ನಮ್ಮ ಹಿಂದೂ ಧರ್ಮ:

ಧರ್ಮ: ಮುಖ್ಯವಾಗಿ ಧರ್ಮ ಅಂದರೆ ಏನು ಅನ್ನುವುದನ್ನ ತಿಳಿದುಕೊಳ್ಳಬೇಕಾಗಿದೆ. "ಯಾವುದು ಎಲ್ಲರನ್ನೂ ಉಳಿಸಿ ಬೆಳೆಸುತ್ತದೆಯೋ ಅದೇ ಧರ್ಮ. 'ಯದ್ ಧಾರ್ಯತೆ ತದ್ ಧರ್ಮಂ' ಅಂದರೆ ನಾವು ಉಳಿದು ಬೆಳೆಯುವುದಕ್ಕಾಗಿ ಯಾವ ವಿಚಾರಗಳು,ಯಾವ ಆಚರಣೆಗಳು,ಯಾವ ಸಂಪ್ರದಾಯಗಳು ಉಪಯೋಗಕ್ಕೆ ಬರುತ್ತೋ ಅವೆಲ್ಲವೂ ಧರ್ಮ ಅನ್ನಿಸಿಕೊಳ್ಳುತ್ತೆ.ಎಲ್ಲರಿಗೂ ಉಳಿದು ಬೆಳೆಯುವುದಕ್ಕೆ ಸಹಾಯ ಮಾಡುವ ವಿಚಾರಗಳೇ ಧರ್ಮ."  ಧರ್ಮ ಅನ್ನುವುದು ವ್ಯಕ್ತಿಗತವಲ್ಲ ಅಂದರೆ ಯಾವುದೆ ವ್ಯಕ್ತಿಯಿಂದ ರಚಿಸಲ್ಪಟ್ಟದ್ದಲ್ಲ. ಅದು ತಲೆತಲಾಂತರಗಳಿಂದ ಬಂದಿರುವಂತದ್ದು. ಉದಾಹರಣೆ ಅಂದರೆ ಹಿಂದೂ ಧರ್ಮ. ಈ ಧರ್ಮವನ್ನು ಯಾವುದೇ ವ್ಯಕ್ತಿ ಸ್ಥಾಪಿಸಿದ್ದು ಅಂತ ಹೇಳಲು ಸಾಧ್ಯವಿಲ್ಲ.

ಇನ್ನು ಪಂಥಗಳ ಬಗ್ಗೆ ಸ್ವಲ್ಪ ತೀಳಿದುಕೊಳ್ಳೋಣ. ಪಂಥಗಳು ಅಥವಾ ಮತಗಳು ಎನ್ನಬಹುದು, ಇದು ವ್ಯಕತಿಗತವಾದದ್ದು ಅಂದರೆ ಒಬ್ಬ ವ್ಯಕ್ತಿಯಿಂದ ಸ್ಥಾಪಿತವಾದದ್ದು ಅಥವಾ ವ್ಯಕ್ಯಿಯನ್ನು ಅನುಸರಿಸುವಂತದ್ದು ಅನ್ನಬಹುದು. ಉದಾಹರಣೆಗೆ ಮುಸ್ಲೀಮ್ ಪಂಥ (ಪೈಗಂಬರರಿಂದ ಸ್ಥಾಪಿತವಾದದ್ದು) ಕ್ರಿಸ್ಚಿಯನ್ ಪಂಥ (ಏಸುವಿನಿಂದ ಸ್ಥಾಪಿತವಾದದ್ದು) ಅಂತ ಹೇಳಬಹುದು. ಹಿಂದೂ ಧರ್ಮದಲ್ಲಿ ಮುಖ್ಯ ಪಂಥಗಳೆಂದರೆ ಶೈವ(ಶಿವನ ಆರಾಧಕರು) ವೈಷ್ಣವ(ವಿಷ್ಣುವಿನ ಆರಾಧಕರು) ಹೀಗೆ.

ಈಗ ತಮಗೆಲ್ಲ ಧರ್ಮಕ್ಕೂ ಪಂಥಕ್ಕೂ ಇರುವ ವ್ಯತ್ಯಾಸ ಚೆನ್ನಾಗಿ ತಿಳಿದಿದೆ ಅಂದುಕೊಳ್ಳುತ್ತೇನೆ. ಸೂಕ್ಷ್ಮವಾಗಿ ಗಮನಿಸಿದಾಗ ತಿಳಿದುಬರುವುದೆನೆಂದರೆ ವಿಶ್ವಕ್ಕೆಲ್ಲ ಇದ್ದದ್ದು ಒಂದೇ ಧರ್ಮ ಅದುವೇ ಹಿಂದೂ ಧರ್ಮ. ಉಳಿದವೆಲ್ಲ ಪಂಥಗಳು ಅಥವಾ ಮತಗಳು. ಯಾಕೆಂದರೆ ಹಿಂದೂ ಧರ್ಮವು ಇಂಥವರಿಂದಲೇ ಅಥವಾ ಇದೇ ಕಾಲದಲ್ಲಿ ಸ್ಥಾಪಿತವಾಗಿದೆ ಅಂತ ಹೇಳಲಸಾಧ್ಯ. 

ಹಿಂದೂ ಧರ್ಮ:
ಹಿಂದೂ ಧರ್ಮಕ್ಕೆ ಇದ್ದ ಮೂಲ ಹೆಸರೆಂದರೆ "ಸನಾತನ ಧರ್ಮ". ಸಿಂಧೂ ನದಿಯ ತೀರದಲ್ಲಿ ಅಭಿವೃದ್ದಿ ಹೊಂದಿದ ಈ ಸಂಸ್ಕ್ರತಿಯನ್ನು ಶತಮಾನಗಳ ಹಿಂದೆಯೇ ಪರ್ಶಿಯನ್ನರು "ಹಿಂದೂ" ಎಂದು ಕರೆದರು.(ಅವರಲ್ಲಿ 'ಸ'ಕಾರ 'ಹ'ಕಾರವಾಗಿ ಉಚ್ಚರಿಸಲ್ಪಡುತ್ತದೆ) ಕ್ರಮೇಣ ಹಿಂದೂ ಸಂಸ್ಕ್ರತಿಯವರು ಆಚರಿಸುವ ಸನಾತನ ಧರ್ಮ, ಹಿಂದೂ ಧರ್ಮವಾಗಿಯೂ ಅದರ ಸದಸ್ಯರು ಹಿಂದುಗಳಾಗಿಯೂ ಸ್ಥಾಪಿತರಾದರು. ಸನಾತನ ಧರ್ಮವನ್ನು "ಆಧ್ಯಾತ್ಮದ ತೊಟ್ಟಿಲು" ಎಂತಲೂ "ಎಲ್ಲ ಧರ್ಮಗಳ ತಾಯಿ" ಎಂತಲೂ ಕರೆಯುತ್ತಾರೆ.ಹೀಗೊಂದು ಹೆಸರಿನಿಂದ ಬಂಧಿಸಲ್ಪಟ್ಟ ಸನಾತನ ಧರ್ಮದ ಬೆಳವಣಿಗೆ ನಿಂತುಹೋಯಿತು. ಮುಂದೆ, ಇದೇ ಚೌಕಟ್ಟಿನೊಳಗೆ ಹಲವು ಪ್ರಯೋಗಗಳು ನಡೆದು ವಿಭಿನ್ನ- ವಿಶಿಷ್ಟ ‘ಭಾರತೀಯ ಸಂಸ್ಕೃತಿಯ’ ಉಗಮವಾಯ್ತು.ಜಗತ್ತಿನ ಪ್ರಪ್ರಾಚೀನ ಸಂಸ್ಕೃತಿಗಳಲ್ಲಿ ಹಿಂದೂ ಸಂಸ್ಕೃತಿಗೆ ಮಹತ್ತ್ವದ ಸ್ಥಾನವಿದೆ. ಇತ್ತೀಚಿನ ದಿನಗಳಲ್ಲಿ ‘ಹಿಂದೂ’ ಎನ್ನುವುದು ‘ಜಾತಿ’ವಾಚಕ ಪದವಾಗಿ ಅರ್ಥಾಂತರಗೊಂಡಿರುವುದರಿಂದ, ಈ ಸಂಸ್ಕೃತಿಯು ಉಗಮಗೊಂಡು ಬೆಳೆದುಬಂದಿರುವ ಭಾರತ ದೇಶವನ್ನು ಆಧಾರವಾಗಿಟ್ಟುಕೊಂಡು ‘ಭಾರತೀಯ ಸಂಸ್ಕೃತಿ’ ಎಂದು ಕರೆಯುವುದು ಸೂಕ್ತವೆನಿಸುತ್ತದೆ. ಇಷ್ಟಕ್ಕೂ ‘ಹಿಂದೂ’ ಎನ್ನುವುದು ಒಂದು ಧರ್ಮ. ‘ಧರ್ಮ’ ಅಂದರೆ ‘ಜಾತಿ’ಯಲ್ಲ. ಅದು ಜೀವನ ವಿಧಾನ. ಈ ಜೀವನ ವಿಧಾನದಿಂದ ಮಾನವನ ಆಂತರಿಕ ಪ್ರಗತಿಯುಂಟಾಗಿ ‘ಸಂಸ್ಕೃತಿ’ಯೂ, ಲೌಕಿಕ ಪ್ರಗತಿಯುಂಟಾಗಿ ‘ನಾಗರಿಕತೆ’ಯೂ ಬೆಳೆದುಬಂದವು. 

ಭಾರತದ ಇತಿಹಾಸ ಇಸವಿಗಳ ಲೆಕ್ಕಾಚಾರಕ್ಕೆ ಸಿಕ್ಕುವಂಥದ್ದಲ್ಲ. ನಮ್ಮ ವೈದಿಕ ಪರಂಪರೆಯ ಕಾಲಮಾನ ಸುಮಾರು ಕ್ರಿ.ಪೂ. ೧೦,೦೦೦ದಿಂದ ೭,೦೦೦ ವರ್ಷಗಳು ಎಂದು ಹೇಳಲಾಗುತ್ತದೆ. ಉತ್ಖನನ, ಅಧ್ಯಯನಗಳ ಪುರಾವೆಯಂತೆ, ಇದು ಕನಿಷ್ಠ ಪಕ್ಷ ಕ್ರಿ.ಪೂ. ೫,೦೦೦ವರ್ಷಗಳಿಗಿಂತ ಹಿಂದಿನದು.ಹಿಂದೂ ಧರ್ಮದ ಮೌಲ್ಯಗಳನ್ನೊಳಗೊಂಡ ‘ಹಿಂದೂ ಜಾತಿ’- ಜಾತಿಯಾಗಿ ಗುರುತಿಸಲ್ಪಟ್ಟಿದ್ದು, ಇಸ್ಲಾಮ್, ಇಸಾಯಿ ಮತಗಳ ಉಗಮದ ನಂತರವಷ್ಟೇ. ಅವಕ್ಕೆ ಮುಂಚಿನ ಬೌದ್ಧ , ಜೈನ ಪಂಥಗಳು ಮೋಕ್ಷ ಸಾಧನೆಗಾಗಿ ಕವಲೊಡೆದ ಮಾರ್ಗಗಳಾಗಿ ಗುರುತಿಸಲ್ಪಟ್ಟಿದ್ದವು. ಹಾಗೆಂದೇ ನಾವು ಬೌದ್ಧ- ಜೈನ ಪಂಥಗಳ ದೇವತೆಗಳು, ಪುರಾಣಗಳು, ದೇವಾಲಯಗಳಲ್ಲಿ ಹಿಂದೂ ಧರ್ಮದ ಸಾಮ್ಯತೆ- ಪ್ರಭಾವಗಳನ್ನು ಧಾರಾಳವಾಗಿ ಕಾಣಬಹುದು. ದುರಂತವೆಂದರೆ, ಇಂದು ಹಿಂದೂ ಜಾತಿ, ಹಿಂದೂ ಧರ್ಮದ ಉದಾತ್ತ ಮೌಲ್ಯಗಳನ್ನು ಮರೆಯುತ್ತ, ಅವನ್ನು ಅಪಮೌಲ್ಯಗೊಳಿಸುತ್ತ, ಮಾತೃಧರ್ಮಕ್ಕೆ ಧಕ್ಕೆಯುಂಟು ಮಾಡುತ್ತ ಸಾಗಿರುವುದು. ಇಂದು ನೈಜ ಹಿಂದೂ ಧರ್ಮದ ಪ್ರತಿಪಾದಕರು, ಅನುಚರರು ಕಾಣುವುದು ಅತಿ ವಿರಳ. 

ಹಿಂದೂ ಧರ್ಮದ ಪ್ರಮುಖ ಸಂಕೇತವೆಂದರೆ 'ಪ್ರಣವ' ಅಥವಾ 'ಓಂ'. ಪ್ರಣವ ಅಂದರೆ ಸದಾ ನೂತನ ಅಥವಾ ಫಲಕಾರಿಯಾದ ದೈವವನ್ನು ಸ್ತುತಿಸುವುದು ಎಂದರ್ಥ.ಹಿಂದೂ ದರ್ಮವನ್ನ 'ವೈದಿಕ ಧರ್ಮ'ವೆಂತಲೂ 'ಆರ್ಯ ಧರ್ಮ'ವೆಂತಲೂ ಕರೆಯುವುದುಂಟು. ಹಿಂದೂ ಧರ್ಮದ ಮೂಲ ಗ್ರಂಥಗಳನ್ನು 'ಶೃತಿ' ಮತ್ತು 'ಸ್ಮೃತಿ' ಗಳೆಂದು ವಿಭಾಗಿಸಲಾಗಿದೆ. ಶೃತಿ ಎಂದರೆ ಕೇಳಿಸಿಕೊಂಡದ್ದು ಎಂದರ್ಥ. ವೇದಗಳನ್ನು ಶೃತಿ ಎನ್ನುತ್ತಾರೆ, ವೇದಗಳು ಯಾರಿಂದ ರಚಿಸಲ್ಪಟ್ಟದ್ದಲ್ಲ. ಸ್ಮೃತಿ ಎಂದರೆ ನೆನಪಿನಲ್ಲಿ ಉಳಿದದ್ದು ಎಂದರ್ಥ.ಉದಾಹರಣೆಗೆ ಮನುಸ್ಮೃತಿ.ಸ್ಮೃತಿಯನ್ನು ರೂಪಿಸುವ ಸಾಹಿತ್ಯವನ್ನು ವೇದಗಳ ನಂತರ ಸುಮಾರು ಕ್ರಿ.ಪೂ. ೫೦೦ರ ಹೊತ್ತಿಗೆ ರಚಿಸಲಾಯಿತು.

ಇನ್ನು ಹಿಂದೂ ಧರ್ಮದ ಕೆಲವು ತತ್ವಗಳ ಬಗ್ಗೆ ತಿಳಿಯೋಣ.
ವೇದಗಳು: ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ.
ವರ್ಣಗಳು: ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ.
ಆಶ್ರಮಗಳು: ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ, ಸನ್ಯಾಸ.
ಪುರುಷಾರ್ಥ: ಧರ್ಮ, ಅರ್ಥ, ಕಾಮ, ಮೋಕ್ಷ.
ಮೋಕ್ಷಮಾರ್ಗಗಳು: ಜ್ನಾನ, ಕರ್ಮ, ಭಕ್ತಿ.
(ಇವುಗಳ ಬಗ್ಗೆ ವಿವರವಾಗಿ ಮುಂದೆ ತಿಳಿಯೋಣ).

ಸ್ವಲ್ಪ ಹಿಂದೂ ಧರ್ಮದ ಬಗ್ಗೆ ತಿರಸ್ಕಾರ ಮತ್ತು ಹೊಸ ಮತಗಳ ಉದಯಕ್ಕೆ ಕಾರಣ ಏನು ಅನ್ನುವುದನ್ನ ತಿಳಿಯೋಣ.
ಹಿಂದೂ ಧರ್ಮದ ಹಲವು ದೋಷಗಳು ಮತ್ತು ದಬ್ಬಾಳಿಕೆಗಳು.
ಬ್ರಾಹ್ಮಣರ ಪ್ರಾಬಲ್ಯ.
ಕಠೋರ ಆಚರಣೆಗಳು ಮತ್ತು ಪ್ರಾಣಿಬಲಿ.
ಜನ ಸಾಮಾನ್ಯರಿಗೆ ಅರ್ಥವಾಗದ ಹಿಂದೂ ಗ್ರಂಥಗಳು.
ಜಾತಿ ಪದ್ಧತಿ ಮತ್ತು ಅಸ್ಪೃಶ್ಯತೆ.

ಇಂದಿನ ಕಾಲದಲ್ಲಿ ಹಿಂದೂ ಧರ್ಮದ ಬಗ್ಗೆ ತಾತ್ಸಾರ ಉಂಟಾಗಲು ಮುಖ್ಯ ಕಾರಣವೆಂದರೆ ಹಿಂದೂ ಧರ್ಮದಲ್ಲಿನ ಆಚಾರ ವಿಚಾರಗಳು. ಸಿದ್ಧಾಂತಗಳು, ಹಲವಾರು ಧರ್ಮ ಗ್ರಂಥಗಳು, ಪಂಥಗಳು (ಶೈವ, ವೈಷ್ಣವ, ಚಿತ್ಪಾವನ, ದೇಶಸ್ಥ, ಹವ್ಯಕ) ಪುರಾಣಗಳು ಹೀಗೆ ಬ್ರಾಹ್ಮಣ ಸಮಾಜದಲ್ಲಿ ಒಡಕು ಉಂಟಾಗಿದೆ. ಒಬ್ಬರ ಆಚರಣೆಗಳು ಇನ್ನೊಬ್ಬರಿಗೆ ಮಾನ್ಯವಿಲ್ಲದಿರುವುದು. ಪ್ರತಿಯೊಬ್ಬರೂ ತಮ್ಮದೇ ಆದ ಆಚರಣೆಗಳನ್ನು ಅನುಸರಿಸುತ್ತ ಇನ್ನೊಬ್ಬರ ಆಚರಣೆಗಳನ್ನು ದೂಷಿಸುತ್ತಿರುವುದು ನಮ್ಮ ಧರ್ಮದಲ್ಲಿ ಒಡಕು ಉಂಟಾಗಲು ಮುಖ್ಯ ಕಾರಣವಾಗಿದೆ.

No comments:

Post a Comment