ಹೀಗೆ ಸುಮ್ಮನೆ: ಭಾಗ ೧:

ಹೀಗೆ ಸುಮ್ಮನೆ 1:
ಶಾಮಲಕ್ಕೋ ಸುದ್ದಿ ಗೊತ್ತಾತನೇ....
ಎಂತದೆ ಗಿರಿಜೇ... ಎಂತಾತೆ??

ಶಂಭು ಹೆಗಡ್ರ ಮನೆ ಸೀಮಾ ಒಡೋತಡಲೆ...
ಹೌದನೇ....! ಯಂಗೆ ಮುಂಚೆನೆ ಗೊತ್ತಿತು... ಇದು ಓಡೋಪುದೆ ಹೇಳಿ... ನೋಡಕಾಗಿತ್ತು ಪಾರ್ವತಕ್ಕನ ವಯ್ಯಾರವ, ಯಮ್ಮನೆ ಕೂಸು ಅಂದ್ರೆ ಬಂಗಾರ ಹೇಳಿ ತಲೆ ಮೇಲೆ ಹೊತ್ಕಂಡು ತಿರಗ್ತಿತ್ತು.

ಹುಶಾರೆ ಮಾರಾಯ್ತಿ ನಿಂಗೂ ಮಗಳೆಯಾ...!
ಇಲ್ಯೆ ಗಿರಿಜೆ... ಯಮ್ಮನೆ ಕೂಸು ಹಂಗೆಲ್ಲಾ ಮಾಡ್ತೇ ಇಲ್ಲೆ. ಅದ್ಕೆ ಹುಡುಗ್ರ ಕಂಡ್ರೇ ಆಗ್ತಿಲ್ಲೆ. ತಾನಾತು ತನ್ನ ಓದಾತು. ಅಷ್ಟೆಯಾ....!
.
.
.
.
.
.
.
.

ಓ ಗಿರಿಜಕ್ಕೋ....... ಆಸ್ರಿ ಆತನೇ...??
ಆತೇ.. ನಿಂಗಳದ್ದಾತಾ???

ಹೋ.. ಅವಾಗೇ ಮುಗತ್ತು.. ಇವ್ರಿಗೆ ಬಗೆಲಿ ಕುಮ್ಟೆಗೆ ಹೋಗಕಾಗಿತ್ತು, ಬೇಗ್ನೆ ಮುಗಸ್ಕಂಡು ನಡೆದ್ರು..... ಸುದ್ದಿ ಗೊತ್ತಾತನೇ???
ಎಂತದೇ...!!!
ಶಾಮಲನ ಮಗಳು ಮನೆಗೇ ಬಂದಿಲ್ಯಡ, ಎರಡು ದಿನಾ ಆತಡ.... ಯಾರ್ದೋ ಜೋತೆ ಓಡೋತು ಹೇಳ್ತಾ ಇದ್ವಪ...!!!
*******

ಹೀಗೆ ಸುಮ್ಮನೆ 2:

ಜಪಾನಿ ಮದುಮಕ್ಳ ಫಸ್ಟ್ ನೈಟ್ ನಡೀತಾ ಇತ್ತಡ....!!!

ಗಂಡ: ಸುತಾಆಆಕಿ
ಹೆಂಡ್ತಿ: ಕೊವಾನಿನಿ
ಗಂಡ: ತೊಕಾ ಅಂಜಿ ರೊಡಿ ರೋಮೊ ಹೊಯಾ ಯಾಕೊ

ಹೆಂಡ್ತಿ ಕಾಲೂರಿ ಹೇಳ್ತಡಾ
.
.
ಮಿಮಿ ಯಾವೊ ನಾ ಮಿಮಿ ಕಿನ ತಿಮ್ ತಿನುಕೂಜಿ
ಗಂಡ: ನಾ ಮಾಯಿಒ ಕಿನಾ ತಿಮ್
ಹೆಂಡ್ತಿ: ಸು ಕಿ ಕಿನಾ ಮಾತೊ
ಗಂಡ: ಸಾಕೋ ತೀತೀ ಯಾನಿ
.
.
.
.
.
ಹೆಂಡ್ತಿ:
.
.
.
.ಮ್ ಮ್ ಮ್ ಮ್ ಮ್ ಮ್ ಮ್
.
.
.
.
.
ಗಂಡ: ಯೇ ಯೇ ಯೇ...
.
.
.
.
.

ಎಂತದ್ರಾ ಮಾಯಾಯ್ರೇ... ಹುಡುಗ್ರ ಶೋಕಿ ನೋಡ್ರಾ...
ಎಂತಾ ತಿಳಿತಿಲ್ಲೆ ಬಿಡ್ತಿಲ್ಲೇ....
ಬರೀ ಫಸ್ಟ್ ನೈಟ್ ಹೇಳಿದ್ದೇ ತಡಾ
ಪೂರಾ ಮೇಸೆಜ್ ಓದಿ ಮುಗಸಿದ್ದಾ... :) :) :)
******

ಹೀಗೆ ಸುಮ್ಮನೆ 3:
ಯಾರ್ಗಾದ್ರೂ ಬೆಂಗಳೂರು ಪುಣೆ, ಪುಣೆ ಬೆಂಗಳೂರು ಮಲ್ಟಿ ಎಕ್ಸೆಲ್ ಬಸ್ ಅನುಭವಾ ಇದ್ದನ್ರಾ??
.
.
.
ಇಲ್ಯಾ
.
.
.
ಹೇಳ್ತೆ.. ಕೇಳ್ಕಳಿ
.
.
ಬಸ್ ಹೊರಡದು ಸಂಜೆ ಐದಕ್ಕೆ, ಬಂದ್ ಮುಟ್ಟದು ಬೆಳಿಗ್ಗೆ ಹತ್ತಕ್ಕೆ.
ದರಿದ್ರ ಮುಂಡೇವು ರಾತ್ರಿ ಉಂಬುಲೆ ನಿಲ್ಸ್ ದಾಗ ಎಂತೆಂತಾ ತಿಂತ್ವೇನಾ... ಬೆಳಿಗ್ಗೆ ಡ್ರೈವರ್ ಬಡ್ಡೀಮಗಾ  ಬೇಗಾ ಗಾಡಿನೂ ನಿಲ್ಲಸ್ತ್ನಿಲ್ಲೆ. ಏಳ್ ಗಂಟೆ ಆಪುದೇ ತಡಾ.ಆ..ಆ..
.
.
.
ಬಿಸಿ ಬಿಸಿ ಗಾಳಿ ಬಪ್ಪುಲೆ ಸುರು ಆಗ್ತು, ಬಗೆಲಿ ಕಿವಿ ನೆಟ್ಟಗ್ ಮಾಡಿದ್ರೆ ಟುರ್ ಟುರ್ ಶಬ್ಧಾನೂ ಕೇಳಲಕ್ಕು.
ಕಿಟಕಿನೂ ತೆರುಲೆ ಬತ್ತಿಲ್ಲೆ. ತಡಕಂಬುಲೆ ಆಗ್ತಿಲ್ಯೋ ಮಾರಾಯ್ರೇ... ಅನುಭವಿಸ್ದ್ದಕ್ಕೆ ಗೊತ್ತು.
"ಸ್ಲೀಪ್ ಲೈಕ್ ಅ ಬೇಬಿ" ಬೋರ್ಡ್ ಬೇರೆ.
******
ಹೀಗೆ ಸುಮ್ಮನೆ 4:
ಬ್ರೇಕಿಂಗ್ ನ್ಯೂಸ್:
ಮಳೆಗಾಗಿ ಕಪ್ಪೆಗಳ ಮದುವೆ;ಕೋರ್ಟಿಗೆ ಹೋದ ಹೆಣ್ಣು ಕಪ್ಪೆ.
.
.
.
.
ಎಂತಕ್ಕೆ ಕೇಳ್ತ್ರಾ??
.
.
.
"ಯನ್ ಗಂಡಂಗೆ ಮುಂಚೆನೆಯಾ ಮದ್ವೆ ಆಗಿತ್ತು, ಜನಾ ಎಲ್ಲಾ ಹಿಡ್ಕಂಡೋಗಿ ಎರಡನೇ ಮದುವೆ ಮಾಡಿದ್ದ.  ಯಂಗೆ ಡೈವರ್ಸೂ ಕೊಡದೆ ಅದೆಂಗೆ ಎರ್ಡನೇ ಮದುವೆ ಆದ" ಹೇಳಿ ಕೋರ್ಟಿಗೆ ಹೋಯ್ದಡಾ ಹೆಣ್ ಕಪ್ಪೆ.
******

ಹೀಗೆ ಸುಮ್ಮನೆ 5:

ಕೂಸು: ಅವಂಗೆ ಒಳ್ಳೇ ಜಾಬ್ ಇದ್ದು, ಬೈಕ್ ಇದ್ದು, ಮನೆ ಇದ್ದು...
ನಿನ್ನತ್ರ ಎಂತಾ ಇದ್ದಾ...???
ಮಾಣಿ: ನನ್ನತ್ರ...
.
.
.
.
.
.
.
.
ಯಂಗಳದ್ದು ಐದು ಎಕ್ರೇ ಅಡ್ಕೆ ತೋಟಾ ಇದ್ದು...
ಕೂಸು: ನೀ ಹೆಂಗೇ ಇದ್ರೂವಾ ನಾ ನಿನ್ನೇ ಕಟ್ಕತ್ನಾ... ಅಪ್ಪಯ್ಯಂಗೆ ಹೇಳ್ತಿ, ಕಟ್ಕಂಬುದಾದ್ರೆ ಇವನ್ನೆಯಾ ಹೇಳಿ... ಅಕ್ಕಾ.
******

ಹೀಗೆ ಸುಮ್ಮನೆ 6:
ಯಶೋದಕ್ಕೋ... ಎಂತಾ ಮಾಡ್ತಾ ಇದ್ಯೇ.....??
ಈಗಷ್ಟೇ ಆಸ್ರೀ ಮುಗಸ್ಕಂಡು ಮುಸುರೆ ತಿಕ್ಕುಲೆ ಹೊಂಟಿದ್ನೇ..
ಹೌದ..... ಕಡಿಗೆ ಶಾಮಲನ ಮಗಳ್ ಸುದ್ದಿ ಏನಾರು ತಿಳತ್ತನೇ??
.
.
.
.
ಕೊನೆಗೌಡನ ಮಗನ್ನ ಕಟ್ಕಂಡು ಹೋಯ್ದು ಹೇಳ್ತಿದ್ವಪ... ಅವನ ಮನೆಲಿ ೯೦ ಕ್ವಿಂಟಾಲ್ ಅಡ್ಕೆ ಇದ್ದಿತ್ತು ಹೇಳಿ ಸುದ್ದಿಯಾಗಿತ್ತು.
.
.
೯೦ ಕ್ವಿಂಟಲ್ಲಾ....??? ನಿಂಗ್ ಯಾರ್ ಹೇಳಿದ್ವೆ??
.
ಕೆಳಗಿನ ಮನೆ ಮಾಣಿ ಇದ್ನಲೇ ವಿಘ್ನೇಶಾ ಅಂವ ಹೇಳ್ತಾ ಇದ್ನಪ.
ಹಂಗಿದ್ರೆ ಸರಿನೆಯಾ.... ಎಲ್ಲಾರು ಹಾಳಾಗಿ ಹೊಯ್ಕಳ್ಲಿ....ಸರಿ ಯಂಗೂ ಬಗೆಲಿ ಕೆಲ್ಸ ಇದ್ದು. ಸಿಗುವಾ.
******

ಹೀಗೆ ಸುಮ್ಮನೆ 7:
ಹೋಯ್ ಆಸ್ರಿಗೆ ಆತನ್ರಾ...
ಸುಬ್ಬಾ ಭಟ್ರು... ಬನ್ರಾ... ಕಾಣ್ತೇ ಇಲ್ಯಲ್ರೋ.. ಕೂತ್ಕಳಿ ಆಸ್ರಿಗೆ??
ಆಸ್ರಿ ಎಲ್ಲಾ ಬ್ಯಾಡ್ದಾ... ಮುಗಸ್ಕಂಡೇ ಬಂದೀ.. ಬಗೆಲಿ ಕವಳದ್ ಚಂಚಿ ಕೊಡು ನೋಡ್ವಾ..
.
.
.
.
ಅಲ್ಲಾ ಸುಬ್ಬಾ ಭಟ್ರು ಕಾಣುದೆ ಅಪರೂಪ ಆಗೋತು...
ಹೌದ್ರಾ ... ಬಜೆಟ್ ಅದೂ ಇದೂ ಹೇಳಿ ಬಪ್ಪುಲೇ ಆಯ್ದಿಲ್ಲೆ.. ಮತ್ತೆ ರಾತ್ರಿಗೆ ಫೂಟ್ ಬಾಲ್ ಮ್ಯಾಚ್ ಬೇರೆ ಇರ್ತಲಾ... ಯಮ್ಮನೆ ಮಾಣಿ ಹಾಯ್ಕಂಡು ಕುತ್ಕತ್ತಾ.. ಯಾನೂ ನೋಡ್ತಿ.. ಯಂಗಕ್ಕೆ ಎಂತ ತಿಳಿತಿಲ್ಯಾ ಮಾರಯಾ.. ಒಂದ್ ಬಾಲ್ ಇಟ್ಕಂಡು ಬಯಲ್ ತುಂಬಾ ಒಡ್ತ್ವಪಾ.. ಕೆಂಪ್ ಕಾರ್ಡು ಹಳದಿ ಕಾರ್ಡು ಹೇಳಿ ಯಂಗಳ್ ಕಡೆ ರೇಶನ್ ಕಾರ್ಡ ಇದ್ದಂಗೆ ಅದೆಂತೋ ತೋರ್ಸ್ತಾ.... ಯಾ ಎಂತಾ ಹೇಳ್ತಿ ಅಂದ್ರೆ ಹಗಲಿಗೆ ಆಡುದ್ ಬಿಟ್ಕಂಡು ರಾತ್ರಿ ಹನ್ನೆರಡಕ್ಕೆಲ್ಲಾ ಆಡ್ತಾ ಕುತ್ಕತ್ವಪಾ.. ಎಂತಾ ಹೇಳದು ಬಡ್ಡಿಮಕ್ಕಕ್ಕೆ..

ಮತ್ತೆ ಬಜೆಟ್ ಎಂತಾ ಆತಾ?? ನಿಂಗಳದ್ದು ಅಡ್ಕೆ ಕೊಯ್ಲು ಚಲೋ ಆಯ್ದು ಹೇಳ್ತಿದ್ನಪಾ ಮಾಣಿ, ಮೊನ್ನೆ ಮೇಲ್ನ್ ಕೇರಿ ಶಾಂಭಟ್ರ್ ಮಗಳ ಮದ್ವೆಲಿ ಸಿಕ್ಕಿದ್ನಾಗಿತ್ತು...
ಎಂತಾ ಬಜೆಟ್ಟೂ ಇಲ್ಲೆ, ಮಣ್ಣೂ ಇಲ್ಲೆ... ಮೊನ್ನೆನೆಯಾ ಗೌಡಾ ರೈಲ್ ಬಿಟ್ಟಿನಪ್ಪಾ, ಅದು ಹಳಿ ಮೇಲ್ ಓಡ್ತಾ ಇಲ್ಲಾ ಹಳಿ ಇಲ್ದೆಗಿದ್ದೆ ಓಡ್ತಾ ಗೊತ್ತಿಲ್ಲೆ.. ನಿನ್ನೆ ಅವಾ ಜೆಟ್ಲಿ ಒಂದಿಷ್ಟು ಎನೆನೋ ಹೇಳಿನಪಾ ನೋಡ... ಅವಂಗೆ ಒಂದ್ ತಾಸ್ ನಿತ್ಕಂಬಲೂ ಆಗ್ತಿಲ್ಲೆ, ಒದುಲೆ ಶುರು ಮಾಡಿದ್ ಕೂಡ್ಲೆಯಾ ಬೆನ್ನು ನೋಯುಲೆ ಶುರು ಆತಡಾ... ಯಂಗಳ್ ಕಡೆ ಶಾಲೆಗ್ ಹೋಪಾ ಮಕ್ಳಿಗೆ ಓದುಲೆ ಶುರು ಮಾಡ್ದ ಕೂಡ್ಲೆಯಾ ನಿದ್ದ್ ಬಪ್ಪುಲ್ ಶುರು ಆಗ್ತು ಹಂಗೆಯಪಾ... ಅಡ್ಕೆ ರೇಟು ಜಾಸ್ತಿ ಆಯ್ದು ಹೇಳಿ ಅವಾ ತಂಬಾಕು ಪಾನ್ ಮಸಾಲಾ ಹೇಳಿ ಎಲ್ಲದ್ರ ರೇಟೂ ಜಾಸ್ತಿ ಮಾಡಿಗಿದ್ದ... ಯಮ್ಮನೆ ಅಡ್ಕೆಯಾ ಮುಂಚೆನೆ ಕೊಟ್ಟಾಕಿದ್ನ ಮಾಣಿ.. ಯಾ ಎಷ್ಟ್ ಹೇಳಿಗಿದ್ದಿ ಕೊಡಡ್ದಾ ಮಾರಾಯ, ಆಮೇಲೆ ಕೋಟ್ರಾತು, ರೇಟ್ ಬತ್ತು ಹೇಳಿ... ಯಂಗಳ್ ಮಾತು ಯಾರ್ ಕೇಳ್ತಾ ಹೇಳು?? ನಿಂಗ್ ಎಂತಾ ಗೊತ್ತಾಗ್ತು ಸುಮ್ನ್ ಕುತ್ಕಾ ಹೇಳ್ತಾ.. ಯಾ ಹಂಗಾಗಿ ಮಾತಾಡುದೇ ಬಿಟ್ಟಾಕಿದ್ದಿ.

ಮತ್ತೆಂತೋ ಮಧ್ಯಸ್ತಿ ವ್ಯವಹಾರ ಮಾಡ್ತಿ ಹೇಳಿ ಕೇಳ್ದಿ ಹೌದಾ??
ಹೌದಾ.. ಮಕ್ಕ ಅಂತೂ ಯಂಗಳ್ ಮಾತ್ ಕೇಳ್ತ್ವಿಲ್ಲೆ.. ಎಂತಾರೂ ಮಾಡಕಾತಲಾ.. ಅದೇಯಾ ಇಲ್ಲಿಂದ ಅವ್ರ್ ಇವ್ರದ್ದು ಅಡ್ಕೆ ತಗತ್ತಿ, ಅದನ್ನಾ ಅಲ್ಲ್ ಒಯ್ದು ಮಾರ್ತಿ.. ಬಗೆಲಿ ಕಮೀಶನ್ ಸಿಗ್ತಾ..

ಅದ್ರಲ್ಲಿ ಎಷ್ಟ್ ಕಮೀಶನ್ ಸಿಗ್ತಾ??
ಎಲ್ಲೊ ಕ್ವಿಂಟಲ್ ಗೆ ಹತ್ತಿಪ್ಪತ್ತು ಸಾವ್ರಾ ಸಿಗ್ತಾ.. ಹೆಚ್ಚೇನಿಲ್ಯಾ.. ಇಲ್ಲಿವಕ್ಕೆ ರೇಟ್ ಜಾಸ್ತಿ ಆಗದ್ದು ತಿಳಿತಿಲ್ಲೆ ಕೊಟ್ಟಾಕ್ತಾ, ಮತ್ತೆ ಬಗೆಲಿ ಮಾತಾಡಕಾಗ್ತು ಗೊತ್ತಿದ್ದಲಾ ನಿಂಗೆ.. ಹಾಹಾ..

ನಿಂಗ ಬಿಡಿ ಮಾತಾಡುದ್ರಲ್ಲಿ ಕೇಳವಾ...ತಗಳಿ, ಚಾ ತಗಳಿ..
ತಡೆ ಹಂ.. ಕವಳಾ ತುಪ್ಪಾಕಿ ಬತ್ತೆ...
*****

ಹೀಗೆ ಸುಮ್ಮನೆ 8:
"ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ"
ಗುರುಗಳಿಗೆಲ್ಲ ನಮಸ್ಕಾರ...
ಶಿಷ್ಯಂದರಿಗೆಲ್ಲ ಆಶೀರ್ವಾದ...
.
.
.
.
.
.
ಗುರು ದಕ್ಷಿಣೆ ಕೋಡವು ಯಾರ್ಯಾರು ಇದ್ರೋ..??
ಯನ್ ನಂಬರ್ ಕೊಡ್ತಿ, ಒಂದ್ ನೂರು ರಿಚಾರ್ಜ್ ಮಾಡ್ಸಬುಡ್ರಾ..!!!
ಇನ್ನೂರು, ಮುನೂರು ಇದ್ರೂ ನಡೆತು ಹೇಳಿ.
*****

ಹೀಗೆ ಸುಮ್ಮನೆ 9:
ಹಾಯ್ ಎಂತದಾ ಮಾಣಿ... ಮುಖಾ ಸಪ್ಪಗೆ ಮಾಡ್ಕಂಡ್ ಕೂತ್ಕಂಡಿದ್ದೆ??
ಮೊನ್ನೆ ಮೊನ್ನೆ ಇನ್ನೂವಾ ಮದ್ವೆ ಆಯ್ದಪಾ..
.
.
.
.
.
.
.
ಥೋ ಯನ್ ಕಷ್ಟಾ ಯಂಗೆ... ನಿಂಗೆಂತಾಗವಾ??
ಎಂತಾತ ಮಾರಾಯ??
.
.
.
.
ಆಷಾಢ ಅಲ್ದನಾ ಮಾರಾಯ.. ಹೆಂಡ್ತಿ ತವರಿಗೆ ಹೋಗಿ ಹದಿನೈದ್ ದಿನಾ ಆತು... ಒಬ್ಬಂಗೇ ಇಲ್ಲಿ ಕೈ ಕಾಲೇ ಆಡ್ತಿಲ್ಲೆ...!
*****

ಹೀಗೆ ಸುಮ್ಮನೆ 10:
ಹವ್ಯಕ ಹರಟೆ ಬಿಸಿ ಬಿಸಿ ಸುದ್ದಿ...
ಅಡ್ಕೆ ರೇಟ್ ಸಿಕ್ಕಾಪಟ್ಟೆ ಬೆಳದದ್ದು ಅಡ್ಕೆ ಬೆಳೆಗಾರರಲ್ಲಿ ಖುಷಿ ತಂದಿದ್ದು.. ಜೋತೆಗೆಯಾ ಸಿಕ್ಕಾಪಟ್ಟೆ ತ್ರಾಸೂ ಕೊಟ್ಟಿದ್ದು...
ಎಂತದು ಕೇಳ್ತ್ರಾ???
.
.
.
.
.
*ಮೊನ್ನೆ ಮೊನ್ನೆಯಾ ಗಿದ್ದಾಪುರ ಬದಿಗೆ, ಮಂಡಿಗೆ ಅಡ್ಕೆ ಒಯ್ತಿದ್ದ ಮಿನಿ ಟೆಂಪೋ ಅಪಹರಿಸಿ ೧೦ ಕ್ವಿಂಟಾಲ್ ಅಡ್ಕೆ ಕದ್ಕಂಡು ಹೋಯ್ದಾ, ಡ್ರೈವರ್ ಗೆ ನಾಕು ಅಡ್ಕೆ ಬೆಟ್ಟ ಕೊಟ್ಟು ಮಜಾ ಮಾಡು ಹೇಳಿಕಿ ಹೋಯ್ದ ಹೇಳಿ ಸುದ್ದಿ ಆಯ್ದು....
*ಅಡ್ಕೆ ರೇಟ್ ಹೆಚ್ಚಾದ್ದೇಯಾ ಅಡ್ಕೆ ಬೆರೆಗಾರರ ಮಾಣಿಗಳ್ನ ನೋಡುಲೆ ಕೂಸಗಳ ಹಿಂಡೆಯಾ ಬತ್ತಿದ್ದಡ... ಹಂಗಾಗಿ ಹವ್ಯಕ ಮಾಣಿಗಳು ಯಾರನ್ನ ಕಟ್ಟಕಂಬುದು ಹೇಳಿ ಕನ್ ಫ್ಯೂಸ್ ಆಗಿದ್ದ ಹೇಳಿ ಸುದ್ದಿ ಬಂದು.
*ಒಂದು ವಾರದ ಹಿಂದೆಯಾ ಹೆಮ್ಟಾ ಬದಿಗೆ ಮಾಣಿ ನಾಪತ್ತೆ ಆಗಿದ್ದ ಹೇಳಿ ಸುದ್ದಿ ಆಗಿತ್ತು, ಕಡಿಗೆ ನೋಡಿದ್ರೆ ಕೂಸು ಮಾಣಿನ ಅಪಹರಣ ಮಾಡಿ ಮದ್ವೆ ಮಾಡ್ಕಂಡಿದ್ದು ಹೇಳಿ ತಿಳತ್ತು. ಕಾರಣ ಇಷ್ಟೆಯಾ ಆ ಮಾಣಿ ಮನೆದು ೧೦ ಎಕ್ರೆ ಅಡ್ಕೆ ತೋಟಾ ಇದ್ದು ಹೇಳಿ.
*ಮದ್ವೆ ಆದ ಗಂಡಸರನ್ನೂ ಒತ್ತಾಯವಾಗಿ ಮದ್ವೆ ಮಾಡ್ಕಂಡು, ಅಡ್ಕೆಲಿ ಯಂಗೂ ಪಾಲು ಬೇಕು ಹೇಳಿ ಕೂಸು ಕೊರ್ಟಿಗೆ ಹೋಯ್ದು ಹೇಳಿ ಸುದ್ದಿ ಆಯ್ದು.
*ಅಡ್ಕೆ ಕಾಯುಲೇ ಹೆಚ್ಚುವರಿ ಮಿಲಿಟರಿ ಸವಲತ್ತು ಒದಗಿಸಿ ಕೊಡ ಹೇಳಿ ಬೆಳೆಗಾರರು ಮಂತ್ರಿಗಳಿಗೆ ಬೇಡಿಕೆ ಇಟ್ಟಿದ್ದ.
*ಅಡ್ಕೆ ರೇಟ್ ಹೆಚ್ಚಾಗಿದ್ದು ಯಂಗೆಕ್ಕೆ ಸಿಕ್ಕಾಪಟ್ಟೆ ತ್ರಾಸ್ ಆಗ್ತಾ ಇದ್ದು ಹೇಳಿ, ಆದಷ್ಟು ಬೇಗಾ ಅಡ್ಕೆ ರೇಟ್ ಇಳ್ಸ ಹೇಳಿ ಅಡ್ಕೆ ಬೆಳೆಗಾರರ ಒಕ್ಕೂಟದವರು ಮುಖ್ಯಮಂತ್ರಿ ಪೆದ್ದರಾಮಯ್ಯಂಗೆ ಪತ್ರ ಕಳ್ಸಿದ್ದ.

ಇದಕ್ಕೆ ಪ್ರತಿಕ್ರಿಯಿಸಿದ ಮಂತ್ರಿಗಳು ಸ್ವಲ್ಪ ಮಟ್ಟಿಗೆ ಅಡ್ಕೆ ರೇಟ್ ಕಮ್ಮಿ ಮಾಡಿದ್ದು... ಬೆಳೆಗಾರರಿಗೆ ಸಾವಧಾನ ಆಗಿ ಇರುಲೆ ಹೇಳಿದ್ದ. ಮಾಣಿಗಳಿಗೆ ಆದ ತೋಂದರೆಗೆ ಪರಿಹಾರ ಸೂಚಸುಲೆ, ಆದಷ್ಟು ಬೇಗ ಅಧಿಕಾರಿಗಳ್ನ ನೇಮಕಾ ಮಾಡಿ ತನಿಖೆ ಮಾಡುಲೆ ಆದೇಶ ನೀಡಿದ್ದ. ಹವ್ಯಕ ಮಾಣಿಗಳು ಸುಮ್ ಸುಮ್ನೆಯಾ ಮನೆಯಿಂದ ಹೊರ ಬಪ್ಪುಲಿಲ್ಲೆ, ಹೊರಗೆ ಹೊಗಕಾದ್ರೂ ಜೊತೆಗೆ ನಾಲ್ಕ್ ಜನ ಕರ್ಕಂಡು ಹೋಗ ಹೇಳಿ ವಿಶೇಷ ಸೂಚನೆ ನೀಡಿದ್ದ.

ಥೋ... ಎಂತದ್ರಾ ಮಾರಾಯ್ರ?? ಅಡ್ಕೆಗೆ ರೇಟ್ ಬರದೆಗಿದ್ರೂ ಕಷ್ಟ. ಬಂದ್ರೂ ಕಷ್ಟ.



ಮುಂದುವರೆಯುವುದು....

2 comments:

  1. 'ಚೊಲೊ ಇದ್ವೋ ಮಾರಾಯಾ!' :)
    ಗಣೇಶ, ದಯವಿಟ್ಟು ಮುಂದುವರಿಸಿ!

    ReplyDelete