ಅವ್ವಾರಿಗ್ ಮೂರ್ ತಿಂಗಳಾ. ಅಂತೂ ದೇವರು ಕಣ್ಣ್ ಬಿಟ್ಟಾನ ನೋಡ್ರಿ ಅವ್ವಾರ ಮಡಿಲು ತುಂಬೈತಿ"ಅಂತ ಓಂದೆ ಉಸರಿನಾಗ ಒದರಿ ಮನಿ ದಾರಿ ಹಿಡದ್ಲು. "ಇನ್ನಾ ಈ ದ್ಯಾಮವ್ವ ಈಡೀ ಊರಾಗ ಡಂಗುರಾ ಸಾರಾಕ್ಯೆ" ಅನ್ಕೋತ ಸೀತವ್ವ ಭರಾ ಭರಾ ಕೈ ಕಾಲು ಮುಖಾ ತೊಕ್ಕೊಂಡು ಸೀದಾ ಒಳಗೆ ನಡದ್ಲು. ಸೀತವ್ವ ಬಂದಿದ್ದ ನೋಡೀ ಜಾನಕಿ ಮುಖದಾಗ ನಗು ತುಸಾ ಕಮ್ಮಿ ಆತು. "ದೇವ್ರಿಗೆ ತುಪ್ಪದ್ ದೀಪಾ ಹಚ್ಚೀನ ಇಲ್ಲಾ??" ಅನ್ನೊ ಅತ್ತಿ ಮಾತ್ ಕೇಳಿ ಜಾನಕಿ ತುಸಾ ಗಡಬಡಿಸಿ "ಹೂಂ ರಿ" ಅಂದ್ಲು. "ತುಸಾ ಕಾಳಜಿ ತಗೊ" ಅಂತ ಹೇಳಿ ಅಕಿ ಉತ್ತರಾನೂ ಕೇಳದೆ ಅಡಗಿ ಮನಿ ಕಡಿಗೆ ನಡದಿದ್ಲು ಸೀತವ್ವ. ಕಿಟ್ಟಪ್ಪ ಜೋಗಿಗೆ ಎಲ್ಲಿಲ್ಲದ್ ಖುಶಿ, ಬಾಳ್ ವರ್ಶದ ನಂತರಾ ಮನ್ಯಾಗ ಕೂಸ್ ಹುಟ್ಟೊ ಸಡಗರಾ."ಅಂತೂ ಈ ಮನ್ಯಾಗ ತೊಟ್ಲಾ ತೂಗತೈತಿ ಅಂತಾತು, ವಸಿ ಜೋಪಾನ ಆಗಿರು. ನೀರೆತ್ತುದು, ಕೊಟ್ಟಿಗಿ ಕೆಲ್ಸಾ ಇನ್ನಾ ಮಾಡಾಕ್ ಹೊಗ್ ಬ್ಯಾಡಾ.ಮೊದಲ ಬಸುರು ಕಾಳಜಿ ತಗೊಬೇಕು. ನಿನ್ ಗಂಡಂಗೆ ತುಸಾ ಲಕ್ಷಾ ಕೊಡಾಕ ಹೇಳು" ಅನ್ನೊ ಕಿಟ್ಟಪ್ಪನ ಮಾತಿಗೆ ಸುಮ್ನಾ ತಲಿ ಆಡ್ಸಿ ಜಾನಕಿ ಸಮ್ಮತಿ ನೀಡಿದ್ಲು. "ತುಸಾ ಸೊಸಿ ಕಾಳಜಿ ತಗೊ, ಚೊಚ್ಚಲ್ ಬಸುರು ಏನೆನು ಬಯಕಿ ಕೇಳಿ ಮಾಡ್ಕೊಡು. ಉಡಿ ತುಂಬೊ ಕಾರ್ಯಾ ಬ್ಯಾಗಾ ಮುಗಸ್ಬುಡು" ಅಂತಾ ಹೆಂಡ್ತಿಗೆ ಅಪ್ಪಣೆನೂ ಆತು. ಜಾನಕಿಗ ಸ್ವರ್ಗಕ್ಕ ಮೂರೆ ಗೇಣು ಅನ್ನಷ್ಟು ಖುಶಿ. ಆ ಖುಶ್ಯಾಗ ಅಕಿ ಎಲ್ಲಾ ದುಃಖ ಮರತಿದ್ಲು. </b></span></div>
<div style="border: 0px; font-family: Georgia, Times, 'Times New Roman'; font-size: 14px; line-height: 20px; margin-bottom: 10px; padding: 0px; text-align: justify; vertical-align: baseline;">
<span style="background-color: #fce5cd;"><b>ಆ ಸನ್ಯಾಸಿ ಮನಿ ಕಡೀಗೆ ಬಂದ್ ಹೋಗಿ ಸುಮಾರು ನಾಕೈದು ತಿಂಗಳಾ ಆಗಿತ್ತ.ಅವಾ ಬಂದ್ ಹೋಗಿದ್ದು ಯಾರ ಜಪ್ತಿನಾಗೂ ಇರಲಿಲ್ಲ. ಆದರ ಜಾನಕಿ ಮಾತ್ರ ಅವನ್ನ ಮರತಿರಲಿಲ್ಲ. ರಾತ್ರಿ ಗಂಡನ ಜೋತಿ ಮಲಗಿ ಮಾತಾಡಕತ್ತಿದ್ಲು " ಆ ಸಾಧು ಬಂದೊಗಿ ಸುಮಾರ್ ನಾಲ್ಕೈದು ತಿಂಗ್ಳಾ ಆಗೈತಿ, ಅವಾ ಹೇಳಿದ್ದು ಖರಾ ಆತು. ಅವಾ ಬರೀ ಸಾಧು ಅಲ್ಲಾ, ಅವಂಗ ಎಲ್ಲಾ ಗೊತ್ತೈತಿ ಹೌದಲ್ಲೊ?? ನಿಮ್ಗ ಎನ್ ಅನಸ್ತೈತಿ.." ಅನ್ನೊ ಜಾನಕಿ ಮಾತಿಗೆ "ಯಾರೊ ಬರ್ತಾ ಇರ್ತಾರ್ ಹೊಗ್ತಾ ಇರ್ತಾರ, ಎಲ್ಲಾರ್ ಮಾತು ಖರಾ ಆಗಿತ್ತಂದ್ರ ಯಾವಾಗೊ ಮಕ್ಕಳು ಆಗ್ತಿತ್ತು. ಎಲ್ಲಾ ಬಂದು ದುಡ್ಡ್ ಕಿತ್ಕೊಂಡು ಹೊಗ್ತಾರ್ ಆಟೆಯಾ. ನೀ ಅವೆಲ್ಲಾ ಮನಸಿಗೆ ಹಚ್ಕೊಂಡು ಕೊರಗಾಕ ಹೊಗಬ್ಯಾಡ, ಸುಮ್ನಾ ಮಲಗು ರಾತ್ರಿ ಜಾಸ್ತಿ ಜಾಗರಣಿ ಮಾಡಿ ಆರೊಗ್ಯ ಹಾಳ್ ಮಾಡ್ಕೊಬ್ಯಾಡ" ಅಂತ ಮುಖಾ ತಿರಗಿಸಿ ಸುಮ್ನಾದ. ಆದರ ಜಾನಕಿ ಮನಸನ್ಯಾಗ ಆ ಸಾಧು ಬಗ್ಗಿ ವಿಶೇಷ ಕಾಳಜಿ ಇತ್ತು. ಇದೇ ವಿಚಾರ ಮಾಡ್ತಾ ಆಕಿಗೆ ಯಾವಾಗ ನಿದ್ದಿ ಹತ್ತತೊ ಗೊತ್ತಾಗಿಲ್ಲ.</b></span></div>
<div style="border: 0px; font-family: Georgia, Times, 'Times New Roman'; font-size: 14px; line-height: 20px; margin-bottom: 10px; padding: 0px; text-align: center; vertical-align: baseline;">
<span style="background-color: #fce5cd;"><b>*****</b></span></div>
<div style="border: 0px; font-family: Georgia, Times, 'Times New Roman'; font-size: 14px; line-height: 20px; margin-bottom: 10px; padding: 0px; text-align: justify; vertical-align: baseline;">
<span style="background-color: #fce5cd;"><b>"ಅವ್ವಾ ಅವ್ವಾರ ತುಸಾ ಉಣ್ಣಾಕ ನೀಡ್ರಿ<br />ತೊಟ್ಲಾ ತೂಗತೈತಿ, ಮನ್ಯಾಗ ಲಕ್ಷ್ಮಿ ಬರತಾಳ<br />ಉಣ್ಣಾಕ ನೀಡ್ರಿ ಹೊಟ್ಟಿ ಹಸದೈತಿ… "<br />ಅದೇ ದನಿ, ಅದೇ ಕೂಗು. ದೇವರ ದ್ಯಾನ ಮಾಡ್ಕೊತ ಕೂತಿದ್ದ ಜಾನಕಿಗೆ ಒಮ್ಮಿಗೆ ಎಚ್ಚರಾತು. ಕನಸೋ, ನನಸೋ ತಿಳಿದಾ ಭರಾ ಭರಾ ಎದ್ದು ಮನಿ ಬಾಗಲಿಗ ಬಂದ್ರ ಎದರಿಗೆ ಅದೇ ಸಾಧು ನಿಂತಿದ್ದ. ಖುಶ್ಯಾಗ ಒಳಗೋಗಿ ಗಂಡ ತನಗಾ ಅಂತ ತಂದಿದ್ದ ಹಣ್ಣು, ಅದು ಇದು ಅಂತ ಒಂದಿಷ್ಟು ಬಟ್ಟಲದಾಗ ತುಂಬಕೊಂಡು ಸೀದಾ ಸನ್ಯಾಸಿ ಎದ್ರಿಗೆ ನಿಂತು ಕೈ ಮುಂದ್ ಮಾಡಿ ನೀಡಾಕ್ ಹೋದ್ಲು.. "ಇವೆಲ್ಲಾ ನನಗ್ ಬ್ಯಾಡಾ, ನಿನಗ ಈಗ ಇದರ ಅವಶ್ಯಕತಿ ಅದಾ," ಅಂತ ಒಂದು ಹಣ್ಣು ಎತ್ಕೊಂಡು "ಎಷ್ಟ್ ತಿಂಗಳವ್ವಾ ತಾಯಿ..?" ಅಂದ. "ಆರ್ ತಿಂಗಳಾ ಸ್ವಾಮೆರಾ… ಅಲ್ಲಾ ಅವತ್ತು ಹಂಗಾ ಮಾಯಾ ಆಗ್ಬುಟ್ರಿ. ಈಗ ಮತ್ತ ಬಂದೀರಾ… ಲಕ್ಷ್ಮಿ ಬರತಾಳ ಅಂತೀರಾ, ಹೆಣ್ ಮಗಾ ಆಗತೈತಾ…??" ಅನ್ನೊ ಮಾತಿಗ ಮತ್ತ್ ತುಸಾ ನಕ್ಕು "ಎಲ್ಲಾ ಒಳ್ಳೆದಾಕೈತಿ ಎನೂ ಚಿಂತಿ ಮಾಡಬ್ಯಾಡಾ ತಾಯಿ" ಅಂತ ಹಂಗಾ ನಡದೇಬುಟ್ಟಾ. "ಯಾರ್ ಅದಾನ ಇವಾ..?? ಒಮ್ಮಿಗೇ ಬರತಾನ ಹಂಗಾ ಮಾಯ ಆಗತಾನ… ನಂಗೂ ಇವಂಗೂ ಎನ್ ನಂಟ ಅದ..ಯಾವ ಜನ್ಮದಾಗ ಎನ್ ಆಗಿದ್ನೊ ಎನೋ??" ಅಂತಾ ಯೊಚನೆ ಮಾಡ್ತಾ ಹಂಗ ಮನಿ ಒಳಗ ನಡದ್ಲು ಜಾನಕಿ.</b></span></div>
<div style="border: 0px; font-family: Georgia, Times, 'Times New Roman'; font-size: 14px; line-height: 20px; margin-bottom: 10px; padding: 0px; text-align: justify; vertical-align: baseline;">
<span style="background-color: #fce5cd;"><b>ಜಾನಕಿಗ ಆರ್ ತುಂಬಿ ಏಳಕ್ಕೆ ಬಿದ್ದಿತ್ತು. ಮಾವ, ಗಂಡನ ಆರೈಕ್ಯಾಗ ಯಾವದಕ್ಕೂ ಕಮ್ಮಿ ಇಲ್ಲಾಗಿತ್ತು. ಖುಶ್ಯಾಗ ನಾಕ್ ಮಾತು ಆಡದಿದ್ರೂ ಅತ್ತೀ ಬೈಗುಳ ಕಮ್ಮಿಯಾಗಿತ್ತು. ಹೊತ್ತ್ ಹೊತ್ತಿಗೆ ಊಟಾ, ಹಣ್ಣು ಹಂಪಲಾ, ಅಂಟಿನ ಉಂಡಿ ಎಲ್ಲಾ ತಿನ್ಕೊತ ದೇವರ ದ್ಯಾನ ಅನ್ಕೊತ ಆರಾಮಾಗಿ ಕಾಲ ಕಳಿತಿದ್ಲು ಜಾನಕಿ.<br />ಗಂಡನೂ ಮನಿ ಕಡಿಗೆ ಇದ್ದು ಜಾನಕಿ ಕಾಳಜಿ ತಗೊತಿದ್ದ. ಸಾನೆ ವರ್ಶದಾಗ ಮನ್ಯಾಗ ಮಗಾ ಬಾಣಂತಿ ಆಗ್ಯಾಳ, ಅವಳಿಗೆ ಬೇಕಾದ್ ಎಲ್ಲಾ ಬಟ್ಟಿ ಬರಿ, ತೊಟ್ಲಾ ಹಿಂಗ ಮುಂದಿನ ಎಲ್ಲಾ ತಯಾರಿ ಮಾಡಾಕ್ ಹತ್ತಿದ್ದ ಕಿಟ್ಟಪ್ಪ ಜೋಗಿ. "ಮಕ್ಳು ಇಲ್ದಿದ್ದ ಮನಿ ಬರೀ ಭಣಾ ಭಣಾ ಇರತೈತಿ, ಮಕ್ಳಿದ್ರೆ ಮನಿಗೊಂದು ಕಳಿ ಇರತೈತಿ. ನನಗೂ ಒಂದೇ ಮಗಾ ಅವಾಗಿಂದಾ ಮನ್ಯಾಗ ಮಕ್ಕಳ ಗೆಜ್ಜಿ ಸದ್ದಿಲ್ಲಾ.." ಅನ್ಕೊತ ಸೊಸಿ ಬಗ್ಗೆ ವಿಶೇಷ ನಿಗಾ ಇಡತಿದ್ದ.</b></span></div>
<div style="border: 0px; font-family: Georgia, Times, 'Times New Roman'; font-size: 14px; line-height: 20px; margin-bottom: 10px; padding: 0px; text-align: center; vertical-align: baseline;">
<span style="background-color: #fce5cd;"><b>*****</b></span></div>
<div style="border: 0px; font-family: Georgia, Times, 'Times New Roman'; font-size: 14px; line-height: 20px; margin-bottom: 10px; padding: 0px; text-align: justify; vertical-align: baseline;">
<span style="background-color: #fce5cd;"><b>ಬೆಳಿಗ್ಗೆ ಎಂಟಾಗಿತ್ತು. ಜಾನಕಿ ಸ್ನಾನಾ ಎಲ್ಲಾ ಮುಗ್ಸಿ ದೇವರ ಮನಿ ಕಡಿ ಹೊಂಟಿದ್ಲು, ಯಾಕೋ ಹೊಟ್ಟಿ ನೋವದಂಗ ಆಗಿ ಹಂಗಾ ಹೊಟ್ಟಿ ಹಿಡಕಂಡು ಕೂತಬಿಟ್ಲು. ಆ ಹೊತ್ತಿಗೆ ಸೀತವ್ವ ಹಿತ್ಲಕಡಿಗಿಂದ ಒಳಗ ಬಂದ್ಲು. ಹೊಟ್ಟಿ ಹಿಡಕೊಂಡು ಕೂತಿದ್ದ ಜಾನಕಿ ನೋಡಿ ಎನಾತವ್ವಾ?? ಹೊಟ್ಟಿ ನೊಯಾಕತ್ತದಾ? ಮೊನ್ನಿಯಷ್ಟ ಒಂಬತ್ತು ತುಂಬದ, ಜಾಸ್ತಿ ತ್ರಾಸ್ ಮಾಡ್ಕೋಬ್ಯಾಡಾ ಅಂದ್ರಾ ಕೇಳೂದಿಲ್ಲಾ.. ಬಾಳ್ ನೊಯಾಕತ್ತದಾ ಅನ್ಕೂತ ಸೊಸಿ ಬಾಜು ಕೂತ್ಕೊಂಡು ಸಮಾಧಾನ ಮಾಡೊದಕ್ಕೂ ಕಿಟ್ಟಪ್ಪ ಗದ್ದಿ ಕಡಿ ಹೊಂಟವ ಒಳಗ್ ಬಂದಾ.. ಯಾಕವ್ವಾ ಏನಾತು ಅಂತ ಬಾಜೂಕ ಬಂದ. ಜಾನಕಿಗೆ ನೋವು ಜಾಸ್ತ್ ಆಗಿದ್ದು ನೋಡಿ ಸೀತವ್ವ "ಆಕಿಗೆ ಹೆರಗಿ ನೋವು ಸುರು ಆಗದಾ ರಾಮನಾಥನಾ ಕರೀರಿ. ಬ್ಯಾಗ್ ದವಾಖಾನಿಗೆ ಕರ್ಕೊಂಡು ಹೊಗಾಕ್ ಬೇಕು. ಬಾಜೂ ಮನಿ ದ್ಯಾಮವ್ವ, ಗಂಗವ್ವನ್ನೂ ಕರೀರಿ" ಅಂದಿದ್ದೆ ತಡಾ ಕಿಟ್ಟಪ್ಪ ಭಡಾ ಭಡಾ ಎದ್ದು "ಎಲ್ಲಿದಿಯೋ ರಾಮ್ಯಾ ಮಗೀಗೆ ಹೆರಗಿ ಬ್ಯಾನೆ ಸುರು ಆಗದಾ… " ಅನ್ಕೊತ ಹೊರಗ್ ನಡದಾ. ಐದ್ ಮಿನಿಟ್ನಾಗ ರಾಮನಾಥ, ಪಕ್ಕದ್ಮನಿ ದ್ಯಾಮವ್ವ, ಗಂಗವ್ವ, ಅವನ್ ಮಗಾ ಸೋಮ ಎಲ್ಲಾ ಒಟ್ಟಾಗಿದ್ರು. "ನಡೀರಿ ಬೇಗಾ ದವಾಖಾನಿಗೆ ಕರ್ಕೋಂಡು ಹೊಗಾಣಾ, ಗಾಡಿ ತಯಾರೈತಿ" ಅನ್ಕೋತ ರಾಮನಾಥ ಹೊಂಡಾಕ ತಯಾರಾದ. ಎಲ್ಲಾರೂ ಸೀತವ್ವನ್ನ ಎತ್ಕೊಂಡು ಗಾಡ್ಯಾಗ ಕುಂಡ್ರಿಸಿ ದವಾಖಾನಿ ಕಡಿಗೆ ಗಾಡಿ ಬಿಟ್ರು.</b></span></div>
<div style="border: 0px; font-family: Georgia, Times, 'Times New Roman'; font-size: 14px; line-height: 20px; margin-bottom: 10px; padding: 0px; text-align: justify; vertical-align: baseline;">
<span style="background-color: #fce5cd;"><b>ಸೀತವ್ವನ್ನ ರೂಮನ್ಯಾಗ್ ಕರ್ಕೊಂಡು ಹೋಗಿ ಬಾಗಲಾ ಹಾಕ್ಕೊಂಡ್ರು ಡಾಕಟರ್ರು. ಹೊರಗ ರಾಮನಾಥ, ಕಿಟ್ಟಪ್ಪ ಜೋಗಿ, ಸೋಮ ಎಲ್ಲ ಆ ಕಡಿ ಈ ಕಡಿ ತಿರಗಕೋತ ನಿಂತಿದ್ರು. ಈ ಕಡಿ ಸೀತವ್ವ ಮನ್ಯಾಗ ದೇವ್ರಿಗೆ ತುಪ್ಪದ್ ದೀಪ ಹಚ್ಚಿ ದವಾಖಾನಿ ಕಡಿಗೆ ಮುಖಾ ಮಾಡಿದ್ಲು. ಡಾಕ್ಟರು ಹೊರಗ ಬಂದಿದ್ದೆ ತಡಾ ಎಲ್ಲಾರೂ ಅವ್ರ ಕಡಿಗೆ ಮುಖಾ ಮಾಡಿದ್ರು. "ಹೆಣ್ ಮಗಾ ಆಗೈತಿ, ಇಬ್ರೂ ಆರಾಮ್ ಇದಾರ.ಕಾಳಜಿ ಮಾಡೊದು ಎನಿಲ್ಲಾ. ಅರ್ಧಾ ತಾಸಾಗ ರೂಮನ್ಯಾಗ್ ಕರಕೊಂಡು ಬರ್ತೀವಿ ಆಗ ಭೆಟಿ ಮಾಡೀರಂತೆ" ಅಂತಾ ನಡದ್ರು. ಎಲ್ಲಾರೂ ಯಾವಾಗ್ ಮಗೀನ ನೋಡಿವೊ ಅಂತಾ ಚಡಪಡಿಸಾಕ ಹತ್ತಿದ್ರು. ಕಿಟ್ಟಪ್ಪ ಜೋಗಿ ಮಗನ್ನ ತಬ್ಕೊಂಡು ಮನಿಗೆ ಲಕ್ಷ್ಮಿ ಬಂದಾಳ ಅಂತ ಖುಶಿಪಡಾಕತ್ತಿದ್ದ. ಎಲ್ಲರ್ ಮುಖದಾಗೊ ಖುಶಿ ಎದ್ದು ಕಾಣಾಕತ್ತಿತ್ತು.</b></span></div>
<div style="border: 0px; font-family: Georgia, Times, 'Times New Roman'; font-size: 14px; line-height: 20px; margin-bottom: 10px; padding: 0px; text-align: justify; vertical-align: baseline;">
<span style="background-color: #fce5cd;"><b>ಅರ್ಧಾ ತಾಸನಾಗ ಸೀತವ್ವನ್ನ ರೂಮನಾಗ್ ಕರ್ಕೊಂಡು ಬಂದಿದ್ರು. ಎಲ್ಲರೂ ಅವಳ ಸುತ್ತ ನಿತ್ಕೊಂಡು ಖುಶೀಲೆ ಮಾತಾಡ್ಸಾಕತ್ತಿದ್ರು. ಕಿಟ್ಟಪ್ಪ ಜೋಗಿ ಮಗೀನ ನೋಡಿ "ಥೇಟ್ ಅವ್ವನ್ ತರಾನೆ ಅದಾಳ" ಅಂತ ತಂದೇ ದ್ರುಷ್ಟಿ ಆಗೈತಿ ಅನ್ನೊ ತರ ಕೈ ಮುರ್ದು ಲಟಿಗೆ ತೆಗದಾ. ಸೀತವ್ವನೂ ಖುಶೀಲೆ ಮಗೀನೂ ಜಾನಕಿನೂ ಮುದ್ದಾಡಿ "ಇಬ್ರೂ ಲಕ್ಷ್ಮೀನೂ ಸೇರಿ ಮನಿ ಬೆಳಗ್ರವ್ವಾ" ಅಂತ ಹಾರೈಸಿದ್ಲು. ಅತ್ತಿ ಮುದ್ದು ಮಾಡಿದ್ದು ಸೀತವ್ವಂಗೆ ಎಲ್ಲಿಲ್ಲದ ಖುಶಿ ಆಗಿತ್ತು. ಎಷ್ಟೋ ವರ್ಶದ ತಪಸ್ಸಿನ ಫಲಾ ಸಿಕ್ಕ ಖುಶಿ ರಾಮನಾಥನ ಮುಖದಾಗಿತ್ತು. ತುಸಾ ಹೊತ್ತು ಎಲ್ಲಾ ಮಗಿನ ನೋಡಿ, ಸೀತವ್ವನ್ನ ಮಾತಾಡ್ಸಿ ಇಬ್ರೂ ತುಸ ಹೊತ್ತು ಆರಾಮ್ ತಗೊಳ್ಳಿ ಹೇಳಿ ಹೊರಗ್ ನಡದ್ರು. ಜಾನಕಿ ಒಮ್ಮೆ ಹಂಗಾ ಮಗು ಮುಖಾ ನೊಡಿದ್ಲು, ಯಾಕೊ ಒಮ್ಮಿಗೆ ಸಾಧು ನೆನಪಾದ. "ಹೌದು ಆ ಸನ್ಯಾಸಿ ಹೇಳಿದ್ದು ಖರೆ ಆತು, ಮನಿಗೆ ಲಕ್ಷ್ಮೀನೂ ಬಂದ್ಳು, ಅತ್ತಿ ಮನಸೂ ಬದಲಾತು..ಒಟ್ನಾಗ ಎಲ್ಲಾ ಒಳ್ಳೆದಾತು. ಎಲ್ಲಾ ಆ ಸನ್ಯಾಸಿ ಬಾಯ್ ಹರಕಿ, ಬಾಳ್ ವರ್ಶದ್ ಮ್ಯಾಗೆ ಮಗಾ ಆತು. ಯಾವ ಜನ್ಮದ ಋಣಾನೊ ಎನೊ..ಯಾರು ಎನೇ ಹೆಳಲಿ ಈ ಮಗಾ ಆ ಸನ್ಯಾಸಿ ಪ್ರಸಾದ" ಅಂತಾ ಮನಸನ್ಯಾಗೇ ಅಂದ್ಕೊಂಡ್ಳು. ಈ ಮಗು ಆ ಸನ್ಯಾಸಿ ಮಗು ಅನ್ನೊ ನಂಬಿಕೆ ಸೀತವ್ವನ ಮನಸನ್ಯಾಗೆ ಹಂಗೇ ಉಳ್ಕೊಂಡ್ತು.</b></span></div>
<div style="border: 0px; font-family: Georgia, Times, 'Times New Roman'; font-size: 14px; line-height: 20px; margin-bottom: 10px; padding: 0px; text-align: center; vertical-align: baseline;">
<span style="background-color: #fce5cd;"><b>*****</b></span></div>
<div style="border: 0px; font-family: Georgia, Times, 'Times New Roman'; font-size: 14px; line-height: 20px; margin-bottom: 10px; padding: 0px; text-align: center; vertical-align: baseline;">
<span style="background-color: #fce5cd;"><b><br /></b></span></div>
<h4 style="text-align: left;">
<span style="font-family: 'tunga';"><b style="background-color: #fce5cd;">ಮೇ ೧೨ ರ "ಪಂಜು" ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾದ ಬರಹ.</b></span><span style="font-family: tunga;"><b style="background-color: #fce5cd;">http://www.panjumagazine.com/?p=7283</b></span></h4>
</div>
Motivation http://www.blogger.com/profile/08140925864934705325noreply@blogger.com1tag:blogger.com,1999:blog-5247965971580923628.post-86797974883248454092014-05-06T10:06:00.000-07:002014-05-06T10:07:28.463-07:00ಹನಿ ಹನಿ 14:<div dir="ltr" style="text-align: left;" trbidi="on">
<span style="font-family: 'tunga';">ಫೇಸ್ ಬುಕ್ ಕವಿತೆ:</span><br />
<span style="font-family: 'tunga';">೧.ನನ್ನ ಟೈಮ್ ಲೈನಿನಲ್ಲೊಂದು ಫೋಟೊ</span><br />
<span style="font-family: 'tunga';">ಆ ಫೋಟೊಕ್ಕೆ ನಿನ್ನದೊಂದು ಕಮೆಂಟು</span><br />
<span style="font-family: 'tunga';">ಆ ಕಮೆಂಟಿಗೆ ನನ್ನದೊಂದು ಲೈಕು.</span><br />
<div style="font-family: tunga;">
<br /></div>
<span style="font-family: 'tunga';">೨.ನಾ ನೀಡಿದ </span><br />
<span style="font-family: 'tunga';">ಲೈಕಿನ ಸಾಲಕ್ಕೆ </span><br />
<span style="font-family: 'tunga';">ಬಡ್ಡಿಯಾಗಿ </span><br />
<span style="font-family: 'tunga';">ಕಮೆಂಟ್ ಮಾಡದಿದ್ದರೆ</span><br />
<span style="font-family: 'tunga';">ಚಕ್ರಬಡ್ಡಿಯಾಗಿ </span><br />
<span style="font-family: 'tunga';">ಶೇರ್ ಮಾಡಬೇಕಾದೀತು ಜೋಕೆ...</span><br />
<div style="font-family: tunga;">
<br /></div>
<span style="font-family: 'tunga';">೩.ನನ್ನ ಹುಚ್ಚು ಕವಿತೆಗಳಿಗೆ</span><br />
<span style="font-family: 'tunga';">ಲೈಕು ಹಾಕುವವರೆಲ್ಲ</span><br />
<span style="font-family: 'tunga';">ನನ್ನಿಂದ ಎರವಲು ಪಡೆದ</span><br />
<span style="font-family: 'tunga';">ಲೈಕುಗಳ ಪಾಲುದಾರರು.</span><br />
<div style="font-family: tunga;">
<br /></div>
<span style="font-family: 'tunga';"><br /></span>
<span style="font-family: 'tunga';">ಗೆಳತಿ:</span><br />
<span style="font-family: 'tunga';">೧.ನಿನ್ನ ನೆನಪುಗಳ</span><br />
<span style="font-family: 'tunga';">ಬೇಡಿಯಿಂದ</span><br />
<span style="font-family: 'tunga';">ಎಂದೆನಗೆ ಮುಕ್ತಿ,</span><br />
<span style="font-family: 'tunga';">ನೀ ಬೇಗ </span><br />
<span style="font-family: 'tunga';">ಬಳಿಬಂದು</span><br />
<span style="font-family: tunga;">ಸೇರಿ</span><span style="font-family: 'tunga';">ಬಿಡೆನ್ನ ಗೆಳತಿ.</span><br />
<div style="font-family: tunga;">
<br /></div>
<span style="font-family: 'tunga';">೨.ಈ ತಂಪಾದ ನಿಶೆಯಲಿ</span><br />
<span style="font-family: 'tunga';">ನೀನಿಲ್ಲದಿದ್ದರೇನಂತೆ</span><br />
<span style="font-family: 'tunga';">ನಿನ್ನ ನೆನಪುಗಳೇ ಸಾಕು</span><br />
<span style="font-family: 'tunga';">ನನ್ನ ನಿದಿರೆ ಕೆಡಿಸಲು.</span><br />
<div style="font-family: tunga;">
<br /></div>
<span style="font-family: 'tunga';">೩.ಇಂದು ಬಿದ್ದ </span><br />
<span style="font-family: 'tunga';">ಮಳೆ ಹನಿಗಳೆಲ್ಲ</span><br />
<span style="font-family: 'tunga';">ನೀ ಕೊಟ್ಟ </span><br />
<span style="font-family: 'tunga';">ಮುತ್ತುಗಳಂತೆ</span><br />
<span style="font-family: 'tunga';">ಹೊಸ ಚೈತನ್ಯ</span><br />
<span style="font-family: 'tunga';">ನವೋಲ್ಲಾಸ ಮನದಲ್ಲಿ.</span><br />
<div style="font-family: tunga;">
<br /></div>
<span style="font-family: 'tunga';">೪.ಸೂರ್ಯನಿಗೂ </span><br />
<span style="font-family: 'tunga';">ಹುಡುಗಿ ಕೈ</span><br />
<span style="font-family: 'tunga';">ಕೊಟ್ಟಿರಬೇಕು, </span><br />
<span style="font-family: 'tunga';">ಸಿಟ್ಟಿನಲಿ </span><br />
<span style="font-family: 'tunga';">ಕೆಂಡವಾಗಿ</span><br />
<span style="font-family: tunga;">ಕುದಿಯುತ್ತಿದ್ದಾನೆ.</span></div>
Motivation http://www.blogger.com/profile/08140925864934705325noreply@blogger.com0tag:blogger.com,1999:blog-5247965971580923628.post-8999929341295669212013-10-19T02:58:00.002-07:002013-10-19T02:58:13.101-07:00ಹೆಣ್ಣು ಕಾರಣ...!<div dir="ltr" style="text-align: left;" trbidi="on">
<b></b><div class="separator" style="clear: both; text-align: left;">
<b><a href="https://blogger.googleusercontent.com/img/b/R29vZ2xl/AVvXsEgBDPX5a_Awzd94JthMzy7VPyqoAkC9YdpRh2HHAsoyV7lMJ9oGM8B7UBLtOt2n8udkISAUs-_l8p1DevFwT-dsr6OCiCvUypsztDzmNlzBzv4icbKA388xrqKlQsQPva0tybfgCGid5EY/s1600/1374611_740660525950694_787535222_n.jpg" style="margin-left: 1em; margin-right: 1em;"><span class="userContent">ಹೆಣ್ಣು ಕಾರಣ!?</span></a><span class="userContent"> </span></b></div>
<a href="https://blogger.googleusercontent.com/img/b/R29vZ2xl/AVvXsEgBDPX5a_Awzd94JthMzy7VPyqoAkC9YdpRh2HHAsoyV7lMJ9oGM8B7UBLtOt2n8udkISAUs-_l8p1DevFwT-dsr6OCiCvUypsztDzmNlzBzv4icbKA388xrqKlQsQPva0tybfgCGid5EY/s1600/1374611_740660525950694_787535222_n.jpg" style="margin-left: 1em; margin-right: 1em;"><span class="userContent"><b>ಯಾಕೆ ಆಗುತ್ತಿದೆ ಹೀಗೆಲ್ಲ..?</b></span></a><div class="separator" style="clear: both; text-align: left;">
<br /></div>
<div class="separator" style="clear: both; text-align: left;">
<span class="userContent"> ಮೊನ್ನೆಯಷ್ಟೇ ಎಲ್ಲ ಕಡೆ ಜಾಗತಿಕ ಮಹಿಳಾ ದಿನದ ಆಚರಣೆಯಾಯಿತು. ದಿನಪತ್ರಿಕೆಗಳಿಂದ ಹಿಡಿದು ಫೇಸ್ಬುಕ್ವರೆಗೂ ಅಂದು ಹೆಣ್ಣಿಗೆ ವಿಶೇಷ ಗೌ<span class="text_exposed_show">ರವ. ಹೀಗೊಂದು ವಿಶೇಷ ದಿನದಂದು ಹೆಣ್ಣಿಗೆ ಗೌರವ ಕೊಟ್ಟು ಉಳಿದ ದಿನ ಹೆಣ್ಣನ್ನು ನೋಡುವ ದೃಷ್ಟಿಕೋನವೇ ಬೇರೆಯಾದರೆ ಏನೂ ಅರ್ಥವಿಲ್ಲ.<br /> <br />
ಇಂದು ಹೆಣ್ಣು ಅಡುಗೆಮನೆಯಿಂದ ಸೈನ್ಯದಲ್ಲಿ ಬಂದೂಕು ಹಿಡಿಯುವವರೆಗೆ
ಗುರುತಿಸಿಕೊಂಡಿದ್ದಾಳೆ. ಹಳ್ಳಿಯ ಮೂಲೆಯಲ್ಲಿ ಕುಂಟೆಬಿಲ್ಲೆ ಆಡುತ್ತಿದ್ದವಳು ಇಂದು
ಕ್ರಿಕೆಟ್, ಟೆನಿಸ್ಗಳಲ್ಲಿ ಮಿಂಚುತ್ತಿದ್ದಾಳೆ. ಅಡುಗೆ ಮನೆಯ ಸಾಮಾನಿನ ಪಟ್ಟಿ
ಬರೆಯುತ್ತಿದ್ದವಳು ಇಂದು ಇನ್ಫಾರ್ಮೇಷನ್ ಟೆಕ್ನಾಲಜಿಯಂಥ ಕ್ಷೇತ್ರದಲ್ಲಿ
ಸಾಧನೆಗೈಯ್ಯುತ್ತಿದ್ದಾಳೆ. ಮನೆಯಿಂದ ಹೊರಬರಲು ಹೆದರುತ್ತಿದ್ದವಳು ಅಂತರಿಕ್ಷಯಾನ
ಕೈಗೊಂಡಿದ್ದಾಳೆ.<br /> ಆದರೆ, ಆಕೆ ಎಷ್ಟೇ ಸಾಧಿಸುತ್ತಿದ್ದರೂ ಅವಳನ್ನು ಅತ್ಯಾಚಾರದ
ಮೂಲಕ ಕಟ್ಟಿಹಾಕುತ್ತಿರುವುದು ವಿಪರ್ಯಾಸ. ಇದಕ್ಕೆ ಕಾರಣ ಹುಡುಕುತ್ತ ಹೋದರೆ ಇದಕ್ಕೆಲ್ಲ
ಸ್ವಲ್ಪ ಮಟ್ಟಿಗೆ ಹೆಣ್ಣೇ ಕಾರಣ ಎಂಬ ಸಂಶಯ ಬರುವುದಂತೂ ನಿಜ. ಪುರುಷರಿಗೆ ಸಮನಾಗಿ
ನಿಲ್ಲುವ ಹುಮ್ಮಸ್ಸಿನಲ್ಲಿ ಸ್ತ್ರೀ ತನ್ನದೇ ಜವಾಬ್ದಾರಿ ಮರೆತು ಎಡವುತ್ತಿದ್ದಾಳೆ
ಅನಿಸುತ್ತದೆ. ಹೇಗೆ ಹೆಣ್ಣು ವಿಜ್ಞಾನ, ಅಂತರಿಕ್ಷ, ಸೈನ್ಯ, ರಾಜಕೀಯ ಮುಂತಾದ
ಕ್ಷೇತ್ರದಲ್ಲಿ ಪುರುಷರಿಗೆ ಸರಿಸಮಾನವಾಗಿ ನಿಂತಿದ್ದಾಳೋ ಅದೇ ರೀತಿ ಆಧುನಿಕ (ಶರಾಬು,
ಸಿಗರೇಟು ಇತ್ಯಾದಿ) ಕ್ಷೇತ್ರದಲ್ಲೂ ತಾನು ಪುರುಷರಿಗೆ ಸರಿಸಮಾನಳು ಅನ್ನುತ್ತಿರುವುದು
ನಿಜಕ್ಕೂ ವಿಷಾದನೀಯ. ನಮ್ಮ ಸಂಸ್ಕೃತಿಯನ್ನ ಮರೆತು ಪಾಶ್ಚಾತ್ಯ ಸಂಸ್ಕೃತಿಯ ಮೊರೆ
ಹೋಗುತ್ತಿರುವುದು ಇದಕ್ಕೆಲ್ಲ ಕಾರಣ. ಹುಡುಗಿಯರ ವಸ್ತ್ರವಿನ್ಯಾಸ, ಸಿಗರೇಟು, ಶರಾಬು
ಇವೂ ಹೆಣ್ಣಿನ ಅತ್ಯಾಚಾರಕ್ಕೆ ಸ್ವಲ್ಪಮಟ್ಟಿಗೆ ಕಾರಣವಾಗಿವೆ. ಸಿನಿಮಾ, ಟಿವಿ
ಸೀರಿಯಲ್ಗಳ ಕೆಟ್ಟ ಪ್ರಭಾವಗಳೂ ಆಕೆಯ ಮೇಲೆ ಬೀಳುತ್ತಿವೆ.<br /> ಹೆಣ್ಣಿಗೆ ಒದಗಿರುವ ಈ
ಸಮಸ್ಯೆಗಳನ್ನು ದೂರ ಮಾಡಲು ಒಂದಿಷ್ಟು ಪರಿಹಾರಗಳೂ ಇವೆ. ಶಾಲಾ ಶಿಕ್ಷಣದ ಜತೆ ನಮ್ಮ
ನಾಡು-ನುಡಿ, ಸಂಸ್ಕೃತಿಯ ಬಗೆಗೆ ಚಿಕ್ಕಂದಿನಿಂದಲೇ ಅರಿವು ಮೂಡಿಸಬೇಕು. ಸ್ವಲ್ಪ ಅರಿತು
ವ್ಯವಹರಿಸಿದರೆ ಹೆಣ್ಣು ತನ್ನದೇ ಆದ ಸ್ಥಾನವನ್ನು ರೂಪಿಸಿಕೊಳ್ಳಬಲ್ಲಳು ಎನ್ನುವುದರಲ್ಲಿ
ಸಂಶಯವಿಲ್ಲ. ತಂದೆ- ತಾಯಿ ಮಗುವಿಗೆ ಉತ್ತಮ ಸಂಸ್ಕಾರ ನೀಡಬೇಕು. ಹೊರದೇಶದವರು ನಮ್ಮ
ಸಂಸ್ಕೃತಿಯನ್ನು ಅನುಸರಿಸಲು ಪ್ರಯತ್ನಿಸುತ್ತಿರುವಾಗ ನಾವು ಹೊರದೇಶದ ಆಚರಣೆಯನ್ನು
ಅನುಸರಿಸುವುದರಲ್ಲಿ ಏನೂ ಅರ್ಥವಿಲ್ಲ.<br /> <br /> ಸ್ವಲ್ಪ ಯೋಚಿಸಿ, ಹೆಣ್ಣು ಸಮಾಜವನ್ನು
ನೋಡುವ ದೃಷ್ಟಿಕೋನ ಬದಲಾಗಿದ್ದರೂ ಸಮಾಜ ಹೆಣ್ಣನ್ನು ನೋಡುವ ದೃಷ್ಟಿಕೋನ ಬದಲಾಗಿಲ್ಲ.
ಒಮ್ಮೆ ಇಡೀ ಸಮಾಜದ ಬಗ್ಗೆ ವಿಚಾರ ಮಾಡಿ ನೋಡಿ. ಇದು ನನ್ನ ವಿನಂತಿ. ನನ್ನ ಉದ್ದೇಶ
ಇಷ್ಟೇ ದೇವರೆಂದು ಪೂಜಿಸುವ ಹೆಣ್ಣಿಗೆ ಎಂದೂ ಕಳಂಕ ಬರಬಾರದು.<br /> <br /> <b>- ಗಣೇಶ ಖರೆ</b></span></span></div>
<div class="separator" style="clear: both; text-align: left;">
<br /></div>
<div class="separator" style="clear: both; text-align: left;">
<span style="font-family: 'tunga';">ಅಕ್ಟೋಬರ್ ೧೬ ರ "<b>ಕನ್ನಡ ಪ್ರಭ</b>"ದಲ್ಲಿ ಪ್ರಕಟವಾದ ಬರಹ</span><span class="userContent"><span class="text_exposed_show"><b>.</b></span></span></div>
<div class="separator" style="clear: both; text-align: left;">
<span style="font-size: 11pt;"> </span><a href="https://blogger.googleusercontent.com/img/b/R29vZ2xl/AVvXsEgBDPX5a_Awzd94JthMzy7VPyqoAkC9YdpRh2HHAsoyV7lMJ9oGM8B7UBLtOt2n8udkISAUs-_l8p1DevFwT-dsr6OCiCvUypsztDzmNlzBzv4icbKA388xrqKlQsQPva0tybfgCGid5EY/s1600/1374611_740660525950694_787535222_n.jpg" imageanchor="1" style="margin-left: 1em; margin-right: 1em;"><img border="0" height="640" src="https://blogger.googleusercontent.com/img/b/R29vZ2xl/AVvXsEgBDPX5a_Awzd94JthMzy7VPyqoAkC9YdpRh2HHAsoyV7lMJ9oGM8B7UBLtOt2n8udkISAUs-_l8p1DevFwT-dsr6OCiCvUypsztDzmNlzBzv4icbKA388xrqKlQsQPva0tybfgCGid5EY/s640/1374611_740660525950694_787535222_n.jpg" width="235" /></a></div>
<div style="text-align: left;">
<span style="font-family: 'tunga';"><br /></span></div>
</div>
Motivation http://www.blogger.com/profile/08140925864934705325noreply@blogger.com0tag:blogger.com,1999:blog-5247965971580923628.post-6111324759627758222013-09-20T00:36:00.000-07:002013-09-20T00:36:05.339-07:00ಮೇಕಿಂಗ್ ಆಪ್ ಲುಂಗಿ ಡಾನ್ಸ್:<div dir="ltr" style="text-align: left;" trbidi="on">
<span style="font-family: 'tunga';"></span>
<div style="-qt-block-indent: 0; -qt-paragraph-type: empty; font-family: 'tunga'; margin-bottom: 0px; margin-left: 0px; margin-right: 0px; margin-top: 0px; text-indent: 0px;">
<br /></div>
<div style="-qt-block-indent: 0; margin-bottom: 0px; margin-left: 0px; margin-right: 0px; margin-top: 0px; text-indent: 0px;">
<span style="font-family: 'tunga';">ಏ ಕೋಮ್ಲಿ ನಮ್ ಊರ್ನಾಗೆ ಈ ಲುಂಗಿ ಡಾನ್ಸ್ ಪುಲ್ ಪೆಮಸ್ ಆಗ್ ಬುಟ್ಟೈತೆ .... ನಮ್ ಗಣಪತಿ ಕೂಡ ಇನ್ನೊಂದ್ ಎರ್ಡು ದಿನ್ನ ಇದ್ದಿದ್ರೆ ಅವ್ನೂ ಸ್ಟೆಪ್ ಹಾಕೊನು..... ಇದ್ರ ಹಿಂದೆ ಎನೊ ಮರ್ಮ ಐತೆ ನಿಂಗೊತ್ತೆನ್ಲಾ.</span></div>
<div style="margin: 0px; text-indent: 0px;">
<br /></div>
<div style="-qt-block-indent: 0; margin-bottom: 0px; margin-left: 0px; margin-right: 0px; margin-top: 0px; text-indent: 0px;">
<span style="font-family: 'tunga';">ಎ ಬುಡ್ಲಾ ಗಣಿ ಅದೊಂದ್ ದೊಡ್ಡ್ ಇಸ್ಟೊರಿ ಐತೆ ಕಲಾ. </span></div>
<div style="margin: 0px; text-indent: 0px;">
<br /></div>
<div style="-qt-block-indent: 0; margin-bottom: 0px; margin-left: 0px; margin-right: 0px; margin-top: 0px; text-indent: 0px;">
<span style="font-family: 'tunga';">ಹೆಳ್ಲಾ ನಮ್ ಎಕ್ತಾ ಕಪೂರ್ ಸ್ಟೊರಿ ಅಸ್ಟೆನೂ ದೊಡ್ಡಾ ಇರಾಕಿಲ್ಲ ಬುಡು..</span></div>
<div style="margin: 0px; text-indent: 0px;">
<br /></div>
<div style="-qt-block-indent: 0; margin-bottom: 0px; margin-left: 0px; margin-right: 0px; margin-top: 0px; text-indent: 0px;">
<span style="font-family: 'tunga';">ಕೆಳ್ಲಾ... ನಮ್ ಕ್ ಕ್ ಕ್ ಕ್ ಕ್ ಕಿಂಗ್ ಖಾನ್ ಇಲ್ವಾ ಅದ್ಕೆ ಈ ಡಾನ್ಸು ಬೀನ್ಸು ಎಲ್ಲಾ ಬರಾಕಿಲ್ಲ, ಅದ್ರಾಕೂ ನಮ್ ರಜ್ನಿ ತರ ಲುಂಗಿ ಉಡ್ಸಿದ್ರೆ ಎನಾಗ್ಬೆಕು ಹೇಳು.</span></div>
<div style="margin: 0px; text-indent: 0px;">
<br /></div>
<div style="-qt-block-indent: 0; margin-bottom: 0px; margin-left: 0px; margin-right: 0px; margin-top: 0px; text-indent: 0px;">
<span style="font-family: 'tunga';">ಅದೂ ಹೌದ್ ಕಣ್ಲಾ.. ನೆಟ್ಗೆ ಡೈಲಾಗ್ ಹೊಡಿಯಾಕೆ ಬರಂಗಿಲ್ಲಾ ಇನ್ನೆನ್ ಕುಣಿತದೆ..., ಅದ್ರಾಕೂ ಲುಂಗಿ ಉಟ್ಗಂಡು..., ಅದೇ ಗೊತ್ತಾಗಿಲ್ಲಾ ಕಲಾ ಅದೆಂಗೆ ಡಾನ್ಸ್ ಮಾಡ್ತು ಅಂತಾ.</span></div>
<div style="margin: 0px; text-indent: 0px;">
<br /></div>
<div style="-qt-block-indent: 0; margin-bottom: 0px; margin-left: 0px; margin-right: 0px; margin-top: 0px; text-indent: 0px;">
<span style="font-family: 'tunga';">ವಿಸ್ಯಾ ಬೇರೆ ಐತೆ ಇಲ್ಕೇಳು..ಅದೇನಾಯ್ತು ಗೊತ್ತಾ... ಸಾರುಕ್ ಗೆ ಲುಂಗಿ ಉಡ್ಸಿದ್ರಾ ಅದ್ಕೆ ನಡಿಯಾಕೆ ಬರ್ತಾ ಇರ್ಲಿಲ್ಲಾ... ದಮ್ ಹೋಡಿತಾ ನಂಗೆ ಇದ್ನಾ ಉಟ್ಗಂಡು ನಡ್ಯಾಕೆ ಬರಾಂಗಿಲ್ಲಾ ನಾ ಹೇಂಗ್ಲಾ ಕುಣಿಲಿ ಅಂತು..... ನಮ್ ದೀಪಿಕಾ ಒಳ್ಳೆ ಗಂಡಾ ಸತ್ತೊರ್ ತರಾ ಕುತ್ಕಂಡಿತ್ತು..... ಆಮೇಲೆ ಡೈರೆಕ್ಟರು ಪ್ರೊಡ್ಯುಸರು ಎಲ್ಲಾ ತಲೆ ಮೇಲೆ ಕೈ ಹಾಕ್ಕಂಡು ಕುತ್ಗಂಡಿದ್ರು.... ನಮ್ ಜುಂಜ ಸಾನೇ ಹುಸಾರು ಕಣ್ಲಾ ಒಂದ್ ಐಡಿರಿಯಾ ಮಾಡಿ ಡೈರೆಕ್ಟರ್ ತಾವ ಹೋಗಿ ನಾನೋಂದು ಐಡಿರಿಯಾ ಮಾಡಿವ್ನಿ ... ಸ್ವಲ್ಪಾ ತಡ್ಕಳಿ ಹತ್ ನಿಮಿಸ ಹಂಗೆ ಸಾರುಕ್ ಕುಣಿತದೆ ಅಂದಾ.. ಡೈರೆಕ್ಟರ್ ಪುಲ್ ಕುಸಿ ಆಗ್ ಬುಟ್ಟು ಅದೆಂಗ್ಲಾ ಅಂದಾ..... ಅದೆಲ್ಲಾ ಕೆಳ್ಬ್ಯಾಡಿ ಸುಮ್ಕೆ ನಾನು ಅಕ್ಸನ್ ಅಂದ್ಕೂಡ್ಲೆ ಸೂಟಿಂಗ್ ನಾ ಸುರು ಹಚ್ಕಳಿ ಅಂದಾ.</span></div>
<div style="margin: 0px; text-indent: 0px;">
<br /></div>
<div style="-qt-block-indent: 0; margin-bottom: 0px; margin-left: 0px; margin-right: 0px; margin-top: 0px; text-indent: 0px;">
<span style="font-family: 'tunga';">ಆಮೆಕ್ ಎನಾತ್ಲಾ ಕೊಮ್ಲಿ.. ಬೊ ಇಂಟ್ರೆಸ್ಟಿಂಗ್ ಆಗೈತೆ.</span></div>
<div style="margin: 0px; text-indent: 0px;">
<br /></div>
<div style="-qt-block-indent: 0; margin-bottom: 0px; margin-left: 0px; margin-right: 0px; margin-top: 0px; text-indent: 0px;">
<span style="font-family: 'tunga';">ನಮ್ ಜುಂಜಾ ಇದ್ದೋನು ಎಲ್ಲೊ ಹೋಗಿ ಕವರ್ನಾಗೆ ಅದೇನೊ ಹಿಡ್ಕಂಬಂದಾ.. ನಾನು ಅದೆನ್ಲಾ ಅಂದೆ.... ಕಟ್ಟಿರುವೆ ಅಂದಾ....ಅದ್ಯಾಕ್ಲಾ ಅಂದೆ.... ಇದ್ನಾ ಸಾರುಕ್ ಲುಂಗಿ ಒಳ್ಗೆ ಬುಟ್ರೆ ಹೆಂಗೆ ಕುಣಿತದೆ ನೋಡ್ತಾ ಇರು ಅಂದ...... ಅಯ್ಯೊ ಲೆ ನಿನ್ ಮುಕ್ಕೆ ಎಮ್ಮೆ ಸಗಣಿ ಹೊಯ್ಯಾ,,, ಇರುವೆ ಬಿಟ್ಟು ಹೊಗೆ ಹಾಕ್ಕಂಡೀತು ಲೇ ಹುಸಾರು ಅಂದೆ....</span></div>
<div style="-qt-block-indent: 0; margin-bottom: 0px; margin-left: 0px; margin-right: 0px; margin-top: 0px; text-indent: 0px;">
<span style="font-family: 'tunga';">ಹಂಗೆಲ್ಲಾ ಎನೂ ಆಗಾಕಿಲ್ಲ ಬುಡ್ಲಾ ಅಂದೊನೆ ...ಮಗಾ ಹೋಗಿ ಸಾರುಕ್ ಕಾಲ್ಗೆ ಬೀಳೋ ಅಕ್ಟಿಂಗ್ ಮಾಡಿ ಸುಮ್ಕೆ ಅಂಗೆಯಾ ಇರುವೆ ಬಿಟ್ಟು ಬಂದವ್ನೆ.... ಹಂಗೆ ಹತ್ತು ಸೆಕೆಂಡ್ ಆಗೈತೆ ಆಟೆಯ, ನಮ್ ಖಾನು ಲುಂಗಿ ಒಳ್ಗೆ ಎನೊ ಕಚಗುಳಿ ಇಟ್ಟಂಗೆ ಆಗ್ತೈತೆ ಅಂತಾ ಅಲ್ಲಾಡಾಕೆ ಹಿಡ್ದಾ..... ಜುಂಜಾ ಹಂಗೆಯಾ ಡೈರೆಕ್ಟರ್ ನೊಡಿ ಅಕ್ಸನ್ ಅಂದಾ... ಸೂಟಿಂಗ್ ಸುರು ಆತು.... ಪಾಪ ನಮ್ ಸಾರುಕ್ ಗೆ ಎನೂ ಗೊತ್ತೆ ಇಲ್ಲಾ,,, ಒಳ್ಗಡೆ ಇರುವೆ ಕಡಿಯೊಕೆ ಶುರು ಹಚ್ಕಂಡೈತೆ..... ಉರಿ ಆಗಿ ಲುಂಗಿ ಅಲ್ಲಾಡ್ಸಾಕೆ ಸುರು ಹಚ್ಕಂಡಾ...... ಸೈಡ್ ಡಾನ್ಸರ್ ಎಲ್ಲಾ ನಮ್ ಸಾರುಕ್ಕು ಕುಣಿಯಾಕೆ ಹತ್ತೈತೆ ಹೇಳಿ ಸ್ಟೆಪ್ ಹಾಕೊವು......... ಸಾರುಕ್ಕು ಲುಂಗಿ ಅಲ್ಲಾಡಿದ್ದೆ ಅಲ್ಲಾಡ್ಸಿದ್ದು.... ದಿಪಿಕಾನು ಕುಣ್ದಿದ್ದೆ ಕುಣ್ದಿದ್ದು</span></div>
<div style="-qt-block-indent: 0; -qt-paragraph-type: empty; font-family: 'tunga'; margin-bottom: 0px; margin-left: 0px; margin-right: 0px; margin-top: 0px; text-indent: 0px;">
<br /></div>
<div style="-qt-block-indent: 0; margin-bottom: 0px; margin-left: 0px; margin-right: 0px; margin-top: 0px; text-indent: 0px;">
<span style="font-family: 'tunga';">ಲುಂಗಿ ಡಾನ್ಸ್ ಲುಂಗಿ ಡಾನ್ಸ್</span></div>
<div style="-qt-block-indent: 0; margin-bottom: 0px; margin-left: 0px; margin-right: 0px; margin-top: 0px; text-indent: 0px;">
<span style="font-family: 'tunga';">ಲುಂಗಿ ಡಾನ್ಸ್ ಲುಂಗಿ ಡಾನ್ಸ್</span></div>
<div style="-qt-block-indent: 0; margin-bottom: 0px; margin-left: 0px; margin-right: 0px; margin-top: 0px; text-indent: 0px;">
<span style="font-family: 'tunga';">ಲುಂಗಿ ಡಾನ್ಸ್ ಲುಂಗಿ ಡಾನ್ಸ್</span></div>
<div style="-qt-block-indent: 0; margin-bottom: 0px; margin-left: 0px; margin-right: 0px; margin-top: 0px; text-indent: 0px;">
<span style="font-family: 'tunga';">ಲುಂಗಿ ಡಾನ್ಸ್ ಲುಂಗಿ ಡಾನ್ಸ್</span></div>
<div style="-qt-block-indent: 0; -qt-paragraph-type: empty; font-family: 'tunga'; margin-bottom: 0px; margin-left: 0px; margin-right: 0px; margin-top: 0px; text-indent: 0px;">
<br /></div>
<div style="-qt-block-indent: 0; -qt-paragraph-type: empty; font-family: 'tunga'; margin-bottom: 0px; margin-left: 0px; margin-right: 0px; margin-top: 0px; text-indent: 0px;">
<br /></div>
<div style="-qt-block-indent: 0; margin-bottom: 0px; margin-left: 0px; margin-right: 0px; margin-top: 0px; text-indent: 0px;">
<span style="font-family: 'tunga';">ಕಟ್ ಕಟ್ ಕಟ್...... ವೊಂಡರ್ಪುಲ್, ಸುಪರ್ಬ್.... ಗ್ರೆಟ್ ಸ್ಟೆಪ್... ಡೈರೆಕ್ಟರ್ ಹೊಗಳಿದ್ದೆ ಹೊಗಳಿದ್ದು.. ಪಾಪ ಸಾರುಕ್ಕು ಮುಖ ಎಲ್ಲಾ ಕೆಂಪಗಾಗಿ ಲುಂಗಿ ಹಿಡ್ಕಂಡು ಎದ್ನೊ ಬಿದ್ನೊ ಅಂತ ಓಡೊಗ್ಬುಟ್ಟ. ಡೈರೆಕ್ಟರು ಜುಂಜಂಗೆ ಹಂಗೆ ಹಿಡ್ಕಂಡು ಒಂದ್ಸಾವ್ರ ರೂಪಾಯಿ ನೊಟ್ನಾ ಕೊಟ್ಟು ಮಜಾ ಮಾಡ್ಲಾ ಅಂದಾ..... ದೀಪಿಕಾ ಇದ್ದದ್ದು ಹಂಗೆ ತಬ್ಕಂಡು ಯು ಅರ್ ಸೊ ಸ್ವೀಟ್ ಅಂತ ಕಿಸ್ ಕೊಟ್ತು ಕಲಾ...... ನಂಗೆ ಮೈಯೆಲ್ಲಾ ಉರ್ದೋಯ್ತು..... ನಾ ಇಷ್ಟ್ ದಿನಾ ಸ್ಟೆಪ್ ಹೇಳ್ಕೊಟ್ರು ಒಂದ್ ದಿನಾ ನನ್ಕಡೆ ತಿರ್ಗಿ ಕೂಡಾ ನೊಡ್ಲಿಲ್ಲಾ ಇವಂಗೆ ಈ ಪಾಟಿ ಮುತ್ತ್ ಕೊಟ್ಟೈತೆ.....</span></div>
<div style="-qt-block-indent: 0; -qt-paragraph-type: empty; font-family: 'tunga'; margin-bottom: 0px; margin-left: 0px; margin-right: 0px; margin-top: 0px; text-indent: 0px;">
<br /></div>
<div style="-qt-block-indent: 0; margin-bottom: 0px; margin-left: 0px; margin-right: 0px; margin-top: 0px; text-indent: 0px;">
<span style="font-family: 'tunga';">ಹೋಗ್ಲಿ ಬುಡ್ಲಾ ಕೋಮ್ಲಿ.... ಅದೆನೋ ಅಂತಾರಲ್ಲಾ ಅತ್ತೆಗೊಂದು ಕಾಲ, ಮಾವಂಗೊಂದು ಕಾಲಾ ಅಂತ... ನಿಂಗೂ ಒಳ್ಳೆ ಕಾಲ ಬತ್ತದೆ ಬುಡ್ಲಾ...</span></div>
<div style="margin: 0px; text-indent: 0px;">
<br /></div>
<div style="-qt-block-indent: 0; margin-bottom: 0px; margin-left: 0px; margin-right: 0px; margin-top: 0px; text-indent: 0px;">
<span style="font-family: 'tunga';">ಥು ನಿನ್ ಮುಕ್ಕೆ ಅದು ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ ಕಣ್ಲಾ.</span></div>
<div style="margin: 0px; text-indent: 0px;">
<br /></div>
<div style="-qt-block-indent: 0; margin-bottom: 0px; margin-left: 0px; margin-right: 0px; margin-top: 0px; text-indent: 0px;">
<span style="font-family: 'tunga';">ಎನೊ ಓಂದು.. ಬರೀ ಬಾವನೆ ಅರ್ತಾ ಮಾಡ್ಕಬೇಕು ಕಲಾ.... ನಡಿಲಾ ತಿಮ್ಮನ್ ಅಂಗಡಿಗೋಗಿ ಓಂದ್ ಹಾಪ್ ಟೀ ನಾರು ಕುಡಿವಾ... ಬಿಲ್ ನಾ ಜುಂಜನ್ ಹೆಸರ್ನಾಗೆ ಹಾಕಿದ್ರಾಯ್ತು.</span></div>
<div style="margin: 0px; text-indent: 0px;">
<br /></div>
<div style="-qt-block-indent: 0; margin-bottom: 0px; margin-left: 0px; margin-right: 0px; margin-top: 0px; text-indent: 0px;">
<span style="font-family: 'tunga';">ಎ ಥು...ನಡಿಲಾ... </span></div>
<div style="margin: 0px; text-indent: 0px;">
<br /></div>
<div style="margin: 0px; text-indent: 0px;">
<br /></div>
<div style="margin: 0px; text-indent: 0px;">
<span style="font-family: 'tunga';">ಹಾಸ್ಯ ಬರಹಗಾರ ಕೋಮಲ್ ಕುಮಾರ್ ಅವರ ಬರಹಗಳ ಪ್ರೇರಣೆಯಿಂದ ಒಂದು ಪುಟ್ಟ ಪ್ರಯತ್ನ. </span><span style="font-family: 'tunga';"><br /></span></div>
<div style="-qt-block-indent: 0; -qt-paragraph-type: empty; font-family: 'tunga'; margin-bottom: 0px; margin-left: 0px; margin-right: 0px; margin-top: 0px; text-indent: 0px;">
</div>
</div>
Motivation http://www.blogger.com/profile/08140925864934705325noreply@blogger.com0tag:blogger.com,1999:blog-5247965971580923628.post-48926158288968366022013-07-24T04:30:00.000-07:002013-07-24T04:30:37.892-07:00ಅಪ್ಪ ಅಮ್ಮಂಗೊಂದು ಪತ್ರ :<div dir="ltr" style="text-align: left;" trbidi="on">
<br /><br /> ತೀರ್ಥರೂಪ ತಂದೆಯವರಿಗೆ ಮತ್ತು ಮಾತೋಶ್ರಿಯವರಿಗೆ ನಿಮ್ಮ ಮಗನ ನಮನಗಳು. ಹೇಗಿದ್ದೀರಾ?ನಾನಿಲ್ಲಿ ಆರಾಮಾಗಿದ್ದೇನೆ. ಏನಪ್ಪಾ ಇದು ಫೋನಾಯಿಸಿ ಎಷ್ಟು ಹೊತ್ತು ಬೇಕಾದರೂ ಮಾತಾಡುವ ಕಾಲ ಬಂದಿರುವಾಗ ಇದೇನು ಪತ್ರ ಬರೆದಿದ್ದಾನೆ ಅಂತ ಯೋಚಿಸುತ್ತಿದ್ದೀರಾ? ಹ್ಮಂ ಕೆಲವೊಮ್ಮೆ ಹೀಗೆ ಕೆಲವು ವಿಷಯಗಳನ್ನ ಎದುರು ಕೂತು ಅಥವಾ ಫೋನಲ್ಲಿಯೋ ಹೇಳಲು ಆಗುವುದಿಲ್ಲ. ಓಂಟಿಯಾಗಿ ಕೂತಾಗ ಮನದಲ್ಲಿ ಬರುವ ವಿಚಾರಗಳನ್ನ ಹಾಗೆ ಶಬ್ಧಗಳಲ್ಲಿ ಹೇಳೊ ಪ್ರಯತ್ನ ಮಾಡುತ್ತಿದ್ದೇನೆ ಅಷ್ಟೆ.<br /><br />ಅಮ್ಮ..ಮೊನ್ನೆ ಮೊನ್ನೆ ನೀನು ಊರಿಗೆ ಬಂದು ಹೋದಾಗಿಂದ ಕೆಲ ವಿಷಯಗಳು ನನ್ನನ್ನ ಕೊರೆಯುತ್ತಿವೆ.ನೀವು ಮದುವೆಯಾಗಿ ಸುಮಾರು ೨೫ ಸಂವತ್ಸರಗಳನ್ನ ಕಳೆದಿದ್ದೀರಾ, ಈ ಎಲ್ಲ ಸಂವತ್ಸರಗಳು ಕೂಡ ನಿಮ್ಮ ಪಾಲಿಗೆ ಬಹಳ ಖುಷಿಯನ್ನ ತಂದಿರಲಿಕ್ಕಿಲ್ಲ ಬಹುಷಃ. ನನ್ನನ್ನ ಹೆತ್ತು ಹೊತ್ತು, ಸಾಕಿ ಸಲಹಿ ದೊಡ್ಡವನನ್ನಾಗಿ ಮಾಡಲು ನೀವು ಪಟ್ಟ ಕಷ್ಟಗಳು ಅಷ್ಟಿಷ್ಟಲ್ಲ. ರೂಪಾಯಿ ರೂಪಾಯಿಗೂ ಕೂಡ ಬೆಲೆ ಕಟ್ಟಿ ಬರುವ ಸ್ವಲ್ಪ ಹಣದಲ್ಲೇ ಉಳಿತಾಯ ಮಾಡುವ ಕಲೆ ಬೇರೆ ಯಾರಲ್ಲೂ ನಾ ಕಾಣಲಾರೆ.<br />ಅಪ್ಪಾ ನಿನ್ನದಂತೂ ತುಂಬಾ ಸಿಡುಕು ಸ್ವಭಾವ, ಅಮ್ಮ ನೀನಂತೂ ಶಾಂತಮೂರ್ತಿ.ಇಬ್ಬರದೂ ವಿರುದ್ದ ಗುಣಗಳಾದರೂ ಉತ್ತಮ ಸಂಸಾರ ನಿಮ್ಮದು. ನಾ ಕಂಡ ಜಗತ್ತಿನ ಅದ್ಭುತ ಜೋಡಿಗಳಲ್ಲಿ ನಿಮಗೇ ಮೊದಲ ಸ್ಥಾನ. ಎಷ್ಟೇ ಬಡತನವಿದ್ದರೂ ಮಗನ ಖುಷಿಗೆನೂ ಕಡಿಮೆಯಿಲ್ಲ ನಿಮ್ಮಲ್ಲಿ. ಮಗನ ಖುಷಿಯ ಸಲುವಾಗಿ ಇಷ್ಟು ವರ್ಷ ಸತತವಾಗಿ ದುಡಿದಿದ್ದೀರಾ, ಇನ್ನೂ ದುಡಿಯುತ್ತಲೇ ಇದ್ದೀರಾ ಕೂಡ.ವಯಸ್ಸು ಅರವತ್ತರ ಮೇಲಾದರೂ ನಿಮ್ಮಲ್ಲಿರುವ ಹುರುಪಿಗೆನೂ ಕಡಿಮೆಯಿಲ್ಲ. ಇನ್ನೂ ನಿಮ್ಮಲ್ಲಿರುವ ಕೆಲಸದ ಉತ್ಸಾಹ ನೋಡಿ ಹರೆಯದ ನನಗೆ ನಾಚಿಕೆಯಾಗುತ್ತದೆ.<br />ಅಪ್ಪಾ.. ಮಂಡಿ ನೋವಿದ್ದರೂ ಇನ್ನೂ ನಿಮ್ಮ ಓಡಾಟ ನಡೆಯುತ್ತಲೇ ಇದೆ.<br />ಅಮ್ಮಾ..ನಿನ್ನ ಕಣ್ಣು ಮಂಜಾಗಿದ್ದರೂ ನಿನ್ನ ಹೊಲಿಗೆ ಕೆಲಸ ಮಾತ್ರ ಇನ್ನೂ ಪ್ರಖರವಾಗಿ ಬೆಳೆಯುತ್ತಲೇ ಇದೆ. ಯಾಕಾಗಿ ಇದೆಲ್ಲ.?ಯಾರಿಗಾಗಿ ಇದೆಲ್ಲ??<br />ಮದುವೆಯಾಗಿ ಮಗುವನ್ನ ಹೆತ್ತು ಹೊತ್ತು ಹೆಗಲೆತ್ತರಕ್ಕೆ ಬೆಳೆಸಿ, ಅವನಿಗೊಂದು ನೆಲೆ ಹುಡುಕಿ,ಮದುವೆ ಮಾಡಿ ಮೊಮ್ಮಕ್ಕಳನ್ನ ಆಡಿಸಿದರೆ ನಿಮ್ಮ ಜೀವನ ಸಾರ್ಥಕ ಅಲ್ಲವೇ..? ಆದರೆ ನನ್ನದು..??<br /><br />ಹೀಗೆ ಒಬ್ಬಂಟಿಯಾಗಿ ಕುಳಿತು ಯೋಚಿಸಿದಾಗ ಹಳೆಯ ನೆನೆಪುಗಳೆಲ್ಲ ಕಾಡುತ್ತವೆ.ಆ ನೆನಪುಗಳಲ್ಲಿ ಸುಖ ದುಃಖ ಹೀಗೆ ಒಮ್ಮೊಮ್ಮೆ ಮೊಗದಲ್ಲಿ ಮೂಡುವ ನಗು, ಮಗದೊಮ್ಮೆ ತುಂಬಿ ಬರುವ ಹೃದಯ. ಒಟ್ಟಿನಲ್ಲಿ ನೀವು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಹೊಟ್ಟೆಪಾಡಿಗಾಗಿ ಅದೆಷ್ಟೋ ಊರೂರು ಅಲೆದಿದ್ದೀರಿ. ನಾಲ್ಕೈದು ಊರು ಸುತ್ತಿದ ಅನುಭವ ನನಗೂ ಆಗಿದೆ ಬಿಡಿ.ಗದ್ದೆ, ತೋಟದಲ್ಲಿ ಬೆವರಿಳಿಸಿದ್ದೀರಾ. ಚಿಕ್ಕವನಿದ್ದಾಗ ನಾನು ಮಾಡಿದ ತುಂಟಾಟಕ್ಕೆ ಲೆಕ್ಕವೇ ಇಲ್ಲ ಬಿಡಿ, ಅದನ್ನೆಲ್ಲ ಹೇಗೆ ಸಹಿಸುತ್ತಿದ್ದೀರಿ ನೀವು?? "ಹೆತ್ತವರಿಗೆ ಹೆಗ್ಗಣ ಮುದ್ದು" ಅಂತ ಮಗನ ನಗುವಲ್ಲೇ ನಿಮ್ಮ ನೋವ ಮರೆವ ಪರಿ ಅದೆಂತಹ ವಿಸ್ಮಯವೋ ನಾನರಿಯೆ.ಆಗಿನ ನನ್ನ ತುಂಟಾಟಗಳು ನಿಮಗೆ ಎಷ್ಟು ನೋವನ್ನ ನೀಡಿದೆ ಅನ್ನುವುದು ನನಗೆ ಈಗ ತಿಳಿಯುತ್ತಿದೆ. (ನಿಮ್ಮ ಪಾಲಿಗೆ ಅದು ನೋವಲ್ಲದಿರಬಹುದು.) ಗುದ್ದಲಿ, ಕತ್ತಿ ಹಿಡಿದು ಎನಾದರೂ ಮಾಡಲು ಹೋಗಿ ನೆಲದಲ್ಲಿದ್ದ ನೀರಿನ ಪೈಪನ್ನು ಅದೆಷ್ಟು ಬಾರಿ ಒಡೆದಿದ್ದೇನೋ ಅಲ್ಲವಾ..? ಪೆನ್ನು, ಪೆನ್ಸೀಲ್, ರಬ್ಬರ್ಗಳನ್ನ ಎಷ್ಟೋ ಸಲ ಕಳೆದುಕೊಂಡು ಹಣಕ್ಕಾಗಿ ನಿಮ್ಮನ್ನ ಪೀಡಿಸಿದಾಗ ಬಯ್ದು ನೀವು ನೀಡುತ್ತಿದ್ದ ನಾಲ್ಕೈದು ರೂಪಾಯಿಗೆ ಬೆಲೆ ಕಟ್ಟಲಾರೆ ನಾನು.೧ನೇ ತರಗತಿಯಲ್ಲಿದ್ದಾಗ ಶಾಲೆಗೆ ಹೋಗಲು ಹಟ ಮಾಡುತ್ತಿದ್ದ ನನ್ನನ್ನ ಒಮ್ಮೆ ತೋಟದ ತುದಿಯಲ್ಲಿದ್ದ ಗೇಟಿನವರೆಗೂ ಹೊಡೆಯುತ್ತ ಅಟ್ಟಿಸಿಕೊಂಡು ಬಂದಿದ್ದು ಇನ್ನೂ ನೆನಪಿದೆ.ಮುಂದೆ ನಿಮ್ಮಿಂದ ದೂರವಾಗಿ ಚಿಕ್ಕಮ್ಮನ ಮನೆಯಲ್ಲಿ ಶಾಲೆಗೆ ಹೋಗುತ್ತಿದ್ದಾಗ ಒಬ್ಬನೇ ಅದೆಷ್ಟು ಬಾರಿ ಅತ್ತಿದ್ದೆನೋ.. ಆಗ ನಿಮಗೂ ದುಃಖವಾಗಿರಬೇಕು ಬಹುಷಃ.ಮೂರನೇ ತರಗತಿಯಲ್ಲಿದ್ದಾಗ ನಾವಿದ್ದದ್ದು ಬಹುಷಃ ೧೫/೨೦ ರ ಖೊಲಿಯಾಗಿರಬೇಕು ಅಲ್ಲವಾ?? ಒಂದು ಮೂಲೆಯಲ್ಲಿ ಬಚ್ಚಲು ಮನೆ, ಮತ್ತೊಂದು ಮೂಲೆಯಲ್ಲಿ ಅಡುಗೆ ಮನೆ. ಇಷ್ಟರಲ್ಲೆ ಸಂತೋಷವಾಗಿದ್ದದ್ದು ಮರೆಯುವಂತಿಲ್ಲ. ತೋಟದಲ್ಲಿದ್ದ ಒಂಟಿ ಮನೆ,ಏನಾದರೂ ಬೇಕೆಂದರೆ ಮೂರ್ನಾಲ್ಕು ಕಿ.ಮಿ ನಡಿಗೆ. ಮಳೆಗಾಲದಲ್ಲಿ ಲೈಟ್ ಹೋದರೆ ತಿಂಗಳುಗಟ್ಟಲೆ ನಾಪತ್ತೆ.ಚಿಮಣಿ ಬುಡ್ಡೆಯಲ್ಲೇ ಜೀವನ.ಎದುರಿಗಿದ್ದ ತೆರೆದ ಬಾವಿಯ ಕೆಂಪಾದ ನೀರನ್ನೇ ಕುದಿಸಿ ಕುಡಿಯುತ್ತಿದ್ದದ್ದು.ಎಲ್ಲಿ ಜೋರು ಗಾಳಿ ಮಳೆಯಾದರೆ ಬದಿಯ ಗೋಡೆ ಕುಸಿಯುತ್ತೆನೋ ಅನ್ನುವ ಭಯ ಬೇರೆ.ಹೀಗೆ ಸುಮಾರು ಏಳು ವರ್ಷ ಒಟ್ಟಿಗೆ ಇದ್ದಾಗಿನ ಕೆಲ ನೆನಪುಗಳು ಕೆಲವೊಮ್ಮೆ ಬಹಳ ಕಾಡುತ್ತವೆ.ಅಪ್ಪ ಮಗ ದೋಸೆ ತಿನ್ನೋಕೆ ಕುಳಿತರೆ ಕೊನೆಗೆ ನಿನಗೆ ಉಳಿಯದೇ ಅಮ್ಮಾ ನೀನು ಮತ್ತೆನಾದರೂ ತಿನ್ನುತ್ತಿದ್ದದ್ದು ನೆನೆಪಿದೆ. ಬಾಲ್ಯದ ಖುಷಿಯ ದಿನಗಳ ಜೊತೆಗೆ ನಿಮ್ಮ ಕಷ್ಟದ ದಿನಗಳ ನೆನಪು ಮನಕ್ಕೆ ಚುಚ್ಚುತ್ತವೆ.ಒಮ್ಮೆ ನಾನು ಮನೆ ಬಿಟ್ಟು ಹೋದದ್ದು ನೆನಪಿದೆಯಾ..? ಎಷ್ಟು ಹುಡುಕಿದ್ದೀರಿ ಅಲ್ಲವಾ..? ನಾನು ತೋಟದಲ್ಲಿ ಅಡಗಿ ಕೂತಿದ್ದೆ, ನಿಮ್ಮ ಕೂಗು ನನಗೆ ಕೇಳುತ್ತಿತ್ತು.ಆ ಕೂಗಿನಲ್ಲಿನ ನಿಮ್ಮ ನೋವು ಆಗ ನನ್ನ ಅರಿವಿಗೆ ಬಂದಿರಲಿಕ್ಕಿಲ್ಲ.. ಬಹಳ ಹೊತ್ತು ನಿಮ್ಮಿಂದ ದೂರವಿರಲಾರದೆ ಮತ್ತೆ ಬಂದು ನೀವು ಬಿಗಿದಪ್ಪಿದಾಗ ಸಿಕ್ಕ ಸುಖ ಅಷ್ಟಿಷ್ಟಲ್ಲ.ಹತ್ತನೇ ತರಗತಿ ಮುಗಿದ ಮೇಲೆ ಮತ್ತೆ ನಿಮ್ಮಿಂದ ದೂರವಾಗಬೇಕಾದಾಗ ನಾನೆಷ್ಟು ಅತ್ತಿದ್ದೆ, ಆದರೆ ನಿಮ್ಮ ಕಣ್ಣಲ್ಲಿ ಒಂದು ಹನಿಯೂ ಇರದಿರುವುದನ್ನ ನೋಡಿ ಆಶ್ಚರ್ಯವಾಗಿತ್ತು ನನಗೆ..! ಯಾಕೆ ಹೀಗೆ..? ನಿಮ್ಮ ಮಗ ಜೀವನದಲ್ಲಿ ಎನಾದರೂ ಸಾಧಿಸಲು ಹೊರಟಿದ್ದಾನೆ ಅನ್ನುವ ನಂಬಿಕೆಯೆ..?? ಅಥವಾ ನನಗೆ ಧೈರ್ಯ ನೀಡುವ ಸಲುವಾಗಿ ಹಾಗೆ ನಟಿಸಿದ್ದೀರೊ ನಾನರಿಯೆ..ಇವೆಲ್ಲವೂ ನನ್ನ ಜೀವನದಲ್ಲಿ ಮರೆಯಲಾರದ ಕಹಿ ನೆನಪುಗಳು.<br /><br />ನನಗೀಗ ಕಾಡುವ ಪ್ರಶ್ನೆಗಳೇ ಬೇರೆ.ನಿಮ್ಮ ಹೆಗಲೆತ್ತರಕ್ಕೆ ಬೆಳೆದಿದ್ದರೂ ನಿಮ್ಮನ್ನ ದುಡಿಸುತ್ತಲೇ ಇದ್ದೇನೆ. ಮನೆ ಬಿಟ್ಟು ಷಹರಕ್ಕೆ ಬಂದು ದುಡಿದು ಸಾಲ ಮಾಡಿ ಮನೆ ತೆಗೆದುಕೊಂಡರೂ ನಿಮಗಿನ್ನೂ ನೆಮ್ಮದಿಯ ನಿದ್ದೆಯಿಲ್ಲ, ಇನ್ನೂ ಹಳ್ಳಿಯಲ್ಲೇ ನಿಮ್ಮ ಜೀವನ. ಇದುವರೆಗೂ ಒಮ್ಮೆಯೂ ಮನೆಗೆ ತಿಂಗಳು ತಿಂಗಳು ಹಣ ಕಳಿಸಿಲ್ಲ.. ನಿಮ್ಮ ಜೀವನಕ್ಕೆ ಬೇಕಾಗುವಷ್ಟು ದುಡಿದು, ಅದರಲ್ಲೂ ಸ್ವಲ್ಪ ಉಳಿಸಿ ನನಗೇ ಕೊಡುತ್ತಿದ್ದೀರಾ ಹೊರತು ನನ್ನಿಂದ ಇದುವರೆಗೂ ಒಂದು ರೂಪಾಯಿ ಸಹ ಕೇಳಿಲ್ಲ ನೀವು.ಬೇರೆಯವರೆಲ್ಲಾ ಮಗ ಕಳಿಸಿದ ಅಂತ ತೀರ್ಥಯಾತ್ರೆ ಮಾಡುತ್ತಿದ್ದರೆ ನೀವೆಂದೂ ನಮಗೆ ಎಲ್ಲಾದರೂ ಹೋಗಬೇಕಂತ ಎಂದೂ ಕೇಳಿಲ್ಲ.ಮೊದಲ ಸಂಬಳದಿಂದ ಸೀರೆ, ಶರ್ಟ್ ಪ್ಯಾಂಟ್ ತಂದಾಗಲೂ ಇದೆಲ್ಲ ಯಾಕೆ ಬೇಕಿತ್ತು ಅಂತಲೇ ಕೇಳಿದ್ದೀರಿ. ದುಡ್ಡಿದ್ದಾಗೆಲ್ಲ ಏನಾದರೂ ತಂದರೆ ಹೇಗಿದೆ ಅನ್ನುವ ಬದಲು ಇದಕ್ಕೆಷ್ಟು ಕೊಟ್ಟೆ ಅಂತಲೇ ಕೇಳುತ್ತೀರಿ. ನಾನು ಊರಿಗೆ ಬಂದಾಗಲೆಲ್ಲಾ ನನ್ನಲ್ಲಿದ್ದ ದುಡ್ಡನ್ನ ನಿಮ್ಮ ಹತ್ತಿರವೇ ಕೊಡುತ್ತಿದ್ದೆ, ಮತ್ತೆ ಖರ್ಚಿಗೇನಾದರೂ ನಿಮ್ಮಲ್ಲಿ ಹಣ ಕೇಳಿದರೆ ನೀವು ಕೈಗಿಡುತ್ತಿದ್ದ ೧೦ ರೂ. ಕಂಡು ನಗು ಬರುತ್ತಿತ್ತು. ನಾನಿಲ್ಲಿ ಎಷ್ಟೊ ದುಡ್ಡನ್ನ ವ್ಯಯ ಮಾಡುತ್ತಿದ್ದರೂ ನೀವು ರೂಪಾಯಿಗೂ ಲೆಕ್ಕವಿಟ್ಟು ಸುಮ್ಮನೆ ದುಡ್ಡು ಹಾಳು ಮಾಡಬೇಡ ಅಂತ ಪ್ರೀತಿಯಿಂದ ಕೆನ್ನೆ ತಟ್ಟಿದಾಗ ಮನ ತುಂಬಿಬರುತ್ತೆ. ಮೊಬೈಲ್ ಇದೆ ಅಂತ ದಿನವೂ ಫೋನ್ ಮಾಡಬೇಕು ಅಂತೇನಿಲ್ಲ, ವಾರಕ್ಕೊಮ್ಮೆ ಮಾಡಿದರೆ ಸಾಕು ಅನ್ನುವ ನಿಮ್ಮ ಮಾತಿಗೆ ಏನು ಹೇಳಬೇಕೋ ನಾನರಿಯೆ.ಅಮ್ಮ ನೀನು ಊರಿಗೆ ಬರ್ತೀನಿ ಅಂದಾಗ ನಾನು ರಿಜರ್ವೆಶನ್ ಮಾಡಿಸ್ತೀನಿ ಆರಾಮವಾಗಿ ಮಲಗಿಕೊಂಡು ಬರಬಹುದು ಅಂದರೆ ಅದೆಲ್ಲ ಬೇಡ ಸುಮ್ಮನೆ ದುಡ್ಡು ಹಾಳು ಅನ್ನುವ ನಿನ್ನ ಮಾತಿಗೆ ನನ್ನ ಮನ ಚುರುಗುಡುತ್ತೆ. ಈ ಮಗನಿಂದ ನೀವೆನನ್ನೂ ನೀರೀಕ್ಷಿಸಲೇ ಇಲ್ಲ, ನನ್ನ ಖುಷಿಯೊಂದೇ ಸಾಕೇ..? ಬೇರೆನೂ ಬೇಡವೇ ನಿಮಗೆ..?ನನಗೆ ನೀವು ಇದುವರೆಗೂ ಯಾವುದಕ್ಕೂ ಕಡಿಮೆ ಮಾಡಿಲ್ಲ.ಹಟ ಮಾಡಿದಾಗೆಲ್ಲ ಬಯ್ಯುತ್ತ ಎಲ್ಲವನ್ನೂ ಕೊಡಿಸಿದ್ದೀರ. ನಿಮಗೆ ಒಂದೆರಡು ತುತ್ತು ಕಡಿಮೆಯಾದರೂ ನನಗೆ ಮೃಷ್ಟಾನ್ನವನ್ನೇ ನೀಡಿದ್ದೀರ. ನಿಮಗೆ ಹೊಸ ಬಟ್ಟೆಯಿಲ್ಲದಿದ್ದರೂ ನನಗಾಗಿ ಯಾವಾಗಲೂ ಚಂದದ ಉಡುಪನ್ನೇ ಹೊಲಿಸಿದ್ದೀರ. ಹುಟ್ಟುಹಬ್ಬವನ್ನ ಜೋರಾಗಿ ಆಚರಿಸದಿದ್ದರೂ ಅಮ್ಮಾ ನೀ ಮಾಡುವ ಪಾಯಸದ ರುಚಿ ಮರೆಯುವಂತಿಲ್ಲ. ಎಷ್ಟೇ ಬಡತನವಿದ್ದರೂ ನೀವೆಂದಿಗೂ ನಿಮ್ಮ ನಿಷ್ಠೆ, ಕರ್ತ್ಯವ್ಯ, ಪ್ರಾಮಾಣಿಕತೆ, ಸ್ವಾಭಿಮಾನವನ್ನ ಮರೆತಿಲ್ಲ. ನಿಜಕ್ಕೂ ನಿಮ್ಮಂಥವರ ಮಗನಾಗಿ ಹುಟ್ಟಿದ ನನ್ನ ಬಾಳು ಧನ್ಯ. ಪ್ರತಿ ಜನ್ಮದಲ್ಲೂ ನಿಮ್ಮ ಮಗನಾಗೇ ಹುಟ್ಟಿ ನಿಮ್ಮ ಋಣವನ್ನ ತೀರಿಸುವ ಭಾಗ್ಯ ನನ್ನದಾಗಲಿ ಅನ್ನುವುದಷ್ಟೇ ಆ ಭವವಂತನಲ್ಲಿ ನನ್ನ ಕೋರಿಕೆ.<br /><br />ನಿಮಗೆ ಹೋಲಿಸಿದರೆ ನಾನೀಗಲೇ ಮುದುಕನಾಗಿದ್ದೇನೆ ಅನಿಸುತ್ತದೆ.ಬೆನ್ನು ನೊವು ಅದು ಇದು ಅಂತ ಈಗಲೇ ಕೊರಗು ಶುರುವಾಗಿದೆ.ಒಮ್ಮೊಮ್ಮೆ ಎಂಟಕ್ಕೆಲ್ಲಾ ಎದ್ದಾಗ ನೀವು ಐದಕ್ಕೇ ಎದ್ದು ದಿನವಿಡೀ ಕೆಲಸ ಮಾಡುವ ನಿಮ್ಮ ಉತ್ಸಾಹ ನಾಚಿಸುತ್ತದೆ. ನಿಮ್ಮಲ್ಲಿರುವ ಕೆಲಸ ಮಾಡುವ ಸಾಮರ್ಥ್ಯ, ಹುರುಪು, ಆಶಾವಾದ ನನ್ನಲ್ಲಿಲ್ಲ. ಬಿಸಿಲಿಗೆ ಕಾಯಲಿಲ್ಲ ನಿಮ್ಮ ದೇಹ, ಮಳೆ ಗಾಳಿಗೆ ಮುದುಡಲಿಲ್ಲ. ನಿಮ್ಮ ಸಹನಶೀಲತೆಗೆ ಸರಿಸಾಟಿಯಾವುದಿಲ್ಲ.ನನ್ನ ಕೂದಲುಗಳೋ ಈಗಲೇ ಬೆಳ್ಳಗಾಗತೊಡಗಿದೆ.ಇನ್ನಾದರೂ ನಾವೆಲ್ಲ ಒಟ್ಟಿಗೆ ಇರಬೇಕು, ಮನೆಯಲ್ಲಿ ನಿಮ್ಮನ್ನ ರಾಜ-ರಾಣಿಯರಂತೆ ನೋಡಿಕೊಳ್ಳಬೇಕು, ನಿಮ್ಮ ಆಸೆಯನ್ನೆಲ್ಲ ಪೂರೈಸಬೇಕು(ಮಗನ ಸುಖ ಬಿಟ್ಟು ನಿಮಗೆ ಬೇರೆನೂ ಆಸೆಗಳಿಲ್ಲ ಬಹುತೇಕ) ಅನ್ನುವ ಆಸೆ ನನಗೂ ಇದೆ. ಆದರೆ ಸಿಗುವ ಸಂಬಳ, ಮನೆಯ ಸಾಲದ ಕಂತು, ಪೆಟ್ರೋಲ್ ಮೋಬೈಲ್ ಅದು ಇದು ಅಂತ ಈ ಷಹರದ ಜೀವನದಲ್ಲಿ ಉಳಿತಾಯ ಶೂನ್ಯ. ನಿನ್ನ ಜೀವನ ಮೊದಲು ಸರಿಯಾಗಲಿ ಆಮೇಲೆ ನಾವು ನಿನ್ನ ಜೋತೆ ಬಂದುಳಿಯುತ್ತೇವೆ ಅನ್ನುವ ನಿಮ್ಮ ಮಾತಿಗೆ ಕಣ್ತುಂಬಿ ಬರುತ್ತದೆ. ನನಗಿಷ್ಟು ವಯಸ್ಸಾಗಿದ್ದರೂ ಇನ್ನೂ ನಿಮ್ಮನ್ನ ಸುಖವಾಗಿ ನೋಡಿಕೊಳ್ಳಲು ಆಗುತ್ತಿಲ್ಲ ಅಂದರೆ ಇದೆಂಥಹ ಜೀವನ ನನ್ನದು, ಬದುಕಿದ್ದೂ ವ್ಯರ್ಥ ಅನಿಸುತ್ತದೆ ಒಮ್ಮೊಮ್ಮೆ.<br />ನಾನು ಚಿಕ್ಕವನಿದ್ದಾಗ ನೀವು ಪಡುತ್ತಿದ್ದ ಕಷ್ಟಗಳು ತಿಳಿಯುತ್ತಿರಲಿಲ್ಲ.ಆದರೆ ಈಗ ಸ್ವಂತ ಕಾಲ ಮೇಲೆ ನಿಂತಾಗ, ಜೀವನದ ಏಳು-ಬೀಳುಗಳ ಪೆಟ್ಟು ತಿಂದಾಗ ಅದರ ಅರಿವಾಗುತ್ತಿದೆ.ನಾವು ದುಡಿದು ತಿಂದಾಗಲೇ ಅದರ ಬೆಲೆ ತಿಳಿಯುವುದು, ಅದರಲ್ಲಿ ಸಿಗುವ ಸುಖವೇ ಬೇರೆ.ಮೊದಲೆಲ್ಲ ಹೇಗೆ ಬೇಕೊ ಹಾಗೆಖರ್ಚು ಮಾಡುತ್ತಿದ್ದವನು ಈಗ ಪ್ರತಿಯೊಂದಕ್ಕೂ ಲೆಕ್ಕ ಹಾಕುತ್ತಿದ್ದೇನೆ.<br />ಅಮ್ಮಾ...ಮಗನೇ ಈಗ ಬುದ್ದಿ ಬಂತಾ ಅಂತ ನಗುತ್ತಿದ್ದೀಯಾ..??<br />ಅಪ್ಪಾ... ನಿಮಗೂ ಖುಷಿಯಾಗಿರಬೇಕಲ್ಲ.. ಮಗ ತನ್ನ ಕಾಲ ಮೇಲೆ ನಿಂತಿದ್ದಾನೆ ಅಂತ. ಸಿಟಿಯಲ್ಲಿ ಮಗ ಮನೆ ತಗೊಂಡಿದ್ದಾನೆಂದು ಊರೆಲ್ಲ ಖುಷಿಯಿಂದ ಸಾರಿದ್ದೀರ ಅಂತ ನನಗೆ ಗೊತ್ತು.ಬಹಳ ಹೆಮ್ಮೆ ಪಡುವ ಕೆಲಸ ಮಾಡದಿದ್ದರೂ ನಿಮ್ಮ ಹೆಸರಿಗೆ ಚ್ಯುತಿ ಬರುವ ಕೆಲಸವನ್ನ ನಾನೆಂದೂ ಮಾಡುವುದಿಲ್ಲ ಎಂದಷ್ಟೇ ಹೇಳಬಲ್ಲೆ.ನಾ ಕಂಡ ಪ್ರತ್ಯಕ್ಷ ದೈವ ನೀವು. ನಿಮ್ಮ ಮುಖದಲ್ಲಿ ಸದಾ ನಗುವನ್ನ ನೋಡಬಯಸುತ್ತೇನೆ ಅಷ್ಟೆ.<br /><br /><b>ಹೃದಯ ಮಿಡಿಯುತ್ತಿದೆ<br />ಕಣ್ಗಳು ತುಂಬಿ ಬಂದಿದೆ,<br />ಕೈಗಳು ನಡುಗುತ್ತಿದೆ<br />ಶಬ್ದಗಳು ಆರತೊಡಗಿವೆ.<br /><br />ಒಂದೆರಡು ಕಣ್ಣ ಹನಿಗಳು ಹಾಳೆಯನ್ನ ಹಸಿಯಾಗಿಸಿವೆ, <br />ತೊಯ್ದು ಮುದ್ದೆಯಾಗಿಸುವ ಮೊದಲು ಮುಗಿಸುತ್ತಿದ್ದೇನೆ.</b><br /><br />ಇಂತಿ ನಿಮ್ಮ ಮುದ್ದಿನ ಕಣ್ಮಣಿ.<br /></div>
Motivation http://www.blogger.com/profile/08140925864934705325noreply@blogger.com8tag:blogger.com,1999:blog-5247965971580923628.post-33979558330984489822013-04-15T10:45:00.000-07:002013-04-15T10:45:28.082-07:00ಹನಿ ಹನಿ 13:<div dir="ltr" style="text-align: left;" trbidi="on">
<h4 style="text-align: left;">
ಹೆಂಡತಿ v/s ಅಮ್ಮ </h4>
<br />
<br />
ಅಮ್ಮನ ಗುಳಿಗೆ ಮರೆತುಬಂದ ಮಗ,<br />ಹೆಂಡತಿಗೆ ನೆನಪಿಂದ ಮಲ್ಲಿಗೆ ತಂದಿದ್ದ.<br /><br />ಹೆಂಡತಿಯ ಜೊತೆಗೆ ಅಮೇರಿಕ ತಿರುಗಿದ್ದ, <br />ಆದರೆ ಅಮ್ಮನ ಕಾಶೀಯಾತ್ರೆಗೆ ದುಡ್ಡಿರಲಿಲ್ಲ.<br /><br />ಅಮ್ಮನ ಮಡಿಲಲ್ಲಿ ಬೆಳೆದವನಿಗೆ, <br />ಸುಖ ಸಿಕ್ಕಿದ್ದು ಹೆಂಡತಿಯ ಮಡಿಲಲ್ಲಿ. <br /><br />ಹೆಂಡತಿಯ ಕೈ ಕೊಯ್ದರೆ ಸಂಕಟ,<br />ಅಮ್ಮ ರಾತ್ರಿ ಕೆಮ್ಮಿದರೆ ಕಿರಿಕಿರಿ. <br /><br />ಹೆಂಡತಿ ನೀಡಿದ್ದು ಪ್ರೀತಿ,<br />ಅಮ್ಮ ಬೆಳೆಸಿದ್ದು ಕರ್ತವ್ಯ. <br /><br />ಹೆಂಡತಿಯ ತಟ್ಟೆಯೂಟದೆದುರು, <br />ಅಮ್ಮನ ಕೈತುತ್ತು ರುಚಿಸದಾಗಿದೆ.<br />
<br />
<br />
<br />
<br />
ನಿನಗೆನಾದರೂ ನಾ ಬದುಕುವುದಿಲ್ಲವೆಂಬ ಹೆಂಡತಿ,<br />ನಿನಗೇನೂ ಆಗಲು ಬಿಡುವುದಿಲ್ಲವೆಂಬ ತಾಯಿ. <br /><br />ಕೈ ಕೊಯ್ದಾಗ<br />ಬ್ಯಾಂಡೇಜ್ ತರಲು ಹೆಂಡತಿಯೋಡಿದರೆ,<br />
ಅಮ್ಮ ಹರಿದದ್ದು ಸೀರೆಯ ಸೆರಗು.<br /><br />ಗೆಲುವಿಗೆ<br />ಹೆಂಡತಿ ಖುಷಿಪಟ್ಟರೆ,<br />ಅಮ್ಮನ ಕಣ್ಣಲ್ಲಿ ನೀರು.<br /><br />ಆಸೆ ಹೆಂಡತಿಯ ಸೆರಗಲ್ಲಿ,<br />ಸುಖ ಅಮ್ಮನ ಮಡಿಲಲ್ಲಿ.<br /><br />ಹೆಂಡತಿ ಮನೆಯಲ್ಲಿ,<br />
ಅಮ್ಮ ಹೃದಯದಲ್ಲಿ. <br />
<br />
ಮಡದಿಯೆಂದರೆ ಸುಖ, <br />ಅಮ್ಮ ಎಂದರೆ ಸ್ವರ್ಗ. <br /> </div>
Motivation http://www.blogger.com/profile/08140925864934705325noreply@blogger.com0tag:blogger.com,1999:blog-5247965971580923628.post-84173072213511001912013-04-14T21:19:00.001-07:002013-04-14T21:19:32.522-07:00ಪ್ರೇಮ ಪತ್ರ:<div dir="ltr" style="text-align: left;" trbidi="on">
ನವೀನ ಮೇಘನಳ ಪರಿಚಯ ಸುಮಾರು ಆರೇಳು ವರ್ಷಗಳಷ್ಟು ಹಳೆಯದು. ಕಾಲೇಜಿನಿಂದ ಹಿಡಿದು
ಕೆಲಸಕ್ಕೆ ಸೇರಿ ಎರಡು ವರ್ಷಗಳಾಗಿದ್ದವು ಇಬ್ಬರು ಜೊತೆಗಿದ್ದು. ನಿಷ್ಕಲ್ಮಶ ಸ್ನೇಹ
ಇಬ್ಬರದು. ಇವರಿಬ್ಬರ ಸ್ನೇಹ ನೋಡಿ ಅಸೂಯೆಪಡದವರಿಲ್ಲ. ನಸುಗೆಂಪು ಬಣ್ಣದ ಉತ್ತಮ
ಮೈಕಟ್ಟಿನ ಮಧ್ಯಮ ವರ್ಗದ ಸೀದಾ ಸಾದಾ ಹುಡುಗ ನವೀನ, ಹಾಲ್ಗೆನ್ನೆಯ ಎಲ್ಲರ ನೋಟವನ್ನ
ಒಮ್ಮೆಲೇ ತನ್ನೆಡೆಗೆ ಸೆಳೆಯುವ ಶ್ರೀಮಂತರ ಮನೆಯ ಹುಡುಗಿ ಮೇಘನ, ಆದರೂ ಮನೆಯ
ಶ್ರೀಮಂತಿಕೆ ಅವಳ ಸ್ವಭಾವದಲ್ಲಿರಲಿಲ್ಲ, ಬಹುಷಃ ಇದೆ ಕಾರಣವಿರಬೇಕು ಇವರಿಬ್ಬರ ಸ್ನೇಹ
ಇಷ್ಟು ಗಟ್ಟಿಯಾಗಿರಲು. ಕಾಲೇಜಿನ ಪ್ರಾರಂಭದ ದಿನದಲ್ಲೇ ಇವರ ಪರಿಚಯವಾಗಿತ್ತು. ಶಾಂತ
ಸ್ವಭಾವದ ತಾನಾಯಿತು ತನ್ನ ಕೆಲಸವಾಯಿತು ಅಂತ ಇರುತ್ತಿದ್ದ ನವೀನನ ಈ ಸ್ವಭಾವವೇ
ಮೇಘನಳನ್ನ ತುಂಬಾ ಆಕರ್ಷಿಸಿತ್ತು. ಎಷ್ಟೋ ಹುಡುಗರು ಇವಳ ಸ್ನೇಹ ಬಯಸಿದರಾದರೂ ಮೇಘನ
ಸ್ನೇಹ ಮಾಡಿದ್ದು ನವೀನನ ಜೊತೆ. ಹೀಗಾಗಿ ಇವರ ಸ್ನೇಹ ನೋಡಿ ಹೊಟ್ಟೆ ಉರಿದುಕೊಂಡವರು
ಅದೆಷ್ಟೋ ಜನ. ಕಾಲೇಜಿನ ದಿನಗಳು ತುಂಬಾ ಸಲುಗೆಯಿಂದ ಮುಗಿದಿದ್ದವು. ಇಬ್ಬರಿಗೂ ಒಳ್ಳೆ
ಕೆಲಸ ಕೂಡ ಸಿಕ್ಕಿತು. ಇವರಿಬ್ಬರ ಸ್ನೇಹ ಇನ್ನೂ ಹಾಗೆ ಉಳಿದಿತ್ತು. ವಾರಕ್ಕೆ ಒಂದೆರಡು
ಬಾರಿಯಾದರೂ ಸಿಕ್ಕು ತಾಸಂತಾಸು ಹರಟುತ್ತಿದ್ದರು. ಇವರನ್ನು ನೋಡಿದವರೆಲ್ಲ ಇವರಿಬ್ಬರೂ
ಪ್ರೇಮಿಗಳು ಅಂದುಕೊಳ್ಳುತ್ತಿದ್ದರು, ಆದರೆ ಎಂದೂ ನವೀನ ಮತ್ತು ಮೇಘನಳ ನಡುವೆ ಪ್ರೀತಿಯ
ವಿಷಯ ಬಂದಿರಲಿಲ್ಲ. ಆಗೀಗ ಮೇಘನಳೇ ತಮಾಷೆಗೆ ನವೀನಳನ್ನ ಪೀಡಿಸುತ್ತಿದ್ದಳೇ ಹೊರತು ನವೀನ
ಎಂದೂ ಪ್ರೀತಿಯ ವಿಷಯವಾಗಿ ಮಾತಾಡುತ್ತಿರಲಿಲ್ಲ.<br />
<br />
ಮೇಘನಳ ಕುಟುಂಬವೆಲ್ಲ ಬೆಂಗಳೂರಿನಲ್ಲೇ ಇತ್ತು. ತಂದೆ ಒಳ್ಳೆ ಉದ್ಯಮಿ, ತಾಯಿ
ಗೃಹಿಣಿಯಾಗಿ ತಂದೆಯ ಕೆಲಸದಲ್ಲೂ ಸ್ವಲ್ಪ ಮಟ್ಟಿಗೆ ನೆರವಾಗುತ್ತಿದ್ದರು. ಎಷ್ಟೇ
ಸಿರಿತನವಿದ್ದರೂ ಮಗಳನ್ನ ಹೇಗೆ ಬೇಕೋ ಹಾಗೆ ಬೆಳೆಸದೆ ಉತ್ತಮ ಸಂಸ್ಕಾರ ನೀಡಿದ್ದರು.
ಇನ್ನು ನವೀನನ ಕುಟುಂಬವೆಲ್ಲ ಇದ್ದದ್ದು ಕಾರವಾರ ಸಮೀಪದ ಹಳ್ಳಿಯಲ್ಲಿ. ಅಲ್ಲೇ ಸ್ವಲ್ಪ
ಸ್ವಂತದ ಜಮೀನು ಇದ್ದರಿಂದ ತಂದೆ ತಾಯಂದರಿಬ್ಬರೂ ಅಲ್ಲೇ ಇದ್ದರು. ನವೀನ ಊರಿಗೆ
ಬರುತ್ತಿದ್ದದ್ದು ವರ್ಷದಲ್ಲಿ ಒಂದೆರಡು ಬಾರಿ ಮಾತ್ರ. ಇತ್ತೇಚೆಗೆ ನವೀನನ ತಾಯಿಯ
ಆರೋಗ್ಯವೂ ಸರಿ ಇರಲಿಲ್ಲ, ಆದಷ್ಟು ಬೇಗ ಮಗನ ಮದುವೆ ವಿಚಾರವಾಗಿ ಮಗನಲ್ಲಿ
ಮಾತಾಡಿದ್ದರು. ಮುಂದಿನ ಸಲ ಊರಿಗೆ ಬಂದಾಗ ಈ ವಿಚಾರ ಮಾತಾಡೋಣ ಅಂತ ವಿಷಯವನ್ನ ಅಲ್ಲಿಗೇ
ನಿಲ್ಲಿಸಿದ್ದ ನವೀನ.<br />
<br />
ಕಳೆದ ಕೆಲ ತಿಂಗಳಿನಲ್ಲಿ ಮೇಘನ ಸ್ವಲ್ಪ ಡಲ್ ಆಗಿದ್ದಳು, ಆರೋಗ್ಯವೂ ಸ್ವಲ್ಪ
ಹದಗೆಟ್ಟಿತ್ತು. ಏನೆಂದು ನವೀನ ವಿಚಾರಿಸಿದರೆ ಹಾರಿಕೆ ಉತ್ತರ ಕೊಟ್ಟು
ಸುಮ್ಮನಾಗುತ್ತಿದ್ದಳು. ಇವರ ನಡುವಿನ ಒಡನಾಟವೂ ಸ್ವಲ್ಪ ಕಡಿಮೆಯಾಗಿತ್ತು. ನವೀನನಿಗೋ
ಏನೋ ಕಳೆದುಕೊಂಡ ಭಾಸವಾಗುತ್ತಿತ್ತು. ಕೆಲಸದ ಒತ್ತಡದ ನಡುವೆ ಊರಿಗೆ ಹೋಗಲು ಆಗಿರದೆ
ಸುಮಾರು ಒಂದು ವರ್ಷದ ನಂತರ ಮತ್ತೆ ಊರಿಗೆ ಹೊರಟಿದ್ದ ನವೀನ. ಹೋಗುವ ಮೊದಲ ದಿನ
ಹುಷಾರಿಲ್ಲದಿದ್ದರೂ ಮೇಘನ ಇವನನ್ನ ಸಿಗಲು ಬಂದಿದ್ದಳು, ಇಬ್ಬರೂ ಒಟ್ಟಿಗೆ ಸುಮಾರು
ತಾಸುಗಟ್ಟಲೆ ಹರಟಿದರು. ಮೇಘನ ತನ್ನದೇ ಚಿಂತೆಯಲ್ಲಿ ಇದ್ದದ್ದನ್ನ ಗಮನಿಸಿದ ನವೀನ
ಏನಾಯ್ತು ತುಂಬಾ ಚಿಂತೆಯಲ್ಲಿದ್ದೀಯ ಎಂದ. ಏನಿಲ್ಲ ನವೀನ್ ನೀನು ಊರಿಗೆ ಹೊರಟಿದ್ದೀಯ
ಬರೋಕೆ ಹದಿನೈದು ದಿನ ಆಗುತ್ತೆ ಅಂತಾ ಇದೀಯ ನನಗ್ಯಾಕೋ ಮತ್ತೆ ನಾವಿಬ್ಬರು ಸಿಗ್ತೀವಿ
ಅಂತ ಅನಿಸ್ತ ಇಲ್ಲ ಕಣೋ, ಯಾಕೆ ಅಂತ ಗೊತ್ತಾಗ್ತಾ ಇಲ್ಲ ಅಂತ ಅಂದಳು. ಸಾಕು ತಮಾಷೆ
ಮಾಡಿದ್ದು ನಡೀ ನಾನಿನ್ನು ಬರ್ತೀನಿ ಇನ್ನೂ ಬ್ಯಾಗ್ ತುಂಬಾಗಿಲ್ಲ, ಕೆಲಸ ಬೇಕಷ್ಟಿದೆ
ಮತ್ತೆ ಸಿಗೋಣ ಇನ್ನೊಂದು ವಿಷಯ ನಮ್ಮೂರಲ್ಲಿ ಮೊಬೈಲ್ ರೇಂಜ್ ಇಲ್ಲ ಹಾಗಾಗಿ ನೋ ಕಾಲ್,
ನೋ ಮೆಸೇಜ್ ಅಂತ ಬೇಸರದಿಂದ ನುಡಿದು ಬೈ ಅಂದು ಹೊರಟ. ಮೇಘನ ತುಸು ನಗುತ್ತ ಬೈ
ಅಂದಿದ್ದಳು, ಅವಳ ಮುಖದ ನಗು ಕೇವಲ ಕಾಲ್ಪನಿಕವಾಗಿತ್ತು.<br />
<hr />
ಒಂದು ವರ್ಷದ ನಂತರ ಮಗ ಊರಿಗೆ ಬಂದಿದ್ದ, ಅಮ್ಮನಿಗೋ ಎಲ್ಲಿಲ್ಲದ ಖುಷಿ. ಮೈ ಸರಿಯಾಗಿ
ಹುಷಾರಿಲ್ಲದಿದ್ದರೂ ದಿನಕ್ಕೊಂದು ಅವನಿಗಿಷ್ಟವಾದ ತಿಂಡಿ ತಿನಿಸುಗಳನ್ನ
ಮಾಡುತ್ತಿದ್ದರು. ಅಪ್ಪ ಮಗನ ಕೆಲಸದ ಬಗ್ಗೆ ಆರೋಗ್ಯದ ಬಗ್ಗೆ ಕೂಲಂಕುಶವಾಗಿ
ವಿಚಾರಿಸಿದರು. ಹೀಗೆ ಅಪ್ಪ ಅಮ್ಮನ ಪ್ರೀತಿ, ಊರಿನ ಗೆಳೆಯರ ಜೊತೆ ನಲಿದಾಟ, ಬೆಟ್ಟ
ಗುಡ್ಡ ಸುತ್ತಾಟ ಅನ್ನುತ್ತ ಏಳೆಂಟು ದಿನ ಕಳೆಯಿತು. ಈ ನಡುವೆ ಮೆಘನಳ ಜೊತೆ ಮಾತಿಲ್ಲದೆ,
ಮೆಸೇಜ್ ಇಲ್ಲದೆ ಏನೋ ಕಳೆದುಕೊಂಡಂತಾಗಿತ್ತು ನವೀನನಿಗೆ. ಒಂದು ದಿನ ಹೀಗೆ ರಾತ್ರಿ
ಎಲ್ಲರೂ ಒಟ್ಟಿಗೆ ಊಟ ಮಾಡುತ್ತಿದ್ದಾಗ ಅಮ್ಮ ಮದುವೆ ವಿಷಯ ತೆಗೆದರು. ಅಪ್ಪ ತಕ್ಷಣ
ಅಲ್ಲಿ ಯಾರನ್ನಾದರೂ ಪ್ರೀತಿ ಗೀತಿ ಅಂತ ಏನಾದ್ರೂ ಇದ್ರೆ ಹೇಳು, ನೀವೆಲ್ಲ ಈಗಿನ ಕಾಲದ
ಹುಡುಗರು ಪ್ರೀತಿ ಮಾಡ್ತೀರ ನಾವು ಒಪ್ಪಿಲ್ಲ ಅಂದ್ರೆ ಓಡಿ ಹೋಗೋದೋ ಅಥವಾ ಆತ್ಮಹತ್ಯೆ
ಅಂತೆಲ್ಲ ಯೋಚಿಸ್ತೀರ ಅದೆಲ್ಲ ಬೇಡ, ಹಾಗೇನಾದರೂ ಇದ್ರೆ ನಿಸ್ಸಂಕೋಚವಾಗಿ ಹೇಳು ಅಂದರು.
ನವೀನ ಹಾಗೇನಿಲ್ಲ ಅಪ್ಪ ಆದರೆ.. ಅನ್ನುತ್ತ ತನ್ನ ಮತ್ತು ಮೆಘನಳ ಬಗ್ಗೆ ಎಲ್ಲ ವಿಷಯವನ್ನ
ಹೇಳಿದ. ನಮಗೆ ಯಾವತ್ತೂ ನಾವು ಪ್ರೇಮಿಗಳು ಅಂತ ಅನಿಸಲಿಲ್ಲ ಆದರೆ ನಮಗ್ಯಾಕೋ
ಒಬ್ಬರಿಗೊಬ್ಬರನ್ನ ಬಿಟ್ಟು ಇರೋಕೆ ಆಗ್ತಾ ಇಲ್ಲಾ. ಇದು ಸ್ನೇಹಾನ ಪ್ರಿತೀನ ಅಂತ
ಗೊತ್ತಾಗ್ತಾ ಇಲ್ಲ ಅಂತ ಎಲ್ಲವನ್ನೂ ಬಿಡಿಸಿ ಹೇಳಿದ. ಎಲ್ಲ ಮಾತನ್ನ ಕೇಳಿದ ಅಮ್ಮ ಇದು
ನಿಜಕ್ಕೂ ಪ್ರಿತಿನೇ ನೀನು ಅವಳನ್ನ ಪ್ರೀತಿಸ್ತಾ ಇದೀಯ ಅವಳಿಗೆ ಈ ವಿಷಯ ಹೇಳು, ಅವಳೂ
ನಿನ್ನ ಪ್ರೀತಿಸ್ತ ಇದಾಳೆ. ಒಳ್ಳೆ ಮನೆತನದವಳು ಅಂತಾ ಇದ್ದೀಯ ನಾವು ಮುಂದೆ ನಿಂತು
ನಿಮ್ಮ ಮದುವೆ ಮಾಡಿಸ್ತೀವಿ. ಆದಷ್ಟು ಬೇಗ ನಿರ್ಧಾರ ಮಾಡಪ್ಪಾ, ನಾನು ಇರೋದ್ರೊಳಗೆ
ನಿನ್ನ ಮದುವೆ ಆಗಬೇಕು ಅನ್ನೋದೇ ನನ್ನ ಆಸೆ ಅಂತ ಅಂದಿದ್ದನ್ನ ಕೇಳಿ ನವೀನ ಯಾಕಮ್ಮ
ಹಾಗೆಲ್ಲ ಮಾತಾಡ್ತೀಯ? ಬೆಂಗಳೂರಿಗೆ ಹೋದ ಕೂಡಲೇ ಅವಳ ಹತ್ರ ಮಾತಾಡ್ತೀನಿ ಅಂತ
ನಾಚುತ್ತಲೇ ನುಡಿದ. ನವೀನನಿಗೂ ಅನಿಸಿತ್ತು ನಾನು ಮೆಘನಳನ್ನ ಪ್ರೀತಿಸ್ತಾ ಇದ್ದೇನೆ,
ಅವಳೂ ನನ್ನ ಪ್ರೀತಿಸ್ತಾ ಇದಾಳೆ. ಅವಳು ಕೆಲವು ಬಾರಿ ತನ್ನ ಪ್ರಿತಿಯನ್ನ ಹೇಳೋ ಪ್ರಯತ್ನ
ಮಾಡಿದಾಳೆ, ಆದರೆ ನಾನೇ ಅದನ್ನ ಅರ್ಥ ಮಾಡಿಕೊಂಡಿಲ್ಲ ಅಷ್ಟೇ. ನಿಜ ನಿಜ.. ಇದೆಲ್ಲ
ಪ್ರಿತಿನೆ. ಇದನ್ನ ಅವಳಿಗೆ ಹೇಳೋದು ಹೇಗೆ? ಫೋನ್ ಮಾಡಲಾ? ಮೆಸೇಜ್ ಮಾಡಲಾ? ಬೇಡ ಬೇಡ
"ಪ್ರೇಮ ಪತ್ರ" ಹಮ್ ಇದೆ ಸರಿ.. ಒಂದು ಲವ್ ಲೆಟರ್ ಬರೆದು ಅವಳ ಕೈಗೆ ಕೊಡ್ತೀನಿ.ಅಂತ
ಯೋಚಿಸಿ. ಒಂದು ಲವ್ ಲೆಟರ್ ಕೂಡ ತಯಾರು ಮಾಡಿಕೊಂಡು ಮತ್ತೆ ಬೆಂಗಳೂರಿನ ಕಡೆ ಹೊರಟಿದ್ದ
ನವೀನ.<br />
<br />
ರಾತ್ರಿ ಊರು ಬಿಟ್ಟಿದ್ದ ನವೀನ ಬೆಂಗಳೂರು ಸೇರಿದ್ದು ಬೆಳಿಗ್ಗೆ ಐದಕ್ಕೆ.
ಮಧ್ಯದಲ್ಲೇ ಮೊಬೈಲ್ ಸಿಗ್ನಲ್ ಬಂದಾಗ ತಾನು ಬರುತ್ತಿರುವ ವಿಷಯವನ್ನ ಮೇಘನಳಿಗೆ ಮೆಸೇಜ್
ಮಾಡಿದ್ದ. ಬೆಂಗಳೂರು ಸೇರಿದವನೇ ರೂಮಿಗೆ ಹೋಗಿ ಫ್ರೆಶ್ ಆಗಿ ತಯಾರಾದ. ನಿನ್ನೆಯಿಂದಲೂ
ನವೀನನ ಮನದಲ್ಲಿ ಏನೋ ಒಂಥರಾ ದುಗುಡ, ಭಯ. ಬೆಳಿಗ್ಗೆಯ ಏಳಾಗಿತ್ತು ಮೆಘನಳಿಂದ
ಉತ್ತರವೇನೂ ಬಂದಿರಲಿಲ್ಲ. ಮೆಘನಳಿಗೆ ಫೋನಾಯಿಸಿದ, ಕೈ ನಡುಗುತ್ತಿತ್ತು. ಫೋನ್ ಸ್ವಿಚ್
ಆಫ್ ಆಗಿತ್ತು. ಸುಮಾರು ಹತ್ತು ಘಂಟೆಯ ವರೆಗೆ ಫೋನ್ ಮಾಡಿ ಸುಸ್ತಾಗಿ ಏನೂ ತಿಳಿಯದಂತಾಗಿ
ಕುಳಿತಿದ್ದ. ಕೆಲವು ಬಾರಿ ನವೀನ ಮೆಘನಳ ಮನೆಗೂ ಹೋಗಿಬಂದಿದ್ದರಿಂದ ಅವರ ಮನೆಯವರ
ಪರಿಚಯವಾಗಿತ್ತು, ಹಾಗಾಗಿ ಸೀದಾ ಅವಳ ಮನೆಗೇ ಹೊರಟ. ಮನೆಯ ಬಾಗಿಲು ಹಾಕಿತ್ತು ಕಾಲಿಂಗ್
ಬೆಲ್ ಬಾರಿಸಿದ, ಕೆಲ ಕ್ಷಣದಲ್ಲಿ ಬಾಗಿಲು ತೆರೆಯಿತು. ಎದುರಿಗಿದ್ದದ್ದು ಮೆಘನಳ ಅಮ್ಮ.
ಬಾ ನವೀನ ಎನ್ನುತ್ತಾ ಒಳಗೆ ಕರೆದರು ಅಮ್ಮ. ಒಳಗೆ ನಡೆಯುತ್ತಲೇ ನಿನ್ನೆಯಿಂದ ಮೆಘನಳ
ಫೋನ್ ಟ್ರೈ ಮಾಡ್ತಾ ಇದ್ದೆ, ಸ್ವಿಚ್ ಆಫ್ ಬರ್ತಾ ಇದೆ ಅಂದ. ಇನ್ನೆಂದೂ ಅವಳ ಫೋನ್ ಆನ್
ಆಗುವುದಿಲ್ಲ ಅನ್ನುವ ಅಮ್ಮನ ಮಾತು ಅರ್ಥವಾಗದೆ, ನೀವೇನು ಹೇಳ್ತಾ ಇದ್ದೀರಾ ಅಂತ ಅರ್ಥ
ಆಗ್ತಾ ಇಲ್ಲ ಅಂದ. ಬಾರಪ್ಪ ಎಲ್ಲ ಹೇಳ್ತೀನಿ ಅಂತ ಅವಳ ರೂಮಿಗೆ ಕರೆದುಕೊಂಡು ಹೋದರು.
ರೂಮಿಗೆ ಕಾಲಿಡುತ್ತಿದ್ದಂತೆ ಎದುರಿಗೆ ಮುಗುಳ್ನಗುತ್ತಿರುವ ಮೇಘನ… ಅವಳ ಫೋಟೊಕ್ಕೊಂದು
ಗಂಧದ ಹಾರ ನೋಡಿ ಒಮ್ಮೆಲೇ ದಂಗು ಬಡಿದಂತವನಾಗಿ ಹಾಗೆಯೇ ನಿಂತ. ಕೆಲ ಕ್ಷಣ ಅವನಿಗೆ ಏನೂ
ತೋಚಲಿಲ್ಲ, ಅರಿವಿಲ್ಲದಂತೆಯೇ ಕಣ್ಣುಗಳು ತುಂಬಿದ್ದವು. ಸ್ವಲ್ಪ ಸಮಯದ ನಂತರ ಅಮ್ಮ
ಬಾರಪ್ಪ ಕೂತ್ಕೋ ಅಂತ ಅಲುಗಾಡಿಸಿದಾಗ ವಾಸ್ತವಕ್ಕೆ ಬಂದಿದ್ದ. ಇದೆಲ್ಲ ಏನು ಅಂದಾಗ ಅಮ್ಮ
ಮೇಘನಳ ಲೆಟರ್ ಒಂದನ್ನ ಅವನ ಕೈಗಿತ್ತು ಇದರಲ್ಲಿ ಎಲ್ಲ ಇದೆ ಓದಪ್ಪ ಎಂದರು.<br />
<hr />
"ಹಾಯ್ ನವೀನ, ನೀನು ಈ ಪತ್ರ ಓದುವಾಗ ನಾನು ನಿನ್ನ ಬಿಟ್ಟು ತುಂಬಾ ದೂರ
ಹೋಗಿರುತ್ತೇನೆ. ನಿನ್ನ ಕೈಗೆ ಸಿಗದಷ್ಟು ದೂರ. ನಿನ್ನ ಬಿಟ್ಟು ಹೋಗೋ ಮನಸ್ಸಿಲ್ಲ ನನಗೆ
ಆದರೆ ಈ ಹಾಳು ರೋಗ ನಿನ್ನಿಂದ ನನ್ನನ್ನ ದೂರ ಮಾಡ್ತಾ ಇದೆ. ಹೋದು ಕಣೋ ನಾನು ಕಳೆದ ಐದು
ವರ್ಷದಿಂದ ಕ್ಯಾನ್ಸರ್ ನಿಂದ ಬಳಲುತ್ತಾ ಇದ್ದೆ. ಈ ವಿಷಯ ನಿನ್ನ ಹತ್ರ ಹೇಳಬೇಕು ಅಂತ
ತುಂಬಾ ಪ್ರಯತ್ನ ಪಟ್ಟೆ ಆದರೆ ನಿನ್ನ ಸ್ನೇಹ, ಪ್ರೀತಿ ಅದಕ್ಕೆ ಅವಕಾಶಾನೇ ನೀಡಿಲ್ಲ.
ನಿಜ ತಾನೇ?? ನಿನ್ನ ಸಲುಗೆ ಬರೀ ಸ್ನೇಹವಲ್ಲ ಅದು ಪ್ರಿತಿಯಾಗಿತ್ತು. ಹೌದು ಕಣೋ ನಾನು
ನಿನ್ನ ತುಂಬಾ ಪ್ರೀತಿಸ್ತಾ ಇದೀನಿ. ಆದರೆ ನಿನ್ನ ಹತ್ರ ಹೇಳಿಕೊಳ್ಳೋ ಹಾಗೆ ಇರಲಿಲ್ಲ
ನನ್ನ ಪರಿಸ್ಥಿತಿ. ಏನು ಮಾಡೋದು ನಿನ್ನನ್ನ ಪ್ರೀತಿಸಿ ಅರ್ಧಕ್ಕೆ ಬಿಟ್ಟು ಹೋಗೋ ಮನಸ್ಸು
ಇರಲಿಲ್ಲ ನಂಗೆ. ನಿನ್ನ ಜೊತೆ ಹಾಯಾಗಿ ಬಾಳಬೇಕು, ನನ್ನ ಪ್ರಿತಿಯನ್ನೆಲ್ಲ
ಧಾರೆಯೆರೆಯಬೇಕು ಅಂತೆಲ್ಲ ಕನಸು ಕಾಣುವಾಗ ಕೂಡ ಹೆದರಿದ್ದೆ. ಸುಮಾರು ಏಳು ವರ್ಷಗಳ
ಸ್ನೇಹ ಇಂದಿಗೆ ಮುಗಿತಾ ಇದೆ. ನನ್ನ ಬಾಳಿನಲ್ಲಿ ನನಗೆ ಸಿಕ್ಕ ಅತ್ಯಮೂಲ್ಯ ಕಾಣಿಕೆ
ನೀನು. ನಿನ್ನ ಸ್ನೇಹ, ಪ್ರೀತಿಯ ನೆನಪುಗಳನ್ನ ಹೊತ್ತು ನಿನ್ನಿಂದ ದೂರ
ಸಾಗುತ್ತಿದ್ದೇನೆ. ನನಗಿದ್ದ ಈ ರೋಗವನ್ನ ಮರೆಸಿ ನಗುನಗುತ್ತ ಬಾಳಲು ತೋರಿದ ನಿನ್ನ
ಸ್ನೇಹಕ್ಕೆ ನಾನು ಚಿರಋಣಿ. ಮುಂದಿನ ಜನ್ಮದಲ್ಲಾದರೂ ನಿನ್ನನ್ನ ಸೇರುವ ಅವಕಾಶ ಸಿಗಲಿ
ಅನ್ನುವುದಷ್ಟೇ ಆ ದೇವರಲ್ಲಿ ನನ್ನ ಕೋರಿಕೆ.. ಇದಕ್ಕಿಂತ ಹೆಚ್ಚು ಬರೆಯಲು ನನ್ನಿಂದ
ಆಗುತ್ತಿಲ್ಲ ನವೀನ್. ನಿನ್ನಿಂದ ತುಂಬಾ ದೂರ ಹೋಗ್ತಾ ಇದ್ದೇನೆ, ಬೇಸರಿಸಬೇಡ ಗೆಳೆಯ.<br />
ದುಃಖಭರಿತ ಕಣ್ಣೀರಿನೊಂದಿಗೆ ನಿನ್ನ ಗೆಳತಿ ಮೇಘನ."<br />
ಇದನ್ನೆಲ್ಲಾ ಓದಿದ ನವೀನನಿಗೆ ಏನು ಹೇಳಬೇಕೆಂದು ತೋಚದೆ ಕಣ್ಣೀರಿಡುತ್ತಾ
ತದೇಕಚಿತ್ತದಿಂದ ಮೇಘನಳ ಫೋಟೋ ಕಡೆ ನೋಡುತ್ತಿದ್ದ.. ಅವಳ ಮುಗುಳ್ನಗು ಎದೆಯಲ್ಲಿ
ಚುಚ್ಚುತ್ತಿತ್ತು. ಮೆಘನಳ ಅಮ್ಮ ಬಂದು ಸಮಾಧಾನಿಸುತ್ತ ಆದದ್ದೆಲ್ಲಾ ಆಗಿಹೋಯಿತು, ಏನು
ಮಾಡೋದು ಎಲ್ಲ ದೇವರ ಲೀಲೆ. ಕ್ಯಾನ್ಸರ್ ಪತ್ತೆಯಾದಾಗ ಅವಳು ಬದುಕುವುದು ಕೇವಲ
ಎರಡು-ಮೂರು ವರ್ಷ ಮಾತ್ರ, ನಗುತ್ತ ಅವಳ ಇಚ್ಚೆಯಂತೆ ಹಾಯಾಗಿ ಇರಲು ಬಿಡಿ ಸ್ವಲ್ಪ ಕಾಲ
ಜಾಸ್ತಿ ಬದುಕಿದರೂ ಬದುಕಬಹುದು ಅಂದಿದ್ದರು ಡಾಕ್ಟರ್. ಇನ್ನೆರಡು ವರ್ಷ ಅವಳು ನಮ್ಮ
ಜೊತೆ ಇರಲು ಅವಕಾಶ ಮಾಡಿಕೊಟ್ಟ ನಿನ್ನ ಋಣವನ್ನ ನಾವು ಈ ಜನ್ಮದಲ್ಲಿ ಮರೆಯುವದಿಲ್ಲಪ್ಪ
ಅಂದು ಕೈ ಮುಗಿದಾಗ ತಲೆಯಲ್ಲೆಲ್ಲ ಮಿಂಚಿನ ಸುಳಿಗಳು ಸುಳಿದಂತಾಗಿ ಒಮ್ಮೆಲೇ ಅಲ್ಲಿಂದ
ಹೊರಟು ಸುತ್ತಲಿನ ಜಗತ್ತಿನ ಪರಿವೆ ಇಲ್ಲದಂತೆ ಒಂಟಿಯಾಗಿ ನಡೆಯತೊಡಗಿದ್ದ. ತಲೆಯಲ್ಲೆಲ್ಲ
ಅವಳದ್ದೇ ಚಿಂತೆ. ಅವಳ ಎಲ್ಲ ತುಂಟಾಟಗಳು ಹೃದಯದ ಗೋಡೆಗೆ ಬಂದು ಅಪ್ಪಳಿಸುತ್ತಿದ್ದವು.<br />
<br />
ಎಲ್ಲದರ ನಡುವೆ ನವೀನ ಮೇಘನಳಿಗಾಗಿ ಬರೆದಿದ್ದ ಪ್ರೇಮ ಪತ್ರ ಅವನ ಕಿಸೆಯಲ್ಲಿಯೇ ಉಳಿದಿತ್ತು..<br />
"ಪ್ರೀತಿಯ ಗೆಳತಿ ಮೇಘನಾ<br />
ಒಂದು ವಿಷಯ ನಿನಗೆ ಹೇಳ್ಬೇಕು ಕೆಲ ದಿನದಿಂದ ಅನ್ಕೊಂಡಿದ್ದೆ ಆದರೆ ಹೇಗೆ ಹೇಳಬೇಕು
ಅನ್ನೋದೇ ಗೊತ್ತಾಗ್ತಾ ಇರ್ಲಿಲ್ಲ . ಆದರೆ ಇವತ್ತು ಯಾಕೋ ಗೊತ್ತಿಲ್ಲ ಹೃದಯ ಹೇಳ್ತಾ ಇದೆ
ಹೇಳಿಬಿಡು ಅಂತ, ಯಾಕೋ ಧೈರ್ಯ ಸಾಲ್ತಾ ಇಲ್ಲ, ಆದರೆ ಎಷ್ಟು ದಿನ ಅಂತ ಹೇಳ್ದೆ ಇರೋಕೆ
ಆಗುತ್ತೆ ಹೇಳು. ಬಹಳ ದಿನದಿಂದ ಮನದಲ್ಲಿ ಬಚ್ಚಿಟ್ಟ ಪ್ರೀತಿನ ಇವತ್ತು ನಿನ್ನ ಎದುರಿಗೆ
ಇಡ್ತಾ ಇದ್ದೇನೆ. ಹಂ ಹೌದು ಕಣೆ ನಾನಿನ್ನ ಮನಸಾರೆ ಪ್ರೀತಿಸ್ತಾ ಇದೀನಿ. ಇಷ್ಟು ದಿನ
ನಿನ್ನ ಜೊತೆಗಿನ ಸಲುಗೆ ಹೇಗೆ ಪ್ರೀತಿಯಾಗಿ ಬದಲಾಯ್ತೋ ಗೊತ್ತಿಲ್ಲ, ಆದರೆ ಪ್ರೀತಿ
ಹುಟ್ಟಿದ್ದಂತೂ ನಿಜ. ಆದರೆ ಇದೆಲ್ಲ ಪ್ರೀತಿ ಅಂತ ನನಗೆ ತಿಳಿದೇ ಇರಲಿಲ್ಲ. ಇತ್ತೀಚಿಗೆ
ದಿನವೂ ನಿನ್ನ ಜೊತೆ ಮಾತಾಡ್ತಾ ಇರಬೇಕು ಅನಿಸುತ್ತೆ ಕಣೆ. ನಿನ್ನ ಮೆಸೇಜ್ ಬರಲಿಲ್ಲ
ಅಂದ್ರೆ ಏನೋ ಒಂಥರಾ ಚಡಪಡಿಕೆ, ದಿನವಿಡೀ ನಿನ್ನದೇ ಗುಂಗಲ್ಲಿ ಇರ್ತೀನಿ, ಸದಾ ನಿನ್ನದೇ
ಯೋಚನೆ.. ಇದೆಲ್ಲ ಪ್ರೀತಿ ತಾನೇ? ನಿನಗೂ ನನ್ನ ಬಗ್ಗೆ ಈ ರೀತಿ ಭಾವನೆಗಳು ಇದ್ಯಾ ??
ನೀನು ನನ್ನ ಜೊತೆ ಮಾತಾಡುವಾಗ ಒಂದೊಂದು ಸಲ ನನಗೂ ಅನಿಸಿದೆ ನಿಂಗೂ ನನ್ನ ಮೇಲೆ
ಸ್ವಲ್ಪನಾದ್ರೂ ಪ್ರೀತಿ ಇದೆ ಅಂತ … ನಿಜಾನ ಗೆಳತಿ? ಬಹಳ ದಿನ ಈ ವಿಷಯ ಬಚ್ಚಿಟ್ಟು ನನ್ನ
ಹೃದಯ ಭಾರವಾಗಿತ್ತು, ಈಗ ಸ್ವಲ್ಪ ಹಗುರಾಗಿದೆ. ನೀನಿಲ್ಲದೆ ನನ್ನ ಬಾಳು ಶೂನ್ಯ ಕಣೆ,
ಇಷ್ಟು ದಿನದಲ್ಲಿ ನನ್ನನ್ನ ಅರ್ಥಮಾಡಿಕೊಂಡ ಹುಡುಗಿ ಅಂದ್ರೆ ನೀನೊಬ್ಬಳೆ ಕಣೆ. ನನ್ನ ಕೈ
ಹಿಡಿದು ನನ್ನ ಬಾಳ ಸಂಗಾತಿ ಆಗ್ತೀಯ?? ಎಂದೂ ನಿನ್ನ ಕಣ್ಣು ಒದ್ದೆಯಾಗದಂತೆ
ನೋಡಿಕೊಳ್ಳುವ ಶತ ಪ್ರಯತ್ನ ಮಾಡ್ತೀನಿ. ಅಡುಗೆ ಮನೆಯಲ್ಲಿ ಈರುಳ್ಳಿ ಹೆಚ್ಚೋ ಕೆಲಸಾ
ನಾನೇ ಮಾಡ್ತೀನಿ, ಬೆಂಜ್ ಕಾರಲ್ಲಿ ತಿರುಗಾಡಿಸದಿದ್ರೂ ನನ್ನ ಹೀರೋ ಹೊಂಡಾ ಬೈಕಲ್ಲಿ
ಸುತ್ತಾಡಿಸ್ತೀನಿ ಕಣೆ, ಪಿಜ್ಜಾ ಹಟ್ ಗೆ ಕರ್ಕೊಂಡು ಹೋಗಿ ಪಿಜ್ಜಾ ತಿನಿಸದಿದ್ರೂ
ಕಾರ್ನರ್ ಅಂಗಡಿಲಿ ಸಿಗೋ ಪಾನಿಪುರಿ, ಗೋಬಿ ಖಂಡಿತ ತಿನಿಸ್ತೀನಿ. ಮನೇಲಿ ನಾನೇ
ಖುದ್ದಾಗಿ ಮಾತಾಡ್ತೀನಿ ಬೇಕಾದ್ರೆ, ಎಲ್ಲರ ಆಶೀರ್ವಾದ ತಂಗೊಂಡೆ ಒಂದಾಗೋಣ. ನಮ್ಮನ್ನ
ಸಾಕಿ ಸಲಹಿದವರ ಆಶೀರ್ವಾದ ಇಲ್ಲದೆ ಇದ್ರೆ ಹೇಗೆ ಆಲ್ವಾ? ಎಲ್ಲರನ್ನ ಒಪ್ಪಿಸೋ
ಜವಾಬ್ದಾರಿ ನಂದು ಕಣೆ ಸರಿನಾ? ನಿಂಗೆ ನನ್ನ ಭಾವನೆಗಳು ಅರ್ಥ ಆಗ್ತಾ ಇದೆ ಆಲ್ವಾ? ನೀನು
ನನ್ನವಳಾಗ್ತೀಯ ಅಲ್ವಾ?<br />
ನಿನ್ನ ಹುಚ್ಚು ಪ್ರೀತಿಗಾರ ನವೀನ "<br />
<br />
ಈ ಒಂಟಿ ಪಯಣಕ್ಕೆ ಕೊನೆಯೇಲ್ಲಿದೆ ಏನೊಂದೂ ಅರಿಯದೆ ಆತ ಇಂದಿಗೂ ಅವಳದೇ ನೆನಪ ದಾರಿಯಲ್ಲಿ ನಡೆಯುತ್ತಲೇ ಇದ್ದಾನೆ.<br />
<br />
<br />
*ಎಪ್ರೀಲ್ ಮೂರನೇ ವಾರದ "ಪಂಜು" ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾದ ಬರಹ. <br /><br />ಲಿಂಕ್: http://www.panjumagazine.com/?p=1834 </div>
Motivation http://www.blogger.com/profile/08140925864934705325noreply@blogger.com0tag:blogger.com,1999:blog-5247965971580923628.post-76569722159537713982013-04-14T02:12:00.000-07:002013-04-14T02:12:18.982-07:00ಯಾಂತ್ರಿಕ ಜಗತ್ತು :<div dir="ltr" style="text-align: left;" trbidi="on">
ಗೆಳತಿಯೊಬ್ಬಳ ಬಾಲ್ಯದ ನೆನಪುಗಳ ಸರಮಾಲೆಯ ಬುತ್ತಿ ಬಿಚ್ಚಿಟ್ಟ ಬರಹಗಳನ್ನ ಓದಿದಾಗ
ಮತ್ತೆ ಮನ ಬಾಲ್ಯದ ದಿನದತ್ತ ಸಾಗಿತ್ತು. ಆದರೆ ಕೆಲವೇ ಕ್ಷಣ ಮಾತ್ರ ಈ ಆನಂದ, ಮತ್ತೆ
ವಾಸ್ತವಕ್ಕೆ ಬಂದಾಗ ಅದೇ ದಿನದ ಗೋಳು. ಬ್ಯುಸಿ ಶೆಡ್ಯೂಲಿನ ರೇಸಿಂಗ್ ಜಗತ್ತಿನಲ್ಲಿ
ಬಾಳುತ್ತ ಇತ್ತೀಚಿಗೆ ಯಾಕೋ ಬಾಲ್ಯದ ನೆನಪುಗಳು ಕೂಡ ನನ್ನಿಂದ ದೂರವಾಗುತ್ತಿದೆ
ಅನಿಸತೊಡಗಿದೆ. ಅಷ್ಟೇ ಅಲ್ಲ ಜೊತೆಗೆ ಸಂಬಂಧಗಳು ಕೂಡ ನಮ್ಮಿಂದ ದೂರವಾಗುತ್ತಿದೆ. ಯಾಕೆ
ಹೀಗೆ ಅಂತ ಹುಡುಕ ಹೋದರೆ ಎಲ್ಲವೂ ಶೂನ್ಯ. ಸಮಾಜದಲ್ಲಿ ನನ್ನತನವನ್ನ ಸ್ಥಾಪಿಸುವ
ಭರದಲ್ಲಿ ನನ್ನವರನ್ನ ಕಳೆದುಕೊಳ್ಳುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಇವೆಲ್ಲವೂ
ನಮಗರಿವಿಲ್ಲದಂತೆಯೇ ಘಟಿಸುವಂತಹದ್ದು. ಜೀವನದ ಕೊನೆಗೆ ಎಲ್ಲವನ್ನೂ ಸಾಧಿಸಿ
ಶಿಖರವೆರಿದಾಗ ಸಂಬಂಧಗಳು ದೂರವಾಗಿರುದು ಅರಿವಿಗೂ ಬರುವುದಿಲ್ಲ ನಮಗೆ, ಅಕಸ್ಮಾತ್ ಬಂದರೂ
ನಮಗೆ ಅವರ ಅವಶ್ಯಕತೆಯೇ ಬೇಡದಂತಾಗಿರುತ್ತೆ.<br /><br />ಸದ್ಯದ ಟೆನ್ಶನ್
ಬದಿಗಿಟ್ಟು ಸ್ವಲ್ಪ ನಮ್ಮ ಬಾಲ್ಯದ ಜೀವನವನ್ನ ನೆನೆಸಿಕೊಂಡಾಗ ಏನೋ ಒಂಥರಾ ಖುಷಿ
ಸಿಗುವುದಂತೂ ಖಂಡಿತ. ಆ ಮೋಜು- ಮಸ್ತಿ, ಆಟ-ಪಾಠ, ಜಗಳ, ಮುನಿಸು, ಕೋಪ ಇವೆಲ್ಲವನ್ನ
ನಾವು ಕಳೆದುಕೊಂಡಿದ್ದೇವೆ ಜೊತೆಗೆ ನಮ್ಮನ್ನ ಸಲಹಿದವರೂ ಕೂಡ. ಹಳ್ಳಿಯ ಆ ಬಾಲ್ಯದ
ದಿನಗಳು ಇತ್ತೇಚೆಗೆ ಉರಿಸುವಂತಾಗಿದೆ ಯಾಕೋ. ನಾವು ಕಂಡ ಈ ಬಾಳು ನಮ್ಮ ಮುಂದಿನ
ಪೀಳಿಗೆಯವರಂತೂ ಕಾಣುವುದು ಅಸಾಧ್ಯವೇ. ಇತ್ತೀಚೆಗೆ ಹಳ್ಳಿಗಳೂ ಸುಧಾರಿಸಿವೆ. ಚಿನ್ನಿ
ದಾಂಡು, ಬುಗುರಿ, ಗೋಲಿ,ಚನ್ನೆಮಣೆ ಹೀಗೆ ಎಲ್ಲ ಆಟಗಳು ಮರೆಯಾಗಿ ಎಲ್ಲೆಡೆ ಕ್ರಿಕೆಟ್
ಒಂದೇ ಆಟವಾಗಿದೆ. ನಾವು ಕೂಡ ಹಳ್ಳಿಯಿಂದಲೇ ಬೆಳೆದು ಬಂದರೂ,ಒಮ್ಮೆ ಶಹರದ ನೀರು ಕುಡಿದ
ಮೇಲೆ ಮತ್ತೆ ಹಳ್ಳಿಗೆ ಹೋದರೆ ಅಲ್ಲಿ ಹೊಂದಿಕೊಳ್ಳಲು ಆಗದಂತಿದೆ ನಮ್ಮ ಜೀವನ ವ್ಯವಸ್ಥೆ.
ನಾವೆಲ್ಲಾ ಒಂದೂರು ಬಿಟ್ಟು ಮತ್ತೊಂದೂರಿಗೆ ಬಂದಾಗ ಹಳೆಯ ನೆನಪುಗಳ ಜೊತೆಜೊತೆಗೆ
ಮನುಷ್ಯರನ್ನೂ ಮರೆಯುತ್ತಿದ್ದೇವೆ. ಮರೆಯುತ್ತಿದ್ದೇವೆ ಅನ್ನುವುದಕ್ಕಿಂತ ಮರೆಸುತ್ತಿದೆ ಈ
ಯಾಂತ್ರಿಕ ಜೀವನ ಅಂದರೆ ತಪ್ಪಾಗಲಾರದು ಬಹುಶಃ. ನಾನಾಯಿತು ನನ್ನ ಸಂಸಾರವಾಯಿತು ಅನ್ನುವ
ಮೆಂಟಾಲಿಟಿ ಈಗ ಎಲ್ಲರಲ್ಲೂ ಬಂದಿದೆ. ಈಡಿ ಊರನ್ನೇ ಹಚ್ಚಿಕೊಂಡಿದ್ದ ನಮಗೆ ಸಿಟಿಯಲ್ಲಿ
ಪಕ್ಕದ ಮನೆಯವರ ಗುರುತೇ ಇರುವುದಿಲ್ಲ. ಪರಿಸರದಿಂದ ದೊರಾಗುವುದರ ಜೊತೆಜೊತೆಗೆ ನಾವು
ನಮ್ಮವರಿಂದಲೂ ದೂರಾಗುತ್ತಿದ್ದೇವೆ. ನಮ್ಮವರಿಗಾಗಿ ನಾವು ದಿನದಲ್ಲಿ ಒಂದೈದು ನಿಮಿಷ ಕೂಡ
ಬದಿಗಿಡದಷ್ಟು ಬ್ಯುಸಿ ಆಗಿದ್ದೇವೆ. ನಮ್ಮ ಕೆಲಸ ನಾವು ಮಾಡಿಕೊಳ್ಳಲಾಗದಷ್ಟು ಬ್ಯುಸಿ. ಈ
ಯಾಂತ್ರಿಕ ಬದುಕಿನಲ್ಲಿ ಹತ್ತಿರದವರು ದೂರಾದವರೆಷ್ಟೋ, ದೂರದವರು ಹತ್ತಿರ ಆದವರೆಷ್ಟೋ
ಏನೊಂದೂ ತಿಳಿಯದಂತಾಗಿದೆ. ನಮ್ಮತನವನ್ನ ಬಿಟ್ಟು ಏನನ್ನ ಸಾಧಿಸಲು ಹೊರಟಿದ್ದೇವೆ ನಾವು?
ಯಾಕೆ ಹೀಗೆ?? ಎಲ್ಲವೂ ಉತ್ತರವಿಲ್ಲದ ಪ್ರಶ್ನೆಗಳಾ? ಅಥವಾ ಉತ್ತರ ಬಯಸದ ಪ್ರಶ್ನೆಗಳಾ??<br /><br />ನಮ್ಮ
ಮನಸ್ಸು ಕೂಡ ಯಾವುದಕ್ಕೂ ಸ್ಪಂದಿಸದೇ ಕಲ್ಲಾಗಿದೆ, ಬುದ್ಧಿ ಸೀಮಿತದಲ್ಲಿಲ್ಲ, ಸಂಬಂಧಗಳ
ಪರಿವೆಯೇ ಇಲ್ಲ. ನಮ್ಮತನವನ್ನ ಬಿಟ್ಟು ಯಾಂತ್ರಿಕ ಜಗತ್ತಿನೊಡನೆ ನಾವೂ ಕೂಡ
ಯಂತ್ರಗಳಂತೆ ಬದುಕುತ್ತಿದ್ದೇವೆ ಅಲ್ಲವೇ? ಈ ಯಾಂತ್ರಿಕ ಬದುಕಿನ ರೇಸಿಗೆ ಬ್ರೇಕ್
ಹಾಕುವದಾದರೂ ಹೇಗೆ? ಒಟ್ಟಿನಲ್ಲಿ ಹೇಳುವುದಾದರೆ ಮೊಟ್ಟೆಗಾಗಿ ಕೋಳಿಯನ್ನು
ಕಳೆದುಕೊಂಡಂತಾಗಿದೆ ನಮ್ಮ ಜೀವನ ಅಲ್ಲವೇ??</div>
Motivation http://www.blogger.com/profile/08140925864934705325noreply@blogger.com3tag:blogger.com,1999:blog-5247965971580923628.post-50933193638599198202013-04-10T02:26:00.000-07:002013-04-10T02:26:21.604-07:00ಯುಗಾದಿ:<div dir="ltr" style="text-align: left;" trbidi="on">
<span class="userContent">ಬಂದಿದೆ ಮತ್ತೊಂದು ಹೊಸ ವರುಷ<br /> ಈ ಸಂವತ್ಸರದಲ್ಲಾದರೂ,<br /> ಸಿಗಬಹುದೇ ಹೊಸ ಹರುಷ?<br /> <br /> ಪ್ರತಿ ವರುಷದಲ್ಲಿಯೂ ಇದೇ ಆಶಯ<br /> ದೊರಕಲಿ ಎಲ್ಲರಿಗೂ,<br /> ಸುಖ ಶಾಂತಿಯ ಶುಭಾಶಯ.<br /> <br /><span class="text_exposed_show"> ನವ ವರ್ಷಕ್ಕೆ ಮತ್ತೆ ಹೊಸ ಸಂಕಲ್ಪ<br /> ಎರಡೇ ದಿನಕ್ಕೆ,<br /> ಮುಗಿಯುವುದಿರಲಿ ಕಾರ್ಯಕಲ್ಪ.<br /> <br /> ಪಾಪಿ ಜಗದಲಿ ನಾವು<br /> ಆದರೂ ಬಾಳುತ್ತಿದೇವೆ,<br /> ನಿರೀಕ್ಷೆಯ ಭ್ರಮೆಯಲಿ.<br /> <br /> ಅನೀತಿ ಅಕ್ರಮಗಳ<br /> ಸಂಕ್ರಮಣ ಕಾಲವಿದು,<br /> ಕಾದಿದ್ದೇವೆ ಸುಧಾರಿಸುವ ಆಶಯಹೊತ್ತು.<br /> <br /> ವರುಷವೆಲ್ಲ ಹರಿಯುತ್ತಿರಲಿ ಹರುಷ<br /> ಪ್ರತಿಯೊಬ್ಬರಿಗೂ ಸಿಗಲೆಂಬ ಪ್ರಾರ್ಥನೆ,<br /> ಸ್ವಾರ್ಥಕ್ಕೆ ನಾವು ಆಗದಿರಲಿ ಉದಾಹರಣೆ.<br /> <br /> ಬೇವು-ಬೆಲ್ಲದ ಹಬ್ಬದಲಿ<br /> ಕಹಿಪಾಲು ಗೌಣವಾಗಿ,<br /> ಸಿಹಿಪಾಲು ಸಮೃದ್ಧವಾಗಿ ಪಸರಿಸಲಿ ಎಲ್ಲರಲು.</span></span></div>
Motivation http://www.blogger.com/profile/08140925864934705325noreply@blogger.com2